ಮಾನಹಾನಿ ಆರೋಪ: ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರಗಿ ವಿರುದ್ಧ FIR

ಪ್ರಶಾಂತ್​ ಸಂಬರಗಿ ವಾಟ್ಸಾಪ್​​ ಗ್ರೂಪ್​​ನಲ್ಲಿ ಅವಹೇಳನಕಾರಿ ಸಂದೇಶ ಪೋಸ್ಟ್ ಮಾಡಿದ್ದಾರೆ. ಹೀಗಾಗಿ, ದೇವನಾಥ್​ ದೂರು ಆಧರಿಸಿ ಪ್ರಶಾಂತ್​ ವಿರುದ್ಧ ಮಾನಹಾನಿ ಪ್ರಕರಣ ದಾಖಲಾಗಿದೆ.

ಮಾನಹಾನಿ ಆರೋಪ: ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರಗಿ ವಿರುದ್ಧ FIR
ಪ್ರಶಾಂತ್ ಸಂಬರಗಿ
Edited By:

Updated on: Dec 27, 2020 | 7:06 PM

ಬೆಂಗಳೂರು: ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿರುವ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರಗಿ ಹೆಸರು ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಹೆಚ್ಚು ಬಡ್ಡಿ ನೀಡದಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ಮಾಡಿದ ಆರೋಪದ ಮೇಲೆ ಪ್ರಶಾಂತ್​ ವಿರುದ್ಧ ಮಾನಹಾನಿ ಪ್ರಕರಣ ದಾಖಲಾಗಿದೆ.

ವೆಸ್ಟ್​​ ಆಫ್​​ ಕಾರ್ಡ್​​ ರೋಡ್​ ನಿವಾಸಿ ವೈ.ಕೆ. ದೇವನಾಥ್​ ಎಂಬುವವರು ಪ್ರಶಾಂತ್​ ಬಳಿ ಬಡ್ಡಿಗೆ ಸಾಲ ಪಡೆದುಕೊಂಡಿದ್ದರಂತೆ. ಶ್ಯೂರಿಟಿಗಾಗಿ ತಮ್ಮ ಆಸ್ತಿ ಪತ್ರಗಳನ್ನ ದೇವನಾಥ್​​ ಅಡವಿಟ್ಟಿದ್ದರು. ಬಡ್ಡಿ ಸಮೇತ ಹಣ ನೀಡಿದ್ದರೂ ಪ್ರಶಾಂತ್​ ಸಂಬರಗಿ ದಾಖಲೆ ಹಿಂದಿರುಗಿಸಿಲ್ಲ ಎನ್ನಲಾಗಿದೆ.

ಸಾಲವನ್ನು ಬಡ್ಡಿ ಸಮೇತ ಹಣ ಹಿಂದಿರುಗಿಸಿದ ನಂತರವೂ, ತೆಗೆದುಕೊಂಡ ಸಾಲಕ್ಕೆ ಶೇ 10ರಷ್ಟು ಬಡ್ಡಿ ನೀಡುವಂತೆ ಸಂಬರಗಿ ಬೇಡಿಕೆ ಇಟ್ಟಿದ್ದಾರೆ. ಬಡ್ಡಿ ಕೊಡಲು ಒಪ್ಪದಿದ್ದಾಗ ದೇವನಾಥ್​​ ವಿರುದ್ಧ ಪ್ರಶಾಂತ್​ ಸಂಬರಗಿ ವಾಟ್ಸಾಪ್​​ ಗ್ರೂಪ್​​ನಲ್ಲಿ ಅವಹೇಳನಕಾರಿ ಸಂದೇಶ ಪೋಸ್ಟ್ ಮಾಡಿದ್ದಾರೆ. ಹೀಗಾಗಿ, ದೇವನಾಥ್​ ದೂರು ಆಧರಿಸಿ ಪ್ರಶಾಂತ್​ ವಿರುದ್ಧ ಮಾನಹಾನಿ ಪ್ರಕರಣ ದಾಖಲಾಗಿದೆ.

ಸ್ಯಾಂಡಲ್​ವುಡ್​ನಲ್ಲಿ ಡ್ರಗ್​ ವಿಚಾರ ಮೊದಲ ಬಾರಿಗೆ ಸುದ್ದಿಯಾದಾಗ ಪ್ರಶಾಂತ್​ ಸಂಬರಗಿ ಮುನ್ನಲೆಗೆ ಬಂದಿದ್ದರು. ಸಾಕಷ್ಟು ನಟ-ನಟಿಯರ ವಿರುದ್ಧ ಡ್ರಗ್​ ಸೇವನೆಯ ಆರೋಪ ಮಾಡಿದ್ದರು. ಸರ್ಜಾ ಕುಟುಂಬಕ್ಕೆ ಸಂಬರಗಿ ಆಪ್ತರಾಗಿದ್ದಾರೆ.

ಸಂಬರಗಿ ಮತ್ತೊಂದು Bomb: ಇಬ್ಬರು ದೊಡ್ಡ ನಟರ ವಿವರ ಬಹಿರಂಗಪಡಿಸುತ್ತೇನೆ!

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us