AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾವೇರಿ ನಗರದಲ್ಲಿ ಪಾದಚಾರಿ ರಸ್ತೆಗಳಲ್ಲಿ ತಳ್ಳುಗಾಡಿ ಕ್ಯಾಂಟೀನ್​​ಗಳ ಹಾವಳಿ, ಪಾದಚಾರಿಗಳ ಸಂಚಾರಕ್ಕೆ ಅಡ್ಡಗಲ್ಲುಗಳಾಗಿವೆ!

City Municipal Council, Haveri: ಹಾವೇರಿ ಸಿಎಂಸಿ ಆಯುಕ್ತ ಪರಶುರಾಮ್ ಚಲವಾದಿ ಅವರು ರಸ್ತೆ ಬದಿ ಕ್ಯಾಂಟೀನ್‌ಗಳಿಗೆ ಸಂಬಂಧಿಸಿದಂತೆ ದೂರುಗಳು ಬಂದಿವೆ ಎಂದು ತಿಳಿಸಿದ್ದಾರೆ. ಆಡಳಿತ ಸಂಸ್ಥೆ ಅಧಿಕಾರಕ್ಕೆ ಬಂದ ನಂತರ ನಾವು ಈ ಮೊಬೈಲ್ ಕ್ಯಾಂಟೀನ್‌ಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಹಾವೇರಿ ನಗರದಲ್ಲಿ ಪಾದಚಾರಿ ರಸ್ತೆಗಳಲ್ಲಿ  ತಳ್ಳುಗಾಡಿ ಕ್ಯಾಂಟೀನ್​​ಗಳ ಹಾವಳಿ, ಪಾದಚಾರಿಗಳ ಸಂಚಾರಕ್ಕೆ ಅಡ್ಡಗಲ್ಲುಗಳಾಗಿವೆ!
ಹಾವೇರಿ ನಗರದಲ್ಲಿ ತಳ್ಳುಗಾಡಿ ಕ್ಯಾಂಟೀನ್​​ಗಳ ಹಾವಳಿ
Follow us
ಸಾಧು ಶ್ರೀನಾಥ್​
|

Updated on: Nov 30, 2023 | 11:50 AM

ಹಾವೇರಿ ನಗರದಲ್ಲಿ (Haveri) ದಿನದಿಂದ ದಿನಕ್ಕೆ ಸಂಚಾರ ದಟ್ಟಣೆ (traffic problems) ಹೆಚ್ಚುತ್ತಿದೆ. ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಬಹುತೇಕ ರಸ್ತೆಗಳಲ್ಲಿ ಪಾದಚಾರಿ  ಮಾರ್ಗಗಳಲ್ಲಿ ರಸ್ತೆ ಬದಿ ಮೊಬೈಲ್​​ ಕ್ಯಾಂಟೀನ್‌ಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿದ್ದು, ಬೆಳಗ್ಗೆಯಿಂದ ತಡ ರಾತ್ರಿಯವರೆಗೆ ಕಾರ್ಯನಿರ್ವಹಿಸುತ್ತಿವೆ. ಸಂಚಾರಿ ಕ್ಯಾಂಟೀನ್‌ಗಳು (mobile canteens) ಹೆಚ್ಚಿನ ರಸ್ತೆಗಳಾದ ಎನ್‌ಎಚ್-48, ಮುನ್ಸಿಪಲ್ ಹೈಸ್ಕೂಲ್ ರಸ್ತೆ, ಡಿಸಿ ಕಚೇರಿ ರಸ್ತೆ, ಗುತ್ತಲ್ ರಸ್ತೆ ಮತ್ತು ಇತರ ಒಳ ರಸ್ತೆಗಳನ್ನು ಆಕ್ರಮಿಸಿಕೊಂಡಿವೆ. ಈ ಕ್ಯಾಂಟೀನ್‌ಗಳನ್ನು ಪಾರ್ಕಿಂಗ್‌ಗೆ ಮೀಸಲಾದ, ಜನ ಓಡಾಟದ ಜಾಗದಲ್ಲಿ ಸ್ಥಾಪಿಸಿರುವುದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗಿದೆ (City Municipal Council, Haveri).

ಇದಲ್ಲದೆ, ಈ ರಸ್ತೆ ಬದಿಯ ಈ ತಳ್ಳುಗಾಡಿ ಕ್ಯಾಂಟೀನ್​​ಗಳು ತ್ಯಾಜ್ಯವನ್ನು ರಸ್ತೆಯ ಮೇಲೆಯೇ ಎಸೆದು ಹೋಗುತ್ತವೆ. ತಳ್ಳುಗಾಡಿ ಕ್ಯಾಂಟೀನ್ ಹೊರಸೂಸುವ ಅಡುಗೆ ಹೊಗೆ ವಾಯು ಮಾಲಿನ್ಯ ಹೆಚ್ಚಿಸುತ್ತಿದೆ. ಇನ್ನು ತಳ್ಳುಗಾಡಿ ಕ್ಯಾಂಟೀನ್ ಅವರು ಆಹಾರ ಬೇಯಿಸುವಾಗ ಮತ್ತು ಪಾತ್ರೆಗಳ ತೊಳೆಯುವಾಗ, ವ್ಯಾಪಾರ ಮಾಡುವಾಗ ನಿರಂತರ ಶಬ್ದ ಮಾಲಿನ್ಯಕ್ಕೆ ಕಾರಣವಾಗುತ್ತಿದೆ.

ಅಕ್ಕಪಕ್ಕದ ಅಂಗಡಿಯವರು, ಸ್ಥಳೀಯ ನಿವಾಸಿಗಳು ಎದುರಿಸುತ್ತಿರುವ ದೊಡ್ಡ ಸಮಸ್ಯೆಯೆಂದರೆ ಅವರ ವಾಹನಗಳ ನಿಲುಗಡೆಗೆ ಸ್ಥಳಳಳಾವಕಾಆಶಶ ಸಸಿಗದೆ ಪರದಾಡುತ್ತಿದ್ದಾರೆ. ಆದರೆ ತಳ್ಳುಗಾಡಿ ಕ್ಯಾಂಟೀನ್​​ಗಳ ಅಕ್ರಮಣದಿಂದಾಗಿ ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನಗಳನ್ನು ಮುಖ್ಯ ರಸ್ತೆಗಳಲ್ಲಿ ಅಪಾಯಕಾರಿಯಾಗಿ ನಿಲುಗಡೆ ಮಾಡುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಜೊತೆಗೆ ಟ್ರಾಫಿಕ್ ನಿಯಂತ್ರಣಕ್ಕಾಗಿ ಮತ್ತು ಇನ್ನಿತರೆ ಅಂಗಡಿಗಳ ಮುಂಭಾಗದ ಜಾಗವನ್ನು ನಿರ್ಬಂಧಿಸುವುದರಿಂದ ವ್ಯಾಪಾರಿಗಳು ಇಲ್ಲಿ ವ್ಯಾಪಾರ ಮಾಡಲು ಸಾಧ್ಯವಾಗುತ್ತಿಲ್ಲ ಎಂದು timesofindia.indiatimes.com ವರದಿ ಮಾಡಿದೆ.

ಇದನ್ನೂ ಓದಿ: ಜಯನಗರ ಶಾಪಿಂಗ್​ ಕಾಂಪ್ಲೆಕ್ಸ್ ಬಳಿ ಫುಟ್‌ಪಾತ್‌ ವ್ಯಾಪಾರ ಅಂಗಡಿಮುಂಗಟ್ಟು ತೆರವುಗೊಳಿಸಲಿರುವ ಬಿಬಿಎಂಪಿ, ಏನಿದೆ ಸದ್ಯದ ಚಿತ್ರಣ

ಮುನ್ಸಿಪಲ್ ಹೈಸ್ಕೂಲ್ ರಸ್ತೆಯಲ್ಲಿ ಮಾಂಸಾಹಾರಿ ಕ್ಯಾಂಟೀನ್​​ಗಳು ಅವ್ಯವಸ್ಥೆಯ ಆಗರವಾಗಿವೆ ಎಂದು ಇಲ್ಲಿನ ನಿವಾಸಿ ಅಶೋಕ್ ಬೋಗಾರ್ timesofindia.indiatimes.com ತಿಳಿಸಿದ್ದಾರೆ. ಸ್ವಚ್ಛತೆ ಎಂಬುದು ಈ ತಳ್ಳುಗಾಡಿ ಕ್ಯಾಂಟೀನ್​​ಗಳ ಆದ್ಯತೆಗಳಲ್ಲಿ ಕನಿಷ್ಠವಾಗಿದೆ. “ಅಳಿದುಳಿದ ಮಾಂಸಾಹಾರ ಮತ್ತು ತ್ಯಾಜ್ಯವನ್ನು ಸಾಮಾನ್ಯವಾಗಿ ರಸ್ತೆಗಳಲ್ಲಿ ಎಸೆದಿರುತ್ತಾರೆ. ಅದಕ್ಕಾಗಿ ಬೀದಿ ನಾಯಿಗಳು ಜಗಳವಾಡುತ್ತವೆ. ಅದು ಅಹಿತಕರ ವಾತಾವರಣವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಮತ್ತು ನಾಯಿಗಳ ನಿರಂತರ ಬೊಗಳುವಿಕೆ ಅಸಹನೀಯವಾಗಿರುತ್ತದೆ ಎಂದು ಅವರು ಕಿಡಿಕಾರಿದ್ದಾರೆ.

ನಮ್ಮ ಗ್ರಾಹಕರು ಮುಖ್ಯ ರಸ್ತೆಯಿಂದ ನಮ್ಮ ಅಂಗಡಿಗಳ ಕಡಡೆಗೆ ಬರಲು ಸಾಧ್ಯವಾಗದ ಕಾರಣ ರಸ್ತೆ ಬದಿಯ ಕ್ಯಾಂಟೀನ್‌ಗಳು ವಾಆಸ್ತವದ ನೆಲೆಗಟ್ಟಿನಲ್ಲಿ ನಮ್ಮ ವ್ಯಾಪಾರಕ್ಕೆ ಬಹುದೊಡ್ಡ ಅಡಚಣೆಯಾಗಿದೆ. ಈ ಮೊಬೈಲ್ ಕ್ಯಾಂಟೀನ್‌ಗಳಿಂದ ಗ್ರಾಹಕರು ನಮ್ಮ ಅಂಗಡಿಗಳ ಕಡೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹಳೆಯ ರಾಷ್ಟ್ರೀಯ ಹೆದ್ದಾರಿ-48 ರ ಬಸ್ ಟರ್ಮಿನಲ್ ಬಳಿಯ ಅಂಗಡಿಯವರೊಬ್ಬರು ತಮ್ಮ ಆತಂಕವನ್ನು ಹಂಚಿಕೊಂಡಿದ್ದಾರೆ.

ಹಾವೇರಿ ನಗರ ವಾಸಿಗಳಿಗೆ ಕುಡಿಯುವ ನೀರಿನ ಜಲಮೂಲ ಅಕ್ಕಮಹಾದೇವಿ ಕೊಳವಾಗಿದೆ. ಇಲ್ಲಿ ಸಣ್ಣ ಕ್ಯಾಂಟೀನ್‌ಗಳಿದ್ದು, ಅವುಗಳ ಆವರಣದಲ್ಲಿ ಆಹಾರ ಸೇವೆ ಒದಗಿಸಲು, ಆಹಾರ ಸೇವಿಸಲು ಸಾಕಷ್ಟು ಸ್ಥಳಾವಕಾಶವಿಲ್ಲ. ಜನರು ತಮ್ಮ ವಾಹನಗಳನ್ನು ರಸ್ತೆಗಳಲ್ಲಿಯೇ ನಿಲ್ಲಿಸಿ ಆಹಾರ ಸೇವಿಸುತ್ತಾರೆ. ಇದರಿಂದ ಪಾದಚಾರಿಗಳು ಮತ್ತು ವಾಹನ ಸವಾರರ ಸಂಚಾರಕ್ಕೆ ತೊಡಕುಂಟಾಗುತ್ತದೆ. ಕೆರೆಗೆ ತ್ಯಾಜ್ಯ ಸುರಿಯುವ ಮೂಲಕವೂ ಸಹ ಕೆರೆಯನ್ನು ಕಲುಷಿತಗೊಳಿಸುತ್ತಿದ್ದಾರೆ ಎಂದು ಹಾವೇರಿಯ ಜೆಡಿಎಸ್‌ ಮುಖಂಡ ಮಾಂತೇಶ ಬೇವಿನಹಿಂಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಪೊಲೀಸ್ ವಾಹನದ ಬಾನೆಟ್​ ಮೇಲೆ ಕೇಕ್ ಕತ್ತರಿಸಿದ ಪೊಲೀಸ್ ಅಧಿಕಾರಿ ಪತ್ನಿ
ಪೊಲೀಸ್ ವಾಹನದ ಬಾನೆಟ್​ ಮೇಲೆ ಕೇಕ್ ಕತ್ತರಿಸಿದ ಪೊಲೀಸ್ ಅಧಿಕಾರಿ ಪತ್ನಿ
Daily Devotional: ಯಾವ ದಿನ, ಯಾವ ದಾನ ಮಾಡಿದರೆ ಶ್ರೇಷ್ಠ ತಿಳಿಯಿರಿ
Daily Devotional: ಯಾವ ದಿನ, ಯಾವ ದಾನ ಮಾಡಿದರೆ ಶ್ರೇಷ್ಠ ತಿಳಿಯಿರಿ
Daily horoscope: ಈ ರಾಶಿಯವರ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ
Daily horoscope: ಈ ರಾಶಿಯವರ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ
ಉತ್ತರ ಪ್ರದೇಶದಲ್ಲಿ 2 ತಲೆ, 3 ಕಣ್ಣುಗಳೊಂದಿಗೆ ಜನಿಸಿದ ಕರು; ಜನರಿಂದ ಪೂಜೆ
ಉತ್ತರ ಪ್ರದೇಶದಲ್ಲಿ 2 ತಲೆ, 3 ಕಣ್ಣುಗಳೊಂದಿಗೆ ಜನಿಸಿದ ಕರು; ಜನರಿಂದ ಪೂಜೆ
ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್
ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್
ಪ್ರಿಯಾಂಕ್​ ಖರ್ಗೆಗೆ ಎಲ್ಲಾದರಲ್ಲೂ ರಾಜಕಿಯ ಮಾಡುವ ಚಟ: ಸಿಟಿ ರವಿ
ಪ್ರಿಯಾಂಕ್​ ಖರ್ಗೆಗೆ ಎಲ್ಲಾದರಲ್ಲೂ ರಾಜಕಿಯ ಮಾಡುವ ಚಟ: ಸಿಟಿ ರವಿ
ಫೈಲ್‌ ಎತ್ತಿ ಇಟ್ಟುಬಿಡ್ತಾರೆ, ಅಲೆದಾಡಿಸ್ತಾರೆ..ಇದಕ್ಕೆ ಹೊಸ ಅಸ್ತ್ರ!
ಫೈಲ್‌ ಎತ್ತಿ ಇಟ್ಟುಬಿಡ್ತಾರೆ, ಅಲೆದಾಡಿಸ್ತಾರೆ..ಇದಕ್ಕೆ ಹೊಸ ಅಸ್ತ್ರ!
‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
ಇರಾನ್​ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!
ಇರಾನ್​ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!
ಇಸ್ರೇಲ್​​ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ವಾಪಸ್
ಇಸ್ರೇಲ್​​ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ವಾಪಸ್