AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Santro Ravi: ತಲೆ ಮರೆಸಿಕೊಂಡಿರೊ ಸ್ಯಾಂಟ್ರೋ ರವಿ ಹಾದಿ ಮತ್ತಷ್ಟು ಕಠಿಣ, ನ್ಯಾಯಾಧೀಶರ ಮುಂದೆ‌ ಮಹಿಳೆ 164 ಹೇಳಿಕೆ ದಾಖಲು

ಮೈಸೂರಿನ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲದಲ್ಲಿ ನ್ಯಾಯಾಧೀಶರ ಮುಂದೆ‌ ಹಾಜರಾಗಿ ಮಹಿಳೆ 164 ಹೇಳಿಕೆ ದಾಖಲಿಸಿದ್ದಾರೆ. ಈ ಮೂಲಕ ಸ್ಯಾಂಟ್ರೋ ರವಿ ಹಾದಿ ಮತ್ತಷ್ಟು ಕಠಿಣವಾಗಲಿದೆ.

Santro Ravi: ತಲೆ ಮರೆಸಿಕೊಂಡಿರೊ ಸ್ಯಾಂಟ್ರೋ ರವಿ ಹಾದಿ ಮತ್ತಷ್ಟು ಕಠಿಣ, ನ್ಯಾಯಾಧೀಶರ ಮುಂದೆ‌ ಮಹಿಳೆ 164 ಹೇಳಿಕೆ ದಾಖಲು
ಸ್ಯಾಂಟ್ರೋ ರವಿ
TV9 Web
| Edited By: |

Updated on: Jan 08, 2023 | 9:57 AM

Share

ಮೈಸೂರು: ಯುವತಿಯರನ್ನು ನಂಬಿಸಿ ಮೋಸ ಮಾಡಿ ವೇಶ್ಯಾವಾಟಿಕೆ ದಂಧೆಗೆ ದೂಡುತ್ತಿದ್ದ ಆರೋಪಿ ಸ್ಯಾಂಟ್ರೋ ರವಿ ತಲೆ ಮರಿಸಿಕೊಂಡಿದ್ದು ಸ್ಯಾಂಟ್ರೋ ರವಿ ಹಾದಿ ಮತ್ತಷ್ಟು ಕಠಿಣವಾಗಲಿದೆ. ಏಕೆಂದರೆ ನ್ಯಾಯಾಧೀಶರ ಮುಂದೆ ಸಂತ್ರಸ್ತೆಯೊಬ್ಬರು 164 ಹೇಳಿಕೆ ದಾಖಲಿಸಿದ್ದಾರೆ.

ಮೈಸೂರಿನ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲದಲ್ಲಿ ನ್ಯಾಯಾಧೀಶರ ಮುಂದೆ‌ ಹಾಜರಾಗಿ ಮಹಿಳೆ 164 ಹೇಳಿಕೆ ದಾಖಲಿಸಿದ್ದಾರೆ. ಮಹಿಳೆಗೆ ಅತ್ಯಾಚಾರ ಎಸೆಗಿ ಮದುವೆಯಾಗಿದ್ದು, ಮದುವೆ ನಂತರ ಲೈಂಗಿಂಕ ದೌರ್ಜನ್ಯ, ಬಲವಂತವಾಗಿ ಗರ್ಭಪಾತ ಮಾಡಿಸಲಾಗಿದೆಯಂತೆ. ಅಲ್ಲದೆ ತನ್ನ ತಂಗಿಯ ಮೇಲೆ ದೈಹಿಕ ಹಲ್ಲೆ ಸೇರಿದಂತೆ ಹಲವು ವಿಚಾರಗಳ ಕುರಿತು ಸಂತ್ರಸ್ತೆ ಮಹಿಳೆ ನ್ಯಾಯಾಧೀಶರ ಮುಂದೆ‌ ಹೇಳಿಕೆ ದಾಖಲಿಸಿದ್ದಾರೆ. ವರದಕ್ಷಣೆ ಕಿರುಕುಳ ನೀಡಿದಲ್ಲದೆ ಮತ್ತೊಬ್ಬರೊಂದಿಗೆ ಲೈಂಗಿಕ ಸಂಪರ್ಕ ಹೊಂದಲು ಕಿರುಕುಳ ನೀಡುತ್ತಿದ್ದ ಎಂದು ಸಂತ್ರಸ್ತೆ ಸ್ಯಾಂಟ್ರೋ ರವಿಯ ವಿಕೃತಿಯನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಸ್ಯಾಂಟ್ರೋ ರವಿ ಉದ್ದೇಶ ಪೂರ್ವಕವಾಗಿ ಮಾರಣಾಂತಿಕ ಖಾಯಿಲೆ ಅಂಟಿಸಿದ್ದಾನೆ ಎಂದು 164 ಹೇಳಿಕೆಯಲ್ಲಿ ದಾಖಲಿಸಿದ್ದಾರೆ. ಸಂತ್ರಸ್ತೆ ಹೇಳಿಕೆಯಿಂದ ನೀರಿಕ್ಷಿಣಾ ಜಾಮೀನು ಮತ್ತಷ್ಟು ಕಠಿಣವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: Santro Ravi: ಸ್ಯಾಂಟ್ರೋ ರವಿಗೆ ಆ ಹೆಸರು ಬಂದಿದ್ದು ಹೇಗೆ? ಇಲ್ಲಿದೆ ಮಂಡ್ಯ ಡಿವೈಎಸ್‌ಪಿ ಪುತ್ರನ ಸಂಪೂರ್ಣ ಜಾತಕ

ವರ್ಗಾವಣೆ ದಂಧೆಯಲ್ಲೂ ಕಿಂಗ್ ಪಿನ್ ಸ್ಯಾಂಟ್ರೋ ರವಿ

ಇನ್ನು ಮತ್ತೊಂದು ಅಚ್ಚರಿಯ ವಿಚಾರವೆಂದರೆ ಸ್ಯಾಂಟ್ರೋ ರವಿ ಬಳಿ ಸಚಿವರ ಲೆಟರ್ ಎಡ್​ಗಳು ಪತ್ತೆಯಾಗಿವೆ. ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಸ್ಯಾಂಟ್ರೋ ರವಿ ಮಾಸ್ಟರ್ ಆಗಿದ್ದ. ಪೊಲೀಸ್ ಇನ್ಸ್ಪೆಕ್ಟರ್, ಎಸಿಪಿ, ಡಿವೈಎಸ್‌ಪಿಗಳನ್ನು ಪ್ರಮೋಷನ್ ಮಾಡಿಸ್ತಿದ್ದ. ಪ್ರಮೋಷನ್ ಮಾಡಿಸಿ ತನಗೆ ಬೇಕಾದ ಸ್ಟೇಷನ್‌ಗೆ ಹಾಕಿಕೊಳ್ಳುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಹಾಗೂ ಸ್ಯಾಂಟ್ರೋ ರವಿ ಜೊತೆ ಟ್ರಾನ್ಸ್‌ಫರ್ ದಂಧೆಯಲ್ಲಿ ಸಚಿವರು, ಶಾಸಕರು ಭಾಗಿ ಬಗ್ಗೆ ಅನುಮಾನ ವ್ಯಕ್ತವಾಗಿದೆ.

6 ದಿನ ಕಳೆದರೂ ಪತ್ತೆಯಾಗದ ಸ್ಯಾಂಟ್ರೋ ರವಿ

ಪ್ರಕರಣ ದಾಖಲಾಗಿ 6 ದಿನ ಕಳೆದರೂ ಕೆ.ಎಸ್.ಮಂಜುನಾಥ ಅಲಿಯಾಸ್ ಸ್ಯಾಂಟ್ರೋ ರವಿ ಪತ್ತೆಯಾಗಿಲ್ಲ. ಜನವರಿ 2ರಂದು ಸ್ಯಾಂಟ್ರೋ ರವಿ ವಿರುದ್ಧ ವಂಚನೆ, ವರದಕ್ಷಿಣೆ ಕಿರುಕುಳ, ಅತ್ಯಾಚಾರ, ಜಾತಿನಿಂದನೆ ಆರೋಪದಡಿ ವಿಜಯನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಡಿಸಿಪಿ ಮುತ್ತುರಾಜ್​ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡ ರಚಿಸಿ ಎನ್​ಆರ್​ ಉಪವಿಭಾಗದ ACP ಶಿವಶಂಕರ್​ ನೇತೃತ್ವದ ತಂಡದಿಂದ ಶೋಧ ನಡೆಯುತ್ತಿದೆ. ಬೆಂಗಳೂರು, ಮೈಸೂರಿನಲ್ಲಿ ಸ್ಯಾಂಟ್ರೋ ರವಿಗಾಗಿ ವಿಶೇಷ ತಂಡ ಶೋಧ ಕಾರ್ಯ ನಡೆಸುತ್ತಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ