AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಸಿಗೆಯಲ್ಲಿ ಪ್ರವಾಸ ಮಾಡಲು ಕುದುರೆಮುಖ ಬೆಸ್ಟ್ ಪ್ಲೇಸ್​, ಅಲ್ಲಿಗೆ ಹೋಗುವ ಮುನ್ನ ಈ ವಿಚಾರಗಳು ತಿಳಿದಿರಲಿ

ಉರಿ ಉರಿ ಬೇಸಿಗೆ ಈ ಸಿಟಿಯಲ್ಲಿ ಯಾರಿರ್ತಾರಪ್ಪ ಅನ್ನೋರು ವೀಕೆಂಡ್​ನಲ್ಲಿ ಚಿಕ್ಕಮಗಳೂರಿನ ಕುದುರೆಮುಖಕ್ಕೆ ಭೇಟಿ ನೀಡಬಹುದು. ಕುದುರೆಮುಖ ಬೆಂಗಳೂರಿನಿಂದ 340 ಕಿ.ಮೀ ದೂರ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಹಚ್ಚ ಹಸಿರಿನ ಅರಣ್ಯ ಪ್ರದೇಶವಾಗಿದೆ. ರಾಷ್ಟ್ರೀಯ ಉದ್ಯಾನವನವು 600 ಚದರ ಕಿ.ಮೀ ವಿಸ್ತೀರ್ಣದಲ್ಲಿದೆ

ಬೇಸಿಗೆಯಲ್ಲಿ ಪ್ರವಾಸ ಮಾಡಲು ಕುದುರೆಮುಖ  ಬೆಸ್ಟ್ ಪ್ಲೇಸ್​, ಅಲ್ಲಿಗೆ ಹೋಗುವ ಮುನ್ನ ಈ ವಿಚಾರಗಳು ತಿಳಿದಿರಲಿ
ಕುದುರೆಮುಖImage Credit source: Praks the explorer
Follow us
ನಯನಾ ರಾಜೀವ್
|

Updated on:Apr 23, 2024 | 3:20 PM

ಕರ್ನಾಟಕದ ಸುಂದರ ಗಿರಿಧಾಮಗಳಲ್ಲಿ ಕುದುರೆ ಮುಖ(Kudremukh) ಕೂಡ ಒಂದು. ಎತ್ತ ಕಣ್ಣು ಹಾಯಿಸಿದರೂ ಹಸಿರು, ವಿಶಾಲವಾದ ಪರ್ವತ ಶ್ರೇಣಿ. ಇದು ಚಿಕ್ಕಮಗಳೂರಿನಿಂದ ಕೇವಲ 65 ಕಿ.ಮೀ ದೂರದಲ್ಲಿದೆ. ಕುದುರೆಮುಖ ಬೆಂಗಳೂರಿನಿಂದ 340 ಕಿ.ಮೀ ದೂರ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಹಚ್ಚ ಹಸಿರಿನ ಅರಣ್ಯ ಪ್ರದೇಶವಾಗಿದೆ. ರಾಷ್ಟ್ರೀಯ ಉದ್ಯಾನವನವು 600 ಚದರ ಕಿ.ಮೀ ವಿಸ್ತೀರ್ಣದಲ್ಲಿದೆ ಮತ್ತು ಉಡುಪಿ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಈ ಮೂರು ಜಿಲ್ಲೆಗಳಲ್ಲಿ ವ್ಯಾಪಿಸಿದೆ. ಟ್ರೆಕ್ಕಿಂಗ್ ಮಾಡಲು ಸೂಕ್ತ ತಾಣ. ಅರಣ್ಯ ಅಧಿಕಾರಿಗಳ ಅನುಮತಿ ಪಡೆದರೆ ಕುದುರೆಮುಖ ಬೆಟ್ಟಗಳಲ್ಲಿ ಒಂದು ದಿನದ ಚಾರಣವನ್ನು ನೀವು ಮಾಡಬಹುದು.

ಕುದುರೆಮುಖಕ್ಕೆ ತಲುಪುವುದು ಹೇಗೆ? ಕುದುರೆಮುಖಕ್ಕೆ ಸಮೀಪದ ರೈಲು ನಿಲ್ದಾಣವೆಂದರೆ ಮಂಗಳೂರು, ಇಲ್ಲ್ಲಿಂದಲೂ 95 ಕಿ.ಮೀ ದೂರದಲ್ಲಿದೆ. ಬಸ್​, ಟ್ಯಾಕ್ಸಿ ಮೂಲಕವೂ ತೆರಳಬಹುದು.

1892 ಮೀಟರ್ ಎತ್ತರವಿರುವ ಕುದುರೆಮುಖ ಕರ್ನಾಟಕದ ಎರಡನೇ ಅತಿ ಎತ್ತರದ ಶಿಖರವಾಗಿದೆ. ಎತ್ತರದ ಶಿಖರವು ದೂರದಿಂದ ನೋಡಿದಾಗ ಕುದುರೆಯ ಮುಖವನ್ನು ಹೋಲುತ್ತದೆ ಹಾಗಾಗಿ ಈ ಹೆಸರು ಬಂದಿದೆ.

ಕುದುರೆಮುಖವನ್ನು ಕಬ್ಬಿಣದ ಅದಿರು ಗಣಿಗಾರಿಕೆ ಪಟ್ಟಣವಾಗಿ ಅಭಿವೃದ್ಧಿಪಡಿಸಲಾಯಿತು, ಅಲ್ಲಿ ಸರ್ಕಾರವು ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್, (ಕೆಐಒಸಿಎಲ್) ಕಾರ್ಯ ನಿರ್ವಹಿಸುತ್ತಿದೆ.

ಮತ್ತಷ್ಟು ಓದಿ: ಬೇಸಿಗೆಯಲ್ಲೂ ಜನರ ಕೈಬೀಸಿ ಕರೆಯುವ ಕಾಫಿನಾಡಿನ ಸ್ವರ್ಗ ಮುಳ್ಳಯ್ಯನಗಿರಿ, ರೈಲಿನಲ್ಲಿ ಹೋಗುವುದು ಹೇಗೆ?

ಕುದುರೆಮುಖ ರಾಷ್ಟ್ರೀಯ ಉದ್ಯಾನ ಪ್ರಮುಖ ಆಕರ್ಷಣೆಗಳು ಕುದುರೆಮುಖದಲ್ಲಿ ಪಕ್ಷಿ ವೀಕ್ಷಣೆ: ವಲಸೆ ಅವಧಿಯಲ್ಲಿ 200 ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು ಇಲ್ಲಿ ವಾಸಿಸುತ್ತವೆ ಅಥವಾ ಕುದುರೆಮುಖದ ಕಾಡುಗಳಿಗೆ ಭೇಟಿ ನೀಡುತ್ತವೆ.

ಕುದುರೆಮುಖ ಮುಖ ಚಾರಣ: ಅರಣ್ಯ ಅಧಿಕಾರಿಗಳ ಅನುಮತಿಯೊಂದಿಗೆ ಕುದುರೆಮುಖ ಬೆಟ್ಟಗಳಲ್ಲಿ ದಿನದ ಚಾರಣವನ್ನು ಕೈಗೊಳ್ಳಬಹುದು. ಕ್ಯಾಂಪಿಂಗ್ ಅನ್ನು ಅನುಮತಿಸಲಾಗುವುದಿಲ್ಲ. ಸೂರ್ಯಾಸ್ತದ ಮೊದಲು ಚಾರಣಿಗರು ಹಿಂತಿರುಗಬೇಕಾಗಿದೆ. ಕುಡುರೆಮುಖ ಶಿಖರದ ಜನಪ್ರಿಯ ಚಾರಣದ ಹೊರತಾಗಿ, ಕುರಿಂಜಾಲ್ ಗುಡ್ಡ, ಗಂಗಡಿಕಲ್ಲು ಗುಡ್ಡ , ಸೀತಾಭೂಮಿ ಶಿಖರಮತ್ತು ನರಸಿಂಹ ಪರ್ವತ ಇತರ ಚಾರಣ ಮಾರ್ಗಗಳಾಗಿವೆ.

ಕುದುರೆಮುಖ ಬಳಿ ಭೇಟಿ ನೀಡಬೇಕಾದ ಸ್ಥಳಗಳು: ಕದಂಬಿ ಜಲಪಾತ, ಹನುಮಾನ್ ಗುಂಡಿ ಜಲಪಾತ, ಲಖ್ಯಾ ಅಣೆಕಟ್ಟು, ಗಂಗಮೂಲಾ ವ್ಯೂ ಪಾಯಿಂಟ್, ಶೃಂಗೇರಿ, ಸಿರಿಮನೆ ಜಲಪಾತಗಳು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಜೊತೆಗೆ ಭೇಟಿ ನೀಡಬಹುದಾದ ಇತರ ಆಕರ್ಷಣೆಗಳು. ಈ ಎಲ್ಲಾ ಆಕರ್ಷಣೆಗಳು ಕುದುರೆಮುಖದಿಂದ 20-30 ಕಿ.ಮೀ ವ್ಯಾಪ್ತಿಯಲ್ಲಿವೆ.

ಕುದುರೆಮುಖ ಬಳಿ ಉಳಿಯಲು ಸ್ಥಳಗಳು:

ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಲಿಮಿಟೆಡ್ ಕುದುರೆಮುಖ ಅರಣ್ಯ ಪ್ರದೇಶದೊಳಗೆ ಭಗವತಿ ನೇಚರ್ ಕ್ಯಾಂಪ್ ಅನ್ನು ನಿರ್ವಹಿಸುತ್ತಿದೆ. ಕುದುರೆಮುಖದಲ್ಲಿ ಕೆಲವು ಹೋಂಸ್ಟೇಗಳು ಮತ್ತು ಪರಿಸರ ಸ್ನೇಹಿ ರೆಸಾರ್ಟ್‌ಗಳು ಲಭ್ಯವಿದೆ. ಹತ್ತಿರದ ಪಟ್ಟಣಗಳಾದ ಕಾರ್ಕಳ, ಶೃಂಗೇರಿಯಲ್ಲಿ ಕೂಡ ತಂಗಬಹುದು.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:50 pm, Tue, 23 April 24

Stampede: ಕಾಲ್ತುಳಿತದಲ್ಲಿ 10 ಸಾವು, ಆಸ್ಪತ್ರೆ ಎದುರು ಸಂಬಂಧಿಕರ ಆಕ್ರಂದನ
Stampede: ಕಾಲ್ತುಳಿತದಲ್ಲಿ 10 ಸಾವು, ಆಸ್ಪತ್ರೆ ಎದುರು ಸಂಬಂಧಿಕರ ಆಕ್ರಂದನ
ಸಿದ್ದರಾಮಯ್ಯ ಜೊತೆ ಮೊಮ್ಮಗನನ್ನು ಕಂಡು ಶಿವಕುಮಾರ್​ಗೆ ಕುತೂಹಲ
ಸಿದ್ದರಾಮಯ್ಯ ಜೊತೆ ಮೊಮ್ಮಗನನ್ನು ಕಂಡು ಶಿವಕುಮಾರ್​ಗೆ ಕುತೂಹಲ
ಆರ್​ಸಿಬಿ ತಂಡವನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು; ಜಾತ್ರೆಯಂತಾದ ಮೆಟ್ರೋ
ಆರ್​ಸಿಬಿ ತಂಡವನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು; ಜಾತ್ರೆಯಂತಾದ ಮೆಟ್ರೋ
ಕಮಲ್ ಹಾಸನ್ ವಿಚಾರ: ಕಾನೂನು ಕೈಗೆ ತೆಗೆದುಕೊಳ್ಳದಂತೆ ಡಿಕೆಶಿ ಮನವಿ
ಕಮಲ್ ಹಾಸನ್ ವಿಚಾರ: ಕಾನೂನು ಕೈಗೆ ತೆಗೆದುಕೊಳ್ಳದಂತೆ ಡಿಕೆಶಿ ಮನವಿ
ವಿಧಾನಸೌಧದ ಗೇಟ್ ಹತ್ತಿ ಆರ್​ಸಿಬಿ ಅಭಿಮಾನಿಗಳ ಹುಚ್ಚಾಟ
ವಿಧಾನಸೌಧದ ಗೇಟ್ ಹತ್ತಿ ಆರ್​ಸಿಬಿ ಅಭಿಮಾನಿಗಳ ಹುಚ್ಚಾಟ
ಕಟ್ಟಡ ಮತ್ತು ಮರಗಳನ್ನೂ ಹತ್ತಿ ಕೂತಿರುವ ಅಭಿಮಾನಿಗಳು, ಪೊಲೀಸರಿಗೆ ಪರದಾಟ
ಕಟ್ಟಡ ಮತ್ತು ಮರಗಳನ್ನೂ ಹತ್ತಿ ಕೂತಿರುವ ಅಭಿಮಾನಿಗಳು, ಪೊಲೀಸರಿಗೆ ಪರದಾಟ
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನೂಕುನುಗ್ಗಲು; ಕಾಲು ಮುರಿದುಕೊಂಡ ಯುವಕ
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನೂಕುನುಗ್ಗಲು; ಕಾಲು ಮುರಿದುಕೊಂಡ ಯುವಕ
ನಿನ್ನೆ ಗಲಾಟೆಗಳಿಗೆ ಅವಕಾಶ ನೀಡದ ಬೆಂಗಳೂರು ಜನಕ್ಕೆ ಧನ್ಯವಾದ: ದಯಾನಂದ
ನಿನ್ನೆ ಗಲಾಟೆಗಳಿಗೆ ಅವಕಾಶ ನೀಡದ ಬೆಂಗಳೂರು ಜನಕ್ಕೆ ಧನ್ಯವಾದ: ದಯಾನಂದ
ಕೊಹ್ಲಿ ಆ್ಯಂಡ್​ ಟೀಂಗೆ ಕನ್ನಡ ಧ್ವಜ ನೀಡಿ ಸ್ವಾಗತಿಸಿದ ಡಿಕೆ ಶಿವಕುಮಾರ್
ಕೊಹ್ಲಿ ಆ್ಯಂಡ್​ ಟೀಂಗೆ ಕನ್ನಡ ಧ್ವಜ ನೀಡಿ ಸ್ವಾಗತಿಸಿದ ಡಿಕೆ ಶಿವಕುಮಾರ್
ವಿಶ್ವದ ಅತಿದೊಡ್ಡ ರೈಲ್ವೆ ಸೇತುವೆಯಾದ ಚೆನಾಬ್ ಕುರಿತ ಅಚ್ಚರಿಯ ಸಂಗತಿಗಳಿವು
ವಿಶ್ವದ ಅತಿದೊಡ್ಡ ರೈಲ್ವೆ ಸೇತುವೆಯಾದ ಚೆನಾಬ್ ಕುರಿತ ಅಚ್ಚರಿಯ ಸಂಗತಿಗಳಿವು