AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರಿನಲ್ಲಿ ಬೀದಿ ಬದಿ ಹಾಡುತ್ತಾ ಸ್ವಾಭಿಮಾನಿ ಜೀವನ ನಡೆಸ್ತಿದ್ದ ಕಣ್ಣು ಕಾಣದ ವಿಶೇಷ ಚೇತನರಿಗೂ ಮೋಸ ಮಾಡಿದ ಐನಾತಿ ಆಸಾಮಿ!

Mysore News: ಈ ಮೂವರೂ ಕಣ್ಣು ಕಾಣದಿದ್ದರು ಭಿಕ್ಷೆ ಬೇಡದೆ ಬೀದಿ ಬದಿಯಲ್ಲಿ ಹಾಡು ಹಾಡುತ್ತಾ ಜನರನ್ನು ರಂಜಿಸುತ್ತಾ ಜನರು ಕೊಟ್ಟ ಹಣದಿಂದ ಜೀವನ ನಡೆಸುತ್ತಿದ್ದ ಸ್ವಾಭಿಮಾನಿಗಳು. ಇವರಿಗೆ ಪರಿಚಯದ ಮೈಸೂರಿನ ಹಿನಕಲ್ ನಿವಾಸಿ ಕೆಂಪಣ್ಣ ಎಂಬಾತ ಮೋಸ ಮಾಡಿದ್ದಾನೆ.

ಮೈಸೂರಿನಲ್ಲಿ ಬೀದಿ ಬದಿ ಹಾಡುತ್ತಾ ಸ್ವಾಭಿಮಾನಿ ಜೀವನ ನಡೆಸ್ತಿದ್ದ ಕಣ್ಣು ಕಾಣದ ವಿಶೇಷ ಚೇತನರಿಗೂ ಮೋಸ ಮಾಡಿದ ಐನಾತಿ ಆಸಾಮಿ!
ಕಣ್ಣು ಕಾಣದ ವಿಶೇಷ ಚೇತನರಿಗೂ ಮೋಸ ಮಾಡಿದ ಐನಾತಿ ಆಸಾಮಿ!
TV9 Web
| Updated By: Digi Tech Desk|

Updated on:Dec 13, 2022 | 2:06 PM

Share

ಪ್ರತಿನಿತ್ಯ ಮೋಸ ವಂಚನೆ ಪ್ರಕರಣಗಳ ಬಗ್ಗೆ‌ ಕೇಳಿರ್ತೀರಾ, ನೋಡಿರ್ತೀರಾ! ಆದ್ರೆ ಮೈಸೂರಿನಲ್ಲಿ ಬೆಳಕಿಗೆ ಬಂದಿರುವ ಪ್ರಕರಣ ನಿಜಕ್ಕೂ ಅಮಾನವೀಯ. ಹೃದಯಹೀನರು ಕಣ್ಣು ಕಾಣದವರಿಗೂ ವಂಚನೆ ಮಾಡಿದ್ದಾರೆ. ಅದೂ ಪರಿಚಯದವನಿಂದಲೇ ಮೋಸವಾಗಿದ್ದು (Fraud) ಅಂಧರು‌ (visually impaired) ಈಗ ಕಣ್ಣೀರಿಡುವಂತಾಗಿದೆ. ರಸ್ತೆ ಬದಿಯಲ್ಲಿ ಹಾಡು ಹೇಳುತ್ತಾ ಕುಳಿತಿರೋ ಕಣ್ಣು ಕಾಣದ ವಿಶೇಷ ಚೇತನರು ಇವರು. ಹೆಸರುಗಳು… ಕುಮಾರ, ಅವರ ಪತ್ನಿ‌ ಸುಧಾಮಣಿ ಹಾಗೂ ಭಾಸ್ಕರ. ಇವರೆಲ್ಲಾ ಮೈಸೂರು ಜಿಲ್ಲೆ (mysore) ಪಿರಿಯಾಪಟ್ಟಣ ತಾಲ್ಲೂಕಿನ ನಿವಾಸಿಗಳು. ಕಣ್ಣು ಕಾಣದಿದ್ದರು (blind) ಭಿಕ್ಷೆ ಬೇಡದೆ ಬೀದಿ ಬದಿಯಲ್ಲಿ ಹಾಡು ಹಾಡುತ್ತಾ ಜನರನ್ನು ರಂಜಿಸುತ್ತಾ ಜನರು ಕೊಟ್ಟ ಹಣದಿಂದ ಜೀವನ ನಡೆಸುತ್ತಿದ್ದ ಸ್ವಾಭಿಮಾನಿಗಳು.

ಈ ಮೂವರು ಮೈಸೂರಿನ ವಿವಿಧ ಬಡಾವಣೆ ಮುಖ್ಯ ರಸ್ತೆ ಹಾಗೂ ವೃತ್ತಗಳಲ್ಲಿ ಹಾಡು ಹಾಡುತ್ತಿದ್ದರು. ಭಕ್ತಿ ಗೀತೆಗಳು, ಸಿನಿಮಾ ಗೀತೆಗಳನ್ನು ಹಾಡುತ್ತಿದ್ದರು. ಇವರ ಹಾಡಿಗೆ ಮನಸೋತು ಜನರು ತಮ್ಮ‌ ಕೈಲಾದಷ್ಟು ಹಣವನ್ನು ನೀಡುತ್ತಿದ್ದರು. ಈ ರೀತಿ ಸ್ವಾಭಿಮಾನದಿಂದ ಬದುಕು ಕಟ್ಟಿಕೊಂಡಿದ್ದ ಇವರಿಗೆ ಪರಿಚಯದ ಮೈಸೂರಿನ ಹಿನಕಲ್ ನಿವಾಸಿ ಕೆಂಪಣ್ಣ ಎಂಬಾತ ಮೋಸ ಮಾಡಿದ್ದಾನೆ.

ಹೌದು ಕೆಂಪಣ್ಣ ಇವರ ಪರಿಚಯದವನೇ ಆಗಿದ್ದ. ಡಬ್ಬ ತಮಟೆ ಬಳಸಿ ಹಾಡು ಹಾಡುತ್ತಿದ್ದವರಿಗೆ ತನ್ನ ಬಳಿ ಹೊಸ ಮ್ಯೂಸಿಕ್ ಸಿಸ್ಟಂ ಇದೆ. ಅದರ ಬೆಲೆ 8 ಸಾವಿರ. ನಿಮಗೆ ಅಂತಾ 6 ಸಾವಿರಕ್ಕೆ ಕೊಡುತ್ತೇನೆ ಅಂತಾ ಹೇಳಿದ್ದಾನೆ. ಆತನ ಮಾತು ನಂಬಿದ ಅಂಧರು ಮ್ಯೂಸಿಕ್ ಸಿಸ್ಟಂ ಖರೀದಿಸಿದ್ದಾರೆ. ಮ್ಯೂಸಿಕ್ ಸಿಸ್ಟಂ ಖರೀದಿ ಮಾಡಿದ ಒಂದೇ ದಿನಕ್ಕೆ ಕೈ ಕೊಟ್ಟಿದೆ.

Also Read: ಸ್ವತಃ ತಹಶೀಲ್ದಾರ್ ನಾಹೀದ ಕುಟುಕು ಕಾರ್ಯಾಚರಣೆ ನಡೆಸಿದರು, ಕೊರಟಗೆರೆ ಆಂಬ್ಯುಲೆನ್ಸ್ ಸಿಬ್ಬಂದಿಯ ಬೇಜವಾಬ್ದಾರಿತನ ಬಯಲಿಗೆ ಬಿತ್ತು!

ಈ ಬಗ್ಗೆ ಕೆಂಪಣ್ಣನನ್ನು ಸಂಪರ್ಕಿಸಲು ಇವರೆಲ್ಲಾ ಪ್ರಯತ್ನಪಟ್ಟಿದ್ದಾರೆ. ಆದರೆ ಕೆಂಪಣ್ಣ ಇವರ ಕೈಗೆ ಸಿಗುತ್ತಿಲ್ಲ. ಮೊಬೈಲ್‌ಗೆ ಕರೆ ಮಾಡಿದ್ರು ಕರೆ ಸ್ವೀಕರಿಸುತ್ತಿಲ್ಲ. ಇದರಿಂದ ಇವರೆಲ್ಲಾ ಕಂಗಾಲಾಗಿದ್ದಾರೆ. ಇರಲು ಮನೆಯೂ ಇಲ್ಲದೆ, ಕಣ್ಣು ಕಾಣದೆ ಏನು‌ ಮಾಡಬೇಕೆಂದು ತೋಚದೆ ಕಂಗಾಲಾಗಿದ್ದಾರೆ. ಕೆಂಪಣ್ಣಗಾಗಿ ಎಲ್ಲಾ ಕಡೆ ಹುಡುಕಾಟ‌ ನಡೆಸಿದ್ದಾರೆ. ಆದರೆ ಪ್ರಯೋಜನವಾಗಿಲ್ಲ. ಇದರಿಂದ ಮುಂದೇನೂ‌ ಅಂತಾ ಅಂಧರು ಕಂಗಾಲಾಗಿದ್ದಾರೆ. ದಯಮಾಡಿ ನಮಗೆ ಸಹಾಯ ಮಾಡಿ ಅಂತಾ ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ.

ಕಣ್ಣು ಕಾಣದ ಇವರಿಗೆ ದಿಕ್ಕೇ ತೋಚದಂತಾಗಿತ್ತು. ಹೀಗಾಗಿ‌ ಟಿವಿ 9 ವತಿಯಿಂದ ಇವರ ಬಗ್ಗೆ ಮೈಸೂರಿನ ವಿಜಯ ನಗರ ಪೋಲಿಸರಿಗೆ‌ ವಿಷಯ ತಿಳಿಸಿ ಮೋಸ ಮಾಡಿದ ಕೆಂಪಣ್ಣನನ್ನು ಪತ್ತೆ ಮಾಡಿ ಕೊಡುವಂತೆ ಮನವಿ ಮಾಡಲಾಗಿದೆ. ಪೊಲೀಸರು ಸಹಾ ಕೆಂಪಣ್ಣನನ್ನು ಹುಡುಕಿ ಅಂಧರಿಗೆ ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ. ಇದೆಲ್ಲಾ ಏನೇ ಇರಲಿ ಕಣ್ಣು ಕಾಣದವರನ್ನೂ ಬಿಡದೆ ಮೋಸ‌ ಮಾಡೋ ಇಂತಹವರಿಗೆ ಏನನ್ನ ಬೇಕೋ ಗೊತ್ತಿಲ್ಲ. (ವರದಿ: ರಾಮ್, ಟಿವಿ 9, ಮೈಸೂರು)

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:49 pm, Tue, 13 December 22

‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ
ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ
ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿ ತಾವು ಮಾಡಿದ ಶಪಥ ರಿವೀಲ್ ಮಾಡಿದ ವೀರಕಪು
ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿ ತಾವು ಮಾಡಿದ ಶಪಥ ರಿವೀಲ್ ಮಾಡಿದ ವೀರಕಪು
ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಫಾಲ್ಸ್, ವಿಡಿಯೋ ನೋಡಿ
ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಫಾಲ್ಸ್, ವಿಡಿಯೋ ನೋಡಿ
ತಿಮರೋಡಿಯನ್ನು ಬಂಧಿಸುವ ಮುನ್ನ ಪೊಲೀಸ್ ಮತ್ತು ವಕೀಲರ ನಡುವೆ ವಾಗ್ವಾದ
ತಿಮರೋಡಿಯನ್ನು ಬಂಧಿಸುವ ಮುನ್ನ ಪೊಲೀಸ್ ಮತ್ತು ವಕೀಲರ ನಡುವೆ ವಾಗ್ವಾದ
ಮಹೇಶ್ ತಿಮರೋಡಿ ಮನೇಲಿ 4 ದಿನ ಇದ್ದೆ, ಊಟ ಮಾತ್ರ ಹಾಕಿದ್ದು: ಸುಜಾತ ಭಟ್
ಮಹೇಶ್ ತಿಮರೋಡಿ ಮನೇಲಿ 4 ದಿನ ಇದ್ದೆ, ಊಟ ಮಾತ್ರ ಹಾಕಿದ್ದು: ಸುಜಾತ ಭಟ್
ವೈಷ್ಣೋದೇವಿ ಯಾತ್ರಿಕರ ಕರೆದೊಯ್ಯುತ್ತಿದ್ದ ಬಸ್ ಅಪಘಾತ, ಓರ್ವ ಸಾವು
ವೈಷ್ಣೋದೇವಿ ಯಾತ್ರಿಕರ ಕರೆದೊಯ್ಯುತ್ತಿದ್ದ ಬಸ್ ಅಪಘಾತ, ಓರ್ವ ಸಾವು
Karnataka Assembly Session Live: ವಿಧಾನಸಭೆ ಕಲಾಪ ಆರಂಭ; ನೇರಪ್ರಸಾರ
Karnataka Assembly Session Live: ವಿಧಾನಸಭೆ ಕಲಾಪ ಆರಂಭ; ನೇರಪ್ರಸಾರ
ರೀಲ್ಸ್ ಮಾಡುವಾಗ ಟ್ರ್ಯಾಕ್ಟರ್ ಪಲ್ಟಿ, ಯುವಕ ಸಾವು: ವಿಡಿಯೋ ವೈರಲ್
ರೀಲ್ಸ್ ಮಾಡುವಾಗ ಟ್ರ್ಯಾಕ್ಟರ್ ಪಲ್ಟಿ, ಯುವಕ ಸಾವು: ವಿಡಿಯೋ ವೈರಲ್