AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಗ್ರ ನಾಸಿರ್​ನನ್ನು ಎಸ್ಕೆಫ್ ಮಾಡಿಸಲು ಫಾತಿಮಾ ತಡರಾತ್ರಿ ಪ್ಲಾನ್​: ಫೋನ್​ನಲ್ಲಿ ಗಂಟೆಗಟ್ಟಲೇ ಮಾತುಕತೆ

ಉಗ್ರ ನಾಸಿರ್​ಗೆ ಸಹಾಯ ಮಾಡುತ್ತಿದ್ದ ಮೂವರನ್ನ ಬಂಧಿಸಿ ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳ ಬಳಿ ದೊರೆತ ಮೊಬೈಲ್​ ಪರಿಶೀಲಿಸಿದಾಗ ಸ್ಫೋಟಕ ಅಂಶಗಳು ಬಹಿರಂಗಗೊಂಡಿವೆ. ಎನ್​ಐಎ ವಿಚಾರಣೆ ವೇಳೆ ಏನೆಲ್ಲ ಅಂಶಗಳು ಬಹಿರಂಗಗೊಂಡಿವೆ? ಇಲ್ಲಿದೆ ವಿವರ

ಉಗ್ರ ನಾಸಿರ್​ನನ್ನು ಎಸ್ಕೆಫ್ ಮಾಡಿಸಲು ಫಾತಿಮಾ ತಡರಾತ್ರಿ ಪ್ಲಾನ್​: ಫೋನ್​ನಲ್ಲಿ ಗಂಟೆಗಟ್ಟಲೇ ಮಾತುಕತೆ
ಎಎಸ್​ಐ ಚಾಂದ್ ಪಾಷಾ ಹಾಗೂ ಫಾತಿಮಾ
ವಿವೇಕ ಬಿರಾದಾರ
ವಿವೇಕ ಬಿರಾದಾರ|

Updated on:Jul 13, 2025 | 10:28 PM

Share

ಬೆಂಗಳೂರು, ಜುಲೈ 13: ಉಗ್ರ ನಾಸಿರ್​ಗೆ (Nasir) ಸಹಾಯ ಮಾಡುತ್ತಿದ್ದ ಮೂವರು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳ (NIA) ಬಂಧಿಸಿದೆ. ಮೂವರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಆರು ದಿ‌ನ ಕಸ್ಟಡಿಗೆ ಪಡೆಯಲಾಗಿದೆ. 4ನೇ ದಿನದ ವಿಚಾರಣೆ ವೇಳೆ ಹಲವು ಸಂಗತಿಗಳು ಬಯಲಾಗಿವೆ.  ತಲೆ ಮರೆಸಿಕೊಂಡಿರುವ ಜುನೈದ್​​ ಮತ್ತು ಈತನ ತಾಯಿ ಫಾತಿಮಾ ತಡರಾತ್ರಿ ಫೋನ್​ನಲ್ಲಿ ಗಂಟೆಗಟ್ಟಲೇ ಮಾತನಾಡುತ್ತಿದ್ದರು ಎಂಬವುದು ತನಿಖೆ ವೇಳೆ ಗೊತ್ತಾಗಿದೆ.  

ದಕ್ಷಿಣ ಭಾರತದಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣಗಳ ಉಗ್ರ ಜುನೈದ್ ಸದ್ಯ ಗಲ್ಫ್​ನಲ್ಲಿ‌ ತಲೆಮರೆಸಿಕೊಂಡಿದ್ದಾನೆ. ಈತನಿಗಾಗಿ ಎನ್​ಐಎ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ. ಇದರ ನಡುವೆ ಜೈಲಿನಲ್ಲಿರುವ ಉಗ್ರ ನಾಸಿರ್​ಗೆ ಸಹಾಯ ಮಾಡುತ್ತಿದ್ದ ಮೂವರನ್ನು ಎನ್​ಐಎ ಬಂಧಿಸಿದೆ. ಡಾ ನಾಗರಾಜ್, ASI ಚಾನ್ ಪಾಷಾ, ಜುನೈದ್ ತಾಯಿ ಫಾತಿಮಾಳನ್ನು ಬಂಧಿಸಲಾಗಿದೆ. ಆರು ದಿನಗಳ ಹಿಂದೆ ಫಾತಿಮಾ ಮನೆ ಮೇಲೆ ದಾಳಿ ಮಾಡಿದ್ದಾಗ ಅಲ್ಲಿ ಸಿಕ್ಕ ಮೊಬೈಲ್ ಫೋನ್, ಹಣ, ಕಾಗದ ಪತ್ರಗಳನ್ನು ಎನ್​ಐಎ ವಶಕ್ಕೆ ಪಡೆದಿದೆ. ವಶ ಪಡಿಸಿಕೊಂಡ ಮೊಬೈಲ್ ಸಿಡಿಆರ್ ತೆಗೆಸಿದ್ದ ಎನ್​ಐಎಗೆ ಮಾಹಿತಿಯೊಂದು ಸಿಕ್ಕಿದೆ.

ಫಾತಿಮಾ ಪುತ್ರ ಜುನೈದ್​ನ ಜೊತೆಗೆ ತಡರಾತ್ರಿ ಎರಡು ಗಂಟೆ ಸುಮಾರಿಗೆ ಕರೆ ಮಾಡಿ ಸುಮಾರು 40 ನಿಮಿಷ ಮಾತನಾಡಿದ್ದಾಳೆ. ಜುನೈದ್ ಹೇಳುತ್ತಿದ್ದ ಪ್ಲಾನ್​ಗಳನ್ನು ಫಾತಿಮಾ ಎಎಸ್ಐ ಚಾನ್ ಪಾಷಾನಿಗೆ ಹೇಳುತ್ತಿದ್ದಳು. ಚಾನ್ ಪಾಷಾ, ವೈದ್ಯ ನಾಗರಾಜ್ ಮೂಲಕ ನಾಸಿರ್​ಗೆ ತಿಳಿಸುತ್ತಿದ್ದನು. ಈ ಮಾಹಿತಿ ನಾಸಿರ್​ಗೆ ತಿಳಿಸಲು ಲಕ್ಷ ಲಕ್ಷ ಹಣವನ್ನು ಚಾನ್ ಪಾಷಾ ಮತ್ತು ನಾಗರಾಜ್ ಪಡೆದಿದ್ದರು ಎಂಬುವುದು ತನಿಖೆ ವೇಳೆ ಗೊತ್ತಾಗಿದೆ.

ಇದನ್ನೂ ಓದಿ
Image
ಕೊಯಮತ್ತೂರು ಬಾಂಬ್​ ಸ್ಫೋಟದ ಆರೋಪಿ 27 ವರ್ಷದ ಬಳಿಕ ಕರ್ನಾಟಕದಲ್ಲಿ ಅರೆಸ್ಟ್
Image
ಸಂಪುಟ ವಿಸ್ತರಣೆಗಾಗಿ ದೆಹಲಿಗೆ ಬಂದಿಲ್ಲ: ಡಿಸಿಎಂ ಡಿಕೆ ಶಿವಕುಮಾರ್
Image
ಹಲವು ಸ್ಫೋಟಗಳ ಮಾಸ್ಟರ್ ಮೈಂಡ್ ನಾಸೀರ್ ಜತೆ ಬಂಧಿತರಿಗೆ ಪ್ರಬಲ ನಂಟು
Image
ಅಡ್ವಾಣಿ ಮೇಲೆ ದಾಳಿಯ ಸಂಚು ರೂಪಿಸಿದ್ದ ಉಗ್ರ ಅಬೂಬಕರ್ ಅರೆಸ್ಟ್​

ಇದನ್ನೂ ಓದಿ: ಮಂಗಳೂರು ಕುಕ್ಕರ್ ಬಾಂಬ್, ರಾಮೇಶ್ವರಂ ಕೆಫೆ ಸ್ಫೋಟ ಮಾಸ್ಟರ್ ಮೈಂಡ್​ಗೂ ಬಂಧಿತ ಶಂಕಿತರಿಗೂ ಪ್ರಬಲ ನಂಟು!

ಉಗ್ರ ನಾಸಿರ್​ ಪರಾರಿಯಾಗಲು ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲಾಗಿತ್ತು. ಆದರೆ, 2023 ರಲ್ಲಿ ಸಿಸಿಬಿ ಪೊಲೀಸರು ಮಾಡಿದ್ದ ದಾಳಿ ಇದೆಲ್ಲವನ್ನು ಹಾಳು ಮಾಡಿತ್ತು. ಉಗ್ರ ನಾಸಿರ್​ ಪರಾರಿಯಾಗಲು ತಯಾರು ಮಾಡಿದ್ದ ಜೀವಂತ ಗ್ರೆನೇಡ್ ಜಪ್ತಿ ಮಾಡಿ, ಐವರನ್ನು ಸಿಸಿಬಿ ಬಂಧಿಸಿತ್ತು. ತನಿಖೆಯ ಮುಂದುವರೆದ ಭಾಗದಲ್ಲಿ ಎನ್​ಐಎ ಎಂಟ್ರಿಯಾಗಿ ಸದ್ಯ ಮೂವರು ಮೀಡಿಯೇಟರ್​ಗಳನ್ನು ಬಂಧಿಸಿ ವಿಚಾರಣೆ ಮುಂದುವರೆಸಿದೆ. ಇನ್ನೂ ಎರಡು ದಿನ ಮೂವರೂ ಎನ್​ಐಎ ಕಸ್ಟಡಿಯಲ್ಲಿ ಇರಲಿದ್ದು ಇನ್ನೂ ಏನೆಲ್ಲ ಪ್ಲಾನ್ ಮಾಡಿಕೊಂಡಿದ್ದರು ಎಂಬುವುದು ಎನ್​ಐಎ ಪತ್ತೆ ಹಚ್ಚಲಿದೆ.

ವರದಿ: ವಿಕಾಸ್​, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 10:18 pm, Sun, 13 July 25

Follow Us
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ