AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ರಮ ಟೆಂಡರ್, ಡಿ.2ರಿಂದ ರೇಸ್​ ಕೋರ್ಸ್​ ಬಂದ್​ಗೆ ಹೆಚ್​ಕೆಪಿ ಒತ್ತಾಯ

ಬೆಂಗಳೂರು: ಅಕ್ರಮವಾಗಿ ಟೆಂಡರ್ ಪಡೆದು ರೇಸ್​ ಕೋರ್ಸ್ ನಡೆಸಲಾಗುತ್ತಿದೆ. ಹೀಗಾಗಿ ಡಿಸೆಂಬರ್ 2ರಿಂದ ರೇಸ್​ ಕೋರ್ಸ್​ ಬಂದ್​ ಮಾಡಬೇಕೆಂದು ವಿಧಾನಸೌಧದಲ್ಲಿ ಹೆಚ್​.ಕೆ.ಪಾಟೀಲ್ ಒತ್ತಾಯಿಸಿದ್ದಾರೆ. ₹33 ಕೋಟಿ ಬಾಡಿಗೆ ಬಾಕಿ: ನವೆಂಬರ್ ಅಂತ್ಯಕ್ಕೆ 33 ಕೋಟಿ ಬಾಡಿಗೆ ಹಣವನ್ನು ಸರ್ಕಾರಕ್ಕೆ ಟರ್ಫ್ ಕ್ಲಬ್ ನೀಡಬೇಕು ಎಂದು ಸಮಿತಿ ನಿರ್ದೇಶನ ನೀಡಿತ್ತು. ಈವರೆಗೆ ಟರ್ಫ್ ಕ್ಲಬ್ ಬಾಡಿಗೆ ಹಣವನ್ನೇ ಕಟ್ಟಿಲ್ಲ. PWD ಇದೇ ಜಾಗವನ್ನು ಯುವಜನ ಸೇವೆಗೆ ಇರಲಿ ಎಂದಿತ್ತು. ಆದರೆ ರೇಸ್ ಕೋರ್ಸ್ ಜೂಜಾಟ ಅಲ್ಲವೇ, ಹೀಗಾಗಿ ಅದು […]

ಅಕ್ರಮ ಟೆಂಡರ್, ಡಿ.2ರಿಂದ ರೇಸ್​ ಕೋರ್ಸ್​ ಬಂದ್​ಗೆ ಹೆಚ್​ಕೆಪಿ ಒತ್ತಾಯ
ಸಾಧು ಶ್ರೀನಾಥ್​
|

Updated on: Nov 19, 2019 | 8:25 PM

Share

ಬೆಂಗಳೂರು: ಅಕ್ರಮವಾಗಿ ಟೆಂಡರ್ ಪಡೆದು ರೇಸ್​ ಕೋರ್ಸ್ ನಡೆಸಲಾಗುತ್ತಿದೆ. ಹೀಗಾಗಿ ಡಿಸೆಂಬರ್ 2ರಿಂದ ರೇಸ್​ ಕೋರ್ಸ್​ ಬಂದ್​ ಮಾಡಬೇಕೆಂದು ವಿಧಾನಸೌಧದಲ್ಲಿ ಹೆಚ್​.ಕೆ.ಪಾಟೀಲ್ ಒತ್ತಾಯಿಸಿದ್ದಾರೆ.

₹33 ಕೋಟಿ ಬಾಡಿಗೆ ಬಾಕಿ: ನವೆಂಬರ್ ಅಂತ್ಯಕ್ಕೆ 33 ಕೋಟಿ ಬಾಡಿಗೆ ಹಣವನ್ನು ಸರ್ಕಾರಕ್ಕೆ ಟರ್ಫ್ ಕ್ಲಬ್ ನೀಡಬೇಕು ಎಂದು ಸಮಿತಿ ನಿರ್ದೇಶನ ನೀಡಿತ್ತು. ಈವರೆಗೆ ಟರ್ಫ್ ಕ್ಲಬ್ ಬಾಡಿಗೆ ಹಣವನ್ನೇ ಕಟ್ಟಿಲ್ಲ. PWD ಇದೇ ಜಾಗವನ್ನು ಯುವಜನ ಸೇವೆಗೆ ಇರಲಿ ಎಂದಿತ್ತು. ಆದರೆ ರೇಸ್ ಕೋರ್ಸ್ ಜೂಜಾಟ ಅಲ್ಲವೇ, ಹೀಗಾಗಿ ಅದು ಯುವಕರ ಕ್ರೀಡೆಯಲ್ಲ.

ಕುದುರೆ ಜೂಜಿನ ಆಟಕ್ಕೆ ಇತಿಶ್ರೀ?  ಡಿ.2ರಿಂದ ಕುದುರೆ ಜೂಜನ್ನು ನಿಲ್ಲಿಸಬೇಕು. ಇದಕ್ಕೆ ಸರ್ಕಾರ ಕಾನೂನು ರಕ್ಷಣೆ ನೀಡಬೇಕು. ಉಳ್ಳವರ ಜೂಜಿನ ಆಟಕ್ಕೆ ಇತಿಶ್ರೀ ಹಾಡಲು ಸಮಿತಿ ಸರ್ವಾನುಮತದಿಂದ ನಿರ್ಣಯಿಸಿದೆ. ಇದರ ಜವಾಬ್ದಾರಿಯನ್ನು ಲೋಕೋಪಯೋಗಿ ಇಲಾಖೆ ವಹಿಸಿಕೊಳ್ಳಬೇಕು ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಹೆಚ್​.ಕೆ.ಪಾಟೀಲ್ ಆಗ್ರಹಿಸಿದ್ದಾರೆ. ಅಲ್ಲದೆ, ಡಿ.2ರಿಂದ ರೇಸ್ ಕೋರ್ಸ್ ನಿಲ್ಲಿಸಲು ಅಪರ ಮುಖ್ಯ ಕಾರ್ಯದರ್ಶಿಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸೂಚನೆ ನೀಡಿದೆ ಎಂದರು.

ರೀಸ್ ​ಕೋರ್ಸ್​ ಹಿನ್ನೆಲೆ: 1923ರಲ್ಲಿ 83 ಎಕರೆ 14 ಗುಂಟೆ ಜಾಗವನ್ನು ವಿಧಾನಸೌಧ ಸಮೀಪ ಮೈಸೂರು ಮಹಾರಾಜರು ರೇಸ್ ಕೋರ್ಸ್ ಗೆ ಜಾಗ ನೀಡಿದ್ದರು. ಒಪ್ಪಂದದ ಪ್ರಕಾರ 1981ರಿಂದ ವಾರ್ಷಿಕವಾಗಿ 5 ಲಕ್ಷ ರೂ. ಸರ್ಕಾರಕ್ಕೆ ಟರ್ಫ್ ಕ್ಲಬ್ ಬಾಡಿಗೆ ನೀಡುತ್ತಿತ್ತು. 1986ರಲ್ಲಿ ಆ ಜಾಗವನ್ನು ಸರ್ಕಾರದ ವಶಕ್ಕೆ ನೀಡಬೇಕು ಎಂದು ಸೂಚನೆ ನೀಡಿತ್ತು. ಆದ್ರೆ ಟರ್ಫ್ ಕ್ಲಬ್ ಈ ಆದೇಶ ಪಾಲನೆ ಮಾಡಿಲ್ಲ.

ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ನಗರದಿಂದ ಟರ್ಫ್ ಕ್ಲಬ್ ಅನ್ನು ಸ್ಥಳಾಂತರ ಮಾಡಲು ತೀರ್ಮಾನಿಸಲಾಗಿತ್ತು. ವಾರ್ಷಿಕ ಬಾಡಿಗೆಯನ್ನೂ ಹೆಚ್ಚಿಸಬೇಕೆಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದ್ರೆ ಅಕ್ರಮವಾಗಿ ಟೆಂಡರ್ ಪಡೆದು ರೇಸ್ ಕೋರ್ಸ್ ನಡೆಸಲಾಗುತ್ತಿದೆ ಎಂದು ಹೆಚ್​.ಕೆ.ಪಾಟೀಲ್ ಗಂಭೀರವಾಗಿ ಆರೋಪಿಸಿದ್ದಾರೆ.

2009ಕ್ಕೇ ಒಪ್ಪಂದ ಮುಕ್ತಾಯ:  ಲೆಕ್ಕಪತ್ರ ಸಮಿತಿ, ಸರ್ಕಾರ, ಬಜೆಟ್​ನಲ್ಲೂ ಇದರ ಬಗ್ಗೆ ನಿರ್ಧಾರ ಮಾಡಲಾಗಿತ್ತು. ಆದರೆ ಅಧಿಕಾರಿಗಳು ತಮಗೆ ಬೇಕಾದಂತೆ ನಡೆದುಕೊಂಡಿದ್ದಾರೆ. ರೇಸ್ ಕೋರ್ಸ್​ಗೆ ಅನಧಿಕೃತವಾಗಿ ಸಹಾಯ ಮಾಡುತ್ತಿದ್ದಾರೆ. ಸರ್ಕಾರ ಮತ್ತು ಟರ್ಫ್ ಕ್ಲಬ್ ಒಪ್ಪಂದ 2009ಕ್ಕೇ ಮುಕ್ತಾಯ ಆಗಿದೆ. ಅಂದಿನಿಂದ ಅನಧಿಕೃತವಾಗಿ ಟರ್ಫ್ ಕ್ಲಬ್ ನಡೆಯುತ್ತಿದೆ ಎಂದರು.

Follow Us
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!