AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

3 ದಿನ ಕಾಡಲ್ಲೇ ವಾಸ, ಊಟೋಪಚಾರ, ಕೊಡಗಲ್ಲಿ ಮಲೆಕುಡಿಯರ ಹಬ್ಬದ ಸಂಭ್ರಮ

ಮಡಿಕೇರಿ: ಸಂಸ್ಕೃತಿಯ ಮೂಲ ಸೆಲೆ ಇರೋದು ಆಯಾ ಮೂಲ ನಿವಾಸಿಗಳಲ್ಲಿ. ಇತ್ತಿಚಿನ ದಿನಗಳಲ್ಲಂತೂ ಎಲ್ಲ ಆಚರಣೆಗಳು ಅಳಿಸಿ ಹೋಗ್ತಿವೆ. ಆದ್ರೆ, ಕೊಡಗಿನ ಕೆಲ ಸಮುದಾಯಗಳು ಇನ್ನು ಕೂಡ ತಮ್ಮ ಮೂಲ ಸಂಸ್ಕೃತಿಯ ಆಚರಣೆಗಳನ್ನ ಎಂಜಾಯ್​ ಮಾಡ್ತಿವೆ. ಸುತ್ತಲೂ ದಟ್ಟಾರಣ್ಯ. ಕಾಡಿನ ನಡುವೆ ಪುಟ್ಟ ಗೂಡು. ಕುಣಿಯೋದೇನು. ಹಾಡೋದೇನು. ಅಡುಗೆ ರುಚಿಯನ್ನ ಸವಿಯೋದೇನು. ಅಂದಹಾಗೇ ಇದು, ಕರುನಾಡ ಕಾಶ್ಮೀರ ಕೊಡಗಿನಲ್ಲಿ ಮಲೆ ಕುಡಿಯ ಜನಾಂಗದವ್ರ ಹಬ್ಬದ ಸಂಭ್ರಮ. ಮಲೆ ಕುಡಿಯ ಜನಾಂಗದವ್ರು ಕೊಡಗಿನ ಮೂಲ ನಿವಾಸಿಗಳು. ಡಿಸೆಂಬರ್​​ ತಿಂಗಳಲ್ಲಿ […]

3 ದಿನ ಕಾಡಲ್ಲೇ ವಾಸ, ಊಟೋಪಚಾರ, ಕೊಡಗಲ್ಲಿ ಮಲೆಕುಡಿಯರ ಹಬ್ಬದ ಸಂಭ್ರಮ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Dec 24, 2019 | 8:36 AM

Share

ಮಡಿಕೇರಿ: ಸಂಸ್ಕೃತಿಯ ಮೂಲ ಸೆಲೆ ಇರೋದು ಆಯಾ ಮೂಲ ನಿವಾಸಿಗಳಲ್ಲಿ. ಇತ್ತಿಚಿನ ದಿನಗಳಲ್ಲಂತೂ ಎಲ್ಲ ಆಚರಣೆಗಳು ಅಳಿಸಿ ಹೋಗ್ತಿವೆ. ಆದ್ರೆ, ಕೊಡಗಿನ ಕೆಲ ಸಮುದಾಯಗಳು ಇನ್ನು ಕೂಡ ತಮ್ಮ ಮೂಲ ಸಂಸ್ಕೃತಿಯ ಆಚರಣೆಗಳನ್ನ ಎಂಜಾಯ್​ ಮಾಡ್ತಿವೆ.

ಸುತ್ತಲೂ ದಟ್ಟಾರಣ್ಯ. ಕಾಡಿನ ನಡುವೆ ಪುಟ್ಟ ಗೂಡು. ಕುಣಿಯೋದೇನು. ಹಾಡೋದೇನು. ಅಡುಗೆ ರುಚಿಯನ್ನ ಸವಿಯೋದೇನು. ಅಂದಹಾಗೇ ಇದು, ಕರುನಾಡ ಕಾಶ್ಮೀರ ಕೊಡಗಿನಲ್ಲಿ ಮಲೆ ಕುಡಿಯ ಜನಾಂಗದವ್ರ ಹಬ್ಬದ ಸಂಭ್ರಮ.

ಮಲೆ ಕುಡಿಯ ಜನಾಂಗದವ್ರು ಕೊಡಗಿನ ಮೂಲ ನಿವಾಸಿಗಳು. ಡಿಸೆಂಬರ್​​ ತಿಂಗಳಲ್ಲಿ ಮೂರು ದಿನ, ನಾಗರಿಕ ಸಮಾಜದಿಂದ ದೂರ ಉಳಿಯುವ ಈ ಜನಾಗಂದವ್ರು ತಮ್ಮ ಸಂಸ್ಕೃತಿಯನ್ನ ಆಚರಿಸ್ತಾರೆ. ವಾಲಗ, ಬೊಳಕಾಟ್, ಕೊಲಾಟ್, ಉಮ್ಮತಾಟ್ ಆಚರಿಸಿ ಎಂಜಾಯ್​​ ಮಾಡ್ತಾರೆ.

ಮಡಿಕೇರಿಯಿಂದ 40 ಕಿಮೀ ದೂರದ ತಡಿಯಂಡಮೋಳ್ ಬೆಟ್ಟದ ಸಮೀಪ ಎಲ್ರೂ ಆಗಮಿಸ್ತಾರೆ. ವಾಹನ ತಲುಪದ ದುರ್ಗಮ ಕಾಡಿನಲ್ಲಿಯೇ 15 ಕಿಲೋಮೀಟರ್​ಗೂ‌ ಹೆಚ್ಚು ನಡೆದು ಹೋಗಿ ಹಬ್ಬ ಆಚರಿಸ್ತಾರೆ. ಮೂರು ದಿನ ಕಾಡಿನಲ್ಲೇ ವಾಸಿಸುವ ಜನರೆಲ್ಲ, ಅಲ್ಲೇ ಚಪ್ಪರ ನಿರ್ಮಿಸಿ ಮನೆ ದೇವರಿಗೆ ಪೂಜೆ ಸಲ್ಲಿಸ್ತಾರೆ. ಭರ್ಜರಿ ಬಾಡೂಟ ಸವಿದು, ರಾತ್ರಿಯೆಲ್ಲ ಕುಣಿದು ಕುಪ್ಪಳಿಸುತ್ತಾರೆ.

Published On - 8:35 am, Tue, 24 December 19

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು