AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರ: ತೋಟದ ಮಾವಿನಕಾಯಿ ಕಿತ್ತಿದ್ದಕ್ಕೆ ಸುಟ್ಟು ಹೋಯ್ತು ಡಿಸ್ಕವರ್ ಬೈಕ್

ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿಯ ತೋಟದಲ್ಲಿ ಮಾವಿನಕಾಯಿ ಕಿತ್ತುಕೊಂಡಿದ್ದಕ್ಕೆ ಮಾಲೀಕ ಬೈಕ್ ಸವಾರನ ವಿರುದ್ಧ ವಿಕೃತವರ್ತನೆ ತೋರಿಸಿದ್ದಾನೆ. ಬೈಕ್ ಸವಾರ ಸತೀಶ್ ತೋಟದಲ್ಲಿ ಬಿಟ್ಟಿದ್ದ ಮಾವಿನಕಾಯಿ ಸವಿಯಲು 6 ಕಾಯಿಗಳನ್ನು ಕಿತ್ತಿದ್ದರು. ಇದನ್ನು ನೋಡಿದ ತೋಟದ ಮಾಲೀಕ ನಾಗರಾಜ್ ಮಾನವೀಯತೆ ಮರೆತು ವಿಕೃತ ವರ್ತನೆ ಮೆರೆದಿದ್ದಾರೆ.

ಚಿಕ್ಕಬಳ್ಳಾಪುರ: ತೋಟದ ಮಾವಿನಕಾಯಿ ಕಿತ್ತಿದ್ದಕ್ಕೆ ಸುಟ್ಟು ಹೋಯ್ತು ಡಿಸ್ಕವರ್ ಬೈಕ್
ಮಾವಿನಕಾಯಿ ಕಿತ್ತಿದ್ದಕ್ಕೆ ಸುಟ್ಟು ಹೋಯ್ತು ಡಿಸ್ಕವರಿ ಬೈಕ್
ಆಯೇಷಾ ಬಾನು
| Edited By: |

Updated on:May 21, 2021 | 10:10 AM

Share

ಚಿಕ್ಕಬಳ್ಳಾಪುರ: ಹಿಂದೊಂದು ಕಾಲವಿತ್ತು ಸ್ನೇಹಿತರೆಲ್ಲ ಒಟ್ಟುಗೂಡಿ ಬೇಲಿ ದಾಟಿ ತೋಟದಲ್ಲಿ ಬೆಳೆದ ಮಾವಿನಕಾಯಿಗಳನ್ನು ಕಿತ್ತು ಜಜ್ಜಿ ಉಪ್ಪು ಖಾರ ಹಾಕಿ ತಿಂದು ಬಾಲ್ಯ ಕಳೆದದ್ದು ನೆನಪು. ಆದರೆ ಇಂದು ಮಾವಿನಕಾಯಿ ತಿನ್ನಬೇಕು ಎಂದುಕೊಂಡದ್ದೇ ಮಹಾ ತಪ್ಪಾಗಿ ಹೋಗಿದೆ. ತೋಟದಲ್ಲಿದ್ದ 6 ಮಾವಿನಕಾಯಿ ಕಿತ್ತಿದ್ದಕ್ಕೆ ಆಕ್ರೋಶಗೊಂಡ ತೋಟದ ಮಾಲೀಕ ಮಾಡಿದ್ದೇನು ಗೊತ್ತಾ? ಮಾವಿನಕಾಯಿ ಕಿತ್ತಿದ್ದಕ್ಕೆ ಈ ವ್ಯಕ್ತಿ ತೆತ್ತ ಬೆಲೆ ಏನು?

ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿಯ ತೋಟದಲ್ಲಿ ಮಾವಿನಕಾಯಿ ಕಿತ್ತುಕೊಂಡಿದ್ದಕ್ಕೆ ಮಾಲೀಕ ಬೈಕ್ ಸವಾರನ ವಿರುದ್ಧ ವಿಕೃತವರ್ತನೆ ತೋರಿಸಿದ್ದಾನೆ. ಬೈಕ್ ಸವಾರ ಸತೀಶ್ ತೋಟದಲ್ಲಿ ಬಿಟ್ಟಿದ್ದ ಮಾವಿನಕಾಯಿ ಸವಿಯಲು 6 ಕಾಯಿಗಳನ್ನು ಕಿತ್ತಿದ್ದರು. ಇದನ್ನು ನೋಡಿದ ತೋಟದ ಮಾಲೀಕ ನಾಗರಾಜ್ ಮಾನವೀಯತೆ ಮರೆತು ವಿಕೃತ ವರ್ತನೆ ಮೆರೆದಿದ್ದಾರೆ. ಸತೀಶ್ ತಂದಿದ್ದ ಅಗಲಗುರ್ಕಿ ಗ್ರಾಮದ ಕೃಷ್ಣಪ್ಪ ಎನ್ನುವವರಿಗೆ ಸೇರಿದ  ಡಿಸ್ಕವರ್ ಬೈಕ್ ಅನ್ನು ತೋಟದ ಮಾಲೀಕ ನಾಗರಾಜ್ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.

6 ಮಾವಿನಕಾಯಿ ಕಿತ್ತಿದ್ದಕ್ಕೆ ಸತೀಶ್ ಡಿಸ್ಕವರ್ ಬೈಕ್ ಅನ್ನು ಕಳೆದುಕೊಂಡಿದ್ದಾರೆ. ತೋಟದ ಮಾಲೀಕನ ವರ್ತನೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Mohanlal Birthday: ಮಲಯಾಳಂ ಸ್ಟಾರ್​ ನಟ ಮೋಹನ್​ ಲಾಲ್​ ಜನ್ಮದಿನ; ‘ದೃಶ್ಯಂ 2’ ಗೆಟಪ್​ನಲ್ಲಿ ಕಾಮನ್​ ಡಿಪಿ ವೈರಲ್​

Published On - 10:06 am, Fri, 21 May 21

Follow Us
Video:ಭಾರತವು ಅಮೆರಿಕದ ಆದೇಶವನ್ನು ಪಾಲಿಸುವುದಿಲ್ಲ: ಸೈಯದ್ ಅಕ್ಬರುದ್ದೀನ್
Video:ಭಾರತವು ಅಮೆರಿಕದ ಆದೇಶವನ್ನು ಪಾಲಿಸುವುದಿಲ್ಲ: ಸೈಯದ್ ಅಕ್ಬರುದ್ದೀನ್
ಕುವೈತ್‌ನ ಪ್ರಮುಖ ತೈಲ ಸಂಸ್ಕರಣಾಗಾರದ ಮೇಲೆ ಇರಾನ್‌ ಡ್ರೋನ್ ದಾಳಿ
ಕುವೈತ್‌ನ ಪ್ರಮುಖ ತೈಲ ಸಂಸ್ಕರಣಾಗಾರದ ಮೇಲೆ ಇರಾನ್‌ ಡ್ರೋನ್ ದಾಳಿ
ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಹರಿದ ಕಾನ್ಸ್​ಟೇಬಲ್​ ಕಾರು
ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಹರಿದ ಕಾನ್ಸ್​ಟೇಬಲ್​ ಕಾರು
ವಿದ್ಯುತ್ ಚಾಲಿತ ವಾಹನಗಳಿಗೂ ತೆರಿಗೆ​​: ಸರ್ಕಾರದ ನಿರ್ಧಾರಕ್ಕೆ ಜೋಶಿ ಕಿಡಿ
ವಿದ್ಯುತ್ ಚಾಲಿತ ವಾಹನಗಳಿಗೂ ತೆರಿಗೆ​​: ಸರ್ಕಾರದ ನಿರ್ಧಾರಕ್ಕೆ ಜೋಶಿ ಕಿಡಿ
ಮಕ್ಕಳಿಂದ ಗೊಂಬೆಯ ಶವ ಯಾತ್ರೆ
ಮಕ್ಕಳಿಂದ ಗೊಂಬೆಯ ಶವ ಯಾತ್ರೆ
ಅಭಿವೃದ್ಧಿಯಲ್ಲಿ ಬೆಂಗಳೂರಿಗಿಂತ ದಾವಣಗೆರೆಯೇ ಮುಂದು ಎಂದ ಡಿಕೆಶಿ
ಅಭಿವೃದ್ಧಿಯಲ್ಲಿ ಬೆಂಗಳೂರಿಗಿಂತ ದಾವಣಗೆರೆಯೇ ಮುಂದು ಎಂದ ಡಿಕೆಶಿ
ಪ್ರೇಮ ವಿವಾಹಕ್ಕೆ ಪೋಷಕರ ವಿರೋಧ! ರಾಜಿ ಆಗೋಣವೆಂದು ಕರೆದು ಹಲ್ಲೆ
ಪ್ರೇಮ ವಿವಾಹಕ್ಕೆ ಪೋಷಕರ ವಿರೋಧ! ರಾಜಿ ಆಗೋಣವೆಂದು ಕರೆದು ಹಲ್ಲೆ
ಈ ಸರ್ಕಾರದ ಲೂಟಿ ನೋಡಿಯೇ ಕೆಂಪಣ್ಣ ಸತ್ಹೋಗ್ಬಿಟ್ಟ: ಪ್ರತಾಪಸಿಂಹ
ಈ ಸರ್ಕಾರದ ಲೂಟಿ ನೋಡಿಯೇ ಕೆಂಪಣ್ಣ ಸತ್ಹೋಗ್ಬಿಟ್ಟ: ಪ್ರತಾಪಸಿಂಹ
ಕೋಲಾರ: ಸೆಷನ್ಸ್ ಕೋರ್ಟ್ ಒಳ ಸೇರಿಕೊಂಡಿದ್ದ ಹಾವು! ಆಮೇಲೇನಾಯ್ತು ನೋಡಿ
ಕೋಲಾರ: ಸೆಷನ್ಸ್ ಕೋರ್ಟ್ ಒಳ ಸೇರಿಕೊಂಡಿದ್ದ ಹಾವು! ಆಮೇಲೇನಾಯ್ತು ನೋಡಿ
ಮೈಮೇಲೆ ಹರಿದು ಕಾರು, ಕೆಲವೇ ಕ್ಷಣಗಳಲ್ಲಿ ಪವಾಡವೆಂಬಂತೆ ಎದ್ದು ನಿಂತ ಬಾಲಕ
ಮೈಮೇಲೆ ಹರಿದು ಕಾರು, ಕೆಲವೇ ಕ್ಷಣಗಳಲ್ಲಿ ಪವಾಡವೆಂಬಂತೆ ಎದ್ದು ನಿಂತ ಬಾಲಕ