ಚಿಕ್ಕಬಳ್ಳಾಪುರ: ತೋಟದ ಮಾವಿನಕಾಯಿ ಕಿತ್ತಿದ್ದಕ್ಕೆ ಸುಟ್ಟು ಹೋಯ್ತು ಡಿಸ್ಕವರ್ ಬೈಕ್
ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿಯ ತೋಟದಲ್ಲಿ ಮಾವಿನಕಾಯಿ ಕಿತ್ತುಕೊಂಡಿದ್ದಕ್ಕೆ ಮಾಲೀಕ ಬೈಕ್ ಸವಾರನ ವಿರುದ್ಧ ವಿಕೃತವರ್ತನೆ ತೋರಿಸಿದ್ದಾನೆ. ಬೈಕ್ ಸವಾರ ಸತೀಶ್ ತೋಟದಲ್ಲಿ ಬಿಟ್ಟಿದ್ದ ಮಾವಿನಕಾಯಿ ಸವಿಯಲು 6 ಕಾಯಿಗಳನ್ನು ಕಿತ್ತಿದ್ದರು. ಇದನ್ನು ನೋಡಿದ ತೋಟದ ಮಾಲೀಕ ನಾಗರಾಜ್ ಮಾನವೀಯತೆ ಮರೆತು ವಿಕೃತ ವರ್ತನೆ ಮೆರೆದಿದ್ದಾರೆ.

ಚಿಕ್ಕಬಳ್ಳಾಪುರ: ಹಿಂದೊಂದು ಕಾಲವಿತ್ತು ಸ್ನೇಹಿತರೆಲ್ಲ ಒಟ್ಟುಗೂಡಿ ಬೇಲಿ ದಾಟಿ ತೋಟದಲ್ಲಿ ಬೆಳೆದ ಮಾವಿನಕಾಯಿಗಳನ್ನು ಕಿತ್ತು ಜಜ್ಜಿ ಉಪ್ಪು ಖಾರ ಹಾಕಿ ತಿಂದು ಬಾಲ್ಯ ಕಳೆದದ್ದು ನೆನಪು. ಆದರೆ ಇಂದು ಮಾವಿನಕಾಯಿ ತಿನ್ನಬೇಕು ಎಂದುಕೊಂಡದ್ದೇ ಮಹಾ ತಪ್ಪಾಗಿ ಹೋಗಿದೆ. ತೋಟದಲ್ಲಿದ್ದ 6 ಮಾವಿನಕಾಯಿ ಕಿತ್ತಿದ್ದಕ್ಕೆ ಆಕ್ರೋಶಗೊಂಡ ತೋಟದ ಮಾಲೀಕ ಮಾಡಿದ್ದೇನು ಗೊತ್ತಾ? ಮಾವಿನಕಾಯಿ ಕಿತ್ತಿದ್ದಕ್ಕೆ ಈ ವ್ಯಕ್ತಿ ತೆತ್ತ ಬೆಲೆ ಏನು?
ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿಯ ತೋಟದಲ್ಲಿ ಮಾವಿನಕಾಯಿ ಕಿತ್ತುಕೊಂಡಿದ್ದಕ್ಕೆ ಮಾಲೀಕ ಬೈಕ್ ಸವಾರನ ವಿರುದ್ಧ ವಿಕೃತವರ್ತನೆ ತೋರಿಸಿದ್ದಾನೆ. ಬೈಕ್ ಸವಾರ ಸತೀಶ್ ತೋಟದಲ್ಲಿ ಬಿಟ್ಟಿದ್ದ ಮಾವಿನಕಾಯಿ ಸವಿಯಲು 6 ಕಾಯಿಗಳನ್ನು ಕಿತ್ತಿದ್ದರು. ಇದನ್ನು ನೋಡಿದ ತೋಟದ ಮಾಲೀಕ ನಾಗರಾಜ್ ಮಾನವೀಯತೆ ಮರೆತು ವಿಕೃತ ವರ್ತನೆ ಮೆರೆದಿದ್ದಾರೆ. ಸತೀಶ್ ತಂದಿದ್ದ ಅಗಲಗುರ್ಕಿ ಗ್ರಾಮದ ಕೃಷ್ಣಪ್ಪ ಎನ್ನುವವರಿಗೆ ಸೇರಿದ ಡಿಸ್ಕವರ್ ಬೈಕ್ ಅನ್ನು ತೋಟದ ಮಾಲೀಕ ನಾಗರಾಜ್ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.
6 ಮಾವಿನಕಾಯಿ ಕಿತ್ತಿದ್ದಕ್ಕೆ ಸತೀಶ್ ಡಿಸ್ಕವರ್ ಬೈಕ್ ಅನ್ನು ಕಳೆದುಕೊಂಡಿದ್ದಾರೆ. ತೋಟದ ಮಾಲೀಕನ ವರ್ತನೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Mohanlal Birthday: ಮಲಯಾಳಂ ಸ್ಟಾರ್ ನಟ ಮೋಹನ್ ಲಾಲ್ ಜನ್ಮದಿನ; ‘ದೃಶ್ಯಂ 2’ ಗೆಟಪ್ನಲ್ಲಿ ಕಾಮನ್ ಡಿಪಿ ವೈರಲ್
Published On - 10:06 am, Fri, 21 May 21