
ಬೆಂಗಳೂರು, ಜುಲೈ 03: ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಕಳೆದ ಕೆಲ ದಿನಗಳಿಂದ ತೀವ್ರ ಮಳೆಯಾಗುತ್ತಿದ್ದು, ನಾಳೆ (ಜುಲೈ 04) ಕೂಡ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಹವಾಮಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಈ ನಡುವೆ ಜುಲೈ 2ರ ಬೆಳಿಗ್ಗೆ 8:30ರಿಂದ ಜುಲೈ 3ರ ಬೆಳಿಗ್ಗೆ 7:30ರವರೆಗೆ 50 ಮಿ.ಮೀ.ಗಿಂತ ಹೆಚ್ಚು ಮಳೆ ದಾಖಲಿಸಿದ ಟೆಲಿಮೆಟ್ರಿಕ್ ಮಳೆಮಾಪನ ಕೇಂದ್ರಗಳ ವಿವರ ಬಹಿರಂಗಗೊಂಡಿದೆ. ಆ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೊಳ್ತಿಗೆಯಲ್ಲಿ ಅತಿ ಹೆಚ್ಚು ಅಂದರೆ 139 ಮಿಲಿ ಮೀಟರ್ ಮಳೆಯಾಗಿದೆ.
ರಾಜ್ಯಾದ್ಯಂತ 02.07.2026 ರಂದು ಬೆಳಿಗ್ಗೆ 08.30 ರಿಂದ 03.07.2026 ರಂದು ಬೆಳಿಗ್ಗೆ 07.30 ರವರೆಗೆ, 50 ಮಿ.ಮೀ ಗಿಂತ ಹೆಚ್ಚು ಮಳೆಯ ದಾಖಲಿಸಿದ ಟೆಲಿಮೆಟ್ರಿಕ್ ಮಳೆಮಾಪನ ಕೇಂದ್ರಗಳ ವಿವರಗಳು.#KSNDMC pic.twitter.com/pyiRpaAeyg
— Karnataka State Natural Disaster Monitoring Centre (@KarnatakaSNDMC) July 3, 2026
108.5 ಮಿ.ಮೀ ಮಳೆ ದಾಖಲಿಸುವ ಮೂಲಕ ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಹಿರೇಯಂಗಡಿ ಎರಡನೇ ಸ್ಥಾನದಲ್ಲಿದ್ದರೆ, ಇದೇ ತಾಲೂಕಿನ ಜಲವಳ್ಳಿ 104.5 ಮಿ.ಮೀ ಮತ್ತು ನಗರಬಸ್ತಿಕೇರಿ 100.5 ಮಿ.ಮೀ ದಾಖಲಿಸುವ ಮೂಲಕ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ. ಮೇಲಿನ ಇಡಗುಂಜಿ 97.5 ಮಿ.ಮೀ, ಹಡಿನಬಾಳ 93.5 ಮಿ.ಮೀ, ಖರ್ವಾ 91 ಮಿ.ಮೀ, ಕುದ್ರಿಗಿ 91 ಮಿ.ಮೀ ಮತ್ತು ಕೆಳಗಿನೂರಿನಲ್ಲಿ 89.5 ಮಿ.ಮೀ, ಮಳೆಯಾಗಿದೆ.
ಇದನ್ನೂ ಓದಿ: ಕರಾವಳಿ, ದಕ್ಷಿಣ ಒಳನಾಡಿಗೆ ಆರೆಂಜ್ ಅಲರ್ಟ್; ಜುಲೈ 5ರ ವರೆಗೂ ಭಾರಿ ವರ್ಷಧಾರೆ
ಹಾಗೆಯೇ ಅಂಕೋಲಾ ತಾಲೂಕಿಮ ಹಿಲ್ಲೂರಿನಲ್ಲಿ 87 ಮಿ.ಮೀ, ಹೊನ್ನಾವರದ ಕಾಸರಕೋಡಿನಲ್ಲಿ 85 ಮಿ.ಮೀ, ಮುಗ್ವಾ 78.5 ಮಿ.ಮೀ, ಬಳ್ಕೂರಿನಲ್ಲಿ 78 ಮಿ.ಮೀ, ದಕ್ಷಿಣ ಕನ್ನಡ ಜಿಲ್ಲೆಯ ಪಡುಮಾರ್ನಾಡ್ನಲ್ಲಿ 77.5ಮಿ.ಮೀ, ಹೊನ್ನಾವರದ ಚಿಕ್ಕನಕೋಡದಲ್ಲಿ 76.5 ಮಿ.ಮೀ ಮತ್ತು ಕೊಡಾಣಿಯಲ್ಲಿ 74.5 ಮಿ.ಮೀ ಮಳೆಯ ಪ್ರಮಾಣ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಹಿತಿ ನೀಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:37 pm, Fri, 3 July 26