AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳುನಾಡು ಸರ್ಕಾರ ಮೊದಲ ಬಾರಿ ಬಿಜೆಪಿಗೆ ಮಣಿದಿದೆ; ಉತ್ಸವ ಮೇಲೆ ಹೇರಿದ್ದ ನಿಷೇಧವನ್ನ ಸರ್ಕಾರ ವಾಪಸ್ ಪಡೆದಿದೆ -ಅಣ್ಣಾಮಲೈ

ಮಧುರೈ ಅಧೀನಂ ಪೀಠದ ಉತ್ಸವದಲ್ಲಿ ಪಲ್ಲಕಿ ಬ್ಯಾನ್ ವಿಚಾರಕ್ಕೆ ಸಂಬಂಧಿಸಿ ತಮಿಳುನಾಡು ಸರ್ಕಾರ ಮೊದಲ ಬಾರಿ ಬಿಜೆಪಿಗೆ ಮಣಿದಿದೆ ಎಂದು ಕೋಲಾರದಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹೇಳಿದ್ರು.

ತಮಿಳುನಾಡು ಸರ್ಕಾರ ಮೊದಲ ಬಾರಿ ಬಿಜೆಪಿಗೆ ಮಣಿದಿದೆ; ಉತ್ಸವ ಮೇಲೆ ಹೇರಿದ್ದ ನಿಷೇಧವನ್ನ ಸರ್ಕಾರ ವಾಪಸ್ ಪಡೆದಿದೆ -ಅಣ್ಣಾಮಲೈ
ಅಣ್ಣಾಮಲೈ
Follow us
TV9 Web
| Updated By: ಆಯೇಷಾ ಬಾನು

Updated on:May 08, 2022 | 4:30 PM

ಕೋಲಾರ: ಚಿನ್ನದ ನಾಡು ಕೋಲಾರಕ್ಕೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಭೇಟಿ ಕೊಟ್ಟಿದ್ದಾರೆ. ಕೋಲಾರ ಬಂಗಾರಪೇಟೆ ವೃತ್ತದ ಬಳಿ ಇರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದಾರೆ. ಮಾಲಾರ್ಪಣೆ ಬಳಿಕ ಮಾತನಾಡಿದ ಅವರು, ಕೋಲಾರ ಜಿಲ್ಲೆಯಲ್ಲಿರುವ 6 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತದೆ. ಬಿಜೆಪಿ ಕಾರ್ಯಕರ್ತರ ಸಭೆ ನಡೆಸಲು ಕೋಲಾರಕ್ಕೆ ಬಂದಿದ್ದೇನೆ ಎಂದರು.

ಬಿಜೆಪಿ ಸಂಸದರು ಬಂದ ಮೇಲೆ ಕೋಲಾರ ಸಾಕಷ್ಟು ಬದಲಾವಣೆ ಖಂಡಿದೆ. ಕೆಜಿಎಫ್ನಲ್ಲಿ ಇರುವವರು ತಮಿಳುನಾಡು ಹಾಗೂ ಕರ್ನಾಟಕ ಎರಡು ಕಡೆ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಭಾರತದಲ್ಲಿ ರಾಜಕೀಯವನ್ನ ಎರಡು ಕಡೆ ನೋಡಬಹುದು. ಕರ್ನಾಟಕ ಹಾಗು ತಮಿಳುನಾಡು ಒಗ್ಗಾಟ್ಟಾಗಿರೋದಕ್ಕೆ ಅನೇಕ ನಿದರ್ಶನಗಳಿವೆ. ಬೆಂಗಳೂರಿನಲ್ಲಿ ಸಾಕಷ್ಟು ಮಂದಿ ತಮಿಳುನಾಡಿನವರು ಕೆಲಸ ಮಾಡ್ತಿದ್ದಾರೆ. ಕರ್ನಾಟಕದಿಂದ ತರಕಾರಿ ಸೇರಿದಂತೆ ಅನೇಕ ವಸ್ತುಗಳು ತಮಿಳುನಾಡಿಗೆ ಬರುತ್ತಿದೆ. ಹೀಗಾಗಿ ಕರ್ನಾಟಕ ತಮಿಳುನಾಡು ಅನುನ್ಯವಾಗಿದೆ ಎಂದರು.

ಇನ್ನು ಮೇಕೆದಾಟು ವಿವಾದ ವಿಚಾರ ಕುರಿತು ಅಣ್ಣಾಮಲೈ ಮಾತನಾಡಿದ್ರು, ಕಾಂಗ್ರೆಸ್ ನವರು ಕರ್ನಾಟಕ ಹಾಗೂ ತಮಿಳುನಾಡು ಎಂದು ಬೇರ್ಪಡಿಸ್ತಿದ್ದಾರೆ. ಈ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಮಾನ ಮಾಡುತ್ತೆ. ತಮಿಳುನಾಡು ಮುಖ್ಯಮಂತ್ರಿ ಕರ್ನಾಟಕ ಮುಖ್ಯಮಂತ್ರಿ ಸ್ಪಷ್ಟವಾಗಿ ಇದ್ದಾರೆ ಎಂದರು. ಇನ್ನು ಇದೇ ವೇಳೆ ಪಿಎಸ್ಐ ಹಗರಣ ಕುರಿತು, ತಮಿಳುನಾಡಿನಲ್ಲಿ ರಾಜಕೀಯ ಸಭೆ ಸಮಾರಂಭಗಳಲ್ಲಿ ತುಂಬಾ ಬ್ಯುಸಿ ಇದ್ದೇನೆ. ಪಿಎಸ್ಐ ಹಗರಣ ಕುರಿತು ನನಗೆ ಮಾಹಿತಿ ಇಲ್ಲ. ಅದರ ಬಗ್ಗೆ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡುತ್ತೇನೆ. ಆದ್ರೆ ಯಾರಿಗೂ ಅನ್ಯಾಯವಾಗಬಾರದು. ನೇಮಕಾತಿ ಪಾರದರ್ಶಕವಾಗಿ ಆಗಬೇಕು ಅನ್ನೋದು ನನ್ನ ಅಭಿಪ್ರಾಯ ಎಂದರು.

ಮಧುರೈ ಅಧೀನಂ ಪೀಠದವರಿಗೆ ಜೀವಭಯ ಇದೆ ಇನ್ನು ಮತ್ತೊಂದೆಡೆ ಮಧುರೈ ಅಧೀನಂ ಪೀಠದ ಉತ್ಸವದಲ್ಲಿ ಪಲ್ಲಕಿ ಬ್ಯಾನ್ ವಿಚಾರಕ್ಕೆ ಸಂಬಂಧಿಸಿ ತಮಿಳುನಾಡು ಸರ್ಕಾರ ಮೊದಲ ಬಾರಿ ಬಿಜೆಪಿಗೆ ಮಣಿದಿದೆ ಎಂದು ಕೋಲಾರದಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹೇಳಿದ್ರು.

ಉತ್ಸವ ಮೇಲೆ ಹೇರಿದ್ದ ನಿಷೇಧವನ್ನ ಸರ್ಕಾರ ವಾಪಸ್ ಪಡೆದಿದೆ. ಮಾನವ ಹಕ್ಕು ಉಲ್ಲಂಘನೆ ಎಂದು ಸ್ಟಾಲಿನ್ ಸರ್ಕಾರ ಉತ್ಸವದ ಮೇಲೆ ನಿಷೇಧ ಹೇರಿತ್ತು. ತಮಿಳುನಾಡಿನಲ್ಲಿ ಹಿಂದೂ ವಿರೋಧಿ ಸರ್ಕಾರ ಇದೆ. ಮಧುರೈ ಅಧೀನಂ ಪೀಠದವರಿಗೆ ಜೀವ ಭಯವಿದೆ. ಹೀಗಾಗಿ ಜೀವಭಯದ ಬಗ್ಗೆ ಪ್ರಧಾನಿ ಮೋದಿಗೆ ದೂರು ನೀಡಲಾಗಿದೆ. ಡಿಎಂಕೆ ತಮಿಳುನಾಡಿಗೆ ಬೇರೆ ರೂಪ ಕೊಡಲು ಯತ್ನಿಸುತ್ತಿದೆ. ಬಿಜೆಪಿ ಹಾಗೂ ಮೋದಿ ಸರ್ಕಾರ ಇದಕ್ಕೆಲ್ಲ ಅವಕಾಶ ನೀಡಲ್ಲ. ತಮಿಳುನಾಡು ಸಂಸ್ಕೃತಿ ಹಾಳು ಮಾಡಲು ಬಿಜೆಪಿ ಬಿಡುವುದಿಲ್ಲ ಎಂದು ಕೋಲಾರದಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹೇಳಿದ್ರು.

ಕೋಲಾರ ಜಿಲ್ಲೆಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:30 pm, Sun, 8 May 22

ತಮ್ಮ ಮನೆಯಲ್ಲಿ ಸಿಂಧೂರ ಸಸಿ ನೆಟ್ಟ ಪ್ರಧಾನಿ ಮೋದಿ; ಏನಿದರ ವಿಶೇಷತೆ?
ತಮ್ಮ ಮನೆಯಲ್ಲಿ ಸಿಂಧೂರ ಸಸಿ ನೆಟ್ಟ ಪ್ರಧಾನಿ ಮೋದಿ; ಏನಿದರ ವಿಶೇಷತೆ?
ಅರ್​ಸಿಬಿ ಆಟಗಾರರ ವಿಕ್ಟರಿ ಪರೇಡ್ ನೋಡಲು ಅಕ್ಷತಾರನ್ನು ಕರೆತಂದಿದ್ದ ಪತಿ
ಅರ್​ಸಿಬಿ ಆಟಗಾರರ ವಿಕ್ಟರಿ ಪರೇಡ್ ನೋಡಲು ಅಕ್ಷತಾರನ್ನು ಕರೆತಂದಿದ್ದ ಪತಿ
ಆರ್​ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ: ಚಂದನ್ ಶೆಟ್ಟಿ ಹೇಳಿದ್ದೇನು?
ಆರ್​ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ: ಚಂದನ್ ಶೆಟ್ಟಿ ಹೇಳಿದ್ದೇನು?
ಸರ್ಕಾರದ ತಪ್ಪಿನಿಂದಾಗಿ ಅನೇಕ ಜನ ಪ್ರಾಣ ಕಳೆದುಕೊಂಡರು: ಹಿರಿಯ ನಾಗರಿಕ
ಸರ್ಕಾರದ ತಪ್ಪಿನಿಂದಾಗಿ ಅನೇಕ ಜನ ಪ್ರಾಣ ಕಳೆದುಕೊಂಡರು: ಹಿರಿಯ ನಾಗರಿಕ
ಅಯೋಧ್ಯೆ ರಾಮ ಮಂದಿರದ ರಾಮ ದರ್ಬಾರ್​​ನಲ್ಲಿ ಪಾಲ್ಗೊಂಡ ಸಿಎಂ ಯೋಗಿ
ಅಯೋಧ್ಯೆ ರಾಮ ಮಂದಿರದ ರಾಮ ದರ್ಬಾರ್​​ನಲ್ಲಿ ಪಾಲ್ಗೊಂಡ ಸಿಎಂ ಯೋಗಿ
ಕುಮಾರಸ್ವಾಮಿ, ಬಿಜೆಪಿ ನಾಯಕರಿಂದ ಹೆಣಗಳ ಮೇಲೆ ರಾಜಕಾರಣ: ಶಿವಕುಮಾರ್
ಕುಮಾರಸ್ವಾಮಿ, ಬಿಜೆಪಿ ನಾಯಕರಿಂದ ಹೆಣಗಳ ಮೇಲೆ ರಾಜಕಾರಣ: ಶಿವಕುಮಾರ್
ಪೋಸ್ಟ್​ಮಾರ್ಟಂ ಬೇಡ, ದೇಹ ಕೊಡಿ ಎಂದು ಅತ್ತ ತಾಯಿ ನೆನೆದು ಡಿಕೆಶಿ ಕಣ್ಣೀರು
ಪೋಸ್ಟ್​ಮಾರ್ಟಂ ಬೇಡ, ದೇಹ ಕೊಡಿ ಎಂದು ಅತ್ತ ತಾಯಿ ನೆನೆದು ಡಿಕೆಶಿ ಕಣ್ಣೀರು
ಸತ್ಕಾರ ಸಮಾರಂಭವನ್ನು ಕೇವಲ 10 ನಿಮಿಷಗಳಲ್ಲಿ ಮುಗಿಸಿದ್ದು: ಶಿವಕುಮಾರ್
ಸತ್ಕಾರ ಸಮಾರಂಭವನ್ನು ಕೇವಲ 10 ನಿಮಿಷಗಳಲ್ಲಿ ಮುಗಿಸಿದ್ದು: ಶಿವಕುಮಾರ್
ಊಟಕ್ಕೆ ಕೂತಿದ್ದ ಮಗನನ್ನು ಸ್ನೇಹಿತ ಕರೆದುಕೊಂಡು ಹೋಗಿದ್ದ: ಮನೋಜ್ ತಂದೆ
ಊಟಕ್ಕೆ ಕೂತಿದ್ದ ಮಗನನ್ನು ಸ್ನೇಹಿತ ಕರೆದುಕೊಂಡು ಹೋಗಿದ್ದ: ಮನೋಜ್ ತಂದೆ
ಪ್ರೇಯಸಿ ಮನೆಯ ಬಾಲ್ಕನಿಯಿಂದ ಕೆಳಗೆ ಹಾರಿದ ಪ್ರಿಯಕರ
ಪ್ರೇಯಸಿ ಮನೆಯ ಬಾಲ್ಕನಿಯಿಂದ ಕೆಳಗೆ ಹಾರಿದ ಪ್ರಿಯಕರ