ಕೋಲಾರ: ಮಗುವಿಗೆ ಚಿತ್ರಹಿಂಸೆ ಕೊಟ್ಟು ಕೊಂದು ತಾನು ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಮುಳಬಾಗಿಲು ತಾಲೂಕಿನ ಮರಳುಮೇಡು ಗ್ರಾಮದಲ್ಲಿ, ಸೌಮ್ಯ ಎಂಬ ಮಹಿಳೆ ತನ್ನ ಒಂದುವರೆ ವರ್ಷದ ಮಾನ್ವಿತ ಎಂಬ ಮಗುವನ್ನ ಚಿತ್ರಹಿಂಸೆ ಕೊಟ್ಟು ಕೊಂದು ತಾನು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಕೋಲಾರ: ಮಗುವಿಗೆ ಚಿತ್ರಹಿಂಸೆ ಕೊಟ್ಟು ಕೊಂದು ತಾನು ಆತ್ಮಹತ್ಯೆಗೆ ಯತ್ನಿಸಿದ ತಾಯಿ
ಸಾಂದರ್ಭಿಕ ಚಿತ್ರ
Edited By: ಕಿರಣ್ ಹನುಮಂತ್​ ಮಾದಾರ್

Updated on: Jan 28, 2023 | 11:28 AM

ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲ್ಲೂಕು ಮರಳುಮೇಡು ಗ್ರಾಮದ ಸೌಮ್ಯ ಎಂಬ ಮಹಿಳೆ ತನ್ನ ಒಂದುವರೆ ವರ್ಷದ ಮಾನ್ವಿತ ಎಂಬ ಮಗುವನ್ನ ಚಿತ್ರಹಿಂಸೆ ಕೊಟ್ಟು ಕೊಂದು ತಾನು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಆಕೆಯನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಕುರಿತು
ಕೋಲಾರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಾರವಾರ: ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಳಗಿ ಓರ್ವ ಮೀನುಗಾರ ಸಾವು

ಉತ್ತರ ಕನ್ನಡ: ಜಿಲ್ಲೆಯ ಕುಮಟಾ ತಾಲೂಕಿನ ಅಘನಾಶಿನಿ ನದಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಯುವಕ ವಿಘ್ನೇಶ್ವರ ಅಂಬಿಗ (23) ಎಂಬಾತ ದೋಣಿ ಮುಳುಗಿ ಮೃತ ಪಟ್ಟಿದ್ದಾನೆ. ನೀರಿನ ಒಳ ಹರಿವು ಹೆಚ್ಚಾಗಿ ದೋಣಿ ಮುಳಗಿದೆ. ಕೂಡಲೇ ಆತನನ್ನ ಆಸ್ಪತ್ರೆಗೆ ಸಾಗಿಸಲಾಗಿದ್ದು, ಮಾರ್ಗ ಮಧ್ಯಯೇ ಸಾವನ್ನಪ್ಪಿದ್ದಾನೆ. ಇನ್ನು ಈ ಘಟನೆಯು ಕುಮಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪತ್ನಿಯನ್ನು ಕೊಂದು ಸಾಕ್ಷ್ಯ ನಾಶಪಡಿಸಿದ್ದ ಅಪರಾಧಿಗೆ 7 ವರ್ಷ ಜೈಲು ಶಿಕ್ಷೆ ಪ್ರಕಟ

ಬೆಂಗಳೂರು: ಪತ್ನಿಯು ಮೊಬೈಲ್​ನಲ್ಲಿ ಹೆಚ್ಚು ಮಾತನಾಡುತ್ತಿದ್ದಿದ್ದಕ್ಕೆ ಆಕೆಯ ಶೀಲಶಂಕಿಸಿ, ಗಂಡ ಕೈಲಾಶ್​ ಚಂದ ಎಂಬುವವನು 2018ರ ಜೂನ್​ನಲ್ಲಿ ಹಾಸಿಗೆ ದಿಬ್ಬಿನಿಂದ ಉಸಿರುಗಟ್ಟಿಸಿ ಪತ್ನಿ ಮಾಲತಿಯನ್ನ ಕೊಲೆ ಮಾಡಿದ್ದನು. ನಂತರ ಶವದ ಮೇಲೆ ಬೆಡ್​ಶೀಟ್ ಹೊದಿಸಿ ಸಾಕ್ಷ್ಯನಾಶಪಡಿಸಲು ಯತ್ನ ಮಾಡಿದ್ದ. ಈ ಕುರಿತು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸತತ 5 ವರ್ಷ ವಾದ-ವಿವಾದ ನಂತರ ಅಪರಾಧಿಗೆ ಬೆಂಗಳೂರು ನಗರದ ಸಿಸಿಹೆಚ್​ 46 ನ್ಯಾಯಾಲಯ 7 ವರ್ಷ ಜೈಲುಶಿಕ್ಷೆ ಜೊತೆಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಇದನ್ನೂ ಓದಿ:ಶಿವಮೊಗ್ಗ: ವಿಧವೆಯನ್ನ ಪ್ರೀತಿಸಿ ಮದುವೆಯಾಗಿ ಮೋಸ ಮಾಡಿದ ಪ್ರಿಯಕರ; ಮನನೊಂದ ಯುವತಿ ಆತ್ಮಹತ್ಯೆಗೆ ಶರಣು

ಹುಡುಗಿಯ ಜೊತೆ ನಾಯಿ ಆಟವಾಡಿದ್ದಕ್ಕೆ ನಾಯಿ ಮರಿಯನ್ನೇ ಕೊಂದ ಪಾಪಿ ವಾರ್ಡನ್

ಉಡುಪಿ: ಜಿಲ್ಲೆಯ ಕಾಪು ತಾಲೂಕಿನ ಬಂಟಕಲ್​ನಲ್ಲಿ ಪಾಪಿ ವಾರ್ಡನ್ ರಾಜೇಶ್ ಎಂಬುವವನು ಹುಡುಗಿಯ ಜೊತೆ ನಾಯಿ ಆಟವಾಡಿದ್ದಕ್ಕೆ ನಾಯಿ ಮರಿಯನ್ನೇ ಕೊಂದಿದ್ದಾನೆ. ಬಂಟಕಲ್ ಮಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಾರ್ಡನ್ ಕೃತ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅಕ್ರೋಶ ವ್ಯಕ್ತವಾಗಿದ್ದು, ಮಂಜುಳಾ ಕರ್ಕೇರ ಎಂಬುವವರಿಂದ ಶಿರ್ವ ಠಾಣೆಯಲ್ಲಿ ವಾರ್ಡನ್ ಮೇಲೆ ಪ್ರಕರಣ ದಾಖಲಾಗಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us