AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧ್ಯಾನದ ಬಳಿಕ ಈಗ ವಿವೇಕ ಶಾಲೆಗೂ ವಿರೋಧ; ಶಾಲೆಗಳನ್ನ ಕೇಸರಿಮಯ ಮಾಡುವ ಉದ್ದೇಶವೆಂಬ ಆರೋಪ

ಶಿಕ್ಷಣ ಇಲಾಖೆಯ ನಡೆ ಒಂದಲ್ಲ ಒಂದು ಯೋಜನೆಗಳನ್ನು ಜಾರಿಗೆ ತರುವ ಮೂಲಕ ವಿರೋಧದ ಕೇಂದ್ರ ಬಿಂದುವಾಗುತ್ತಿದೆ. ಸದ್ಯ ಧ್ಯಾನದ ಬಳಿಕ ಈಗ ವಿವೇಕ ಶಾಲೆಗೂ ಮುಸ್ಲಿಂ ಮುಖಂಡರಿಂದ ವಿರೋಧ ವ್ಯಕ್ತವಾಗುತ್ತಿದೆ.

ಧ್ಯಾನದ ಬಳಿಕ ಈಗ ವಿವೇಕ ಶಾಲೆಗೂ ವಿರೋಧ; ಶಾಲೆಗಳನ್ನ ಕೇಸರಿಮಯ ಮಾಡುವ ಉದ್ದೇಶವೆಂಬ ಆರೋಪ
ಧ್ಯಾನದ ಬಳಿಕ ಈಗ ವಿವೇಕ ಶಾಲೆಗೂ ವಿರೋಧ
Follow us
TV9 Web
| Updated By: Rakesh Nayak Manchi

Updated on:Nov 13, 2022 | 8:11 AM

ಬೆಂಗಳೂರು: ಶಿಕ್ಷಣ ಇಲಾಖೆಯು ಜಾರಿ ತರಲು ಮುಂದಾಗುತ್ತಿರುವ ಒಂದೊಂದು ಯೋಜನೆಗಳು ವಿವಾದಕ್ಕೆ ಕಾರಣವಾಗುತ್ತಿದೆ. ಹಿಜಾಬ್, ಪಠ್ಯ ಪುಸ್ತಕ ಪರಿಷ್ಕರಣೆ, ಭಗವದ್ಗೀತೆ, ಧ್ಯಾನದ ವಿಚಾರವಾಗಿ ನಡೆದ ವಿವಾದದ ನಂತರ ಇದೀಗ ಶಿಕ್ಷಣ ಇಲಾಖೆ (Education Department) ಜಾರಿಗೆ ಮುಂದಾದ ವಿವೇಕ ಶಾಲೆ (Vivek School)ಗೂ ವಿರೋಧ ವ್ಯಕ್ತವಾಗುತ್ತಿದೆ. ಶಿಕ್ಷಣ ಇಲಾಖೆ ಹೊಸದಾಗಿ ರಾಜ್ಯದಾದ್ಯಂತ ನಿರ್ಮಿಸಲು ಹೊರಟಿರುವ ಅಂದರೆ 7000ಕ್ಕೂ ಅಧಿಕ ಶಾಲಾ ಕಾಲೇಜು ಕೊಠಡಿಗಳಿಗೆ ಸ್ವಾಮಿ ವಿವೇಕಾನಂದ (Swami Vivekananda)ರ ನೆನಪಿನಲ್ಲಿ ವಿವೇಕ ಶಾಲೆ ಅಂತಾ ಹೆಸರಿಡಲು ಮುಂದಾಗಿದೆ. ಕೊಠಡಿಗಳಿಗೆ ವಿವೇಕಾನಂದರ ಉಡುಗೆಯ ಬಣ್ಣವನ್ನೇ ಏಕರೂಪವಾಗಿ ಕೇಸರಿ ಬಣ್ಣ ಬಳಿಸಲು ಚಿಂತಿಸಿದೆ.

ವಿವೇಕಾನಂದರ ಹೆಸರಿಟ್ಟಿರುವ ಕಾರಣ ವಿವೇಕ ಶಾಲೆ ಅಂತಾ ಗುರುತಿಸುವ ಕಾರಣಕ್ಕೆ ಏಕ ರೂಪದ ಬಣ್ಣ ಹಚ್ಚಲು ಚಿಂತನೆ ನಡೆಸಿದೆ. ಸದ್ಯ ಇಲಾಖೆಯ ಈ ನಡೆ ಒಂದಷ್ಟು ಮುಸ್ಲಿಂ ಮುಖಂಡರಿಂದ ಖಂಡನೆ ವ್ಯಕ್ತವಾಗಿದೆ. ಶಿಕ್ಷಣ ಇಲಾಖೆ ವಿವೇಕಾನಂದರ ಹೆಸರನ್ನ ಉಪಯೋಗಿಸಿಕೊಂಡು ಶಾಲೆಗಳನ್ನ ಕೇಸರಿಮಯ ಮಾಡಲು ಮುಂದಾಗಿದೆ. ಪಠ್ಯಪುಸ್ತಕ ಪರಿಸ್ಕರಣೆಯ ನಂತರ ಎರಡನೇ ಸುತ್ತಿನ ಕೇಸರೀಕರಣ ಶುರು ಮಾಡಿದೆ ಎಂದು ಆರೋಪಿಸಲಾಗುತ್ತಿದೆ.

ವಿರೋಧ ವ್ಯಕ್ತವಾಗುತ್ತಿರುವ ಬಗ್ಗೆ ಸ್ಪಷ್ಟನೆ ನೀಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ವಿವೇಕ ಶಾಲೆಗಳಿಗೆ ಏಕ ದೃಷ್ಟಿಯ ವಿಚಾರಕ್ಕೆ ಏಕಮಯವಾಗಿ ಇದು ವಿವೇಕ ಶಾಲೆ ಅಂತಾ ಗುರುತಿಸುವ ಕಾರಣಕ್ಕೆ ಎಲ್ಲ ಕೊಠಡಿಗಳಿಗೆ ಒಂದೇ ಬಣ್ಣ ಬಳಿಸಲು ನಿರ್ಧಾರವಾಗಿದೆ. ಆದರೆ ಯಾವ ಬಣ್ಣ ಬಳಿಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಯಾವ ಬಣ್ಣ ಬಳಿಯಬೇಕು ಎಂದು ಆರ್ಕಿಟೆಕ್ಚರ್ ಸಲಹೆ ಕೋಡುತ್ತಾರೆ. ಅವರು ಯಾವ ಸಲಹೆ ಕೊಡುತ್ತಾರೆಯೋ ಆ ಬಣ್ಣವನ್ನೇ ಅಂತಿಮ ಮಾಡಿ ಕೊಠಡಿಗಳಿಗೆ ಬಳಿಯಲಾಗುವುದು ಎಂದು ಹೇಳಿದರು.

ಆದರೆ ಇದಕ್ಕೂ ಚಿತಂಕರು ಹಾಗೂ ಮುಸ್ಲಿಂ ಮುಖಂಡರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಶಿಕ್ಷಣ ಇಲಾಖೆ ಕೇಸರಿಮಯಕ್ಕೆ ಮುಂದಾಗಿದೆ. ಏಕ ಬಣ್ಣ ಅಂದರೆ ಯಾವುದು? ಇವರ ಆಯ್ಕೆ ಕೇಸರಿಬಣ್ಣ ಎಂದು ನಮಗೆ ಗೊತ್ತಿದೆ. ಏಕಮಯ ಬಣ್ಣ ಅಂದರೆ ತ್ರೀವರ್ಣ ಬಣ್ಣ. ಆದರೆ ಬರಿ ಕೇಸರಿ ಮಾತ್ರ ಯಾಕೆ? ಶಾಲೆಗಳನ್ನ ಸಂಪೂರ್ಣ ಕೇಸರಿ ಮಾಡುವ ಉದ್ದೇಶವೇ ಶಿಕ್ಷಣ ಸಚಿವರ ಆಯ್ಕೆ ಎಂದು ಆರೋಪಿಸಲಾಗುತ್ತಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:11 am, Sun, 13 November 22

Daily Devotional: ಯಾವ ದಿನ, ಯಾವ ದಾನ ಮಾಡಿದರೆ ಶ್ರೇಷ್ಠ ತಿಳಿಯಿರಿ
Daily Devotional: ಯಾವ ದಿನ, ಯಾವ ದಾನ ಮಾಡಿದರೆ ಶ್ರೇಷ್ಠ ತಿಳಿಯಿರಿ
Daily horoscope: ಈ ರಾಶಿಯವರ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ
Daily horoscope: ಈ ರಾಶಿಯವರ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ
ಉತ್ತರ ಪ್ರದೇಶದಲ್ಲಿ 2 ತಲೆ, 3 ಕಣ್ಣುಗಳೊಂದಿಗೆ ಜನಿಸಿದ ಕರು; ಜನರಿಂದ ಪೂಜೆ
ಉತ್ತರ ಪ್ರದೇಶದಲ್ಲಿ 2 ತಲೆ, 3 ಕಣ್ಣುಗಳೊಂದಿಗೆ ಜನಿಸಿದ ಕರು; ಜನರಿಂದ ಪೂಜೆ
ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್
ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್
ಪ್ರಿಯಾಂಕ್​ ಖರ್ಗೆಗೆ ಎಲ್ಲಾದರಲ್ಲೂ ರಾಜಕಿಯ ಮಾಡುವ ಚಟ: ಸಿಟಿ ರವಿ
ಪ್ರಿಯಾಂಕ್​ ಖರ್ಗೆಗೆ ಎಲ್ಲಾದರಲ್ಲೂ ರಾಜಕಿಯ ಮಾಡುವ ಚಟ: ಸಿಟಿ ರವಿ
ಫೈಲ್‌ ಎತ್ತಿ ಇಟ್ಟುಬಿಡ್ತಾರೆ, ಅಲೆದಾಡಿಸ್ತಾರೆ..ಇದಕ್ಕೆ ಹೊಸ ಅಸ್ತ್ರ!
ಫೈಲ್‌ ಎತ್ತಿ ಇಟ್ಟುಬಿಡ್ತಾರೆ, ಅಲೆದಾಡಿಸ್ತಾರೆ..ಇದಕ್ಕೆ ಹೊಸ ಅಸ್ತ್ರ!
‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
ಇರಾನ್​ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!
ಇರಾನ್​ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!
ಇಸ್ರೇಲ್​​ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ವಾಪಸ್
ಇಸ್ರೇಲ್​​ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ವಾಪಸ್
ಜಯಂತಿ ಬಸುರಿ ಮತ್ತು ಸೀಮಂತದ ದಿನಾಂಕ ಫಿಕ್ಸ್ ಆಗಿತ್ತು: ನೆರೆಮನೆ ಮಹಿಳೆ
ಜಯಂತಿ ಬಸುರಿ ಮತ್ತು ಸೀಮಂತದ ದಿನಾಂಕ ಫಿಕ್ಸ್ ಆಗಿತ್ತು: ನೆರೆಮನೆ ಮಹಿಳೆ