AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಮೆಡ್-ಕೆ ವಿಲೀನ ಮಾಡೋದು ಎಷ್ಟರ ಮಟ್ಟಿಗೆ ಸರಿ?- ಕೋರ್ಟ್ಗೆ ಹೋಗುವ ಎಚ್ಚರಿಕೆ ನೀಡಿದ ಕಾರ್ಯದರ್ಶಿ ಎಸ್.ಕುಮಾರ್

ಕಾಮೆಡ್-ಕೆ ವಿಲೀನ ಮಾಡೋದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿರುವ ಎಸ್.ಕುಮಾರ್, ನಮಗೆ ಮಾಹಿತಿ ನೀಡದೆಯೇ ಹೇಗೆ ವಿಲೀನ ಮಾಡ್ತಾರೆ ಎಂದು ಪ್ರಶ್ನಿಸಿದ್ದಾರೆ.

ಕಾಮೆಡ್-ಕೆ ವಿಲೀನ ಮಾಡೋದು ಎಷ್ಟರ ಮಟ್ಟಿಗೆ ಸರಿ?- ಕೋರ್ಟ್ಗೆ ಹೋಗುವ ಎಚ್ಚರಿಕೆ ನೀಡಿದ ಕಾರ್ಯದರ್ಶಿ ಎಸ್.ಕುಮಾರ್
ಕಾಮೆಡ್-ಕೆ ಕಾರ್ಯದರ್ಶಿ ಎಸ್.ಕುಮಾರ್
TV9 Web
| Edited By: |

Updated on:Jun 23, 2022 | 1:13 PM

Share

ಬೆಂಗಳೂರು: ಮುಂದಿನ ವರ್ಷದಿಂದ ಕಾಮೆಡ್-ಕೆ ವಿಲೀನ ಮಾಡುವ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ್ (Ashwath Narayan) ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಇದೀಗ ವಿರೋಧವಾಗಿದ್ದು, ಕಾಮೆಡ್-ಕೆ ಕಾರ್ಯದರ್ಶಿ ಎಸ್.ಕುಮಾರ್ ಕೋರ್ಟ್​ಗೆ ಹೋಗುವ ಎಚ್ಚರಿಕೆ ನೀಡಿದ್ದಾರೆ. ಕಾಮೆಡ್-ಕೆ ವಿಲೀನ ಮಾಡೋದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿರುವ ಎಸ್.ಕುಮಾರ್, ನಮಗೆ ಮಾಹಿತಿ ನೀಡದೆಯೇ ಹೇಗೆ ವಿಲೀನ ಮಾಡ್ತಾರೆ? ಈ ಕುರಿತು ನಮ್ಮೊಂದಿಗೆ ಯಾವುದೇ ರೀತಿ ಸಭೆ ನಡೆಸಿಲ್ಲ. ರಾಜ್ಯ ಸರ್ಕಾರ ಈ ಬಗ್ಗೆ ಪುನರ್ ಪರಿಶೀಲನೆ ಮಾಡಲಿ. ಇಲ್ಲದಿದ್ದರೆ ನಾವು ಕೋರ್ಟ್ ಮೊರೆ ಹೋಗಬೇಕಾಗುತ್ತೆ ಎಂದಿದ್ದಾರೆ.

2004ರಲ್ಲಿ ಕಾಮೆಡ್-ಕೆ ಸಂಸ್ಥೆ ರಚನೆಯಾಗಿದೆ. ಪ್ರತಿ ವರ್ಷ 70 ಸಾವಿರ ಅಭ್ಯರ್ಥಿಗಳು ಕಾಮೆಡ್-ಕೆ ಪರೀಕ್ಷೆಗೆ ನೊಂದಣಿ ಮಾಡಿಕೊಳ್ತಾರೆ. 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮ್ಯಾನೇಜ್ಮೆಂಟ್ ಸೀಟ್ ನ ಅಡಿ ಇಂಜಿನಿಯರಿಂಗ್ ಕೋರ್ಸ್ ಪ್ರವೇಶ ಪಡೆಯುತ್ತಾರೆ. ಏಕಾಏಕಿ ಕಾಮೆಡ್-ಕೆ ವಿಲೀನ ಅನ್ನೋದು ಎಷ್ಟು ಸರಿ? ಸಿಇಟಿ ಪರೀಕ್ಷೆ ಮೂಲಕ ರಾಜ್ಯ ಸರ್ಕಾರ ದೇಶದಾದ್ಯಂತ ಹೀಗೆ ಪರೀಕ್ಷೆ ನಡೆಸುತ್ತೆ? ಇದು ಅವೈಜ್ಞಾನಿಕ ತೀರ್ಮಾನ ಎಂದು ವಿರೋಧಿಸಿರುವ ಕಾಮೆಡ್-ಕೆ ನಿಯೋಗ ಶೀಘ್ರವೇ ಸರ್ಕಾರದ ಭೇಟಿಗೆ ಮುಂದಾಗಿದೆ.

ಇದನ್ನೂ ಓದಿ: ಎಐಎಡಿಎಂಕೆ ನೇತೃತ್ವಕ್ಕೆ ಹಗ್ಗಜಗ್ಗಾಟ; ಪಳನಿಸ್ವಾಮಿಗೆ ಬೆಂಬಲ, ಸಭೆಯಿಂದ ಹೊರನಡೆದ ಪನ್ನೀರ್​ಸೆಲ್ವಂ

ಇದನ್ನೂ ಓದಿ
Image
T20 Blast: ಒಟ್ಟು ಮೊತ್ತ 424 ರನ್​: ಟಿ20 ಕ್ರಿಕೆಟ್​ನ ರಣರೋಚಕ ಪಂದ್ಯದಲ್ಲಿ ಗೆದ್ದಿದ್ಯಾರು?
Image
ಎಐಎಡಿಎಂಕೆ ನೇತೃತ್ವಕ್ಕೆ ಹಗ್ಗಜಗ್ಗಾಟ; ಪಳನಿಸ್ವಾಮಿಗೆ ಬೆಂಬಲ, ಸಭೆಯಿಂದ ಹೊರನಡೆದ ಪನ್ನೀರ್​ಸೆಲ್ವಂ
Image
ಶಿವಣ್ಣನ ಸಿನಿಮಾ ನೋಡಲು ಹೋಗಿ ಲಾಠಿ ಏಟು ತಿಂದಿದ್ದ ನಿರ್ದೇಶಕ ಯೋಗರಾಜ್​ ಭಟ್​
Image
OnePlus Nord 2T: ವಿದೇಶದಲ್ಲಿ ಧೂಳೆಬ್ಬಿಸಿದ ಈ ಸ್ಮಾರ್ಟ್​​ಫೋನ್ ಜುಲೈ 1ಕ್ಕೆ ಭಾರತದಲ್ಲಿ ರಿಲೀಸ್

ಅಶ್ವಥ್ ನಾರಾಯಣ್ ಹೇಳಿದ್ದೇನು?: ನಿನ್ನೆ ಬೆಂಗಳೂರಿನಲ್ಲಿ ಮಾತನಾಡಿದ್ದ ಅಶ್ವಥ್ ನಾರಾಯಣ್, ಈ ವರ್ಷ ಮಾತ್ರ ಸಿಇಟಿ ಮತ್ತು ಕಾಮೆಡ್-ಕೆ ಪರೀಕ್ಷೆ ಇರಲಿದೆ. ಮುಂದಿನ ವರ್ಷದಿಂದ ಸಿಇಟಿ ಮಾತ್ರ ಇರುತ್ತದೆ. ಈ ಸಂಬಂಧ ಒಡಂಬಡಿಕೆ ಆಗಲಿದೆ ಎಂದು ತಿಳಿಸಿದ್ದರು. ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶೇ 10 ರಷ್ಟು ಫೀಸ್ ಹೆಚ್ಚಳ ಕುರಿತು ಇಂಜಿನಿಯರಿಂಗ್ ಕಾಲೇಜುಗಳ ಜೊತೆ ಚರ್ಚೆಯಾಗಿದೆ. ವಿದ್ಯಾರ್ಥಿಗಳಿಂದ ಹೆಚ್ಚು ಫೀಸ್ ಸಂಗ್ರಹ ಮಾಡಬಾರದು. ನಿರ್ಧಿಷ್ಟ ಶುಲ್ಕ ಮಾತ್ರ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಕೋರ್ಡಿನೇಷನ್ ಸಿಂಪಲ್ ಮಾಡುವ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:09 pm, Thu, 23 June 22