AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಯಚೂರು: ಜನ ಮರುಳೋ ಜಾತ್ರೆ ಮರುಳೋ, ಫ್ರೀ ಸೈಟ್​ ಕೊಡ್ತಾರೆ ಅಂತ ಬೆಟ್ಟಕ್ಕೆ ಬೇಲಿ ಹಾಕಿದ ಜನ

ಉಚಿತವಾಗಿ ಸೈಟ್ ಕೊಡುತ್ತಾರೆ ಎಂಬ ಗುಮಾನಿಗೆ ಜನರು ರಾಯಚೂರು ನಗರದ ವಾರ್ಡ್-28 ರ ಆಶ್ರಯ ಕಾಲೋನಿ ಬಳಿ ಇರುವ ಬೆಟ್ಟದಲ್ಲಿ ಕೋಲು ನೆಟ್ಟು, ಬಟ್ಟೆ ಮತ್ತು ರಿಬ್ಬನ್​ಗಳಿಂದ ಬೇಲಿ ಹಾಕಿದ್ದಾರೆ.

ಭೀಮೇಶ್​​ ಪೂಜಾರ್
| Updated By: ವಿವೇಕ ಬಿರಾದಾರ|

Updated on:Oct 19, 2023 | 2:56 PM

Share

ರಾಯಚೂರು ಅ.19: ಜನ ಮರುಳೋ, ಜಾತ್ರೆ ಮರುಳೋ ಎಂಬ ಮಾತಿನಿಂತೆ ಜನರು ಫ್ರೀ ಸೈಟ್​ (Site) ಕೊಡುತ್ತಾರೆ ಅಂತ ಬೆಟ್ಟಕ್ಕೆ ಬೇಲಿ ಹಾಕಿದ್ದಾರೆ. ರಾಯಚೂರಿನಲ್ಲಿ (Raichuru) ಫ್ರೀ ಸೈಟ್​ಗಾಗಿ ಜನರು ಮುಗಿಬಿದ್ದಿದ್ದಾರೆ. ರಾಯಚೂರು ನಗರದ ವಾರ್ಡ್-28 ರ ಆಶ್ರಯ ಕಾಲೋನಿ ಬಳಿ ಇರುವ ಬೆಟ್ಟದಲ್ಲಿ ಜನರು ಕೋಲು ನೆಟ್ಟು, ರಿಬ್ಬನ್ ಮತ್ತು ಬಟ್ಟೆ ಕಟ್ಟಿ, ಇದು ತಮ್ಮ ಸೈಟ್ ಎಂದು ಗುರುತು ಮಾಡಿದ್ದಾರೆ. ಜನರು ಬೆಟ್ಟ ಹಾಗೂ ಬೆಟ್ಟದ ಸುತ್ತಲಿನ ಖಾಲಿ ಜಾಗವನ್ನು ಗುರುತು ಮಾಡುತ್ತಿದ್ದಾರೆ.

ಉಚಿತವಾಗಿ ಸೈಟ್ ಕೊಡುತ್ತಾರೆ ಎಂಬ ಗುಮಾನಿಗೆ ಕೂಲಿ-ನಾಲಿ ಬಿಟ್ಟು ಸೈಟ್ ಹುಡುಕಾಟ ನಡೆಸಿದ್ದಾರೆ. ನಗರಸಭೆ ಸದಸ್ಯ, ಶಾಸಕರು ಸೈಟ್ ಕೊಡಿಸುತ್ತಾರೆ ಅಂತ ಕೆಲವರು ಹೇಳಿದರೇ, ಇನ್ನು ಹಲವರು ಸೈಟ್ ಯಾರು ಕೊಡಿಸುತ್ತಾರೆ ಎಂಬುವುದೇ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ. ಈ ಮಧ್ಯೆ ಓಬ್ಬರನ್ನ ನೋಡಿ, ಮತ್ತೊಬ್ಬರಂತೆ ಇಡೀ ಬೆಟ್ಟವನ್ನು ಕಬ್ಜಾ ಮಾಡುತ್ತಿದ್ದಾರೆ. ಮಕ್ಕಳು, ವೃದ್ಧರು ಸೇರಿದಂತೆ ಇಡೀ ಕುಟುಂಬವೇ ಬೆಟ್ಟದಲ್ಲಿ ಠಿಕಾಣಿ ಹೂಡಿದ್ದು, ಊಟ, ನೀರು, ಬಟ್ಟೆ ಸಮೇತ ಬೆಟ್ಟದತ್ತ ಬರುತ್ತಿದ್ದಾರೆ. ಫ್ರಿ ಸೈಟ್​ಗಾಗಿ ಜನರು ಬೆಟ್ಟದಲ್ಲಿ ಕಾದು ಕುಳಿತಿದ್ದಾರೆ.

ಇದನ್ನೂ ಓದಿ: ರಾಯಚೂರು: 8 ವರ್ಷಗಳಿಂದ ಗೃಹಬಂಧನದಲ್ಲಿರುವ ಮಾನಸಿಕ ಅಸ್ವಸ್ಥನಿಗೆ ಮುಕ್ತಿ; ಆಸ್ಪತ್ರೆಗೆ ದಾಖಲು

ಟಿವಿ9 ವರದಿ ಬೆನ್ನಲ್ಲೇ ರಾಯಚೂರು ನಗರಸಭೆ ಅಧಿಕಾರಿಗಳು ಅಲರ್ಟ್ ಆಗಿದ್ದು, ಅತೀಕ್ರಮಣ ಮಾಡಿದ ಪ್ರದೇಶವನ್ನು ನಗರಸಭೆ ಅಧಿಕಾರಿಗಳ ನೇತೃತ್ವದ ತಂಡ ತೆರವುಗೊಳಿಸಿದೆ. ಈ ಬಗ್ಗೆ ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ ಮಾತನಾಡಿ ಸರ್ವೆ ನಂಬರ್ 559 ರ 10 ಎಕರೆ‌ 38 ಗುಂಟೆ ಜಾಗವನ್ನು ಅತೀಕ್ರಮಣ ಮಾಡಿದ್ದನ್ನು ತೆರವುಗೊಳಿಸಲಾಗಿದೆ. ಆರ್​ಓ ನೇತೃತ್ವದ ಐದು ಜನರ ತಂಡ ರಚಿಸಿ ತನಿಖೆಗೆ ಆದೇಶಿಸಿದ್ದೇನೆ. ಆ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತೆ ಎಂದರು.

ಜನ ತಾವಾಗಿ ಬಂದಿದ್ದಾರೊ, ಇಲ್ಲ ಯಾರಾದರೂ ಕಳುಹಿಸಿದ್ದಾರೆ ಅನ್ನೋದರ ಮಾಹಿತಿ ಪಡೆಯುತ್ತೇವೆ. ವಸತಿ ರಹಿತರಿಗೆ ಉಚಿತವಾಗಿ ಸೈಟ್ ಕೊಡಲು ಅವಕಾಶ ಇದೆ. ಅದಕ್ಕೆ ಅರ್ಜಿ ಸಲ್ಲಿಕೆ ಮಾಡಬೇಕು. ಬಳಿಕ ಸಮೀಕ್ಷೆ ನಡೆಸಿ ತಾಲ್ಲೂಕು ಮಟ್ಟದ ಸಮೀತಿ ಆಗತ್ತೆ. ನಂತರ ಜಿಲಾ ಮಟ್ಟಕ್ಕೆ ಹೋಗತ್ತೆ ಆ ಬಳಿಕ ಅನುಮೋದನೆ ಆಗತ್ತೆ. ಕೊನೆಗೆ ಅಧಿಕೃತ ಹಕ್ಕು ಪತ್ರ ಬಂದ ಬಳಿಕ ಅವರು ಮಾಲೀಕರಾಗುತ್ತಾರೆ. ವಸತಿ ರಹಿತರು ನಗರ ಸಭೆಯಲ್ಲಿ ಅರ್ಜಿ ಸಲ್ಲಿಸಿ ಎಂದು ಸಲಹೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:59 am, Thu, 19 October 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ