ಅಧಿಕಾರಿಗಳಿಂದ ಬಿಎಸ್ವೈ ಮಗನ ಹೆಸರು ದುರ್ಬಳಕೆ, ಸಿಬಿಐ ತನಿಖೆಗೆ ಗುತ್ತಿಗೆದಾರನಿಂದ ಮನವಿ
ಲೋಕೋಪಯೋಗಿ ಇಲಾಖೆ,ಕಾವೇರಿ ನಿಗಮದ ಅಧಿಕಾರಿಗಳು ಸಿಎಂ ಪುತ್ರ ವಿಜಯೇಂದ್ರರ ಹೆಸರನ್ನು ದುರುಪಯೋಗಪಡಿಸಿಕೊಂಡು, ಭೃಷ್ಟಾಚಾರದಲ್ಲಿ ನಿರತರಾಗಿದ್ದಾರೆ, ಈ ಕುರಿತು ಸಿಬಿಐ ತನಿಖೆ ನಡೆಸುವಂತೆ ಮಂಡ್ಯದ ಸಿವಿಲ್ ಗುತ್ತಿಗೆದಾರರೊಬ್ಬರು ಮುಖ್ಯಮಂತ್ರಿ ಮತ್ತು ಅವರ ಕಾರ್ಯದರ್ಶಿಗಳ ಕಚೇರಿಗೆ ಮನವಿ ಸಲ್ಲಿಸಿದ್ದಾರೆ. ಮನವಿಯ ಪ್ರತಿ ಟಿವಿ9 ಡಿಜಿಟಲ್ಗೆ ಲಭ್ಯವಾಗಿದೆ. ಮಂಡ್ಯದ ಪಿಡಬ್ಲ್ಯುಡಿ ಗುತ್ತಿಗೆದಾರ ಮತ್ತು ರೈತರೂ ಆಗಿರುವ ಬಸವೇಗೌಡ ಮನವಿ ಪತ್ರ ನೀಡಿದವರು. ಲೋಕೋಪಯೋಗಿ ಇಲಾಖೆ, ಕಾವೇರಿ ನಿಗಮದಲ್ಲಿ ಸಾವಿರಾರು ಕೋಟಿ ಬಿಲ್ ಪಾವತಿ ಬಾಕಿಯಿದ್ದು, ಗುತ್ತಿಗೆದಾರರಿಗೆ ಬಿಲ್ ಪಾವತಿಸುವಾಗ ಬಿಎಸ್ವೈ ಅವರ […]

ಲೋಕೋಪಯೋಗಿ ಇಲಾಖೆ,ಕಾವೇರಿ ನಿಗಮದ ಅಧಿಕಾರಿಗಳು ಸಿಎಂ ಪುತ್ರ ವಿಜಯೇಂದ್ರರ ಹೆಸರನ್ನು ದುರುಪಯೋಗಪಡಿಸಿಕೊಂಡು, ಭೃಷ್ಟಾಚಾರದಲ್ಲಿ ನಿರತರಾಗಿದ್ದಾರೆ, ಈ ಕುರಿತು ಸಿಬಿಐ ತನಿಖೆ ನಡೆಸುವಂತೆ ಮಂಡ್ಯದ ಸಿವಿಲ್ ಗುತ್ತಿಗೆದಾರರೊಬ್ಬರು ಮುಖ್ಯಮಂತ್ರಿ ಮತ್ತು ಅವರ ಕಾರ್ಯದರ್ಶಿಗಳ ಕಚೇರಿಗೆ ಮನವಿ ಸಲ್ಲಿಸಿದ್ದಾರೆ. ಮನವಿಯ ಪ್ರತಿ ಟಿವಿ9 ಡಿಜಿಟಲ್ಗೆ ಲಭ್ಯವಾಗಿದೆ.
ಮಂಡ್ಯದ ಪಿಡಬ್ಲ್ಯುಡಿ ಗುತ್ತಿಗೆದಾರ ಮತ್ತು ರೈತರೂ ಆಗಿರುವ ಬಸವೇಗೌಡ ಮನವಿ ಪತ್ರ ನೀಡಿದವರು. ಲೋಕೋಪಯೋಗಿ ಇಲಾಖೆ, ಕಾವೇರಿ ನಿಗಮದಲ್ಲಿ ಸಾವಿರಾರು ಕೋಟಿ ಬಿಲ್ ಪಾವತಿ ಬಾಕಿಯಿದ್ದು, ಗುತ್ತಿಗೆದಾರರಿಗೆ ಬಿಲ್ ಪಾವತಿಸುವಾಗ ಬಿಎಸ್ವೈ ಅವರ ಮಗ ವಿಜಯೇಂದ್ರ, ಮತ್ತು ಅವರ ಕುಟುಂಬದ ಆಪ್ತ ಉಮೇಶ್ ಅವರ ಹೆಸರನ್ನು ಅಧಿಕಾರಿಗಳು ಬಳಸಿಕೊಂಡು ಶೇ.8ರಷ್ಟು ಕಮೀಷನ್ ಪಡೆಯುತ್ತಿದ್ದಾರೆ. ನಿಯಮಗಳನ್ನು ಗಾಳಿಗೆ ತೂರಿ ಬಿಲ್ ಪಾವತಿಸುತ್ತಿದ್ದಾರೆ ಎಂದು ಅವರು ಮನವಿಯಲ್ಲಿ ಆರೋಪಿಸಿದ್ದಾರೆ.
ಮನವಿಯಲ್ಲಿ ಯಾರ ಹೆಸರಿದೆ?
ಲೋಕೋಪಯೋಗಿ ಇಲಾಖೆಯ ಸರ್ಕಾರಿ ಕಾರ್ಯದರ್ಶಿ, ಆಂತರಿಕ ಆರ್ಥಿಕ ಸಲಹೆಗಾರ, ಮುಖ್ಯ ಇಂಜಿನಿಯರ್, ಕಾರ್ಯನಿರ್ವಾಹಕ ಇಂಜಿನಿಯರ್ಗಳು, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಪ್ರಧಾನ ವ್ಯವಸ್ಥಾಪಕರು ಸೇರಿ ಸುಮಾರು 60 ಅಧಿಕಾರಿಗಳು ಭೃಷ್ಟಾಚಾರದಲ್ಲಿ ತೊಡಗಿದ್ದಾರೆಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಬಸವೇಗೌಡರು ಕಳೆದ 10 ವರ್ಷಗಳಿಂದ ಲೋಕಾಯುಕ್ತ ಮತ್ತು ಎ.ಸಿ.ಬಿಗೂ ಅಧಿಕಾರಿಗಳು ನಡೆಸುತ್ತಿರುವ ಭೃಷ್ಟಾಚಾರ ಕುರಿತು ಹಲವಾರು ದೂರು ನೀಡುತ್ತಿದ್ದಾರೆ. ಆದರೆ, ಅದರಿಂದ ಯಾವ ಪ್ರಯೋಜನವೂ ಆಗಿಲ್ಲವೆಂದು ಅವರು ಹೇಳುತ್ತಾರೆ. ಜನರ ತೆರಿಗೆ ಹಣದಲ್ಲಿ ಸಂಬಳ ಪಡೆಯುವ ತನಿಖಾ ಸಂಸ್ಥೆಗಳು ನ್ಯಾಯಯುವಾಗಿ ಕಾರ್ಯನಿರ್ವಹಿಸುತ್ತಿಲ್ಲವಾದ್ದರಿಂದ ಅವುಗಳನ್ನು ರದ್ದು ಮಾಡಬೇಕೆಂದು ಅವರು ಟಿವಿ9 ಡಿಜಿಟಲ್ ಮೂಲಕ ಮನವಿ ಮಾಡಿದ್ದಾರೆ.
Published On - 7:58 pm, Sat, 21 November 20