AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳ ಹಾಜರಾತಿ ಹೆಚ್ಚಳಕ್ಕೆ ಶಿಕ್ಷಕರಿಂದ ಹೊಸ ಪ್ರಯತ್ನ, ಅಚ್ಚರಿಯಂತೆ ಮಕ್ಕಳ ಹಾಜರಾತಿ ಏರಿಕೆ

ಅದೆಷ್ಟೇ ಸರ್ಕಸ್ ನಡೆಸಿದ್ರೂ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕರೆತರೋದೆ ಇತ್ತೀಚಿನ ದಿನಗಳಲ್ಲಿ ದೊಡ್ಡ ಸವಾಲಾಗಿದೆ. ಆದ್ರೆ ಇಲ್ಲೊಂದು ಶಾಲೆ ಆ ಸವಾಲು ಗೆದ್ದಿದೆ. ಶಿಕ್ಷಕರ ಮಾಸ್ಟರ್ ಪ್ಲ್ಯಾನ್ಗೆ ಶಾಲೆಯಲ್ಲಿ ಮಕ್ಕಳು ತುಂಬಿ ತುಳುಕುತ್ತಿದ್ದಾರೆ.

ಮಕ್ಕಳ ಹಾಜರಾತಿ ಹೆಚ್ಚಳಕ್ಕೆ ಶಿಕ್ಷಕರಿಂದ ಹೊಸ ಪ್ರಯತ್ನ, ಅಚ್ಚರಿಯಂತೆ ಮಕ್ಕಳ ಹಾಜರಾತಿ ಏರಿಕೆ
ಮಕ್ಕಳ ಹಾಜರಾತಿ ಹೆಚ್ಚಳಕ್ಕೆ ಶಿಕ್ಷಕರಿಂದ ಹೊಸ ಪ್ರಯತ್ನ, ಅಚ್ಚರಿಯಂತೆ ಮಕ್ಕಳ ಹಾಜರಾತಿ ಏರಿಕೆ
TV9 Web
| Edited By: |

Updated on:Dec 12, 2021 | 1:14 PM

Share

ಗದಗ: ತಾಲೂಕಿನ ಹೊಸಳ್ಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರು ಹೊಸದೊಂದು ಪ್ರಯತ್ನ ಮಾಡಿ ಯಶಸ್ಸು ಕಂಡಿದ್ದಾರೆ. ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸೋ ಸಲುವಾಗಿ ಹೊಸ ಯೋಜನೆ ಹಾಕಿಕೊಂಡಿರೋ ಶಿಕ್ಷಕವೃಂದ, ಸರಕಾರದ ಮೆನ್ಯೂವಿನಲ್ಲಿ ಇರದೇ ಇದ್ರು ಮಕ್ಕಳಿಗೆ ಬಗೆ ಬಗೆಯ ತಿಂಡಿ ನೀಡೋ ಕೆಲಸ ಮಾಡ್ತಿದೆ. ಉಪ್ಪಿಟ್ಟು, ಪಲಾವ್ ಜೊತೆಗೆ ಪ್ರತಿ ಶನಿವಾರ ಮಕ್ಕಳಿಗೆ ಇಡ್ಲಿ ಸಾಂಬಾರ್ ನೀಡಲಾಗುತ್ತೆ. ಹೀಗಾಗಿ ಮಕ್ಕಳು ತಪ್ಪದೇ ಶಾಲೆಗೆ ಬರ್ತಿದ್ದಾರೆ. ಕೇವಲ ಮಕ್ಕಳಿಗೆ ಬಗೆ ಬಗೆಯ ಉಪಾಹಾರ ನೀಡೋದು ಮಾತ್ರವಲ್ಲದೆ ಪೌಷ್ಠಕತೆಯತ್ತಲೂ ಶಿಕ್ಷಕರು ಗಮನ ನೀಡ್ತಿದ್ದಾರೆ.

ಇನ್ನು ಶಿಕ್ಷಕರು ಈ ರೀತಿಯ ಪ್ರಯತ್ನಕ್ಕೆ ಕೈಹಾಕೋಕೆ ಮೂಲ ಕಾರಣವೇ ಶಾಲೆಯಲ್ಲಿ ಇಳಿಕೆ ಕಾಣ್ತಿದ್ದ ಮಕ್ಕಳ ಸಂಖ್ಯೆ. ಇದಕ್ಕೆ ಕಾರಣವಾಗಿದ್ದಿದ್ದು ಗ್ರಾಮದಲ್ಲಿರೋ ಖಾಸಗಿ ಶಾಲೆ, ಸಮೀಪವೇ ಇರುವ ಹುಲಕೋಟಿ, ಗದಗ ನಗರಗಳು. ಮಕ್ಕಳು, ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡ್ತಿರೋದ್ರಿಂದ, ಹೊಸಳ್ಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರು ಇಂಥಹದ್ದೊಂದು ಪ್ರಯತ್ನವನ್ನು ಮಾಡಲೇಬೇಕಾಯ್ತು. ಕೇವಲ ವಿವಿಧ ಬಗೆಯ ತಿಂಡಿ ನೀಡುವುದು ಮಾತ್ರವಲ್ಲದೆ, ಗುಣಮಟ್ಟದ ಶಿಕ್ಷಣದಿಂದಲೂ ಶಾಲೆ ಸದ್ಯ ಹೆಸರುವಾಸಿಯಾಗಿದೆ.

ಶಾಲೆಯನ್ನ ಆಕರ್ಷಣೆಗೊಳಿಸುವುದು ಒಂದು ಉದ್ದೇಶ. ಜೊತೆಗೆ ಒಳ್ಳೆಯ ಪೌಷ್ಠಿಕ ಆಹಾರ ಮಕ್ಕಳ ನೀಡಬೇಕು ಅನ್ನೋ ಸದುದ್ದೇಶದಿಂದ ಎಲ್ಲ ಶಿಕ್ಷಕರು ಚರ್ಚೆ ಮಾಡಿದ್ದೇವೆ. ಸರ್ಕಾರದ ಮೆನ್ಯೂವಿನಲ್ಲಿ ಇಡ್ಲಿ ಬೇರೆ ತಿಂಡಿ ಇಲ್ಲ. ಇಡ್ಲಿ, ಪಲಾವ್, ಉಪ್ಪಿಟ್ಟು ಹೀಗೆ ಆಹಾರ ನೀಡುವ ಮೂಲಕ ಮಕ್ಕಳ ಆಕರ್ಷಣೆ ಮಾಡುತ್ತಿದ್ದೇವೆ. ಜೊತೆಗೆ ಗುಣಮಟ್ಟದ ಪಾಠ ಮಾಡುವ ಉದ್ದೇಶ ಸಫಲವಾಗಿದೆ ಎಂದು ಶಾಲೆಯ ಸಹ ಶಿಕ್ಷಕ ಬಿ.ಎಸ್. ತಳವಾರ ಹೇಳಿದ್ದಾರೆ.

ನಮ್ಮ ಶಾಲೆಯಲ್ಲಿ ವಿಶೇಷ ತಿಂಡಿ ಕೊಡ್ತಾರೆ. ಎಲ್ಲ ಕಡೆ ಅನ್ನ ಸಾರು ಕೊಟ್ರೆ ಪ್ರತಿ ಶನಿವಾರ ಉಪ್ಪಿಟ್ಟು, ಪಲಾವ್, ಇಡ್ಲಿ ಕೊಡ್ತಾರೆ. ಹೀಗಾಗಿ ನಾವು ಶಾಲೆ ತಪ್ಪಿಸುವುದಿಲ್ಲ. ಭಾಳ ಖುಷಿಯಾಗುತ್ತೆ ಅಂತ ವಿದ್ಯಾರ್ಥಿನಿ ಪ್ರೇಮಾ ಶಾಲೆಯ ವಿಶೇಷತೆಯ ಬಗ್ಗೆ ಮಾತನಾಡಿದ್ದಾರೆ.

ಲಕ್ಷಾಂತರ ರೂಪಾಯಿ ಡೋನೇಶನ್, ಫೀಸ್ ಕೊಟ್ಟು ಪೋಷಕರು ಖಾಸಗಿ ಶಾಲೆಗಳಿಗೆ ಮಕ್ಕಳನ್ನ ಕಳಿಸೋದು ಇತ್ತೀಚೆಗೆ ಟ್ರೆಂಡ್ ಆಗಿದೆ. ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ಕೀಳು ಎಂಬ ಮನೋಭಾವ ಹಲವರಲ್ಲಿದೆ. ಆದ್ರೆ ಈ ಎಲ್ಲಾ ಅಪವಾದಗಳಿಗೆ ಹೊಸಳ್ಳಿ ಗ್ರಾಮದ ಸರಕಾರಿ ಶಾಲೆ ಮತ್ತು ಶಿಕ್ಷಕರು ಹೊರತಾಗಿದ್ದಾರೆ ಎಂದ್ರೆ ತಪ್ಪಾಗಲ್ಲ.

ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ

ಹೊಸಳ್ಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ

ಹೊಸಳ್ಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ

ಹೊಸಳ್ಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ

ಇದನ್ನೂ ಓದಿ: ಶತಕ ದಾಟಿದ ತರಕಾರಿಗಳ ಬೆಲೆ! ಬೆಂಗಳೂರಿನಲ್ಲಿ ತರಕಾರಿಗಳ ದರ ಹೀಗಿದೆ ನೋಡಿ

Published On - 10:51 am, Sun, 12 December 21

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್