AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಗಲಕೋಟೆ: ಮದ್ಯದಂಗಡಿಗಳಲ್ಲಿ ಕೇವಲ ಪಾರ್ಸಲ್, ಕುಡುಕರ ಅಡ್ಡೆಯಾಗುತ್ತಿದೆ ಐತಿಹಾಸಿಕ ದೇವಾಲಯಗಳು

ಐದುನೂರು ವರ್ಷಗಳ ಐತಿಹಾಸಿಕ ದೇವಸ್ಥಾನದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತಿದೆ. ನವನಗರದ ಕೆಂಚಮ್ಮನ ದೇವಿ ದೇವಸ್ಥಾನದ ಹಿಂಬದಿ ಬೆಟ್ಟ ಕುಡುಕರ ತಾಣವಾಗುತ್ತಿದೆ. ದೇವಸ್ಥಾನದ ಹಿಂಬದಿ ಸಾರಾಯಿ ಪ್ಯಾಕೆಟ್, ಬಾಟಲಿಗಳು ಸ್ವಚ್ಛತೆಯನ್ನು ಹಾಳು ಮಾಡಿದೆ.

ಬಾಗಲಕೋಟೆ: ಮದ್ಯದಂಗಡಿಗಳಲ್ಲಿ ಕೇವಲ ಪಾರ್ಸಲ್, ಕುಡುಕರ ಅಡ್ಡೆಯಾಗುತ್ತಿದೆ ಐತಿಹಾಸಿಕ ದೇವಾಲಯಗಳು
ದೇವಸ್ಥಾನದ ಆವರಣದಲ್ಲಿ ಬಿದ್ದಿರುವ ಮದ್ಯದ ಪಾಕೆಟ್​ಗಳು
TV9 Web
| Edited By: |

Updated on: Jun 09, 2021 | 9:27 AM

Share

ಬಾಗಲಕೋಟೆ: ಕೊರೊನಾ ಲಾಕ್ಡೌನ್ನಿಂದಾಗಿ ಮದ್ಯದಂಗಡಿಗಳಲ್ಲಿ ಕೇವಲ ಪಾರ್ಸಲ್ ನೀಡಲಾಗುತ್ತಿದೆ. ಇದರ ಎಫೆಕ್ಟ್ನಿಂದ ಬಾಗಲಕೋಟೆ ನಗರದಲ್ಲಿನ ಖಾಲಿ ಜಾಗಗಳು, ದೇವಸ್ಥಾನದ ಬಳಿಯ ಜಾಗಗಳು ಕುಡುಕರ ಅಡ್ಡೆಯಾಗಿ ಬದಲಾಗುತ್ತಿವೆ.

ಐದುನೂರು ವರ್ಷಗಳ ಐತಿಹಾಸಿಕ ದೇವಸ್ಥಾನದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತಿದೆ. ನವನಗರದ ಕೆಂಚಮ್ಮನ ದೇವಿ ದೇವಸ್ಥಾನದ ಹಿಂಬದಿ ಬೆಟ್ಟ ಕುಡುಕರ ತಾಣವಾಗುತ್ತಿದೆ. ದೇವಸ್ಥಾನದ ಹಿಂಬದಿ ಸಾರಾಯಿ ಪ್ಯಾಕೆಟ್, ಬಾಟಲಿಗಳು ಸ್ವಚ್ಛತೆಯನ್ನು ಹಾಳು ಮಾಡಿದೆ. ಕಾಲಿಟ್ಟ ಕಡೆಯಲಿಲ್ಲ ಬಾಟಲಿಗಳು ಕುಡುಕರ ದರ್ಬಾರನ್ನು ತೋರಿಸುತ್ತಿವೆ. ಕುಡಿದು‌ ಮನಬಂದಂತೆ ಮದ್ಯಪ್ರಯರು ಬಾಟಲಿಗಳು ಎಸೆದು ಹೋಗಿದ್ದಾರೆ. ಇದೊಂದೇ ದೇವಸ್ಥಾನವಲ್ಲ. ನಗರದ ಆಂಜನೇಯಸ್ವಾಮಿ ಹಾಗೂ ಈಶ್ವರ ದೇವಸ್ಥಾನದಲ್ಲೂ ಇದೇ ಪರಿಸ್ಥಿತಿ ಇದೆ.

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಸುಪರ್ದಿಯಲ್ಲಿರುವ ಬೆಟ್ಟದ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಿಕೊಂಡು ಸೂಕ್ತ ಕ್ರಮ ಕೈಕೊಳ್ಳುವಂತೆ ಸಾಮಾಜಿಕ ಹೋರಾಟಗಾರ ಘನಶ್ಯಾಮ ಬಾಂಡಗೆ ಒತ್ತಾಯಿಸಿದ್ದಾರೆ. ಅಧಿಕಾರಿಗಳು ಆದಷ್ಟು ಬೇಗ ಬಾಗಲಕೋಟೆಯ ನವನಗರ ಬೈಪಾಸ್ ರಸ್ತೆಯ ಎಡಭಾಗದಲ್ಲಿರುವ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಾಗುತ್ತಿರುವ ಕುಡುಕರ ಹಾವಳಿಯನ್ನು ಕಡಿಮೆ ಮಾಡಬೇಕಿದೆ.

ಕೊರೊನಾ ಸೋಂಕಿನಿಂದ ಲಾಕ್ಡೌನ್ ಹೇರಲಾಗಿದ್ದು ಅಂಗಡಿಗಳು ಬಂದ್ ಆಗಿವೆ. ಮದ್ಯ ಅಂಗಡಿಗಳಲ್ಲಿ ಕೇವಲ ಪಾರ್ಸಲ್ ಮಾತ್ರ ನೀಡಲಾಗುತ್ತಿದ್ದು ಕುಡುಕರು ಇತ್ತ ಮನೆಗೆ ಮದ್ಯ ತೆಗೆದುಕೊಂಡು ಹೋಗಲಾಗದೆ ರಸ್ತೆಯಲ್ಲೇ ಕುಡಿಯಲಾಗದೆ ಇಂತಹ ಖಾಲಿ ಜಾಗಗಳಲ್ಲಿ ಕುಡಿದು ಎಲ್ಲೆಂದರಲ್ಲಿ ಬಿಸಾಡಿ ಅಸಡ್ಡೆ ತೋರಿಸುತ್ತಿದ್ದಾರೆ.

alcohol in temple

ದೇವಸ್ಥಾನದ ಆವರಣದಲ್ಲಿ ಬಿದ್ದಿರುವ ಮದ್ಯದ ಪಾಕೆಟ್​ಗಳು

ಇದನ್ನೂ ಓದಿ: ರೋಹಿಣಿ ಸಿಂಧೂರಿ ಬಯೋಪಿಕ್​ ಬಗ್ಗೆ ಚರ್ಚೆ; ಅಕ್ಷತಾ ಪಾಂಡವಪುರ ಹೆಸರನ್ನು ಸೂಚಿಸಿದ ಹಿರಿಯ ಬರಹಗಾರ್ತಿ

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು