AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಜಿಎಫ್​: ಅತ್ತಿಗೆಯನ್ನು ಚಾಕುವಿನಿಂದ ಇರಿದು ಸಾಯಿಸಿದ ಮೈದುನ

ಅಣ್ಣನಾದ ಮುರಳಿಯ ಮೊದಲ ಪತ್ನಿ ಬೇತಮಂಗಲದಲ್ಲಿ ವಾಸವಿದ್ರೆ, ಎರಡನೇ ಪತ್ನಿ ಕೊತ್ತೂರು ಗ್ರಾಮದಲ್ಲಿ ವಾಸವಿದ್ರು. ಆದರೆ ಇತ್ತೀಚೆಗೆ ಮುರಳಿ ತನ್ನ ತಂದೆಯ ಬಳಿ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಕೇಳಿದ್ದ. ಈ ವಿಚಾರವು ಮುರಳಿಯ ತಮ್ಮ ಚಲಪತಿಯ ಕಣ್ಣು ಕೆಂಪಗಾಗಿಸಿತ್ತು, ಅಲ್ಲದೆ ಅಣ್ಣ ಮುರಳಿ ಎರಡನೇ ಮದುವೆ ಮಾಡಿಕೊಂಡದ್ದ ವಿಚಾರಕ್ಕೂ ತಮ್ಮನಾದ ಚಲಪತಿಗೆ ಕೋಪವಿತ್ತು.

ಕೆಜಿಎಫ್​: ಅತ್ತಿಗೆಯನ್ನು ಚಾಕುವಿನಿಂದ ಇರಿದು ಸಾಯಿಸಿದ ಮೈದುನ
ಅತ್ತಿಗೆಯನ್ನು ಚಾಕುವಿನಿಂದ ಇರಿದು ಸಾಯಿಸಿದ ಮೈದುನ
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಸಾಧು ಶ್ರೀನಾಥ್​|

Updated on: Dec 21, 2023 | 5:17 PM

Share

ಆಕೆ ತನ್ನ ಗಂಡನಿಗೆ ಎರಡನೇ ಹೆಂಡತಿ ಆದ್ರೂ ಸಂಸಾರದಲ್ಲೇನು ಸಮಸ್ಯೆ ಇರಲಿಲ್ಲ, ಗಂಡ ಮೀನು ಹಿಡಿಯುವ ಕೆಲಸ ಮಾಡಿದ್ರೆ ಈಕೆ ಕೂಡಾ ಹೂವು ಕಟ್ಟಿಕೊಂಡು ಜೀವನ ಮಾಡುತ್ತಿದ್ದಳು, ಹೀಗಿದ್ರು ಇವರಿಬ್ಬರ ಮೇಲೆ ಅವರದ್ದೇ ಕುಟುಂಬದವರಿಗೆ ಆಸ್ತಿ ವಿಚಾರವಾಗಿ ಗಲಾಟೆ ನಡೆಯುತ್ತಿತ್ತು, ಮೈದುನನೇ ಬಂದು ಅತ್ತಿಗೆಯನ್ನು ಕೊಂದು ಹಾಕಿದ್ದಾನೆ. ಮನೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಹೂವು, ಅಲ್ಲೇ ಚೆಲ್ಲಾಡಿರುವ ರಕ್ತದ ಕಲೆಗಳು, ಇನ್ನೊಂದೆಡೆ ಮಗಳನ್ನು ಕಳೆದುಕೊಂಡ ಕುಟುಂಬಸ್ಥರ ಕಣ್ಣೀರು (Family dispute) ಈ ಎಲ್ಲಾ ದೃಶ್ಯಗಳು ನಮಗೆ ಕಂಡು ಬಂದಿದ್ದು ಕೋಲಾರ ಜಿಲ್ಲೆ ಕೆಜಿಎಫ್​ ತಾಲ್ಲೂಕು ಕೊತ್ತೂರು ಗ್ರಾಮದಲ್ಲಿ (KGF taluk in Kolar dist).

ಹೌದು ಬುಧವಾರ ರಾತ್ರಿ ಈ ಗ್ರಾಮದಲ್ಲಿ ತನ್ನ ಅತ್ತಿಗೆಯನ್ನು ಮೈದುನನೇ ಚಾಕುವಿನಿಂದ ಇರಿದು ಬರ್ಬರವಾಗಿ ಕೊಂದಿದ್ದಾನೆ, ತೇಜಸ್ವಿನಿ ಕೊಲೆಯಾದ ಮಹಿಳೆ. ಅಷ್ಟಕ್ಕೂ ಆಗಿದ್ದೇನು ಅಂತ ನೋಡೋದಾದ್ರೆ, ಕೊತ್ತೂರು ಗ್ರಾಮದ ಪಕ್ಕದಲ್ಲಿರುವ ಬ್ಯಾಟರಾನಹಳ್ಳಿ ಗ್ರಾಮದಲ್ಲಿ ಮುರಳಿ ಹಾಗೂ ಚಲಪತಿ ಅಣ್ಣ ತಮ್ಮಂದಿರಿದ್ದಾರೆ. ಈ ಪೈಕಿ ಮುರಳಿ ಹಾಗೂ ಚಲಪತಿ ನಡುವೆ ಹಲವು ವರ್ಷಗಳಿಂದ ತಮ್ಮೂರಿನಲ್ಲಿರುವ ಮೂರು ಎಕರೆ ಭೂಮಿಗೆ ಸಂಬಂಧಿಸಿದಂತೆ ವಿವಾದ ಇತ್ತು.

ಈ ಸಂಬಂಧ ಗಲಾಟೆ ಇತ್ತು. ಕಾರಣ ಮುರಳಿ ಪಿತ್ರಾರ್ಜಿತ ಅಸ್ತಿಯಲ್ಲಿ ಭಾಗ ಕೇಳಿದ್ದ ಅನ್ನೋ ಕಾರಣಕ್ಕೆ ಆಗಾಗ ಗಲಾಟೆ ನಡಯುತ್ತಲೇ ಇತ್ತು. ಮರುಳಿ ಎರಡು ಮದುವೆಯಾಗಿದ್ದ. ಈ ಪೈಕಿ ನಿನ್ನೆ ಬುಧವಾರ ಎರಡನೇ ಪತ್ನಿ ತೇಜಸ್ವಿನಿ ಮನೆಯಲ್ಲಿದ್ದಾಗ ಚಲಪತಿ ತನ್ನ ಮೂರು ಜನ ಸ್ನೇಹಿತರೊಂದಿಗೆ ಮನೆಗೆ ಬಂದು ನುಗ್ಗಿ ಮನೆಯ ಬಾಗಿಲಲ್ಲೇ ಇದ್ದ ತನ್ನ ಅತ್ತಿಗೆ ತೇಜಸ್ವಿನಿಗೆ ಚಾಕುವಿನಿಂದ ಇರಿದಿದ್ದಾನೆ. ಈವೇಳೆ ತೀವ್ರವಾಗಿ ಗಾಯಗೊಂಡ ತೇಜಸ್ವಿನಿಯ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಬ್ಯಾಟರಾಯನಹಳ್ಳಿ ಗ್ರಾಮದ ತಿಪ್ಪಣ್ಣ ಎಂಬುವರಿಗೆ ನಾಲ್ಕು ಜನ ಮಕ್ಕಳು ಆಪೈಕಿ ಮೂರು ಗಂಡು ಮಕ್ಕಳು ಒಂದು ಹೆಣ್ಣು ಮಗಳು. ಈ ಪೈಕಿ ಮುರಳಿ ತಿಪ್ಪಣ್ಣನ ದೊಡ್ಡ ಮಗ, ಮೀನು ಹಿಡಿಯುವ ಕೆಲಸ ಮಾಡಿಕೊಂಡಿದ್ದ ಮುರಳಿಗೆ ಎರಡು ಮದುವೆಯಾಗಿದ್ದ,ಇಬ್ಬರು ಪತ್ನಿಯರನ್ನು ನೋಡಿಕೊಂಡಿದ್ದ ಅವನ ಕುಟುಂಬದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ.

ಮೊದಲ ಪತ್ನಿ ಬೇತಮಂಗಲದಲ್ಲಿ ವಾಸವಿದ್ರೆ, ಎರಡನೇ ಪತ್ನಿ ಕೊತ್ತೂರು ಗ್ರಾಮದಲ್ಲಿ ವಾಸವಿದ್ರು. ಆದರೆ ಇತ್ತೀಚೆಗೆ ಮುರಳಿ ತನ್ನ ತಂದೆಯ ಬಳಿ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಕೇಳಿದ್ದ. ಈ ವಿಚಾರ ಮುರಳಿ ತಮ್ಮ ಚಲಪತಿಯ ಕಣ್ಣು ಕೆಂಪಗಾಗಿಸಿತ್ತು, ಅಲ್ಲದೆ ಇವನು ಎರಡನೇ ಮದುವೆ ಮಾಡಿಕೊಂಡದ್ದ ವಿಚಾರಕ್ಕೂ ಚಲಪತಿಗೆ ಕೋಪವಿತ್ತು.

Also Read:  ಮೈಸೂರು ಕಾಂಗ್ರೆಸ್ ಮುಖಂಡನ ಮನೆಯಲ್ಲಿ ಕೈ ಕೈ ಮಿಲಾಯಿಸಿ, ದಾಯಾದಿಗಳಂತೆ ಬಡಿದಾಡಿಕೊಂಡ ಅಣ್ಣ ತಮ್ಮಂದಿರು -ಕಾರಣ ಏನು?

ಆ ಕಾರಣಕ್ಕೆ ಇವರಿಬ್ಬರ ನಡುವೆ ಹಲವು ಬಾರಿ ಗಲಾಟೆಗಳು ನಡೆದಿದ್ದವು, ಆದರೆ ಕಳೆದ ರಾತ್ರಿ ಅದೇನಾಯ್ತೋ ಏನೋ ಏಕಾಏಕಿ ಚಲಪತಿ ತನ್ನ ಸ್ನೇಹಿತರಾದ ಶ್ರೀನಿವಾಸ್​, ರಂಜಿತ್, ದಿನೇಶ್​ ರೊಂದಿಗೆ ಮುರಳಿಯ ಕೊತ್ತೂರು ಮನೆಗೆ ಬಂದಿದ್ದಾರೆ. ಈ ವೇಳೆ ಅಲ್ಲಿದ್ದ ಮುರಳಿಯನ್ನು ಮನೆಗೆ ಬಾ ಎಂದು ಕರೆದಿದ್ದಾರೆ, ನಾನು ಬರೋದಿಲ್ಲ ಎಂದು ಹೇಳಿ ಮುರಳಿ ಬಾಗಿಲು ಹಾಕಿಕೊಂಡು ಹೊಗಿದ್ದಾರೆ. ಈ ವೇಳೆ ಮತ್ತೆ ಬಂದು ಬಾಗಿಲು ತಟ್ಟಿದ್ದಾರೆ, ಆಗ ಮುರಳಿ ಎರಡನೇ ಪತ್ನಿ ತೇಜಸ್ವಿನಿ ಮನೆಯ ಬಾಗಿಲು ತೆಗೆಯುತ್ತಿದ್ದಂತೆ ಚಲಪತಿ ಹಾಗೂ ಜೊತೆಯಲ್ಲಿದ್ದವರು ಹಿಂದೆ ಮುಂದೆ ನೋಡದೆ ಚಾಕುವಿನಿಂದ ಇರಿದಿದ್ದಾರೆ.

ಒಳಗೆ ಇದ್ದ ಮುರಳಿ ಏನಾಯ್ತು ಎಂದು ಬಂದು ನೋಡುವಷ್ಟರಲ್ಲಿ ಅಲ್ಲಿದ್ದವರು ಪರಾರಿಯಾಗಿದ್ದಾರೆ. ಕೂಡಲೇ ತೇಜಸ್ವಿನಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಿದರಾದ್ರು ಅಷ್ಟರಲ್ಲಿ ತೇಜಸ್ವಿನಿ ಮೃತಪಟ್ಟಿದ್ದಾಳೆ. ಸದ್ಯ ಬೇತಮಂಗಲ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ, ಘಟನೆ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ಮೇಲ್ನೋಟಕ್ಕೆ ಇದೊಂದು ಜಮೀನು ಗಲಾಟೆಯ ಹಿನ್ನೆಲೆ ನಡೆದಿರುವ ಕೊಲೆ ಎನ್ನಲಾಗಿದೆ.

ಒಟ್ಟಾರೆ ಹುಟ್ಟು ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆ ಬೆಳೆಯುತ್ತಾ ದಾಯಾದಿಗಳು ಅನ್ನೋ ಮಾತು ಸರ್ವಕಾಲಿಕ ಸತ್ಯ. ಒಂದೇ ತಾಯಿ ಹೊಟ್ಟೆಯಲ್ಲಿ ಹುಟ್ಟಿದರೂ, ಒಂದೇ ತಟ್ಟೆಯಲ್ಲಿ ತಿಂದು ಬೆಳೆದಿದ್ರೂ, ಹಣ ಆಸ್ತಿ ಅನ್ನೋ ವಿಷಯ ಬಂದಾಗ ಎಲ್ಲವನ್ನು ಮರೆತು ಹೀಗೆ ಕೊಲ್ಲೋದಕ್ಕೂ ಹಿಂದೆ ಸರಿಯದೆ ಮನುಷ್ಯತ್ವವನ್ನೇ ಮರೆತಿದ್ದು ಮಾತ್ರ ದುರಂತ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ