AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧೂಳೆಬ್ಬಿಸಿದ ಎತ್ತುಗಳ ನಾಗಲೋಟ; ರೋಮಾಂಚನಗೊಳಿಸಿದ ಧಾರವಾಡ ಚಕ್ಕಡಿ ಸ್ಪರ್ಧೆ

ಕೃಷಿ ಚಟುವಟಿಕೆಗಳು ಮುಗಿದು ರೈತರು ಕೊಂಚ ನಿರಾಳರಾಗಿದ್ದಾರೆ. ವರ್ಷವಿಡೀ ದುಡಿದ ಅನ್ನದಾತನಿಗೆ ರಿಲೀಫ್‌ ಸಿಕ್ಕಿದೆ. ಇದೇ ರಿಲೀಫ್‌ನಲ್ಲಿರೋ ಧಾರವಾಡದ ರೈತರು ಚಕ್ಕಡಿ ಬಂಡಿ ಓಟದ ಮೊರೆ ಹೋಗಿದ್ರು.

ಧೂಳೆಬ್ಬಿಸಿದ ಎತ್ತುಗಳ ನಾಗಲೋಟ; ರೋಮಾಂಚನಗೊಳಿಸಿದ ಧಾರವಾಡ ಚಕ್ಕಡಿ ಸ್ಪರ್ಧೆ
ಧೂಳೆಬ್ಬಿಸಿದ ಎತ್ತುಗಳ ನಾಗಲೋಟ; ರೋಮಾಂಚನಗೊಳಿಸಿದ ಧಾರವಾಡ ಚಕ್ಕಡಿ ಸ್ಪರ್ಧೆ
TV9 Web
| Edited By: ಆಯೇಷಾ ಬಾನು|

Updated on: Jan 02, 2022 | 8:37 AM

Share

ಧಾರವಾಡ: ಅಲ್ಲಿ ರೋಮಾಂಚನ ಇತ್ತು. ಮೈನವಿರೇಳಿಸೋ ಸ್ಪರ್ಧೆ ಇತ್ತು..ಮಿಂಚಿನ ಓಟ ದಾಖಲಿಸಿದ್ದವರಿಗೆ ಬಹುಮಾನವೂ ಇತ್ತು. ಅಷ್ಟಕ್ಕೂ ಕೃಷಿ ಕೆಲಸ ಮುಗಿಸಿ ಮನೆಯಲ್ಲಿರೋ ರೈತರು ಚಕ್ಕಡಿ ಓಟದ ಸ್ಪರ್ಧೆ ಆಯೋಜಿಸಿದ್ರು.

ಕೃಷಿ ಚಟುವಟಿಕೆಗಳು ಮುಗಿದು ರೈತರು ಕೊಂಚ ನಿರಾಳರಾಗಿದ್ದಾರೆ. ವರ್ಷವಿಡೀ ದುಡಿದ ಅನ್ನದಾತನಿಗೆ ರಿಲೀಫ್‌ ಸಿಕ್ಕಿದೆ. ಇದೇ ರಿಲೀಫ್‌ನಲ್ಲಿರೋ ಧಾರವಾಡದ ರೈತರು ಚಕ್ಕಡಿ ಬಂಡಿ ಓಟದ ಮೊರೆ ಹೋಗಿದ್ರು. ಹೊಸ ವರ್ಷದ ಅಂಗವಾಗಿ ಧಾರವಾಡ ತಾಲೂಕಿನ ಚಿಕ್ಕಮಲ್ಲಿಗೆವಾಡ ಗ್ರಾಮದಲ್ಲಿ ಖಾಲಿ ಚಕ್ಕಡಿ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು. ಗ್ರಾಮದ ಚಕ್ಕಡಿ ದಾರಿಯಲ್ಲೇ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಬೇರೆ ಬೇರೆ ಊರುಗಳಿಂದ ತಮ್ಮ ಇಷ್ಟದ ಎತ್ತುಗಳೊಂದಿಗೆ ಆಗಮಿಸಿದ್ದ ರೈತರು, ಉತ್ಸಾಹದಿಂದಲೇ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇಲ್ಲಿ ಜಯ ದಾಖಲಿಸಿದವರಿಗೆ ಒಂದೂವರೆ ಲಕ್ಷದವರೆಗೆ ಬಹುಮಾನ ನೀಡಲಾಗಿತ್ತು.

ಅಷ್ಟಕ್ಕೂ ಒಂದು ನಿಮಿಷದ ಸ್ಪರ್ಧೆ ಇದಾಗಿದ್ದು, ಈ ಅವಧಿಯಲ್ಲಿ ಎಷ್ಟು ದೂರ ಜೋಡಿ ಎತ್ತುಗಳು ಚಕ್ಕಡಿಯೊಂದಿಗೆ ಸಾಗುತ್ತವೆ ಅನ್ನುವುದರ ಮೇಲೆ ವಿಜೇತರನ್ನು ಆಯ್ಕೆ ಮಾಡಲಾಗುತ್ತೆ. ಮೆಲ್ನೋಟಕ್ಕೆ ಇಲ್ಲಿ ಸ್ಪರ್ಧೆ ಕಂಡ್ರೂ ಇದ್ರ ಹಿಂದೆ ಎತ್ತುಗಳನ್ನ ಌಕ್ಟೀವ್‌ ಮಾಡುವ ತಂತ್ರವೂ ಇತ್ತು. ಹೌದು ಕೃಷಿ ಚಟುವಟಿಕೆ ಮುಗಿಸಿರೋ ಎತ್ತುಗಳು ಕೆಲಸವಿಲ್ಲದೇ ಸೋಮಾರಿಗಳಾಗಿರುತ್ತವೆ. ಆ ಎತ್ತುಗಳಿಗೆ ಕೊಂಚ ದೈಹಿಕ ಕಸರತ್ತು ಸಿಗಲಿ ಅನ್ನೋ ಉದ್ದೇಶಕ್ಕೂ ಕೂಡ ಇಂಥ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ.

ಒಟ್ನಲ್ಲಿ ಕೃಷಿ ಕೆಲಸ ಮುಗಿಸಿರೋ ರೈತರು, ರಿಲೀಫ್‌ ಪಡೆಯಲು ಈಗ ಸ್ಪರ್ಧೆಯ ಮೊರೆ ಹೋಗಿದ್ದಾರೆ. ತಮ್ಮ ಎತ್ತುಗಳನ್ನೇ ಬಳಸಿಕೊಂಡು ಅಖಾಡದಲ್ಲಿ ಧೂಳೆಬ್ಬಿಸಿದ್ದಾರೆ.

ನರಸಿಂಹಮೂರ್ತಿ ಪ್ಯಾಟಿ , ಟಿವಿ9, ಧಾರವಾಡ

bullock cart race

ಧೂಳೆಬ್ಬಿಸಿದ ಎತ್ತುಗಳ ನಾಗಲೋಟ; ರೋಮಾಂಚನಗೊಳಿಸಿದ ಧಾರವಾಡ ಚಕ್ಕಡಿ ಸ್ಪರ್ಧೆ

ಇದನ್ನೂ ಓದಿ: ದಾವಣಗೆರೆಯ ಗಾಜಿನ ಮನೆಗೆ ಪ್ರವಾಸಿಗರು ಫಿದಾ; ಧಾರಾವಾಹಿ, ಸಿನಿಮಾ ಶೂಟಿಂಗ್​ಗಳಿಗೂ ಇದು ನೆಚ್ಚಿನ ತಾಣ

Follow Us
Web contact
Web contact

TV9 Kannada

Read More
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ