Lok Sabha elections 2024: ಕರ್ನಾಟಕ ಲೋಕಸಭೆ ಚುನಾವಣೆಗೆ Rapidoದಿಂದ ಉಚಿತ ಸೇವೆ, ಯಾರಿಗೆಲ್ಲ ಲಭ್ಯ, ಇಲ್ಲಿದೆ ಮಾಹಿತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 24, 2024 | 5:21 PM

ವಿಕಲಚೇತನ ಹಾಗೂ ಹಿರಿಯ ನಾಗರಿಕರಿಗೆ ಉಚಿತವಾಗಿ ಬೈಕ್​​​ ಟ್ಯಾಕ್ಸಿ, ಆಟೋ ಮತ್ತು ಕಾರು ಸೇವೆಗಳನ್ನು ನೀಡಲಿದೆ ಎಂದು ರ್ಯಾಪಿಡೋ ಹೇಳಿದೆ. ತನ್ನ ಸೇವೆಯನ್ನು ಏಪ್ರಿಲ್ 26 ಶುಕ್ರವಾರದಂದು ರ್ಯಾಪಿಡೋ ನೀಡಲಿದೆ ಎಂದು ಹೇಳಿದೆ. ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ ಈ ಸೇವೆಯನ್ನು ಉಪಯೋಗಿಸಬಹುದು ಎಂದು ಹೇಳಿದೆ.

Lok Sabha elections 2024: ಕರ್ನಾಟಕ ಲೋಕಸಭೆ ಚುನಾವಣೆಗೆ Rapidoದಿಂದ ಉಚಿತ ಸೇವೆ, ಯಾರಿಗೆಲ್ಲ ಲಭ್ಯ, ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

ಏಪ್ರಿಲ್​​​​ 26ರಂದು ಎರಡನೇ ಹಂತದ ಲೋಕಸಭೆ ಚುನಾವಣೆ (Lok Sabha elections )ನಡೆಯಲಿದೆ, ಕರ್ನಾಟಕದ ಕೆಲವು ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಅಂದು ವಿಕಲಚೇತನ ಹಾಗೂ ಹಿರಿಯ ನಾಗರಿಕರಿಗೆ ಉಚಿತವಾಗಿ ಬೈಕ್​​​ ಟ್ಯಾಕ್ಸಿ, ಆಟೋ ಮತ್ತು ಕಾರು ಸೇವೆಗಳನ್ನು ನೀಡಲಿದೆ ಎಂದು  ರ್ಯಾಪಿಡೋ (Rapido) ಹೇಳಿದೆ. ತನ್ನ ಸೇವೆಯನ್ನು ಏಪ್ರಿಲ್ 26 ಶುಕ್ರವಾರದಂದು ರ್ಯಾಪಿಡೋ ನೀಡಲಿದೆ ಎಂದು ಹೇಳಿದೆ. ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ ಈ ಸೇವೆಯನ್ನು ಉಪಯೋಗಿಸಬಹುದು ಎಂದು ಹೇಳಿದೆ.

ಮತದಾನ ಮಾಡಲು ರ್ಯಾಪಿಡೋವನ್ನು ಉಪಯೋಗಿಸಿ, ಮತಗಟ್ಟೆಗೆ ಹೋಗಿ ಮತದಾನ ಮಾಡಿದೆ ಎಂದು ಹೇಳಿದೆ. ರ್ಯಾಪಿಡೋನ ಈ ಸೇವೆಯನ್ನು ಬಳಸಿಕೊಳ್ಳುವ ಹಿರಿಯ ನಾಗರಿಕರು, ವಿಕಲಚೇತನರು VOTENOW ಕೋಡ್​​ ಬಳಸಿಕೊಳ್ಳಬೇಕಾಗುತ್ತದೆ ಎಂದು ಹೇಳಿದೆ.

ಇನ್ನು ಕರ್ನಾಟಕದಲ್ಲಿ ನಡೆಯುವ ಎರಡನೇ ಹಂತದ ಚುನಾವಣೆಯಲ್ಲಿ ರ್ಯಾಪಿಡೋವನ್ನು ಹಿರಿಯ ನಾಗರಿಕರು ಮತ್ತು ವಿಕಲಚೇತನರು ಬಳಸಿಕೊಳ್ಳಿ ಎಂದು ಹೇಳಿದೆ. ಈ ಭಾರೀ ಆಫರ್​​ನಲ್ಲಿ ಚುನಾವಣಾ ಆರೋಗ ಹಾಗೂ ಬೃಹತ್​​​ ಬೆಂಗಳೂರು ಮಹಾನಗರ ಪಾಲಿಕೆಯ ಸಹಯೋಗ ಕೂಡ ಇದೆ ಎಂದು ಹೇಳಲಾಗಿದೆ.

ಚುನಾವಣಾ ಆಯೋಗ ಹಾಗೂ ಬಿಬಿಎಂಪಿ ಸಹಯೋಗದಲ್ಲಿ ರ್ಯಾಪಿಡೋ ಹಿರಿಯ ನಾಗರಿಕರಿಗೆ ಹಾಗೂ ವಿಕಲಚೇತನರಿಗೆ ಮತಗಟ್ಟೆ ಹೋಗಿ ಮತದಾನ ಮಾಡಲು ಒಳ್ಳೆಯ ವ್ಯವಸ್ಥೆಯನ್ನು ಮಾಡಿದೆ ಎಂದು ಹೇಳಿದೆ. ವಿಕಲಚೇತರು ಹಾಗೂ ಹಿರಿಯರು ಕೂಡ ತಮ್ಮ ಮತದಾನವನ್ನು ಚಲಾಯಿಸಬೇಕು ಎಂದು ನಾವು ಈ ಕಾರ್ಯವನ್ನು ಮಾಡದ್ದೇವೆ ಎಂದು ರ್ಯಾಪಿಡೋ ಸಹ ಸಂಸ್ಥಾಪಕ ಪವನ್​​ ಗುಂಟುಪಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಲೋಕಸಭಾ ಚುನಾವಣೆ 2024- ಏಪ್ರಿಲ್ 26 ರಂದು ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸೇವೆ ವಿಸ್ತರಣೆ

ಕರ್ನಾಟಕದಲ್ಲಿ 2ನೇ ಹಂತದ ಚನಾವಣೆ:

ಲೋಕಸಭೆ 2ನೇ ಹಂತ ಚುನಾವಣೆ ಕರ್ನಾಟಕದಲ್ಲಿ ಏಪ್ರಿಲ್ 26ರಂದು ನಡೆಯಲಿದೆ. ಈ ಎರಡನೇ ಹಂತ ಚುನಾವಣೆ 13 ರಾಜ್ಯಗಳ 89 ಕ್ಷೇತ್ರಗಳಲ್ಲಿ ನಡೆಯಲಿದೆ. ಕರ್ನಾಟಕದ 14 ಕ್ಷೇತ್ರಗಳಾದ ಉಡುಪಿ ಚಿಕ್ಕಮಂಗಳೂರು, ಹಾಸನ ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಂತಾರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಮತ್ತು ಕೋಲಾರಕ್ಕೆ ನಡೆಯಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ