AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರುಣದೇವನ ಕೃಪೆಗೆ ಗೊಂಬೆಗಳ ಮದುವೆ! ಈ ವಿಶೇಷ ಮದುವೆಗೆ ಐದು ದಿನ ತಯಾರಿ ಹೇಗಿತ್ತು ಗೊತ್ತಾ?

ವರನ ಕಡೆಯವರು ವಧುವಿನ ಕಡೆಯವರು ಎಲ್ಲರೂ ಸೇರಿಕೊಂಡು ಬಾಂಧವ್ಯದಿಂದ ಮದುವೆ ಕಾರ್ಯಕ್ರಮ ಸಾಂಪ್ರದಾಯಕವಾಗಿ ಮಾಡಿ ಮಳೆಗಾಗಿ ಪ್ರಾರ್ಥನೆ ಮಾಡಿದ್ರು...

ವರುಣದೇವನ ಕೃಪೆಗೆ ಗೊಂಬೆಗಳ ಮದುವೆ! ಈ ವಿಶೇಷ ಮದುವೆಗೆ ಐದು ದಿನ ತಯಾರಿ ಹೇಗಿತ್ತು ಗೊತ್ತಾ?
ವರುಣದೇವನ ಕೃಪೆಗೆ ಗೊಂಬೆಗಳ ಮದುವೆ! ಈ ವಿಶೇಷ ಮದುವೆಗೆ ಐದು ದಿನ ತಯಾರಿ ಹೇಗಿತ್ತು ಗೊತ್ತಾ?
TV9 Web
| Edited By: ಸಾಧು ಶ್ರೀನಾಥ್​|

Updated on: Jun 15, 2022 | 8:14 PM

Share

ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಇಂದು ಬುಧವಾರ ಮದುವೆ ಸಂಭ್ರಮ, ಸಡಗರ ಜೋರಾಗಿತ್ತು. ಅನ್ನದಾತರು ವರುಣನ ಕೃಪೆಗಾಗಿ ವಿಶೇಷ ಮದುವೆ ಸಮಾರಂಭ ಆಯೋಜಿಸಿದ್ರು. ಹೆಣ್ಣಿನ ಕಡೆಯವ್ರು, ಗಂಡಿನ ಕಡೆಯವ್ರು ಸಂಭ್ರಮದಿಂದ ಹೆಣ್ಣು ಗಂಡು ಇಲ್ಲದೇ ಅದ್ಧೂರಿ ಮದುವೆ ಮಾಡಿದ್ರು. ಅರೇ ಹೆಣ್ಣು ಗಂಡು ಇಲ್ಲದ ಮದುವೆ ಇದೆಂಥಾ ಮದುವೆ ಅನ್ನೋ ಕುತೂಹಲವಾ ಅಂತಿರಾ… ಹೌದು ಲಕ್ಷ್ಮೇಶ್ವರ ಪಟ್ಟಣದ ಮ್ಯಾಗೇರಿ ಓಣಿಯಲ್ಲಿ ರೈತರು ಕುಟುಂಬಗಳು ಮಳೆಗಾಗಿ ಗೊಂಬೆಗಳ ಮದುವೆ ಅದ್ದೂರಿಯಾಗಿ ಮಾಡಿದ್ರು. ಗಂಡು ಹೆಣ್ಣಿನ ಮದುವೆಯಂತೆ ಸಾಂಪ್ರದಾಯಕವಾಗಿ ಮದುವೆ ಕಾರ್ಯ ಮಾಡಿ ಸಂಭ್ರಮಿಸಿದ್ರು. ಮಳೆಗಾಗಿ ವರುಣದೇವರನ್ನು ಬೇಡಿಕೊಂಡ್ರು.

ವರುಣದೇವನ ಕೃಪೆಗೆ ಗೊಂಬೆಗಳ ಮದುವೆ…. ರೈತ ಸಮುದಾಯ ಈಗಾಗಲೇ ತಮ್ಮ ಜಮೀನುಗಳಲ್ಲಿ ಬಿತ್ತನೆ ಮಾಡಿದ್ದಾರೆ. ಆದ್ರೆ, ಈಗ ಬಿತ್ತನ ಮಾಡಿದ ಬೆಳೆಗಳಿಗೆ ಮಳೆಯ ಕೊರತೆ ಕಾಡುತ್ತಿದೆ. ಹೀಗಾಗಿ ರೈತ ಕುಟುಂಬಗಳು ಬಿತ್ತಿದ ಬೆಳೆ ಕಾಪಾಡಲು ವರುಣದೇವನ ಮೊರೆ ಹೋಗಿದ್ದಾರೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಕಪ್ಪೆ ಮದುವೆ, ಕತ್ತೆಗಳ ಮದುವೆ, ಗೊಂಬೆಗಳ ಮದುವೆ ಹೀಗೆ ವಿಶೇಷ ಮದುವೆಗಳ ಮೂಲಕ ವರುಣದೇವನ ಮೊರೆ ಹೋಗ್ತಾರೆ. (ವರದಿ: ಸಂಜೀವ ಪಾಂಡ್ರೆ, ಟಿವಿ9, ಗದಗ)

ವಿಶೇಷ ಮದುವೆಗೆ ಐದು ದಿನ ತಯ್ಯಾರಿ… ಈ ವಿಶೇಷ ಬೊಂಬೆಗಳ ಮದುವೆಗೆ ಮ್ಯಾಗೇರಿ ಓಣಿಯ ರೈತ ಕುಟುಂಬಗಳು ಐದು ದಿನಗಳ ಸಂಭ್ರಮ. ಐದು ದಿನಗಳ ಕಾಲ ರೈತ ಮಹಿಳೆಯರು ಓಣಿಯ ಪ್ರತಿ ಮನೆ ಮನೆಗೆ ಹೋಗಿ ಮಹಿಳೆಯರು ಗುರ್ಜಿ ಆಟ ಆಡಿದ್ರು. ಈ ವೇಳೆ ಪ್ರತಿಯೊಂದು ಮನೆ ರೈತ ಕುಟುಂಬಗಳು ಗುರ್ಜಿ ಆಟವಾಡುವ ಮಹಿಳೆಯರಿಗೆ ಜೋಳ ದಾನವಾಗಿ ನೀಡ್ತಾರೆ. ಕೊನೆಯ ದಿನವಾದ ಇಂದು ಸಂಪ್ರದಾಯವಾಗಿ ಗಂಡು ಹೆಣ್ಣಿನ ಮದುವೆಯಂತೆ ಗೊಂಬೆಗಳ ಮದುವೆ ಮಾಡಿ ಮಳೆಗಾಗಿ ರೈತ ಸಮೂಹ ಪ್ರಾರ್ಥನೆ ಮಾಡಿದರು.

ಮದುವೆಗೆ ವಧು-ವರನ ಕಡೆಯಿಂದ ಎರಡು ಟೀಂ..

Villagers in Lakshmeshwar perform wedding to toys to please rain god

ಮದುವೆಗೆ ವಧು-ವರನ ಕಡೆಯಿಂದ ಎರಡು ಟೀಂ

ವಧುವಿನ ಕಡೆಯವರು ನೀಲಪ್ಪಗೌಡ ಪಾಟೀಲ್, ಜಯವ್ವ ಪಾಟೀಲ್, ಯಲ್ಲವ್ವ ಡೊಳ್ಳಿನ, ನೀಲವ್ವ ಕಳಗನವರ, ಬಸವ್ವ ಪಾಟೀಲ್ ಆಗಿದ್ರು. ವರನಕಡೆಯವರಾಗಿ ಮಂಜುನಾಥ್ ಪೂಜಾರ, ಮೈಲಾರಪ್ಪ ಪೂಜಾರ, ಜಯವ್ವ ಪೂಜಾರ, ಲಕ್ಷ್ಮವ್ವ ಪೂಜಾರ, ಸಿದ್ದವ್ವ ಪೂಜಾರ, ರೇಣವ್ವ ಪೂಜಾರ ಆಗಿದ್ರು. ಎಲ್ಲರೂ ಸೇರಿ ಸಡಗರ ಸಂಭ್ರಮದಿಂದ ಬೊಂಬೆಗಳ ಮದುವೆ ಮಾಡಿದ್ರು. ನಾಗಪ್ಪ ಕೊರಿ ಎಂಬವರು ಸೋದರ ಮಾವನಾಗಿ ಹಂದರ ಹಾಲಗಂಭ ತಂದರು.

ಬೀರೇಶ್ವರ ದೇವಸ್ಥಾನದಲ್ಲಿ ನಡೆದ ಮದುವೆ ಸಡಗರದಲ್ಲಿ ಸಂಗ್ಟಿ (ಜೋಳದ ನುಚ್ಚು) ಸಾಂಬಾರ್ ಊಟದ ವ್ಯವಸ್ಥೆ ಮಾಡಿದ್ರು. ಗುರ್ಜಿ ಆಡಲು ಹೋದಾಗಿ ಜನ್ರು ಜೋಳ ನೀಡ್ತಾರೆ.  ಆ ಜೋಳದ ಸಂಗ್ಟಿ ಸಾರು ಮಾಡಲಾಗಿತ್ತು. ಬಂದ ಬೀಗರು ಮದುವೆ ಬಳಿಕ ಸಂಗ್ಟಿ ಸಾಂಬರ್ ರುಚಿ ಸವಿದು ಚೆನ್ನಾಗಿ ಮಳೆಯಾಗ್ಲಿ ಅಂತ ಬೇಡಿಕೊಂಡ್ರು.

ಸಾಂಪ್ರದಾಯಕವಾಗಿ ಮದುವೆ ಹೇಗೆ ಆಗುತ್ತದೆ ಹಾಗೆಯೇ ಹಂದರ ಹಾಲಗಂಬ, ಬಾಸಿಂಗ್, ಕಾಲು ಉಂಗುರ, ಉಡಿ ತುಂಬುವ ಕಾರ್ಯಕ್ರಮ ಸೇರಿದಂತೆ ಮದುವೆಯಲ್ಲಿ ನಡೆಯುವ ವಿವಿಧ ಪೂಜೆ ಹಾಗೂ ಸಂಪ್ರದಾಯ ಕಾರ್ಯಕ್ರಮ ನೆರವೇರಿಸಿದರು. ವರನ ಕಡೆಯವರು ವಧುವಿನ ಕಡೆಯವರು ಎಲ್ಲರೂ ಸೇರಿಕೊಂಡು ಬಾಂಧವ್ಯದಿಂದ ಮದುವೆ ಕಾರ್ಯಕ್ರಮ ಸಾಂಪ್ರದಾಯಕವಾಗಿ ಮಾಡಿ ಮಳೆಗಾಗಿ ಪ್ರಾರ್ಥನೆ ಮಾಡಿದ್ರು…

Follow Us
Web contact
Web contact

TV9 Kannada

Read More
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ