ಎಐಎಡಿಎಂಕೆ ನೇತೃತ್ವಕ್ಕೆ ಹಗ್ಗಜಗ್ಗಾಟ; ಪಳನಿಸ್ವಾಮಿಗೆ ಬೆಂಬಲ, ಸಭೆಯಿಂದ ಹೊರನಡೆದ ಪನ್ನೀರ್​ಸೆಲ್ವಂ

ಎಐಎಡಿಎಂಕೆಯ ಹಿಡಿತಕ್ಕಾಗಿ ಹಗ್ಗಜಗ್ಗಾಟ ಇಂದು ತೀವ್ರಗೊಂಡಿದ್ದು, ಪ್ರತಿಸ್ಪರ್ಧಿ ಎಡಪ್ಪಾಡಿ ಪಳನಿಸ್ವಾಮಿ ಅವರ ಏಕ ನಾಯಕತ್ವದ ಬೇಡಿಕೆಯನ್ನು ಹಿರಿಯ ನಾಯಕರು ಬೆಂಬಲಿಸಿದ್ದರಿಂದ ಪಕ್ಷದ ಮುಖ್ಯಸ್ಥ ಓ ಪನ್ನೀರಸೆಲ್ವಂ ಅವರು ಸಭೆಯಿಂದ ಹೊರನಡೆದಿದ್ದಾರೆ.

ಎಐಎಡಿಎಂಕೆ ನೇತೃತ್ವಕ್ಕೆ ಹಗ್ಗಜಗ್ಗಾಟ; ಪಳನಿಸ್ವಾಮಿಗೆ ಬೆಂಬಲ, ಸಭೆಯಿಂದ ಹೊರನಡೆದ ಪನ್ನೀರ್​ಸೆಲ್ವಂ
ಸಭೆಯಿಂದ ಹೊರನಡೆದ ಪನ್ನೀರ್​ಸೆಲ್ವಂImage Credit source: Times of India
Follow us
| Updated By: ಸುಷ್ಮಾ ಚಕ್ರೆ

Updated on:Jun 23, 2022 | 1:18 PM

ಚೆನ್ನೈ: ಪಕ್ಷದ ವೇದಿಕೆಗಳಲ್ಲಿ ತನ್ನ ಸಂಪೂರ್ಣ ಬಹುಮತವನ್ನು ಬಳಸಿಕೊಂಡು ಎಡಪ್ಪಾಡಿ ಪಳನಿಸ್ವಾಮಿ (Edappadi Palaniswami) ನೇತೃತ್ವದ ಬಣವು ತಮಿಳುನಾಡಿನ ಜನರಲ್ ಕೌನ್ಸಿಲ್ ಸಭೆಯಲ್ಲಿ ಮಂಡಿಸಿದ ಎಲ್ಲಾ 23 ನಿರ್ಣಯಗಳನ್ನು ತಿರಸ್ಕರಿಸಿದೆ. ತಮಿಳುನಾಡಿನ ಪ್ರತಿಪಕ್ಷವಾದ ಎಐಎಡಿಎಂಕೆಯ (AIADMK) ಹಿಡಿತಕ್ಕಾಗಿ ಹಗ್ಗಜಗ್ಗಾಟ ಇಂದು ತೀವ್ರಗೊಂಡಿದ್ದು, ಪ್ರತಿಸ್ಪರ್ಧಿ ಎಡಪ್ಪಾಡಿ ಪಳನಿಸ್ವಾಮಿ ಅವರ ಏಕ ನಾಯಕತ್ವದ ಬೇಡಿಕೆಯನ್ನು ಹಿರಿಯ ನಾಯಕರು ಬೆಂಬಲಿಸಿದ್ದರಿಂದ ಪಕ್ಷದ ಮುಖ್ಯಸ್ಥ ಓ ಪನ್ನೀರಸೆಲ್ವಂ (O Panneerselvam) ಅವರು ಸಭೆಯಿಂದ ಹೊರನಡೆದಿದ್ದಾರೆ.

ಜನರಲ್ ಕೌನ್ಸಿಲ್ ಸಭೆ ಆರಂಭವಾದ ಕೂಡಲೇ 23 ಪೂರ್ವ ನಿರ್ಧಾರಿತ ನಿರ್ಣಯಗಳ ಅಂಗೀಕಾರ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಯಿತು. ಈ ವೇಳೆ ಇತ್ತೀಚೆಗೆ ರಾಜ್ಯಸಭೆಗೆ ಆಯ್ಕೆಯಾದ ಹಿರಿಯ ನಾಯಕ ಷಣ್ಮುಗಂ ಅವರು ಎಲ್ಲಾ ನಿರ್ಣಯಗಳನ್ನು ಜನರಲ್ ಕೌನ್ಸಿಲ್ನಿಂದ ತಿರಸ್ಕರಿಸಲಾಗಿದೆ ಎಂದು ಘೋಷಿಸಿದರು.

ಸಭೆಯ ಮೊದಲು, ಪನೀರ್‌ಸೆಲ್ವಂ ಮತ್ತು ಶ್ರೀ ಪಳನಿಸ್ವಾಮಿ ಬೆಂಬಲಿಗರು ಪರಸ್ಪರರ ವಿರುದ್ಧ ಘೋಷಣೆಗಳನ್ನು ಕೂಗಿದ್ದರಿಂದ ಉದ್ವಿಗ್ನತೆ ಉಂಟಾಗಿತ್ತು. ಎಐಎಡಿಎಂಕೆ ಜನರಲ್ ಕೌನ್ಸಿಲ್ ಅನ್ನು ಇಪಿಎಸ್ ಮುಂದಿಟ್ಟಿರುವ ಏಕ ನಾಯಕತ್ವದ ಸೂತ್ರದ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆ ಮದ್ರಾಸ್ ಹೈಕೋರ್ಟ್ ನಿರ್ಬಂಧಿಸಿದ ಗಂಟೆಗಳ ನಂತರ ಸಭೆ ನಡೆಯಿತು.

ತಡರಾತ್ರಿಯ ವಿಚಾರಣೆಯ ನಂತರ, ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯು ಈಗಾಗಲೇ ಪಟ್ಟಿ ಮಾಡಲಾದ 23 ನಿರ್ಣಯಗಳನ್ನು ಮಾತ್ರ ಅಳವಡಿಸಿಕೊಳ್ಳಬಹುದು ಎಂದು ನ್ಯಾಯಾಲಯ ಹೇಳಿದೆ. ನಿನ್ನೆ ಜನರಲ್ ಕೌನ್ಸಿಲ್ ಸಭೆಗೆ ತಡೆಯಾಜ್ಞೆ ನೀಡಲು ನ್ಯಾಯಾಲಯ ನಿರಾಕರಿಸಿತ್ತು.

ಇದನ್ನೂ ಓದಿ: ಮಾತು ಕೇಳದ ವಿ.ಕೆ.ಶಶಿಕಲಾ ವಿರುದ್ಧ ಪೊಲೀಸ್​ ಠಾಣೆ ಮೆಟ್ಟಿಲೇರಿದ ಎಐಎಡಿಎಂಕೆ ನಾಯಕ; ಆಯುಕ್ತರಿಗೆ ದೂರು

ನಿನ್ನೆ, ನ್ಯಾಯಾಲಯದಲ್ಲಿ, OPS ಪರ ವಕೀಲರು ಅವರು ಈಗಾಗಲೇ ಮಂಡಿಸಿದ 23 ಅನ್ನು ಹೊರತುಪಡಿಸಿ ಯಾವುದೇ ತಿದ್ದುಪಡಿ ಅಥವಾ ಸಾಮಾನ್ಯ ಪರಿಷತ್ತಿನಲ್ಲಿ ಯಾವುದೇ ನಿರ್ಣಯಗಳನ್ನು ಅನುಮತಿಸುವುದಿಲ್ಲ ಎಂದು ವಾದಿಸಿದರು. ಆದರೂ ಸದಸ್ಯರು ಏನು ಯೋಚಿಸುತ್ತಾರೆ ಎಂಬುದರ ಆಧಾರದ ಮೇಲೆ ಚರ್ಚೆಗಳು ನಡೆಯುವುದರಿಂದ ಅದನ್ನು ಖಾತರಿಪಡಿಸಲಾಗುವುದಿಲ್ಲ ಎಂದು ಇಪಿಎಸ್ ವಕೀಲರು ವಾದಿಸಿದ್ದರು.

ಕಳೆದ ವಾರ ನಡೆದ ಜಿಲ್ಲಾ ಕಾರ್ಯದರ್ಶಿಗಳ ಸಭೆಯಲ್ಲಿ ಇಪಿಎಸ್ ಬೆಂಬಲಿಗರು ಅವರ ನೇತೃತ್ವದಲ್ಲಿ ಏಕ ನಾಯಕತ್ವದ ಕಲ್ಪನೆಯನ್ನು ಪ್ರಸ್ತಾಪಿಸಿದ ನಂತರ ಈ ಸಂಘರ್ಷ ಪ್ರಾರಂಭವಾಯಿತು. ನಾಯಕತ್ವಕ್ಕೆ ಮಾರ್ಗದರ್ಶನ ನೀಡಲು ಪಕ್ಷದ ಸಂಸ್ಥಾಪಕ ಎಂಜಿಆರ್ ಮತ್ತು ಜಯಲಲಿತಾ ಅವರೊಂದಿಗೆ ಕೆಲಸ ಮಾಡಿದ ಹಿರಿಯ ನಾಯಕರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚಿಸಬೇಕೆಂದು ಒಪಿಎಸ್ ಬಯಸಿದ್ದರು.

ಎಐಎಡಿಎಂಕೆ ಪಕ್ಷದ ಕಾನೂನುಗಳನ್ನು ತಿದ್ದುಪಡಿ ಮಾಡಲು ಬುಧವಾರ ನಡೆದಿದ್ದ ಸಾಮಾನ್ಯ ಸಭೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿರುವ ಮದ್ರಾಸ್ ಹೈಕೋರ್ಟ್​ನ ಆದೇಶವನ್ನು ವಿಭಾಗೀಯ ಪೀಠ ಕಾಯ್ದಿರಿಸಿದೆ. ಈ ಕುರಿತು ಎಐಎಡಿಎಂಕೆ ಪಕ್ಷದ ಸಂಯೋಜಕ ಕೆ.ಪಿ ಮುನಿಸಾಮಿ ಮಾತನಾಡಿ, ಜಿಸಿ ಸದಸ್ಯರು ಏಕೀಕೃತ ನಾಯಕತ್ವವನ್ನು ಬಯಸುತ್ತಾರೆ. ಮುಂದಿನ ದಿನಾಂಕದಲ್ಲಿ ಕರೆಯಲಾಗುವ ಜನರಲ್ ಕೌನ್ಸಿಲ್‌ ಸಭೆಯಲ್ಲಿ ಏಕೀಕೃತ ನಾಯಕತ್ವದ ನಿರ್ಣಯವನ್ನು ಮಂಡಿಸಿದಾಗ ಎಲ್ಲಾ 23 ನಿರ್ಣಯಗಳನ್ನು ಮಂಡಿಸಲಾಗುತ್ತದೆ ಮತ್ತು ಅಂಗೀಕರಿಸಲಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ಸಿಎಂ ಪತ್ರ: ನೆರೆರಾಜ್ಯದ ಯೋಜನೆಗೆ ತಕರಾರು ತಪ್ಪು ಎಂದ ಗೋವಿಂದ ಕಾರಜೋಳ

ಎಐಎಡಿಎಂಕೆಯ 2ನೇ ಸ್ಥಾನದಲ್ಲಿರುವ ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರಿಗೆ ಹಿನ್ನಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ನಡೆಯಲಿರುವ ಪಕ್ಷದ ಸಾಮಾನ್ಯ ಸಭೆಗೆ ಮದ್ರಾಸ್ ಹೈಕೋರ್ಟ್ ಅವರು ಏಕ ನಾಯಕತ್ವ ಸೂತ್ರದ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆ ತಡೆಯಾಜ್ಞೆ ನೀಡಿದೆ. ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯು ಈಗಾಗಲೇ ಪಟ್ಟಿ ಮಾಡಲಾದ 23 ನಿರ್ಣಯಗಳನ್ನು ಮಾತ್ರ ಅಂಗೀಕರಿಸಬಹುದು ಎಂದು ವಿಭಾಗೀಯ ಪೀಠವು ತಡರಾತ್ರಿಯ ವಿಚಾರಣೆಯ ನಂತರ ಮಧ್ಯಂತರ ಆದೇಶದಲ್ಲಿ ತೀರ್ಪು ನೀಡಿತು.

ಅರ್ಜಿದಾರರಲ್ಲಿ ಒಬ್ಬರಾದ ಸಾಮಾನ್ಯ ಪರಿಷತ್ ಸದಸ್ಯ ಷಣ್ಮುಗಂ ಅವರು ನಿನ್ನೆ ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರು. ಅವರು ಪಕ್ಷದ ಆಂತರಿಕ ಚುನಾವಣೆಗೆ ಸವಾಲು ಹಾಕಿದ್ದಾರೆ. ಅವರ ಪ್ರಕರಣ ಇತ್ಯರ್ಥವಾಗುವ ಮೊದಲು ನಾಯಕತ್ವದ ಬಗ್ಗೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದು ಅವರು ಬಯಸಿದ್ದರು. ನಿನ್ನೆ ಜನರಲ್ ಕೌನ್ಸಿಲ್ ಸಭೆಗೆ ತಡೆಯಾಜ್ಞೆ ನೀಡಲು ನ್ಯಾಯಾಲಯ ನಿರಾಕರಿಸಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:04 pm, Thu, 23 June 22

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ