AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

3 ದಿನ ಕಾಡಲ್ಲೇ ವಾಸ, ಊಟೋಪಚಾರ, ಕೊಡಗಲ್ಲಿ ಮಲೆಕುಡಿಯರ ಹಬ್ಬದ ಸಂಭ್ರಮ

ಮಡಿಕೇರಿ: ಸಂಸ್ಕೃತಿಯ ಮೂಲ ಸೆಲೆ ಇರೋದು ಆಯಾ ಮೂಲ ನಿವಾಸಿಗಳಲ್ಲಿ. ಇತ್ತಿಚಿನ ದಿನಗಳಲ್ಲಂತೂ ಎಲ್ಲ ಆಚರಣೆಗಳು ಅಳಿಸಿ ಹೋಗ್ತಿವೆ. ಆದ್ರೆ, ಕೊಡಗಿನ ಕೆಲ ಸಮುದಾಯಗಳು ಇನ್ನು ಕೂಡ ತಮ್ಮ ಮೂಲ ಸಂಸ್ಕೃತಿಯ ಆಚರಣೆಗಳನ್ನ ಎಂಜಾಯ್​ ಮಾಡ್ತಿವೆ. ಸುತ್ತಲೂ ದಟ್ಟಾರಣ್ಯ. ಕಾಡಿನ ನಡುವೆ ಪುಟ್ಟ ಗೂಡು. ಕುಣಿಯೋದೇನು. ಹಾಡೋದೇನು. ಅಡುಗೆ ರುಚಿಯನ್ನ ಸವಿಯೋದೇನು. ಅಂದಹಾಗೇ ಇದು, ಕರುನಾಡ ಕಾಶ್ಮೀರ ಕೊಡಗಿನಲ್ಲಿ ಮಲೆ ಕುಡಿಯ ಜನಾಂಗದವ್ರ ಹಬ್ಬದ ಸಂಭ್ರಮ. ಮಲೆ ಕುಡಿಯ ಜನಾಂಗದವ್ರು ಕೊಡಗಿನ ಮೂಲ ನಿವಾಸಿಗಳು. ಡಿಸೆಂಬರ್​​ ತಿಂಗಳಲ್ಲಿ […]

3 ದಿನ ಕಾಡಲ್ಲೇ ವಾಸ, ಊಟೋಪಚಾರ, ಕೊಡಗಲ್ಲಿ ಮಲೆಕುಡಿಯರ ಹಬ್ಬದ ಸಂಭ್ರಮ
ಸಾಧು ಶ್ರೀನಾಥ್​
|

Updated on:Dec 24, 2019 | 8:36 AM

Share

ಮಡಿಕೇರಿ: ಸಂಸ್ಕೃತಿಯ ಮೂಲ ಸೆಲೆ ಇರೋದು ಆಯಾ ಮೂಲ ನಿವಾಸಿಗಳಲ್ಲಿ. ಇತ್ತಿಚಿನ ದಿನಗಳಲ್ಲಂತೂ ಎಲ್ಲ ಆಚರಣೆಗಳು ಅಳಿಸಿ ಹೋಗ್ತಿವೆ. ಆದ್ರೆ, ಕೊಡಗಿನ ಕೆಲ ಸಮುದಾಯಗಳು ಇನ್ನು ಕೂಡ ತಮ್ಮ ಮೂಲ ಸಂಸ್ಕೃತಿಯ ಆಚರಣೆಗಳನ್ನ ಎಂಜಾಯ್​ ಮಾಡ್ತಿವೆ.

ಸುತ್ತಲೂ ದಟ್ಟಾರಣ್ಯ. ಕಾಡಿನ ನಡುವೆ ಪುಟ್ಟ ಗೂಡು. ಕುಣಿಯೋದೇನು. ಹಾಡೋದೇನು. ಅಡುಗೆ ರುಚಿಯನ್ನ ಸವಿಯೋದೇನು. ಅಂದಹಾಗೇ ಇದು, ಕರುನಾಡ ಕಾಶ್ಮೀರ ಕೊಡಗಿನಲ್ಲಿ ಮಲೆ ಕುಡಿಯ ಜನಾಂಗದವ್ರ ಹಬ್ಬದ ಸಂಭ್ರಮ.

ಮಲೆ ಕುಡಿಯ ಜನಾಂಗದವ್ರು ಕೊಡಗಿನ ಮೂಲ ನಿವಾಸಿಗಳು. ಡಿಸೆಂಬರ್​​ ತಿಂಗಳಲ್ಲಿ ಮೂರು ದಿನ, ನಾಗರಿಕ ಸಮಾಜದಿಂದ ದೂರ ಉಳಿಯುವ ಈ ಜನಾಗಂದವ್ರು ತಮ್ಮ ಸಂಸ್ಕೃತಿಯನ್ನ ಆಚರಿಸ್ತಾರೆ. ವಾಲಗ, ಬೊಳಕಾಟ್, ಕೊಲಾಟ್, ಉಮ್ಮತಾಟ್ ಆಚರಿಸಿ ಎಂಜಾಯ್​​ ಮಾಡ್ತಾರೆ.

ಮಡಿಕೇರಿಯಿಂದ 40 ಕಿಮೀ ದೂರದ ತಡಿಯಂಡಮೋಳ್ ಬೆಟ್ಟದ ಸಮೀಪ ಎಲ್ರೂ ಆಗಮಿಸ್ತಾರೆ. ವಾಹನ ತಲುಪದ ದುರ್ಗಮ ಕಾಡಿನಲ್ಲಿಯೇ 15 ಕಿಲೋಮೀಟರ್​ಗೂ‌ ಹೆಚ್ಚು ನಡೆದು ಹೋಗಿ ಹಬ್ಬ ಆಚರಿಸ್ತಾರೆ. ಮೂರು ದಿನ ಕಾಡಿನಲ್ಲೇ ವಾಸಿಸುವ ಜನರೆಲ್ಲ, ಅಲ್ಲೇ ಚಪ್ಪರ ನಿರ್ಮಿಸಿ ಮನೆ ದೇವರಿಗೆ ಪೂಜೆ ಸಲ್ಲಿಸ್ತಾರೆ. ಭರ್ಜರಿ ಬಾಡೂಟ ಸವಿದು, ರಾತ್ರಿಯೆಲ್ಲ ಕುಣಿದು ಕುಪ್ಪಳಿಸುತ್ತಾರೆ.

Published On - 8:35 am, Tue, 24 December 19

ಹಂಪಿ ಉತ್ಸವದಲ್ಲಿ ಡ್ಯಾನ್ಸ್ ಮಾಡಿ ರಂಜಿಸಿದ ಶಿವರಾಜ್​​ಕುಮಾರ್
ಹಂಪಿ ಉತ್ಸವದಲ್ಲಿ ಡ್ಯಾನ್ಸ್ ಮಾಡಿ ರಂಜಿಸಿದ ಶಿವರಾಜ್​​ಕುಮಾರ್
ಧನುಸ್ಸು ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಧನುಸ್ಸು ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ವೃಶ್ಚಿಕ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ವೃಶ್ಚಿಕ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಾವಿರಾರು ಕೋಟಿ ರೂ.ಗಳ ಯೋಜನೆಗಳಿಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ
ಸಾವಿರಾರು ಕೋಟಿ ರೂ.ಗಳ ಯೋಜನೆಗಳಿಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ
ತುಲಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ತುಲಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮೈಸೂರು ಅರಮನೆ ತ್ರಿನೇಶ್ವರನಿಗೆ 11 ಕೆಜಿಯ ಚಿನ್ನದ ಮುಖವಾಡ! ಏನಿದರ ವಿಶೇಷ?
ಮೈಸೂರು ಅರಮನೆ ತ್ರಿನೇಶ್ವರನಿಗೆ 11 ಕೆಜಿಯ ಚಿನ್ನದ ಮುಖವಾಡ! ಏನಿದರ ವಿಶೇಷ?
ನಿರ್ಬಂಧದ ಮದ್ಯೆಯೂ ನಂದಿ ಗಿರಿಧಾಮಕ್ಕೆ ಬಂದ ಪ್ರೇಮಿಗಳು, ನಿರಾಸೆಯಿಂದ ವಾಪಸ್
ನಿರ್ಬಂಧದ ಮದ್ಯೆಯೂ ನಂದಿ ಗಿರಿಧಾಮಕ್ಕೆ ಬಂದ ಪ್ರೇಮಿಗಳು, ನಿರಾಸೆಯಿಂದ ವಾಪಸ್
ಬಿಲ್ವಪತ್ರೆಯ ಮಹತ್ವ, ಶಿವ ಬಿಲ್ವಪ್ರಿಯ ಯಾಕೆ?
ಬಿಲ್ವಪತ್ರೆಯ ಮಹತ್ವ, ಶಿವ ಬಿಲ್ವಪ್ರಿಯ ಯಾಕೆ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಶುಭ
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಶುಭ
ನಗಾರಿ ಬಾರಿಸಿ ಐತಿಹಾಸಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ
ನಗಾರಿ ಬಾರಿಸಿ ಐತಿಹಾಸಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ