AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಬುರಗಿ: ನೋಟ್ ಮೇಲೆ “ನಮ್ಮ ಅತ್ತೆ ಬೇಗ ಸಾಯಬೇಕು” ಎಂದು ಬರೆದು ಭಾಗ್ಯವಂತಿ ದೇವಿಗೆ ಹರಕೆ!

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಘತ್ತರಗಿ ಗ್ರಾಮದ ಭಾಗ್ಯವಂತಿ ದೇವಿಯ ಹುಂಡಿಯಲ್ಲಿ 60 ಲಕ್ಷ ರೂಪಾಯಿ ನಗದು, ಬೆಳ್ಳಿ ಮತ್ತು ಚಿನ್ನಾಭರಣ ಪತ್ತೆಯಾಗಿದೆ. ಆದರೆ, ಹುಂಡಿಯಲ್ಲಿ ವಿಚಿತ್ರ ಹರಕೆಯ ನೋಟ್​ ಪತ್ತೆಯಾಗಿದೆ. 20 ರೂಪಾಯಿ ನೋಟಿನ ಮೇಲೆ ಇಷ್ಟಾರ್ಥವನ್ನು ಬರೆದು ಹುಂಡಿಯಲ್ಲಿ ಹಾಕಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ನೋಟಿನ ಭಾವಚಿತ್ರ ವೈರಲ್ ಆಗಿದೆ.

ಕಲಬುರಗಿ: ನೋಟ್ ಮೇಲೆ ನಮ್ಮ ಅತ್ತೆ ಬೇಗ ಸಾಯಬೇಕು ಎಂದು ಬರೆದು ಭಾಗ್ಯವಂತಿ ದೇವಿಗೆ ಹರಕೆ!
ಹರಕೆ ನೋಟ್​
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ವಿವೇಕ ಬಿರಾದಾರ|

Updated on: Dec 28, 2024 | 1:51 PM

Share

ಕಲಬುರಗಿ, ಡಿಸೆಂಬರ್​​ 28: ಕಲಬುರಗಿ (Kalaburagi) ಜಿಲ್ಲೆಯ ಅಫಜಲಪುರ (Afzalpur) ತಾಲೂಕಿನ ಘತ್ತರಗಿ ಗ್ರಾಮದ ಭಾಗ್ಯವಂತಿ ದೇವಿಯ (Bhagyavanti Devi) ಹುಂಡಿ ಎಣಿಕೆ ಕಾರ್ಯ ನಡೆಯಿತು. ಹುಂಡಿ ಎಣಿಕೆ ಮಾಡುವ ವೇಳೆ ವಿಚಿತ್ರ ಹರಕೆಯ ನೋಟ್​ ಪತ್ತೆಯಾಗಿದೆ. ಅತ್ತೆ ಸಾಯಬೇಕೆಂದು ಬರೆದಿರುವ 20 ರೂ. ಮುಖಬೆಲೆಯ ನೋಟ್ ಪತ್ತೆಯಾಗಿದೆ. “ತಾಯಿ, ನಮ್ಮ ಅತ್ತೆ ಬೇಗ ಸಾಯಬೇಕು” ಅಂತ 20 ರೂ. ಮುಖಬೆಲೆಯ ನೋಟ್ ಮೇಲೆ ಬರೆದು ಹುಂಡಿಯಲ್ಲಿ ಹಾಕಲಾಗಿದೆ.

ಹುಂಡಿ ಎಣಿಕೆ ಕಾರ್ಯ ವೇಳೆ ನೋಟ್​ ಪತ್ತೆಯಾಗಿದೆ. ನೋಟ್​ನ ಭಾವಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅತ್ತೆ ಸಾಯಲೆಂದು ಸೊಸೆ ಈ ರೀತಿಯಾಗಿ ಬರೆದು ಹಾಕಿದ್ದಾಳೆ ಎಂದು ಊಹಿಸಲಾಗಿದೆ. ಹುಂಡಿಯಲ್ಲಿ 60 ಲಕ್ಷ ನಗದು, ಒಂದು ಕೆಜಿ ಬೆಳ್ಳಿ, 200 ಗ್ರಾಂ ಚಿನ್ನಾಭರಣ ಹುಂಡಿಯಲ್ಲಿ ಹಾಕಲಾಗಿತ್ತು.

ಬನಶಂಕರಿ ದೇವಿಗೂ ವಿಚಿತ್ರ ಹರಕೆಗಳು

ಬೆಂಗಳೂರಿನ ಬನಶಂಕರಿ ದೇವಸ್ಥಾನ ಪ್ರಸಿದ್ದವಾದ ದೇವಸ್ಥಾನಗಳಲ್ಲೊಂದು. ಶಕ್ತಿ ದೇವತೆ ಆದ ಬನಶಂಕರಿ ದೇವಿಯ ಆರ್ಶಿವಾದ ಪಡೆಯಲು ಲಕ್ಷಾಂತರ ಜನ ಆಗಮಿಸುತ್ತಾರೆ. ಇದೇ ವರ್ಷ ಮೇ 24 ರಂದು ಬನಶಂಕರಿ ಹುಂಡಿ ಎಣಿಕೆ ಕಾರ್ಯ ನಡೆದಿತ್ತು.

ಹುಂಡಿ ಎಣಿಯಲ್ಲಿ ಹಲವು ಹರಕೆ ಪತ್ರಗಳು ಪತ್ತೆಯಾಗಿದ್ದವು. ಆಸ್ತಿ ನನಗೇ ದಕ್ಕುವಂತೆ ಮಾಡು, ಸೋಸೆ ನಮ್ಮ ಕುಟುಂಬದ ಜೊತೆ ಚೆನ್ನಾಗಿ ಹೊಂದುಕೊಳ್ಳುವಂತೆ ಮಾಡು, ಹೀಗೆ ಹಲವು ಹರಕೆ ಪತ್ರಗಳು ಸಿಕ್ಕಿದ್ದವು.

ಇದನ್ನೂ ಓದಿ: ಮಂಗಳೂರು: ಅಪಘಾತದ ಸ್ಥಳದಿಂದ 2 ದಿನ ಕದಲದೆ ಅಚ್ಚರಿ ಮೂಡಿಸಿದ ಹರಕೆ ಕೋಳಿ

“ನನ್ನ ತಾಯಿ ಕಡೆಯಿಂದ ಬರುವ ಆಸ್ತಿ ನನಗೆ ಬರುವ ಹಾಗೆ ಮಾಡು, ಯಾವುದೇ ಅಡ್ಡಿ ಇಲ್ಲದೆ ನನಗೆ ಸಿಗುವ ತರಹ ಮಾಡು ಎಂದು ಹಾಳೆಯಲ್ಲಿ ಬರೆದು ಹುಂಡಿಗೆ ಹಾಕಲಾಗಿತ್ತು. ಮತ್ತೊಬ್ಬರು “ಓಂ ಶ್ರೀ ಬನಶಂಕರಿಯೇ ನಮಃ ಎಂದು ಬರೆದು ಮುಮದುವರೆಸಿ, ಅಮ್ಮ ನಿನ್ನಲ್ಲಿ ನನ್ನ ಕೋರಿಕೆ ಇದೆ. ನನ್ನ ಮಗನ ಮದುವೆ ನಿಶ್ಚಯವಾಗಿದೆ. ಈಗಾಗಲೇ ನಿಶ್ಚಿತಾರ್ಥ್​ ಕೂಡ ಆಗಿದ್ದು, ಮದುವೆ ಕೆಲಸಗಳು ಮುಂದುವರೆದಿದೆ. ಅದರಂತೆ ನನ್ನ ಮಗನ ಮದುವೆ ಆಗುವ ಹುಡುಗಿ, ನನ್ನ ಮಗ, ಕುಟುಂಬದ ಜೊತೆ ಚೆನ್ನಾಗಿ ಹೊಂದಿಕೊಳ್ಳುವಂತೆ ಮಾಡು ಎಂದು ಬೇಡಿಕೊಂಡಿದ್ದರು.”

ಮತ್ತೊಬ್ಬರು, “ಹೇಮನಿಗೆ ಒಳ್ಳೆ ಕಡೆಯ ಸಂಬಂಧ ಒದಗಿಬಂದು ಸಂತೋಷದಿಂದ ಒಪ್ಪಿ ಮದುವೆ ಆಗುವ ಹಾಗೆ ದಾರಿ ತೋರಿಸವ್ವ. ಜೊತೆಗೆ ಅಮ್ಮನ ಮನೆ ಸಮಸ್ಯೆ ಸರಿಹೋಗಿ ದುಡ್ಡು ಬರುವ ಹಾಗೆ ಮಾಡವ್ವ” ಎಂದು ವಿಧವಿಧವಾದ ಬೇಡಿಕೆಯನ್ನು ದೇವಿ ಮುಂದೆ ಇಟ್ಟಿದ್ದರು.

ಮೇ ತಿಂಗಳಲ್ಲಿ ಬನಶಂಕರಿ ದೇವಿಯ ಹುಂಡಿಯಲ್ಲಿ ಬರೊಬ್ಬರಿ 44 ಲಕ್ಷದ 4 ಸಾವಿರದ 840 ರೂ. ಹಣ ಸಂಗ್ರಹವಾಗಿತ್ತು. 96 ಗ್ರಾಂ 100 ಮಿಲಿ ಚಿನ್ನ, 573 ಗ್ರಾಂ ಬೆಳ್ಳಿ ಸಂಗ್ರಹವಾಗಿತ್ತು. ಅಲ್ಲದೇ ಅಮೆರಿಕದ 5‌ ನೋಟು, ವಿಯೆಟ್ನಂ‌ನ 16 ನೋಟು, ಮಲೇಶಿಯಾದ 14 ನೋಟು, ಬೂತಾನ್​ನ 2 ನೋಟು, ನೇಪಾಳದ 3 ನೊಟು, ತೈಲ್ಯಾಂಡ್​ನ 3 ನೋಟುಗಳು ಹುಂಡಿಯಲ್ಲಿದ್ದವು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ