AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಡಗು: ಊಟಿ ಮಾದರಿಯಲ್ಲಿ ಅಭಿವೃದ್ಧಿಯಾಗುತ್ತಿರುವ ಪ್ರವಾಸಿಗರ ಹಾಟ್​ ಫೇವರಿಟ್ ‘ರಾಜಾಸೀಟ್’

ಮಡಿಕೇರಿಗೆ ಟೂರ್ ಬರುವವರೆಲ್ಲಾ ಇಷ್ಟಪಡುವುದು ಇಲ್ಲಿನ ಪ್ರಕೃತಿಯನ್ನ, ಬೆಟ್ಟ ಗುಡ್ಡಗಳನ್ನ, ಹಚ್ಚ ಹಸಿರನ್ನು. ಮಂಜು ಮುಸುಕಿದ ವಾತಾವರಣದಲ್ಲಿ ಚುಮು ಚುಮು ಚಳಿಯಲ್ಲಿ ಎಂಜಾಯ್ ಮಾಡಲು ಬರುವವರೇ ಹೆಚ್ಚು.

TV9 Web
| Updated By: Rakesh Nayak Manchi

Updated on:Nov 17, 2022 | 10:14 AM

ಮಡಿಕೇರಿಗೆ ಟೂರ್ ಬರುವವರೆಲ್ಲಾ ಇಷ್ಟಪಡುವುದು ಇಲ್ಲಿನ ಪ್ರಕೃತಿಯನ್ನ, ಬೆಟ್ಟ ಗುಡ್ಡಗಳನ್ನ, ಹಚ್ಚ ಹಸಿರನ್ನು. ಮಂಜು ಮುಸುಕಿದ ವಾತಾವರಣದಲ್ಲಿ ಚುಮು ಚುಮು ಚಳಿಯಲ್ಲಿ ಎಂಜಾಯ್ ಮಾಡಲು ಬರುವವರೇ ಹೆಚ್ಚು. ಇದೀಗ ಈ ಪ್ರವಾಸಿಗರ ಪಾಲಿಗೆ ಬೋನಸ್ ಆಗಿ ಹೊಸ ವೀವ್ ಪಾಯಿಂಟ್ ಲೋಕಾರ್ಪಣೆಗೊಂಡಿದೆ.

Madikeri tourists hot favourite Rajaseat being developed on the lines of Ooty Kodagu news in kannada

1 / 8
ರಾಜಾಸೀಟ್ ಇದೀಗ ಗ್ರೇಟರ್ ರಾಜಾಸೀಟ್ ಆಗಿ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ. ಕೊಡಗು ಜಿಲ್ಲೆಗೆ ಪ್ರವಾಸ ಬಂದವರಿಗೆ ಈ ಹೆಸರು ಬಹಳ ಪರಿಚಯ.

Madikeri tourists hot favourite Rajaseat being developed on the lines of Ooty Kodagu news in kannada

2 / 8
Madikeri tourists hot favourite Rajaseat being developed on the lines of Ooty Kodagu news in kannada

ಬೆಟ್ಟದ ತುತ್ತ ತುದಿಯಲ್ಲಿ ನಿಂತು ಸುತ್ತಲೂ ಹಸಿರ ರಾಶಿ, ಮಂಜು ಮುಸಿಕಿದ ಗಿರಿಕಂದರಗಳನ್ನು ವೀಕ್ಷಿಸುವುದೇ ಒಂದು ಅದ್ಭುತ ಅನುಭವ. ಇದೀಗ ಪ್ರವಾಸೋಧ್ಯಮ ಇಲಾಖೆ ಈ ರಾಜಾಸೀಟನ್ನು ವಿಶ್ವದರ್ಜೆಯ ಪ್ರವಾಸೀತಾಣವನ್ನಾಗಿಸಲು ಹೊರಟಿದೆ.

3 / 8
Madikeri tourists hot favourite Rajaseat being developed on the lines of Ooty Kodagu news in kannada

ಹಿಂದೆ ಕೊಡಗಿನ ರಾಜ ಈ ರಾಜಾಸೀಟಿನಲ್ಲಿ ಕುಳಿತು ಸೂರ್ಯಾಸ್ತವನ್ನು ಆಸ್ವಾದಿಸುತ್ತಿದ್ದನಂತೆ. ಹಾಗಾಗಿ ಇಂದಿಗೂ ರಾಜಾಸೀಟ್ ಪ್ರವಾಸಿಗರ ಹಾಟ್​ ಫೇವರಿಟ್.

4 / 8
Madikeri tourists hot favourite Rajaseat being developed on the lines of Ooty Kodagu news in kannada

ಗ್ರೇಟರ್​ ರಾಜಾಸೀಟ್ ಯೋಜನೆಯಡಿ ಪ್ರವಾಸೀತಾಣವನ್ನು ಊಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದಕ್ಕಾಗಿ 4.5 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಬೆಟ್ಟದ ತುದಿಯಲ್ಲಿ ಓಡಾಡಲು ಟ್ರ್ಯಾಕ್​ಗಳನ್ನು ನಿರ್ಮಿಸಿ 8 ವೀವ್​ ಪಾಯಿಂಟ್​ಗಳನ್ನು ಮಾಡಲಾಗುತ್ತಿದೆ.

5 / 8
Madikeri tourists hot favourite Rajaseat being developed on the lines of Ooty Kodagu news in kannada

ವೀವ್​ ಪಾಯಿಂಟ್​ನಲ್ಲಿ ಪ್ರವಾಸಿಗರಿಗೆ ಮನಸೋ ಇಚ್ಚೆ ಪ್ರಕೃತಿಯನ್ನು ಆಸ್ವಾದಿಸಬಹದಾಗಿದೆ. ವಿಶಾಲ ಹುಲ್ಲಿನ ಲಾನ್​ಗಳನ್ನು ಬೆಳೆಸಲಾಗುತ್ತಿದ್ದು, ಪ್ರವಾಸಿಗರಿಗೆ ವಿಶೇಷ ಅನಭವ ನೀಡುತ್ತದೆ. ರಾಜಾಸೀಟ್​ ಬೆಟ್ಟದ ವಿವಿಧ ಭಾಗಗಳಲ್ಲಿ ಹತ್ತು ಹಲವು ಬಗೆಯ ಮರ ಗಿಡ, ಅಲಂಕಾರಿಕ ಗಿಡಗಳು, ಮಕ್ಕಳ ಪ್ಲೇಗ್ರೌಂಡ್, ಲಾನ್ ಹೀಗೆ ಹತ್ತು ಹಲವು ಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ.

6 / 8
Madikeri tourists hot favourite Rajaseat being developed on the lines of Ooty Kodagu news in kannada

ಸಣ್ಣಪುಟ್ಟ ಸಭೆ ಸಭಾರಂಭಗಳನ್ನು ನಡೆಸಲು ಕೂಡ ಇಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. ಈ ಯೋಜನೆಯ ಮೊದಲ ಹಂತ ಇದೇ ನವೆಂಬರ್​ಗೆ ಸಂಪೂರ್ಣಗೊಳ್ಳಲಿದೆ. ಎರಡನೇ ಹಂತ ಮುಂದಿನ ಏಪ್ರಿಲ್​ ವೇಳೆಗೆ ಮುಗಿಯಲಿದೆ. ಈ ಗ್ರೇಟರ್​ ರಾಜಸೀಟ್ ಯೋಜನೆ ಸಂಪೂರ್ಣಗೊಂಡ ಬಳಿಕ ಇದು ಕೊಡಗು ಪ್ರವಾಸೋಧ್ಯಮಕ್ಕೆ ಒಂದು ಬಹುದೊಡ್ಡ ಆಸ್ತಿಯಾಗಲಿದೆ ಎನ್ನುವ ಅಭಿಪ್ರಾಯ ಕೇಳಿಬಂದಿದೆ.

7 / 8
Madikeri tourists hot favourite Rajaseat being developed on the lines of Ooty Kodagu news in kannada

ಕೊಡಗು ಜಿಲ್ಲೆಯ ಆಸ್ತಿಯೇ ಪ್ರಕೃತಿ. ಅದರಲ್ಲೂ ಮಡಿಕೇರಿ ನಗರದ ಹೃದಯ ಭಾಗದಲ್ಲಿರುವ ಬೆಟ್ಟಗಳನ್ನ ಬಳಸಿ ಕಲಾತ್ಮಕವಾಗಿ ಹೊಸ ಪಾರ್ಕ್ ನಿರ್ಮಾಣಗೊಳಿಸಲಾಗಿದೆ. ಇದೀಗ ಇದೇ ಪ್ರಕೃತಿಯನ್ನು ಬಳಸಿಕೊಂಡು ಜಿಲ್ಲಾಡಳಿತ ಮಡಿಕೇರಿ ನಗರದ ಅಂದ ಹೆಚ್ಚಿಸಿದೆ. ಹಾಗಾಗಿ ರಾಜಸೀಟ್​ ಇನ್ನು ಅಚ್ಚುಮೆಚ್ಚಿನ ತಾಣವಾಗುವುದರಲ್ಲಿ ಸಂಶಯವಿಲ್ಲ. (ವರದಿ: ಗೋಪಾಲ್ ಸೋಮಯ್ಯ ಐಮಂಡ, ಟಿವಿ9 ಕೊಡಗು)

8 / 8

Published On - 10:14 am, Thu, 17 November 22

Follow us
ಮಕ್ಕಳಿದ್ರೂ 17ರ ಯುವತಿ ಜತೆ ಲವ್, ಮದ್ವೆಗೆ ಒಪ್ಪದಿದ್ದಕ್ಕೆ ಮಾಡಿದ್ದೇನು?
ಮಕ್ಕಳಿದ್ರೂ 17ರ ಯುವತಿ ಜತೆ ಲವ್, ಮದ್ವೆಗೆ ಒಪ್ಪದಿದ್ದಕ್ಕೆ ಮಾಡಿದ್ದೇನು?
ಕರಾವಳಿ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ವಿಜಯೇಂದ್ರ
ಕರಾವಳಿ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ವಿಜಯೇಂದ್ರ
ಕಾಂಗ್ರೆಸ್ ಶಾಸಕ ಲಕ್ಷ್ಮಣ್‌ ಸವದಿ ಕಾರು ಅಪಘಾತ, ವಿಡಿಯೋ ನೋಡಿ
ಕಾಂಗ್ರೆಸ್ ಶಾಸಕ ಲಕ್ಷ್ಮಣ್‌ ಸವದಿ ಕಾರು ಅಪಘಾತ, ವಿಡಿಯೋ ನೋಡಿ
ಮತದಾರರ ಪರಿಷ್ಕೃತ ಪಟ್ಟಿ ನೀಡಲು ತಡವಾಗಿದ್ದಕ್ಕೆ ಶಾಸಕನಿಗೆ ಅಸಮಾಧಾನ
ಮತದಾರರ ಪರಿಷ್ಕೃತ ಪಟ್ಟಿ ನೀಡಲು ತಡವಾಗಿದ್ದಕ್ಕೆ ಶಾಸಕನಿಗೆ ಅಸಮಾಧಾನ
ಡಾ. ರಾಜ್ ಬಗ್ಗೆ ಅವಹೇಳನಕಾರಿ ಮಾತು: ಆರ್​ಜಿವಿಗೆ ಸಾರಾ ಗೋವಿಂದು ಕ್ಲಾಸ್​
ಡಾ. ರಾಜ್ ಬಗ್ಗೆ ಅವಹೇಳನಕಾರಿ ಮಾತು: ಆರ್​ಜಿವಿಗೆ ಸಾರಾ ಗೋವಿಂದು ಕ್ಲಾಸ್​
ಕುಕ್ಕೆ ದೇಗುಲ ಸೇರಿ ಸರ್ಕಾರದ 3 ಸಾವಿರ ರೂಮ್​​​ ಆನ್​​ ಲೈನ್​ ಬುಕ್ಕಿಂಗ್
ಕುಕ್ಕೆ ದೇಗುಲ ಸೇರಿ ಸರ್ಕಾರದ 3 ಸಾವಿರ ರೂಮ್​​​ ಆನ್​​ ಲೈನ್​ ಬುಕ್ಕಿಂಗ್
ಬಿಜೆಪಿ ನಿಯೋಗದ ನಾಯಕತ್ವ ವಹಿಸಿದ್ದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ
ಬಿಜೆಪಿ ನಿಯೋಗದ ನಾಯಕತ್ವ ವಹಿಸಿದ್ದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ
ಸರ್ಕಾರವನ್ನು ದೂರಿ ಏನು ಪ್ರಯೋಜನ ಎಂದ ಅಶಯ್ ಅಂಬಲಿ ತಂದೆ
ಸರ್ಕಾರವನ್ನು ದೂರಿ ಏನು ಪ್ರಯೋಜನ ಎಂದ ಅಶಯ್ ಅಂಬಲಿ ತಂದೆ
ಯಾರು ಹೊಣೆ ಅಂತ ಗೊತ್ತಾಗಲು ಇನ್ನೂ 15 ದಿನ ಕಾಯಬೇಕು: ಜಾರಕಿಹೊಳಿ
ಯಾರು ಹೊಣೆ ಅಂತ ಗೊತ್ತಾಗಲು ಇನ್ನೂ 15 ದಿನ ಕಾಯಬೇಕು: ಜಾರಕಿಹೊಳಿ
ಅವನಿಗೆ 25, ಅವಳಿಗೆ 36..OYO ರೂಂಗೆ ಕರೆದೊಯ್ದು ಹತ್ಯೆ: ಅಸಲಿ ಕಾರಣವೇನು?
ಅವನಿಗೆ 25, ಅವಳಿಗೆ 36..OYO ರೂಂಗೆ ಕರೆದೊಯ್ದು ಹತ್ಯೆ: ಅಸಲಿ ಕಾರಣವೇನು?