AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಸ್ರೇಲ್​ನಿಂದ ತಾಯ್ನಾಡಿಗೆ ಮರಳಿದ ದಂಪತಿ ಸೇರಿ ಮೂವರು ಕನ್ನಡಿಗರು; ಯುದ್ಧಭೂಮಿ ಬಗ್ಗೆ ಹೇಳಿದ್ದಿಷ್ಟು

ಇಸ್ರೇಲ್ನಿಂದ ಮೂರನೇ ವಿಮಾನದಲ್ಲಿ‌ 9 ಮಂದಿ ಕನ್ನಡಿಗರು ಬಂದಿದ್ದು, ಅದರಲ್ಲಿ ಬೆಳಗ್ಗೆ ಮೂವರು ಕನ್ನಡಿಗರು ರಾಜ್ಯಕ್ಕೆ ವಾಪಸ್ ಆಗಿದ್ದಾರೆ. ಇನ್ನು ಇಸ್ರೇಲ್​ನ ಟೆಲ್ ಅವೀವ್​ನಲ್ಲಿದ್ದ ಹುಬ್ಬಳ್ಳಿ ದಂಪತಿ, ಜೂನ್ ತಿಂಗಳಲ್ಲಿ ಇಸ್ರೇಲ್​​ಗೆ ಹೋಗಿದ್ದರು. ಈ ದಂಪತಿ, ಲೇಸರ್ ಟೆಕ್ನಾಲಜಿ ಪೋಸ್ಟ್​ ಡಾಕ್ಟರಲ್ ಫೆಲೋ (PDF) ವ್ಯಾಸಂಗಕ್ಕಾಗಿ ತೆರಳಿದ್ದರು.

ಇಸ್ರೇಲ್​ನಿಂದ ತಾಯ್ನಾಡಿಗೆ ಮರಳಿದ ದಂಪತಿ ಸೇರಿ ಮೂವರು ಕನ್ನಡಿಗರು; ಯುದ್ಧಭೂಮಿ ಬಗ್ಗೆ ಹೇಳಿದ್ದಿಷ್ಟು
ಇಸ್ರೇಲ್​ನಿಂದ ಬಂದ ಕನ್ನಡಿಗ ದಂಪತಿ
ಶಿವಕುಮಾರ್ ಪತ್ತಾರ್
| Edited By: ಕಿರಣ್ ಹನುಮಂತ್​ ಮಾದಾರ್|

Updated on: Oct 15, 2023 | 4:28 PM

Share

ಧಾರವಾಡ, ಅ.15: ಇಸ್ರೇಲ್​(Israel)ನಲ್ಲಿ ಯುದ್ಧ ಪರಿಸ್ಥಿತಿ ಎದುರಾಗಿದ್ದು, ಈ ಹಿನ್ನಲೆ ‘ಆಪರೇಷನ್ ಅಜಯ್’ ಮೂಲಕ ಅಲ್ಲಿರುವ ಭಾರತೀಯರನ್ನು ಕರೆತರುವ ಕೆಲಸ ನಡೆಯುತ್ತಿದೆ. ಅದರಂತೆ ಈಗಾಗಲೇ ಎರಡು ವಿಮಾನಗಳಲ್ಲಿ ಕರೆತರಲಾಗಿದ್ದು, ಇಂದು ಮೂರನೇ ವಿಮಾನದಲ್ಲಿ ಹುಬ್ಬಳ್ಳಿ(Hubballi) ಮೂಲದ ದಂಪತಿ ಅಖಿಲೇಶ್ ಕಾರಗದ್ದೆ ಹಾಗೂ ಕೃತಿ ಎಂಬುವವರು  ತಾಯ್ನಾಡಿಗೆ ಮರಳಿದ್ದಾರೆ. ಈ ಹಿನ್ನಲೆ ಧಾರವಾಡ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದಿಂದ ದಂಪತಿಗೆ ಸ್ವಾಗತ ಕೋರಲಾಗಿದೆ.

ಬೆಳಗ್ಗೆ ಮೂವರು ಕನ್ನಡಿಗರು ರಾಜ್ಯಕ್ಕೆ ವಾಪಸ್

ಇಸ್ರೇಲ್ನಿಂದ ಮೂರನೇ ವಿಮಾನದಲ್ಲಿ‌ 9 ಮಂದಿ ಕನ್ನಡಿಗರು ಬಂದಿದ್ದು, ಅದರಲ್ಲಿ ಬೆಳಗ್ಗೆ ಮೂವರು ಕನ್ನಡಿಗರು ರಾಜ್ಯಕ್ಕೆ ವಾಪಸ್ ಆಗಿದ್ದಾರೆ. ಇನ್ನು ಇಸ್ರೇಲ್​ನ ಟೆಲ್ ಅವೀವ್​ನಲ್ಲಿದ್ದ ಹುಬ್ಬಳ್ಳಿ ದಂಪತಿ, ಜೂನ್ ತಿಂಗಳಲ್ಲಿ ಇಸ್ರೇಲ್​​ಗೆ ಹೋಗಿದ್ದರು. ಈ ದಂಪತಿ, ಲೇಸರ್ ಟೆಕ್ನಾಲಜಿ ಪೋಸ್ಟ್​ ಡಾಕ್ಟರಲ್ ಫೆಲೋ (PDF) ವ್ಯಾಸಂಗಕ್ಕಾಗಿ ತೆರಳಿದ್ದರು. ಇದೀಗ ಇಸ್ರೇಲ್​ನಿಂದ ದೆಹಲಿಗೆ ಹಾಗೂ ಅಲ್ಲಿಂದ ಹುಬ್ಬಳ್ಳಿ ಏರ್​ಪೋರ್ಟ್​ಗೆ ಸುರಕ್ಷಿತವಾಗಿ ಆಗಮಿಸಿದ್ದಾರೆ. ಮರಳಿ ತಾಯ್ನಾಡಿಗೆ ಆಗಮಿಸಿದ ಹಿನ್ನಲೆ ದಂಪತಿ ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಆಪರೇಷನ್ ‘ಅಜಯ್’: 2ನೇ ಹಂತದಲ್ಲಿ ಇಸ್ರೇಲ್​​ನಿಂದ ಭಾರತಕ್ಕೆ ಬಂದ 235 ಭಾರತೀಯರು

ಯುದ್ದಭೂಮಿ ಬಗ್ಗೆ ಹೇಳಿದ ತುಮಕೂರು ಮೂಲದ ವಿದ್ಯಾರ್ಥಿ

ತುಮಕೂರು: ಇನ್ನು ಇಸ್ರೇಲ್​ನಿಂದ ಬಂದ ಬಳಿಕ ಮಾತನಾಡಿದ ಅವರು ‘ನಾವು ಇದ್ದಂತಹ ಸ್ಥಳದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ, ಗಾಜಾ ಭಾಗ ಹಾಗೂ ಇಸ್ರೇಲ್​ನ ದಕ್ಷಿಣ ಭಾಗದಲ್ಲಿ ಯುದ್ದ ನಡೆಯುತ್ತಿದೆ. ನಮಗೆಲ್ಲ ಎಂಬ್ಬೆಸ್ಸಿ ಉತ್ತಮ ಸಹಾಯ ಮಾಡಿ‌ ಕರೆದುಕೊಂಡು ಬಂದಿದೆ. ಕುಟುಂಬಸ್ಥರು ಭಯಬೀತರಾಗಿದ್ರು, ಇದೀಗ ಮನೆಗೆ ತೆರಳುತ್ತಿದ್ದೇವೆ. ಅಲ್ಲಿನ ಯುದ್ದ ಮುಗಿದ ನಂತರ ಮತ್ತೆ ವಾಪಸ್ ಹೋಗುತ್ತೇವೆ ಎಂದು ತುಮಕೂರು ಮೂಲದ ವಿದ್ಯಾರ್ಥಿ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!