AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಪ್ಪಳದ ಗ್ರಾಮವೊಂದರಲ್ಲಿ ಮದ್ಯ, ಬೀಡಿ, ಗುಟ್ಕಾ ಮಾರಾಟ ಮತ್ತು ಹೊಟೇಲ್​ಗಳಿಗೆ ನಿಷೇಧ

ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಗ್ರಾಮವೊಂದರಲ್ಲಿ ಮದ್ಯ ಮಾರಾಟ ಮಾಡುವಂತಿಲ್ಲ. ಯಾವುದೇ ಹೋಟೆಲ್ ಇಲ್ಲ. ಬೀಡಿ, ಗುಟ್ಕಾ, ಸಿಗರೇಟ್ ಕೂಡ ಮಾರಾಟ ಮಾಡುವಂತಿಲ್ಲ. ಸುಸ್ಥಿರ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿರುವ ಈ ಗ್ರಾಮ, ಅಪ್ಪಟ ಗಾಂಧೀಜಿ ತತ್ವಗಳನ್ನು ಅನುಸರಿಸುತ್ತಿದೆ.

ಕೊಪ್ಪಳದ ಗ್ರಾಮವೊಂದರಲ್ಲಿ ಮದ್ಯ, ಬೀಡಿ, ಗುಟ್ಕಾ ಮಾರಾಟ ಮತ್ತು ಹೊಟೇಲ್​ಗಳಿಗೆ ನಿಷೇಧ
ಕಾಮನೂರ ಹಳ್ಳಿ
ಸಂಜಯ್ಯಾ ಚಿಕ್ಕಮಠ
| Edited By: ವಿವೇಕ ಬಿರಾದಾರ|

Updated on: Oct 02, 2024 | 12:47 PM

Share

ಕೊಪ್ಪಳ, ಅಕ್ಟೋಬರ್​ 02: ಕೊಪ್ಪಳ (Koppal) ತಾಲೂಕಿನ ಕಾಮನೂರು ಆಧುನಿಕ ಭಾರತದ ಗಾಂಧಿ ಗ್ರಾಮದಂತೆ ಇದೆ. ಗ್ರಾಮದಲ್ಲಿ 600ಕ್ಕೂ ಹೆಚ್ಚು ಮನೆಗಳಿದ್ದು, ಮೂರು ಸಾವಿರಕ್ಕೂ ಹೆಚ್ಚು ಜನ ವಾಸವಾಗಿದ್ದಾರೆ. ಇಂತಹ ಗ್ರಾಮದಲ್ಲಿ ಒಂದೇ ಒಂದು ಹೋಟೆಲ್ ಇಲ್ಲ. ಗ್ರಾಮದಲ್ಲಿ ಮದ್ಯ (Alcohol) ಮಾರಾಟಕ್ಕೆ ಅವಕಾಶವಿಲ್ಲ. ಗ್ರಾಮದಲ್ಲಿರುವ ಕಿರಾಣಿ ಅಂಗಡಿಗಳಲ್ಲಿ ಯಾವುದೇ ಕಾರಣಕ್ಕೂ ಗುಟ್ಕಾ, ಬಿಡಿ, ಸಿಗರೇಟ್, ಪಾನ್ ಮಸಾಲಾ ಮಾರಾಟ ಮಾಡುವಂತಿಲ್ಲ. ಇಂತಹದೊಂದು ಅಲಿಖಿತ ನಿಮಯವನ್ನು ಗ್ರಾಮದ ಜನರು ಕಳೆದ ಮೂರು ದಶಕಗಳಿಗಿಂತ ಪಾಲಿಸಿಕೊಂಡು ಬರುತ್ತಿದ್ದಾರೆ.

ಕಾಮನೂರು ಗ್ರಾಮದಲ್ಲಿ ಕೂಡ ಈ ಮೊದಲು ಬಿಡಿ, ಸಿಗರೇಟ್, ಮದ್ಯ ಮಾರಾಟವಿತ್ತು. ಆದರೆ, ಗ್ರಾಮದ ಜನರು ದುಶ್ಟಟಗಳ ದಾಸರಾಗಿ, ದುಡಿಮೆಯಿಂದ ವಿಮುಕ್ತರಾಗುತ್ತಿದ್ದರು. ಕುಟುಂಬಗಳ ನೆಮ್ಮದಿ ಕೂಡಾ ಹಾಳಾಗಿತ್ತು. ಹೀಗಾಗಿ ಮೂರು ದಶಕಗಳ ಹಿಂದೆಯೇ ಗ್ರಾಮದ ಜನರು ಒಟ್ಟಾಗಿ ಕೂತು ಚರ್ಚಿಸಿ, ಗ್ರಾಮದಲ್ಲಿ ಮದ್ಯ ಗುಟ್ಕಾ, ಬೀಡಿ, ಸಿಗರೇಟ್​ನ್ನು ನಿಷೇಧ ಮಾಡಿದ್ದಾರೆ. ಯಾರು ಕೂಡ ಯಾವುದೇ ಕಾರಣಕ್ಕೂ ಇವುಗಳನ್ನು ಮಾರಾಟ ಮಾಡಬಾರದು ಅಂತ ಅಲಿಖಿತ ನಿಯಮ ರೂಪಿಸಿದ್ದಾರೆ.

ಅಂದು ರೂಪಿಸಿರುವ ನಿಯಮವನ್ನು ಇಂದಿಗೂ ಗ್ರಾಮದ ಜನರು ಪಾಲಿಸಿಕೊಂಡು ಬಂದಿದ್ದಾರೆ. ಇದನ್ನು ಹೊರತು ಪಡಿಸಿಯೂ ಯಾರಾದರು ಅನಧಿಕೃತವಾಗಿ ಮಾರಾಟ ಮಾಡಿದರೆ, ಅವರನ್ನು ಪತ್ತೆ ಮಾಡಿ, ಅವರಿಗೆ ದಂಡ ಹಾಕುವ ಮೂಲಕ ಅಕ್ರಮ ಕೆಲಸಕ್ಕೆ ಗ್ರಾಮಸ್ಥರು ಬ್ರೇಕ್ ಹಾಕುತ್ತಿದ್ದಾರೆ.

ಇದನ್ನೂ ಓದಿ: ಶವ ಸಂಸ್ಕಾರಕ್ಕೂ ಪರದಾಟ, ರಸ್ತೆ ಇಲ್ಲದೆ ಭತ್ತದ ಗದ್ದೆ ಮೂಲಕ ಸ್ಮಶಾನ ತಲುಪುವ ಸ್ಥಿತಿ

ಗಾಂಧೀಜಿ ತತ್ವಗಳನ್ನು ಗೊತ್ತಿದ್ದೋ, ಗೊತ್ತಿಲದೆಯೋ ಪಾಲಿಸಿಕೊಂಡು ಬರುವ ಕೆಲಸವನ್ನು ಗ್ರಾಮದ ಜನರು ಮಾಡುತ್ತಿದ್ದಾರೆ. ತಮ್ಮೂರಿನ ಜನರ ಶಾಂತಿಗಾಗಿ, ಜನರ ಒಳತಿಗಾಗಿ ಇಂತಹದೊಂದು ಕ್ರಮ ಕೈಗೊಳ್ಳಲಾಗಿದೆ. ಇಂದರಿಂದ ಜನರು ಶಾಂತಿಯುತ ಮತ್ತು ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆ.

ಗಾಂಧೀಜಿ ಅವರ ಜನ್ಮದಿನ ಹಿನ್ನೆಲೆಯಲ್ಲಿ ಈ ಗ್ರಾಮಕ್ಕೆ ಇಂದು (ಅ.02) ಕೊಪ್ಪಳದಿಂದ ನೂರಾರು ಗಾಂಧಿ ಅಭಿಮಾನಿಗಳು ಆಗಮಿಸಿ ಚಿಂತನ ಮಂಥನ ಸಬೆ ನಡೆಸಿದರು. ಗ್ರಾಮದ ಜನರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಮನೂರು ಗ್ರಾಮ ಹತ್ತಾರು ವಿಶೇಷತೆಗಳೊಂದಿಗೆ ಉಳಿದ ಗ್ರಾಮಗಳಿಗೆ ಆದರ್ಶವಾಗಿದೆ. ಅಶಾಂತಿಯ ತಾಣಗಳಾಗಿರುವ ಗ್ರಾಮಗಳಲ್ಲಿ ಗಾಂಧಿ ತತ್ವಗಳನ್ನು ಜಾರಿಗೆ ತಂದರೆ ಗ್ರಾಮಗಳು ಶಾಂತಿಯ ಕೇಂದ್ರಗಳಾಗುತ್ತವೆ. ಈ ನಿಟ್ಟಿನಲ್ಲಿ ಕಾಮನೂರು ಗ್ರಾಮ ಉಳಿದ ಗ್ರಾಮಗಳಿಗೆ ಮಾದರಿಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು