Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರ: ತೋಟದ ಮಾವಿನಕಾಯಿ ಕಿತ್ತಿದ್ದಕ್ಕೆ ಸುಟ್ಟು ಹೋಯ್ತು ಡಿಸ್ಕವರ್ ಬೈಕ್

ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿಯ ತೋಟದಲ್ಲಿ ಮಾವಿನಕಾಯಿ ಕಿತ್ತುಕೊಂಡಿದ್ದಕ್ಕೆ ಮಾಲೀಕ ಬೈಕ್ ಸವಾರನ ವಿರುದ್ಧ ವಿಕೃತವರ್ತನೆ ತೋರಿಸಿದ್ದಾನೆ. ಬೈಕ್ ಸವಾರ ಸತೀಶ್ ತೋಟದಲ್ಲಿ ಬಿಟ್ಟಿದ್ದ ಮಾವಿನಕಾಯಿ ಸವಿಯಲು 6 ಕಾಯಿಗಳನ್ನು ಕಿತ್ತಿದ್ದರು. ಇದನ್ನು ನೋಡಿದ ತೋಟದ ಮಾಲೀಕ ನಾಗರಾಜ್ ಮಾನವೀಯತೆ ಮರೆತು ವಿಕೃತ ವರ್ತನೆ ಮೆರೆದಿದ್ದಾರೆ.

ಚಿಕ್ಕಬಳ್ಳಾಪುರ: ತೋಟದ ಮಾವಿನಕಾಯಿ ಕಿತ್ತಿದ್ದಕ್ಕೆ ಸುಟ್ಟು ಹೋಯ್ತು ಡಿಸ್ಕವರ್ ಬೈಕ್
ಮಾವಿನಕಾಯಿ ಕಿತ್ತಿದ್ದಕ್ಕೆ ಸುಟ್ಟು ಹೋಯ್ತು ಡಿಸ್ಕವರಿ ಬೈಕ್
Follow us
ಆಯೇಷಾ ಬಾನು
| Updated By: Digi Tech Desk

Updated on:May 21, 2021 | 10:10 AM

ಚಿಕ್ಕಬಳ್ಳಾಪುರ: ಹಿಂದೊಂದು ಕಾಲವಿತ್ತು ಸ್ನೇಹಿತರೆಲ್ಲ ಒಟ್ಟುಗೂಡಿ ಬೇಲಿ ದಾಟಿ ತೋಟದಲ್ಲಿ ಬೆಳೆದ ಮಾವಿನಕಾಯಿಗಳನ್ನು ಕಿತ್ತು ಜಜ್ಜಿ ಉಪ್ಪು ಖಾರ ಹಾಕಿ ತಿಂದು ಬಾಲ್ಯ ಕಳೆದದ್ದು ನೆನಪು. ಆದರೆ ಇಂದು ಮಾವಿನಕಾಯಿ ತಿನ್ನಬೇಕು ಎಂದುಕೊಂಡದ್ದೇ ಮಹಾ ತಪ್ಪಾಗಿ ಹೋಗಿದೆ. ತೋಟದಲ್ಲಿದ್ದ 6 ಮಾವಿನಕಾಯಿ ಕಿತ್ತಿದ್ದಕ್ಕೆ ಆಕ್ರೋಶಗೊಂಡ ತೋಟದ ಮಾಲೀಕ ಮಾಡಿದ್ದೇನು ಗೊತ್ತಾ? ಮಾವಿನಕಾಯಿ ಕಿತ್ತಿದ್ದಕ್ಕೆ ಈ ವ್ಯಕ್ತಿ ತೆತ್ತ ಬೆಲೆ ಏನು?

ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿಯ ತೋಟದಲ್ಲಿ ಮಾವಿನಕಾಯಿ ಕಿತ್ತುಕೊಂಡಿದ್ದಕ್ಕೆ ಮಾಲೀಕ ಬೈಕ್ ಸವಾರನ ವಿರುದ್ಧ ವಿಕೃತವರ್ತನೆ ತೋರಿಸಿದ್ದಾನೆ. ಬೈಕ್ ಸವಾರ ಸತೀಶ್ ತೋಟದಲ್ಲಿ ಬಿಟ್ಟಿದ್ದ ಮಾವಿನಕಾಯಿ ಸವಿಯಲು 6 ಕಾಯಿಗಳನ್ನು ಕಿತ್ತಿದ್ದರು. ಇದನ್ನು ನೋಡಿದ ತೋಟದ ಮಾಲೀಕ ನಾಗರಾಜ್ ಮಾನವೀಯತೆ ಮರೆತು ವಿಕೃತ ವರ್ತನೆ ಮೆರೆದಿದ್ದಾರೆ. ಸತೀಶ್ ತಂದಿದ್ದ ಅಗಲಗುರ್ಕಿ ಗ್ರಾಮದ ಕೃಷ್ಣಪ್ಪ ಎನ್ನುವವರಿಗೆ ಸೇರಿದ  ಡಿಸ್ಕವರ್ ಬೈಕ್ ಅನ್ನು ತೋಟದ ಮಾಲೀಕ ನಾಗರಾಜ್ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.

6 ಮಾವಿನಕಾಯಿ ಕಿತ್ತಿದ್ದಕ್ಕೆ ಸತೀಶ್ ಡಿಸ್ಕವರ್ ಬೈಕ್ ಅನ್ನು ಕಳೆದುಕೊಂಡಿದ್ದಾರೆ. ತೋಟದ ಮಾಲೀಕನ ವರ್ತನೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Mohanlal Birthday: ಮಲಯಾಳಂ ಸ್ಟಾರ್​ ನಟ ಮೋಹನ್​ ಲಾಲ್​ ಜನ್ಮದಿನ; ‘ದೃಶ್ಯಂ 2’ ಗೆಟಪ್​ನಲ್ಲಿ ಕಾಮನ್​ ಡಿಪಿ ವೈರಲ್​

Published On - 10:06 am, Fri, 21 May 21

ಸಂಸದರಾಗಿ 50ನೇ ಬಾರಿಗೆ ವಾರಾಣಸಿಗೆ ಪ್ರಧಾನಿ ಮೋದಿ ಭೇಟಿ
ಸಂಸದರಾಗಿ 50ನೇ ಬಾರಿಗೆ ವಾರಾಣಸಿಗೆ ಪ್ರಧಾನಿ ಮೋದಿ ಭೇಟಿ
ಅಂಬೇಡ್ಕರ್ ಎರಡು ಬಾರಿ ಚುನಾವಣೆಯಲ್ಲಿ ಸೋಲುವಂತೆ ಮಾಡಿದ್ದು ನೆಹರೂ: ಕಾರಜೋಳ
ಅಂಬೇಡ್ಕರ್ ಎರಡು ಬಾರಿ ಚುನಾವಣೆಯಲ್ಲಿ ಸೋಲುವಂತೆ ಮಾಡಿದ್ದು ನೆಹರೂ: ಕಾರಜೋಳ
ಕರಡಿಗಳಲ್ಲಿ ಮಾನವರ ಮೇಲೆ ಹಲ್ಲೆ ಮಾಡುವ ಪ್ರವೃತ್ತಿ, ಕೆಲವೊಮ್ಮೆ ಮಾರಣಾಂತಿಕ
ಕರಡಿಗಳಲ್ಲಿ ಮಾನವರ ಮೇಲೆ ಹಲ್ಲೆ ಮಾಡುವ ಪ್ರವೃತ್ತಿ, ಕೆಲವೊಮ್ಮೆ ಮಾರಣಾಂತಿಕ
ಒಂದೇ ಸ್ಟ್ರಾಟಿಜಿ ಎಲ್ಲ ಪಂದ್ಯಗಳಿಗೆ ನಡೆಯಲ್ಲ, ಬದಲಾಯಿಸಬೇಕು: ಅಭಿಮಾನಿ
ಒಂದೇ ಸ್ಟ್ರಾಟಿಜಿ ಎಲ್ಲ ಪಂದ್ಯಗಳಿಗೆ ನಡೆಯಲ್ಲ, ಬದಲಾಯಿಸಬೇಕು: ಅಭಿಮಾನಿ
ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ ಆರ್ಭಟ
ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ ಆರ್ಭಟ
‘ನಾನು ಇಲ್ಲಿಯವನು, ಬೆಂಗಳೂರು ಹೃದಯದಲ್ಲಿದೆ’; ಕನ್ನಡಿಗ ಕೆಎಲ್ ರಾಹುಲ್
‘ನಾನು ಇಲ್ಲಿಯವನು, ಬೆಂಗಳೂರು ಹೃದಯದಲ್ಲಿದೆ’; ಕನ್ನಡಿಗ ಕೆಎಲ್ ರಾಹುಲ್
ಹುಬ್ಬಳ್ಳಿ: ಕುಸಿದು ಬಿದ್ದ ಪೊಲೀಸ್ ಠಾಣೆ ಮೇಲ್ಚಾವಣಿ ಕಾಂಕ್ರೀಟ್!
ಹುಬ್ಬಳ್ಳಿ: ಕುಸಿದು ಬಿದ್ದ ಪೊಲೀಸ್ ಠಾಣೆ ಮೇಲ್ಚಾವಣಿ ಕಾಂಕ್ರೀಟ್!
ಹಾಟ್​ ಏರ್​ ಬಲೂನ್ ರೈಡ್ ಮಾಡುವಾಗ ಹಗ್ಗ ತುಂಡಾಗಿ ವ್ಯಕ್ತಿ ಸಾವು
ಹಾಟ್​ ಏರ್​ ಬಲೂನ್ ರೈಡ್ ಮಾಡುವಾಗ ಹಗ್ಗ ತುಂಡಾಗಿ ವ್ಯಕ್ತಿ ಸಾವು
ಹೋಮಕ್ಕೆ ತುಪ್ಪ ಹಾಗೂ ಧಾನ್ಯಗಳ ಹವಿಸ್ಸು ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ಹೋಮಕ್ಕೆ ತುಪ್ಪ ಹಾಗೂ ಧಾನ್ಯಗಳ ಹವಿಸ್ಸು ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ಈ ರಾಶಿಯವರು ಇಂದು ಉತ್ತಮ ಭವಿಷ್ಯದ ಕನಸುಗಳನ್ನು ಕಟ್ಟಿಕೊಳ್ಳುವ ಸಮಯ
ಈ ರಾಶಿಯವರು ಇಂದು ಉತ್ತಮ ಭವಿಷ್ಯದ ಕನಸುಗಳನ್ನು ಕಟ್ಟಿಕೊಳ್ಳುವ ಸಮಯ