AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Powerless: ರಾಜ್ಯ ಸರ್ಕಾರದಿಂದ ಅನುದಾನ ಕಡಿತ -ಕೊಡಗು ಜಿಲ್ಲೆಯ ಎಲ್ಲ ಅಂಗನವಾಡಿಗಳು ಕಗ್ಗತ್ತಲಲ್ಲಿ

ಕೊಡಗು ಜಿಲ್ಲೆಯ ಅಂಗನವಾಡಿಗಳು ಗಂಭೀರ ಸಮಸ್ಯೆಗೆ ಸಿಲುಕಿದೆ. ಇಲಾಖೆಯ ಪ್ರಧಾನ ಕಚೇರಿಯಲ್ಲಿ ಬಿಎಸ್​ಎನ್​ಎಲ್​ ಬಿಲ್ ಪಾವತಿ ಮಾಡದ್ದರಿಂದ ಇಂಟರ್​ನೆಟ್​ ಸಂಪರ್ಕವನ್ನೂ ಕಡಿತ ಮಾಡಿರುವ ಪ್ರಸಂಗ ನಡೆದಿದೆ. ಕಚೇರಿಯಲ್ಲಿ ಕನಿಷ್ಟ ಜೆರಾಕ್ಸ್​ ಮಾಡಲು ಪೇಪರ್ ಖರೀದಿಸುವುದಕ್ಕೂ ಹಣ ಇಲ್ಲವಾದಂತಾಗಿದೆ

Powerless: ರಾಜ್ಯ ಸರ್ಕಾರದಿಂದ ಅನುದಾನ ಕಡಿತ -ಕೊಡಗು ಜಿಲ್ಲೆಯ ಎಲ್ಲ ಅಂಗನವಾಡಿಗಳು ಕಗ್ಗತ್ತಲಲ್ಲಿ
ಸರ್ಕಾರದಿಂದ ಅನುದಾನ ಕಡಿತ: ಕೊಡಗು ಜಿಲ್ಲೆಯ ಅಂಗನವಾಡಿಗಳು ಕಗ್ಗತ್ತಲಲ್ಲಿ
ಗೋಪಾಲ್​ ಸೋಮಯ್ಯ
| Edited By: ಸಾಧು ಶ್ರೀನಾಥ್​|

Updated on: Nov 03, 2023 | 4:55 PM

Share

ಕೊಡಗು ಜಿಲ್ಲೆಯ (Kodagu) ಅಂಗನವಾಡಿಗಳು ಕಗ್ಗತ್ತಲಲ್ಲಿವೆ. ಜಿಲ್ಲೆಯ ಬಹುತೇಕ ಅಂಗನವಾಡಿಗಳ ವಿದ್ಯುತ್ (Electricity) ಸಂಪರ್ಕವನ್ನೇ ಚೆಸ್ಕಾಂ ಕಡಿತಗೊಳಿಸಿದೆ. ಕಳೆದ ಹಲವು ತಿಂಗಳಿಂದ ಚೆಸ್ಕಾಂಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (Directorate of Women And Child Development Department) ವಿದ್ಯುತ್ ಬಿಲ್​ ಪಾವತಿಸಿಲ್ಲ. ಹಾಗಾಗಿ ಚೆಸ್ಕಾಂ ಅಂಗನವಾಡಿಗಳ (Anganwadi) ವಿದ್ಯುತ್ (Electricity) ಸಂಪರ್ಕ ಕಡಿತ ಮಾಡಿರುವುದೇ ಅಲ್ಲದೆ ಹಲವು ಅಂಗನವಾಡಿಗಳ (anganwadi) ಮೀಟರ್​ಗಳನ್ನೇ ಹೊತ್ತೊಯ್ದಿದೆ!

ಇದರಿಂದಾಗಿ ಕತ್ತಲಲ್ಲೇ ಮಕ್ಕಳು ಪಾಠ ಕೇಳುವಂತಾಗಿದೆ. ಅಂಗನವಾಡಿಗಳ ದೈನಂದಿನ ಖರ್ಚು ವೆಚ್ಚಕ್ಕೆಂದು ಈ ಹಿಂದೆ ಇಲಾಖೆ ಪ್ರತಿ ಅಂಗನವಾಡಿಗೆ ತಲಾ 3500 ರೂ ನೀಡುತ್ತಿತ್ತು. ಅದರಲ್ಲೇ ವಿದ್ಯುತ್ ಬಿಲ್ ಪಾವತಿಯಾಗುತ್ತಿತ್ತು. ಆದ್ರೆ 2022ರ ಆಗಸ್ಟ್​ ನಿಂದಲೇ ಈ ಅನುದಾನ ಅಂಗನವಾಡಿಗಳಿಗೆ ಬರುತ್ತಿಲ್ಲ. ಹಾಗಾಗಿ ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಾಗುತ್ತಿಲ್ಲ. ಅದೂ ಅಲ್ಲದೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಕಳೆದ ಜನವರಿಯಿಂದ ಬೇರೆ ಯಾವುದೇ ಅನುದಾನ ಬರುತ್ತಿಲ್ಲ.

ಇದರಿಂದಾಗಿ ಈ ಇಲಾಖೆ ಗಂಭೀರ ಸಮಸ್ಯೆಗೆ ಸಿಲುಕಿದೆ. ಇಲಾಖೆಯ ಪ್ರಧಾನ ಕಚೇರಿಯಲ್ಲಿ ಬಿಎಸ್​ಎನ್​ಎಲ್​ ಬಿಲ್ ಪಾವತಿ ಮಾಡದ್ದರಿಂದ ಇಂಟರ್​ನೆಟ್​ ಸಂಪರ್ಕವನ್ನೂ ಕಡಿತ ಮಾಡಿರುವ ಪ್ರಸಂಗ ನಡೆದಿದೆ. ಕಚೇರಿಯಲ್ಲಿ ಕನಿಷ್ಟ ಜೆರಾಕ್ಸ್​ ಮಾಡಲು ಪೇಪರ್ ಖರೀದಿಸುವುದಕ್ಕೂ ಹಣ ಇಲ್ಲವಾದಂತಾಗಿದೆ ಅಂತ ಅಲ್ಲಿನ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ಇಲಾಖೆಗೆ ನೀಡುತ್ತಿದ್ದ ಅನುದಾನ ನಿಲ್ಲಿಸಿದ್ದೇ ಈ ಎಲ್ಲಾ ಎಡವಟ್ಟುಗಳಿಗೆ ಕಾರಣವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ