ನಿನ್ನೆ (ಮಾರ್ಚ್ 6) ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಸಿಗ್ನಲ್ ಜಂಪ್ ಮಾಡಿ ದಂಪತಿಗಳು ಕಾರಿನಲ್ಲಿ ಬಂದರು. ಈ ವೇಳೆ ಸಿಗ್ನಲ್ ಜಂಪ್ ಮಾಡಿ ಬಂದಿರುವುದನ್ನು ಪೊಲೀಸರು ಪ್ರಶ್ನಿಸಿ, ಕಾರನ್ನು ಸೈಡಿಗೆ ಹಾಕಿಸಿ ದಂಡ ಹಾಕಿದ್ದರು. ನ್ಯಾಯಾಲಯದಲ್ಲಿ ದಂಡ ಪಾವತಿ ಮಾಡಲು ಚಾಲಕ ಒಪ್ಪಿಗೆ ನೀಡಿದರು. ಆದರೆ ಚಾಲಕನ ಪತ್ನಿ ಅಪೂರ್ವಿ ಡಿಯಾಜ್ ಎಂಬುವವರು ಸಂಚಾರಿ ಪೊಲೀಸ್ ಕಾಲರ್ ಪಟ್ಟಿ ಹಿಡಿದು ಎಳೆದಾಡಿ ರಂಪಾಟ ಮಾಡಿದ್ದರು.
ಕಿರಿಕ್ ಮಾಡಿ ಕಾಲರ್ ಹಿಡಿದು ಎಳೆದಾಡಿದ್ದಾಗಿ ಎಎಸ್ಐ ಬಸಯ್ಯ ಎಂಬುವವರು ಮಹಿಳೆ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮತ್ತು ಕರ್ತವ್ಯಕ್ಕೆ ಅಡ್ಡಿಯ ಅಡಿ ದೂರನ್ನು ದಾಖಲಿಸಿಕೊಂಡು ಮಹಿಳೆಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ
ಪತಿ- ಪತ್ನಿ ಜಗಳದಲ್ಲಿ ಪತಿರಾಯನ ಕಿವಿ ಕಟ್: ಬುದ್ಧಿವಾದ ಹೇಳಿದ ಪತಿಗೆ, ಪತ್ನಿ ಕುಟುಂಬದವರಿಂದ ಹಲ್ಲೆ
ಪೊಲೀಸರ ಮೇಲೆ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ ರೌಡಿ ಶೀಟರ್ ಮೇಲೆ ಫೈರಿಂಗ್, ಬಂಧನ