AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಚ್​ಎಎಲ್​ಗೆಯೇ ಚಳ್ಳೆಹಣ್ಣು ತಿನಿಸಲು ಯತ್ನಿಸಿದ ಹೈದರಾಬಾದ್ ಕಂಪನಿ; ತೇಜಸ್ ಯುದ್ಧವಿಮಾನದ ಬಿಡಿಭಾಗ ಪೂರೈಕೆಯಲ್ಲಿ ವಂಚನೆ; ದೂರು ದಾಖಲು

HAL Exposes Tejas Mark-1A Fake Parts Scam: ಭಾರತದ ಪ್ರಮುಖ ಯುದ್ಧ ವಿಮಾನ 'ತೇಜಸ್ ಮಾರ್ಕ್-1ಎ' ಯೋಜನೆಗೆ ನಕಲಿ ಬಿಡಿಭಾಗಗಳ ಗುಣಮಟ್ಟ ವರದಿಗಳನ್ನು ನೀಡಿದ ಆರೋಪದ ಮೇಲೆ ಹೆಚ್‌ಎಎಲ್ ಬೆಂಗಳೂರಿನಲ್ಲಿ ಹೈದರಾಬಾದ್‌ನ ಟೆಕ್ ಏರೋ ಡಿವೈಸಸ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದೆ. 199 ನಕಲಿ ಪ್ರಯೋಗಾಲಯ ವರದಿಗಳು ಪತ್ತೆಯಾಗಿವೆ. ಈ ಪ್ರಕರಣ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ್ದಾಗಿದ್ದು, ಹೆಚ್‌ಎಎಲ್ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಎಚ್​ಎಎಲ್​ಗೆಯೇ ಚಳ್ಳೆಹಣ್ಣು ತಿನಿಸಲು ಯತ್ನಿಸಿದ ಹೈದರಾಬಾದ್ ಕಂಪನಿ; ತೇಜಸ್ ಯುದ್ಧವಿಮಾನದ ಬಿಡಿಭಾಗ ಪೂರೈಕೆಯಲ್ಲಿ ವಂಚನೆ; ದೂರು ದಾಖಲು
ತೇಜಸ್ ಯುದ್ಧವಿಮಾನImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 12, 2026 | 7:59 PM

Share

ಬೆಂಗಳೂರು, ಜೂನ್ 12: ಭಾರತದ ಲಘು ಯುದ್ಧ ವಿಮಾನ ‘ತೇಜಸ್ ಮಾರ್ಕ್-1ಎ’ (Tejas Mark-1A) ಯೋಜನೆಗೆ ಬಿಡಿಭಾಗಗಳನ್ನು ಪೂರೈಸುವ ಹೈದರಾಬಾದ್ ಮೂಲದ ‘ಟೆಕ್ ಏರೋ ಡಿವೈಸಸ್’ (Tec Aero Devices) ಕಂಪನಿಯು ನಕಲಿ ಗುಣಮಟ್ಟದ ವರದಿಗಳನ್ನು ನೀಡಿದೆ ಎಂದು ಆರೋಪಿಸಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಬೆಂಗಳೂರಿನಲ್ಲಿ ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿ (Cheating and Forgery) ಮೊಕದ್ದಮೆ ಹೂಡಿದೆ.

ಹೆಚ್‌ಎಎಲ್‌ನ ಏರ್‌ಕ್ರಾಫ್ಟ್ ವಿಭಾಗದ ಡೆಪ್ಯುಟಿ ಜನರಲ್ ಮ್ಯಾನೇಜರ್ ರಾಣು ಗುಪ್ತಾ ಅವರು ನೀಡಿದ ದೂರಿನ ಆಧಾರದ ಮೇಲೆ, ಟೆಕ್ ಏರೋ ಡಿವೈಸಸ್ ಕಂಪನಿಯ ಸಿಇಒ ಎಂ. ಶಿವರಾಮ ಪ್ರಸಾದ್ ವಿರುದ್ಧ ಬೆಂಗಳೂರಿನ ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ. ಕಂಪನಿಯು ಒಟ್ಟು 172 ಬಿಡಿಭಾಗಗಳಿಗೆ ಸಂಬಂಧಿಸಿದಂತೆ 199 ನಕಲಿ ಲ್ಯಾಬ್ ಟೆಸ್ಟ್ ವರದಿಗಳನ್ನು ಸೃಷ್ಟಿಸಿ ಸಲ್ಲಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆಂಧ್ರ ಕಂಪನಿಯ ಕಳ್ಳಾಟ ಪತ್ತೆಯಾಗಿದ್ದು ಹೇಗೆ?

ಹೆಚ್‌ಎಎಲ್ ಕಂಪನಿಯು ಮಾರ್ಚ್ 2022 ರಿಂದ ಸೆಪ್ಟೆಂಬರ್ 2023 ರ ನಡುವೆ ಈ ಕಂಪನಿಗೆ 18 ಪರ್ಚೇಸ್ ಆರ್ಡ್​ಗಳನ್ನು (Purchase Orders) ನೀಡಿತ್ತು. ವಿಮಾನದ ಬಿಡಿಭಾಗಗಳ ಭದ್ರತೆ ಮತ್ತು ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಅದರ ಸಾಮರ್ಥ್ಯ, ಗಡಸುತನ (Hardness), ಮತ್ತು ತುಕ್ಕು ನಿರೋಧಕ ಶಕ್ತಿಯ ಮೂಲ ವರದಿಗಳನ್ನು ಹೆಚ್‌ಎಎಲ್ ಕೇಳಿತ್ತು. ಆದರೆ ಸರಬರಾಜುದಾರರು ಅಸಲಿ ದಾಖಲೆಗಳನ್ನು ನೀಡಲು ವಿಫಲರಾಗಿದ್ದಾರೆ.

ಇದನ್ನೂ ಓದಿ: ಮೇ ತಿಂಗಳಲ್ಲಿ ಬೆಲೆ ಏರಿಕೆಗೆ ಇನ್ನಷ್ಟು ವೇಗ; ರೀಟೇಲ್ ಹಣದುಬ್ಬರ ಶೇ. 3.93 ದಾಖಲು

ಅನುಮಾನಗೊಂಡ ಹೆಚ್‌ಎಎಲ್ ಅಧಿಕಾರಿಗಳು, ಟೆಕ್ ಏರೋ ಡಿವೈಸಸ್ ಹೆಸರಿಸಿದ ಹೈದರಾಬಾದ್‌ನ ‘ಆಕ್ಸಿಸ್ ಇನ್ಸ್‌ಪೆಕ್ಷನ್ ಸೊಲ್ಯೂಷನ್ಸ್’ ಎಂಬ ಟೆಸ್ಟಿಂಗ್ ಏಜೆನ್ಸಿಯಲ್ಲಿ ನವೆಂಬರ್ 2023 ರಲ್ಲಿ ಆಡಿಟ್ ನಡೆಸಿದ್ದಾರೆ. ಆಗ ಆಕ್ಸಿಸ್ ಸಂಸ್ಥೆಯು, “ನಾವು ಈ ಯಾವುದೇ ವರದಿಗಳನ್ನು ನೀಡಿಲ್ಲ, ನಮ್ಮ ಹೆಸರು ಮತ್ತು ಸಹಿಯನ್ನು ದುರುಪಯೋಗಪಡಿಸಿಕೊಂಡು ನಕಲಿ ರಿಪೋರ್ಟ್ ತಯಾರಿಸಲಾಗಿದೆ” ಎಂದು ಲಿಖಿತವಾಗಿ ಸ್ಪಷ್ಟಪಡಿಸಿದೆ.

ತಪ್ಪು ಒಪ್ಪಿಕೊಂಡ ಕಂಪನಿ

ಹೆಚ್‌ಎಎಲ್ ತನಿಖೆ ತೀವ್ರಗೊಳಿಸಿದಾಗ, ಟೆಕ್ ಏರೋ ಡಿವೈಸಸ್‌ನ ಪ್ರತಿನಿಧಿಗಳು ನವೆಂಬರ್ 22, 2023 ರಂದು ಹೆಚ್‌ಎಎಲ್‌ಗೆ ಕ್ಷಮಾಪಣಾ ಪತ್ರ ನೀಡಿದ್ದರು. ಅದರಲ್ಲಿ ತಮ್ಮ ಉದ್ಯೋಗಿಯೊಬ್ಬರು ಮಾಡಿದ ತಪ್ಪಿನಿಂದಾಗಿ ನಕಲಿ ವರದಿಗಳನ್ನು ಸಬ್ಮಿಟ್ ಮಾಡಲಾಗಿತ್ತು ಎಂದು ಒಪ್ಪಿಕೊಂಡು, ಕ್ಷಮಿಸುವಂತೆ ಕೋರಿದ್ದರು.

ಹೆಚ್‌ಎಎಲ್ ತೆಗೆದುಕೊಂಡ ಕಠಿಣ ಕ್ರಮಗಳು

  • ನಕಲಿ ವರದಿಗಳು ಸಾಬೀತಾದ ತಕ್ಷಣ ಹೆಚ್‌ಎಎಲ್ ಈ ಕಂಪನಿಯನ್ನು ತನ್ನ ಅನುಮೋದಿತ ಪೂರೈಕೆದಾರರ ಪಟ್ಟಿಯಿಂದ ತೆಗೆದುಹಾಕಿದೆ ಮತ್ತು ಮಾರ್ಚ್ 10, 2027 ರವರೆಗೆ (3 ವರ್ಷಗಳ ಕಾಲ) ವ್ಯವಹಾರ ನಡೆಸದಂತೆ ನಿಷೇಧಿಸಿದೆ.
  • ಈ ಬಿಡಿಭಾಗಗಳಿಗೆ ಸಂಬಂಧಿಸಿದಂತೆ ಹೆಚ್‌ಎಎಲ್ ಇದುವರೆಗೆ ಯಾವುದೇ ಹಣವನ್ನು (Payments) ಆ ಕಂಪನಿಗೆ ಪಾವತಿಸಿಲ್ಲ.
  • ಆಂತರಿಕ ಸಮಾಲೋಚನೆಗಳ ನಂತರ, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯ ಇದಾಗಿರುವುದರಿಂದ ಕಂಪನಿ ಮತ್ತು ಅದರ ಸಿಇಒ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.

ಇದನ್ನೂ ಓದಿ: ಷೇರುಬಜಾರಿನಲ್ಲಿ ಭಾರಿ ಗೂಳಿ ಓಟ; ಗರಿಬಿಚ್ಚಿದ ಸೆನ್ಸೆಕ್ಸ್, ನಿಫ್ಟಿ; ಮಾರುಕಟ್ಟೆಯ ಭರ್ಜರಿ ಆಟಕ್ಕೆ ಕಾರಣಗಳೇನು?

ಭಾರತದ ಮಿಲಿಟರಿ ಶಕ್ತಿಗೆ ಸಂಬಂಧಿಸಿದ ಘಟನೆ ಇದು…

‘ತೇಜಸ್ ಮಾರ್ಕ್-1ಎ’ ಭಾರತೀಯ ವಾಯುಪಡೆಯ ಅತ್ಯಂತ ಮಹತ್ವದ ದೇಶೀಯ ಯುದ್ಧ ವಿಮಾನ ಯೋಜನೆಯಾಗಿದೆ. ವಿಮಾನದ ಸುರಕ್ಷತೆಯಲ್ಲಿ ಬಿಡಿಭಾಗಗಳ ಗುಣಮಟ್ಟ ಅತ್ಯಂತ ಪ್ರಮುಖ ಪಾತ್ರ ವಹಿಸುವುದರಿಂದ ಈ ವಂಚನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಸದ್ಯಕ್ಕೆ ಯಾವುದೇ ವಿಮಾನದ ಸುರಕ್ಷತೆಗೆ ಧಕ್ಕೆಯಾಗಿಲ್ಲ ಮತ್ತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕುತೂಹಲದ ಸಂಗತಿ ಎಂದರೆ, ಇದೇ ಹೈದರಾಬಾದ್ ಕಂಪನಿಯು ಈ ಮೊದಲು ದೊಡ್ಡ ದೊಡ್ಡ ಕಂಪನಿಗಳಿಗೆ ಇನ್ನೂ ದೊಡ್ಡ ದೊಡ್ಡ ಬಿಡಿಭಾಗಗಳನ್ನು ಪೂರೈಸಿದೆಯಂತೆ. ಅವುಗಳಲ್ಲಿಯೂ ಅದು ಗೋಲ್ಮಾಲ್ ನಡೆಸಿದ್ದಾರಾ ಇಲ್ಲವಾ ಎಂಬುದು ಗೊತ್ತಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಬೆಂಗಳೂರಿನಲ್ಲಿ ಭಾರಿ ಮಳೆ: ದ್ವಿಚಕ್ರ ವಾಹನ ಸವಾರರ ಪರದಾಟ
ಬೆಂಗಳೂರಿನಲ್ಲಿ ಭಾರಿ ಮಳೆ: ದ್ವಿಚಕ್ರ ವಾಹನ ಸವಾರರ ಪರದಾಟ
ಕೆ-ಸಿಇಟಿಯಲ್ಲಿ ವಿಜಯಪುರದ ವಿದ್ಯಾರ್ಥಿಗೆ ಟಾಪ್ 1ಕ್ಕಿಂತ ದೊಡ್ಡ ರ್ಯಾಂಕ್
ಕೆ-ಸಿಇಟಿಯಲ್ಲಿ ವಿಜಯಪುರದ ವಿದ್ಯಾರ್ಥಿಗೆ ಟಾಪ್ 1ಕ್ಕಿಂತ ದೊಡ್ಡ ರ್ಯಾಂಕ್
ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ವಿಜಯ್ ಮಾಡಿಸಿದ ಪೂಜೆ ಯಾವುದು?
ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ವಿಜಯ್ ಮಾಡಿಸಿದ ಪೂಜೆ ಯಾವುದು?
ಮೂಕಾಂಬಿಕಾ ದೇವಿಗೆ ಬೆಳ್ಳಿಯ ಖಡ್ಗ ಸಮರ್ಪಿಸಿದ ತಮಿಳುನಾಡು ಸಿಎಂ ವಿಜಯ್
ಮೂಕಾಂಬಿಕಾ ದೇವಿಗೆ ಬೆಳ್ಳಿಯ ಖಡ್ಗ ಸಮರ್ಪಿಸಿದ ತಮಿಳುನಾಡು ಸಿಎಂ ವಿಜಯ್
ನಸೀರ್ ಅಹ್ಮದ್‌ ‘ದಿವಾಳಿ’ ಎಂದು ಘೋಷಿಸಿದ NCLT: MLC ಸ್ಥಾನಕ್ಕೂ ಕುತ್ತು!
ನಸೀರ್ ಅಹ್ಮದ್‌ ‘ದಿವಾಳಿ’ ಎಂದು ಘೋಷಿಸಿದ NCLT: MLC ಸ್ಥಾನಕ್ಕೂ ಕುತ್ತು!
ಮೂಕಾಂಬಿಕೆಯ ಮಹಿಮೆ, ದೇವಿ ಶಕ್ತಿ ಬಗ್ಗೆ ಆಧ್ಯಾತ್ಮಕ ಚಿಂತಕ ಹೇಳಿದ್ದಿಷ್ಟು
ಮೂಕಾಂಬಿಕೆಯ ಮಹಿಮೆ, ದೇವಿ ಶಕ್ತಿ ಬಗ್ಗೆ ಆಧ್ಯಾತ್ಮಕ ಚಿಂತಕ ಹೇಳಿದ್ದಿಷ್ಟು
ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ತಮಿಳುನಾಡು ಸಿಎಂ ವಿಜಯ್​
ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ತಮಿಳುನಾಡು ಸಿಎಂ ವಿಜಯ್​
ನೀವೇ ಸಿಎಂ ಆಗಿ ಎಂದಾಗಲೂ ಆಗಿಲ್ಲವಲ್ಲ: ಹೆಚ್​.ಡಿ.ಕುಮಾರಸ್ವಾಮಿ ಟಾಂಗ್
ನೀವೇ ಸಿಎಂ ಆಗಿ ಎಂದಾಗಲೂ ಆಗಿಲ್ಲವಲ್ಲ: ಹೆಚ್​.ಡಿ.ಕುಮಾರಸ್ವಾಮಿ ಟಾಂಗ್
ಪ್ರಕಾಶ್ ರಾಜ್ ವಿರುದ್ಧ ಬೆಳಗಾವಿಯಲ್ಲಿ ಶ್ರೀರಾಮ ಸೇನೆ ಪ್ರತಿಭಟನೆ
ಪ್ರಕಾಶ್ ರಾಜ್ ವಿರುದ್ಧ ಬೆಳಗಾವಿಯಲ್ಲಿ ಶ್ರೀರಾಮ ಸೇನೆ ಪ್ರತಿಭಟನೆ
ವಿಜಯ್ ನೋಡಲು ಟಿವಿಕೆ ಬಾವುಟ ಹಿಡಿದು ಕಾಯುತ್ತಿರುವ ಫ್ಯಾನ್ಸ್
ವಿಜಯ್ ನೋಡಲು ಟಿವಿಕೆ ಬಾವುಟ ಹಿಡಿದು ಕಾಯುತ್ತಿರುವ ಫ್ಯಾನ್ಸ್