AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಚಿಂಗ್ ಇಲ್ಲದೆ ನೀಟ್ ರ‍್ಯಾಂಕ್ ಪಡೆದ ಕೊಪ್ಪಳದ ವಿದ್ಯಾರ್ಥಿ ಪ್ರಶಾಂತ್; ಅಡ್ಮಿಷನ್​ಗೆ ಬೇಕಾಗಿದೆ ಹಣದ ಅಗತ್ಯ

ಪ್ರಶಾಂತ್ ಅವರದ್ದು ಕಡು ಬಡತನದ ಕುಟುಂಬವಾಗಿರುವುದರಿಂದ ಎಂಬಿಬಿಎಸ್ ಅಡ್ಮಿಶನ್ ಮಾಡಿಸಲು ದುಡ್ಡಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾನೆ. ಹೀಗಾಗಿ, ನನಗೆ ಅಡ್ಮಿಶನ್ ಮಾಡಿಸಲು ದಾನಿಗಳು ದುಡ್ಡು ನೀಡಿ ಎಂದು ಪ್ರಶಾಂತ್ ಮನವಿ ಮಾಡಿದ್ದಾನೆ.

ಕೋಚಿಂಗ್ ಇಲ್ಲದೆ ನೀಟ್ ರ‍್ಯಾಂಕ್ ಪಡೆದ ಕೊಪ್ಪಳದ ವಿದ್ಯಾರ್ಥಿ ಪ್ರಶಾಂತ್; ಅಡ್ಮಿಷನ್​ಗೆ ಬೇಕಾಗಿದೆ ಹಣದ ಅಗತ್ಯ
ಪ್ರಶಾಂತ್
TV9 Web
| Updated By: ಸುಷ್ಮಾ ಚಕ್ರೆ|

Updated on: Nov 15, 2022 | 2:12 PM

Share

ಕೊಪ್ಪಳ: ವರ್ಷಾನುಗಟ್ಟಲೆ ಕೋಚಿಂಗ್ ಕ್ಲಾಸ್​ಗೆ ಹೋದರೂ ನೀಟ್ (NEET) ಪಾಸ್ ಆಗಿ ಮೆಡಿಕಲ್‌ ಸೀಟ್ ಸಿಗುವುದು ಕಷ್ಟ. ಆದರೆ, ಇಲ್ಲೊಬ್ಬ ವಿದ್ಯಾರ್ಥಿ ಯಾವುದೇ ಕೋಚಿಂಗ್ (Coaching Class) ಇಲ್ಲದೆ ನೀಟ್​ನಲ್ಲಿ ರ‍್ಯಾಂಕ್ ಪಡೆದು ಸರ್ಕಾರಿ ಕಾಲೇಜಿನಲ್ಲಿ ಮೆಡಿಕಲ್‌ ಸೀಟ್ ಸಹ ಪಡೆದಿದ್ದಾನೆ. ಆದರೂ ಆತ ಕಾಲೇಜಿಗೆ ಅಡ್ಮಿಷನ್ ಆಗಲು ದುಡ್ಡಿಲ್ಲದೆ ಪರದಾಡುತ್ತಿದ್ದು, ಹಣಕ್ಕಾಗಿ ದಾನಿಗಳ ನೆರವು ಕೇಳುತ್ತಿದ್ದಾನೆ. ಆತ ಬಾಲ್ಯದಲ್ಲಿದ್ದಾಗ ಆತನ ತಂದೆ-ತಾಯಿ ಅನಾರೋಗ್ಯದಿಂದ ವೈದ್ಯರ ಬಳಿ ಅಲೆದಾಡಿದ್ದನ್ನು ನೋಡಿದ್ದ. ಹೀಗಾಗಿ, ತಾನು ಮೆಡಿಕಲ್ ಓದಿ, ಬಡಜನರಿಗೆ, ಅಸಹಾಯಕರಿಗೆ ಸಹಾಯ ಮಾಡಬೇಕೆಂಬ ಕನಸು ಹೊತ್ತಿದ್ದ. ಆ ಕನಸು ನನಸಾಗಿಸಿಕೊಳ್ಳಲು ಆತನಿಗೆ ಹಣದ ಸಮಸ್ಯೆ ಎದುರಾಗಿದೆ.

ಬಡ ಕುಟುಂಬದ ವಿದ್ಯಾರ್ಥಿಯಾಗಿರುವ ಕೊಪ್ಪಳ ತಾಲೂಕಿನ ಜಿನ್ನಾಪೂರ ಗ್ರಾಮದ ಪ್ರಶಾಂತ್ ಚಂಡೂರ್ ನೀಟ್ ಪರೀಕ್ಷೆಯಲ್ಲಿ 68039ನೇ ರ್ಯಾಂಕ್ ಪಡೆದಿದ್ದು, ಕೊಡಗು ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಕೊಡಗು ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ) ಸೀಟ್ ಸಿಕ್ಕಿದೆ. ಆದರೆ, ಇದೀಗ ಎಂಬಿಬಿಎಸ್ ಅಡ್ಮಿಷನ್​ಗೆ 1 ಲಕ್ಷಕ್ಕೂ ಹೆಚ್ಚು ಹಣ ಬೇಕಾಗಿದೆ. ಪ್ರಶಾಂತ್ ಅವರದ್ದು ಕಡು ಬಡತನದ ಕುಟುಂಬವಾಗಿರುವುದರಿಂದ ಎಂಬಿಬಿಎಸ್ ಅಡ್ಮಿಶನ್ ಮಾಡಿಸಲು ದುಡ್ಡಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾನೆ. ಹೀಗಾಗಿ, ನನಗೆ ದಾನಿಗಳು ಅಡ್ಮಿಶನ್ ಮಾಡಿಸಲು ದುಡ್ಡು ನೀಡಿ ಎಂದು ಪ್ರಶಾಂತ್ ಮನವಿ ಮಾಡಿದ್ದಾನೆ.

ಇದನ್ನೂ ಓದಿ: NEET UG 2022 Result: ನೀಟ್ ಫಲಿತಾಂಶ ಪ್ರಕಟ, ಟಾಪ್-10 ಟಾಪರ್ಸ್ ಲಿಸ್ಟ್​ನಲ್ಲಿ ಕರ್ನಾಟಕದ ಮೂವರು

ಪ್ರಶಾಂತ್ ಅವರ ತಂದೆ ಶರಣಪ್ಪ 4 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಹೀಗಾಗಿ, ಇಡೀ‌ ಮನೆಯ ಜವಾಬ್ದಾರಿಯನ್ನು ತಾಯಿಯೇ ನಿಭಾಯಿಸುತ್ತಿದ್ದಾರೆ. ಜೊತೆಗೆ, ಪ್ರಶಾಂತ್ ಕೂಡ ಕಾರ್ಖಾನೆಯೊಂದಕ್ಕೆ ಗಾರೆ ಕೆಲಸಕ್ಕೆ ಹೋಗುತ್ತಿದ್ದಾನೆ. ಇದರಿಂದ ಬಂದ ಹಣದಲ್ಲಿ ಪುಸ್ತಕಗಳನ್ನ ಖರೀದಿ ಮಾಡಿ, ಯಾವುದೇ ಕೋಚಿಂಗ್​ಗೆ ಹೋಗದೆ ನೀಟ್ ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಪಡೆದಿದ್ದಾ‌ನೆ.

ಮಗನನ್ನು ನನ್ನ ಕೈಲಾದಷ್ಟು ಓದಿಸಿದ್ದೇನೆ. ಬಡತನದ ಕಾರಣದಿಂದ ಇನ್ನು ನಮ್ಮಿಂದ ಆತನನ್ನು ಎಂಬಿಬಿಎಸ್ ಓದಿಸಲು ಸಾಧ್ಯವಿಲ್ಲ. ಹೀಗಾಗಿ ಯಾರಾದರೂ ನನ್ನ ಮಗನಿಗೆ ಓದಲು ಸಹಾಯ ಮಾಡಿ ಎಂದು ಪ್ರಶಾಂತ್​​ನ ತಾಯಿ ಮನವಿ ಮಾಡಿದ್ದಾರೆ. ಪ್ರಶಾಂತ್​ನ ಶಿಕ್ಷಕರು ಸಹ ಪ್ರಶಾಂತ್​ಗೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Karnataka NEET UG 2022: ಇಂದು ಅಣಕು ಸೀಟು ಹಂಚಿಕೆಯ ಫಲಿತಾಂಶ ಪ್ರಕಟ

ವಿದ್ಯಾಭ್ಯಾಸಕ್ಕಾಗಿ ಪ್ರಶಾಂತ್ ಕಂಡ-ಕಂಡವರ ಬಳಿ ಹಣಕ್ಕಾಗಿ ಅಂಗಲಾಚಿದ್ದು, ಯಾರೂ ಅಷ್ಟೊಂದು ಮೊತ್ತದ ಹಣ ಕೊಡಲು ಮುಂದಾಗುತ್ತಿಲ್ಲ. ಈ ಸುದ್ದಿ ಓದಿದವರು ಈ ಬಡ ವಿದ್ಯಾರ್ಥಿ ಪ್ರಶಾಂತ್​ಗೆ ಸಹಾಯ ಮಾಡಲು ಇಚ್ಛಿಸುವವರು ಈ ಬಡ ಪ್ರತಿಭಾವಂತ ವಿದ್ಯಾರ್ಥಿಗೆ ನೆರವು ನೀಡಲು ಬಯಸುವವರು ಪ್ರಶಾಂತ ಶರಣಪ್ಪ ಚಂಡೂರು ಈತನ ಕೊಪ್ಪಳದ ಎಸ್‌ಬಿಐ ಬ್ಯಾಂಕ್‌ ಖಾತೆಗೆ ಹಣ ಹಾಕಬಹುದು.

ಗಮನಕ್ಕೆ: ಪ್ರಶಾಂತ ಶರಣಪ್ಪ ಚಂಡೂರು ಖಾತೆ ಸಂಖ್ಯೆ: 34985653322 IFSC ಕೋಡ್: SBIN0004277 ಮೊಬೈಲ್‌ ನಂಬರ್: 6361808300

(ವರದಿ: ದತ್ತಾತ್ರೇಯ ಪಾಟೀಲ್‌, ಕೊಪ್ಪಳ)

ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!