AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿಗೆ ಅವ್ಯಾಹತವಾಗಿ ಬರುತ್ತಿದೆ ಗಾಂಜಾ: ಡ್ರಗ್ ಪೆಡ್ಲರ್​ಗಳಿಗೆ ವರವಾಗಿ ಪರಿಣಮಿಸಿದ ತಪಾಸಣೆರಹಿತ ರೈಲು ಪ್ರಯಾಣ!

ಹುಬ್ಬಳ್ಳಿ ರೈಲು ನಿಲ್ದಾಣವು ನೆರೆಯ ರಾಜ್ಯಗಳಿಂದ ಗಾಂಜಾ ಸಾಗಾಣಿಕೆಗೆ ಕೇಂದ್ರಬಿಂದುವಾಗಿರುವುದು ಬೆಳಕಿಗೆ ಬಂದಿದೆ. ರೈಲುಗಳ ಮೂಲಕ ಗಾಂಜಾವನ್ನು ಸುಲಭವಾಗಿ ತಂದು ಮಾರಾಟ ಮಾಡಲಾಗುತ್ತಿದೆ. ಕಳೆದ ವರ್ಷ ಒಟ್ಟಾರೆ 40 ಕೆಜಿ ಗಾಂಜಾ ಜಪ್ತಿಯಾಗಿದ್ದು, ಹೆಚ್ಚಿನ ಪ್ರಮಾಣದ ಗಾಂಜಾ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿಯೇ ಪತ್ತೆಯಾಗಿದೆ. ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರೂ, ಡ್ರಗ್ಸ್ ದಂಧೆ ನಿಂತಿಲ್ಲ.

ಹುಬ್ಬಳ್ಳಿಗೆ ಅವ್ಯಾಹತವಾಗಿ ಬರುತ್ತಿದೆ ಗಾಂಜಾ: ಡ್ರಗ್ ಪೆಡ್ಲರ್​ಗಳಿಗೆ ವರವಾಗಿ ಪರಿಣಮಿಸಿದ ತಪಾಸಣೆರಹಿತ ರೈಲು ಪ್ರಯಾಣ!
ಹುಬ್ಬಳ್ಳಿಗೆ ರೈಲುಗಳ ಮೂಲಕ ಅವ್ಯಾಹತವಾಗಿ ಬರುತ್ತಿದೆ ಗಾಂಜಾ
ಸಂಜಯ್ಯಾ ಚಿಕ್ಕಮಠ
| Edited By: |

Updated on: Sep 10, 2025 | 12:58 PM

Share

ಹುಬ್ಬಳ್ಳಿ, ಸೆಪ್ಟೆಂಬರ್ 10: ರಾಜ್ಯದ ಛೋಟಾ ಮುಂಬೈ ಎಂದೇ ಕರೆಸಿಕೊಳ್ಳುತ್ತಿರುವ ಹುಬ್ಬಳ್ಳಿಗೆ (Hubli) ನೆರೆಯ ರಾಜ್ಯಗಳಿಂದ ಅವ್ಯಾಹತವಾಗಿ ಗಾಂಜಾ ಪೂರೈಕೆಯಾಗುತ್ತಿದೆ. ಹುಬ್ಬಳ್ಳಿಯಲ್ಲಿ ಮಾರಾಟ ಮಾಡುವುದರ ಜೊತೆಗೆ ಇಲ್ಲಿಂದ ಅದನ್ನು ಗೋವಾಕ್ಕೆ ಕಳುಹಿಸುವ ತಂಡ ಸಕ್ರಿಯವಾಗಿದೆ. ದುರುಳರು ಗಾಂಜಾ ಸಾಗಾಟ ಮಾಡಲು ರೈಲುಗಳನ್ನೇ (Train) ಹೆಚ್ಚು ಬಳಸುತ್ತಿದ್ದಾರೆ. ನೆರೆಯ ರಾಜ್ಯಗಳಿಂದ ಹುಬ್ಬಳ್ಳಿಗೆ ರೈಲಿನಲ್ಲಿ ಗಾಂಜಾ ತರಲಾಗುತ್ತಿದೆ. ಧಾರವಾಡ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ 40 ಕೆಜಿ ಗಾಂಜಾ ಜಪ್ತಿಯಾಗಿದ್ದು, ಬಹುತೇಕ ಜಪ್ತಿಯಾದ ಗಾಂಜಾ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿಯೇ (Raliway Station ಎಂಬುದು ವಿಶೇಷ.

ಛೋಟಾ ಮುಂಬೈ, ವಾಣಿಜ್ಯ ನಗರಿ ಎಂದು ಕರೆಸಿಕೊಳ್ಳುವ ಹುಬ್ಬಳ್ಳಿಯನ್ನು ರಾಜ್ಯದ ಎರಡನೇ ರಾಜಧಾನಿ ಎಂದೇ ಕರೆಯುತ್ತಾರೆ. ವ್ಯಾಪಾರ ವಹಿವಾಟು ಎಂದು ಪ್ರತಿನಿತ್ಯ ಸಾವಿರಾರು ಜನರು ರಾಜ್ಯ, ಮತ್ತು ನೆರೆಯ ರಾಜ್ಯಗಳಿಂದ ನಗರಕ್ಕೆ ಜನ ಬರುತ್ತಾರೆ. ಇಂತಹ ಹುಬ್ಬಳ್ಳಿಯಲ್ಲಿ ಗಾಂಜಾ ಮಾರಾಟ ಮಾಡುವವರು ಮತ್ತು ಅದನ್ನು ಬಳಕೆ ಮಾಡುವವರ ಸಂಖ್ಯೆ ಕೂಡಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಚಿಕ್ಕ ವಯಸ್ಸಿನ ಹುಡುಗರು ಕೂಡಾ ನಶೆಯಲ್ಲಿ ತೇಲಾಡುವುದು, ಅಪರಾಧ ಕೃತ್ಯಗಳನ್ನು ಮಾಡುವ ಅನೇಕ ಘಟನೆಗಳು ಹುಬ್ಬಳ್ಳಿಯಲ್ಲಿ ನಡೆದಿವೆ.

ಡ್ರಗ್ಸ್ ಸಾಗಾಟಕ್ಕೆ ರೈಲನ್ನೇ ಬಳಸುವ ಪೆಡ್ಲರ್​ಗಳು

ಡ್ರಗ್ಸ್ ಜಾಲವನ್ನು ಬೇಧಿಸಲು ಹುಬ್ಬಳ್ಳಿ ಪೊಲೀಸರು ಅನೇಕ ಕ್ರಮಗಳನ್ನು ಕೈಗೊಂಡರು ಕೂಡಾ ಸಂಪೂರ್ಣವಾಗಿ ದಂಧೆಗೆ ಬ್ರೇಕ್ ಹಾಕಲು ಆಗಿಲ್ಲ. ದಂಧೆಕೋರರು ಇದೀಗ ಡ್ರಗ್ಸ್ ಸಾಗಾಟ ಮಾಡಲು ಬಳಸುತ್ತಿರುವುದು ರೈಲುಗಳನ್ನು. ಹೆಚ್ಚು ಜನದಟ್ಟಣೆ ಇರುವುದು ಮತ್ತು ಎಲ್ಲಾ ಕಡೆ ತಪಾಸಣೆ ಇಲ್ಲದೇ ಇರುವುದೇ ಡ್ರಗ್ಸ್ ಪೆಡ್ಲರ್​ಗಳು ರೈಲನ್ನೇ ಬಳಲು ಇರುವ ಮುಖ್ಯ ಕಾರಣ. ಹುಬ್ಬಳ್ಳಿ ರೈಲ್ವೇ ನಿಲ್ದಾಣದಲ್ಲಿ ಮಂಗಳವಾರ ಬರೋಬ್ಬರಿ 11 ಲಕ್ಷ ರೂ. ಮೌಲ್ಯದ ಹನ್ನೊಂದು ಕಿಲೋ ಗಾಂಜಾ ಪತ್ತೆಯಾಗಿದೆ. ರೈಲ್ವೆ ಪ್ಲಾಟ್​ಪಾರ್ಮ್​​ನಲ್ಲಿ ಬ್ಯಾಗ್​ನಲ್ಲಿ ಸಾಗಾಟ ಮಾಡುತ್ತಿದ್ದ ದುರುಳರು, ರೈಲ್ವೆ ಪೊಲೀಸರು ಬರುತ್ತಿದ್ದಂತೆಯೇ ಬ್ಯಾಗನ್ನು ಪ್ಲಾಟ್​​ಫಾರ್ಮ್​​​ನಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಪೊಲೀಸರು ಬ್ಯಾಗ್ ಪರಿಶೀಲನೆ ನಡೆಸಿದಾಗ ಅದರಲ್ಲಿ ಗಾಂಜಾ ಇದ್ದಿದ್ದು ಗೊತ್ತಾಗಿದೆ. ಸ್ಥಳಕ್ಕೆ ಆಗಮಿಸಿದ ಅಬಕಾರಿ ಪೊಲೀಸರು ಗಾಂಜಾ ಜಪ್ತಿ ಮಾಡಿದ್ದಾರೆ. ಹುಬ್ಬಳ್ಳಿಗೆ ಗಾಂಜಾ ಬಂದಿದ್ದು ಓರಿಸ್ಸಾದಿಂದ ಎಂಬುದು ಗೊತ್ತಾಗಿದೆ.

ಕಳೆದ ಒಂದು ವರ್ಷದಲ್ಲಿ ಧಾರವಾಡ ಅಬಕಾರಿ ಸಿಬ್ಬಂದಿ ನಲವತ್ತು ಕಿಲೋ ಗಾಂಜಾ ಜಪ್ತಿ ಮಾಡಿದ್ದಾರೆ. ಈ ಪೈಕಿ ಬಹುತೇಕ ಗಾಂಜಾ ಸಿಕ್ಕಿರುವುದುದು ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿಯೇ. ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಪ್ರತಿನಿತ್ಯ ನೂರಾರು ರೈಲುಗಳು ಬರುತ್ತವೆ. ಸಾವಿರಾರು ಜನರು ಬರುತ್ತಾರೆ. ಮೈನ್ ಗೇಟ್ ಬಿಟ್ಟು ಬೇರಡೆ ಹೋಗಲು ಕೂಡಾ ಅವಕಾಶವಿದ್ದು, ದಂಧೆಕೋರರು ಸುಲಭವಾಗಿ ಗಾಂಜಾ ತರುತ್ತಿದ್ದಾರೆ. ಸಾಮಾನ್ಯ ಜನರಂತೆ ಬ್ಯಾಗ್​ಗಳಲ್ಲಿ ಗಾಂಜಾವನ್ನು ಕದ್ದು ತಂದು ಇಲ್ಲಿ ಮಾರಾಟ ಮಾಡುತ್ತಿದ್ದಾರೆ. ಇನ್ನು ಓರಿಸ್ಸಾ, ಆಂಧ್ರದಿಂದ ಬರುತ್ತಿರುವ ಗಾಂಜಾವನ್ನು ಹುಬ್ಬಳ್ಳಿಯಲ್ಲಿ ಮಾರಾಟ ಮಾಡುವುದರ ಜೊತೆಗೆ ನೆರೆಯ ಗೋವಾಕ್ಕೆ ಇಲ್ಲಿಂದ ಸಾಗಾಟ ಮಾಡಲಾಗುತ್ತಿದೆ.

ಇದನ್ನೂ ಓದಿ: ದಸರಾ ಪ್ರಯುಕ್ತ ಕರ್ನಾಟಕದ ವಿವಿಧೆಡೆಗೆ ವಿಶೇಷ ರೈಲುಗಳು: ಟ್ರಿಪ್ ವಿವರ, ವೇಳಾಪಟ್ಟಿ ಇಲ್ಲಿದೆ

ಸದ್ಯ ಹುಬ್ಬಳ್ಳಿಗೆ ರೈಲುಗಳಲ್ಲಿ ಬರುತ್ತಿರುವ ಗಾಂಜಾ ಮೇಲೆ ಅಬಕಾರಿ ಮತ್ತು ಆರ್​​ಪಿಎಫ್​​ ಠಾಣೆ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ. ಆದರೈ ಪೆಡ್ಲರ್​​ಗಳು ಸಾಮಾನ್ಯ ಜನರಂತೆ ಚೀಲಗಳಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದು, ಇನ್ನೂ ಕೆಲ ಕಠಿಣ ಕ್ರಮಗಳನ್ನು ಕೈಗೊಂಡು, ಡ್ರಗ್ಸ್ ದಂಧೆಕೋರರ ಹೆಡೆಮುರಿ ಕಟ್ಟುವ ಕೆಲಸವನ್ನು ಮಾಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್