ರಾಯಚೂರು: ರಾತ್ರಿ ಮಲಗಿದ್ದಲ್ಲೇ ಕೊನೆಯುಸಿರೆಳೆದ ಪೊಲೀಸ್ ಕಾನ್ಸ್​ಟೇಬಲ್, ಅಯ್ಯೋ ವಿಧಿಯೇ ಇದೆಂಥಾ ಸಾವು…!

| Updated By: ರಮೇಶ್ ಬಿ. ಜವಳಗೇರಾ

Updated on: Aug 11, 2023 | 10:00 AM

ಉಂಡು ಮಲಗಿದವರು ಎದ್ದೇಳುತ್ತಾರೆ ಎನ್ನುವ ಭರವಸೆ ಇಲ್ಲ. ಕೆಲಸಕ್ಕೆ ಹೋದವರು ಮನೆಗೆ ವಾಪಸ್ ಆಗುತ್ತಾರೆ ಎನ್ನುವ ನಂಬಿಕೆಯೇ ಇಲ್ಲ..ಆರೋಗ್ಯವಂತರೆ ದಿಢೀರ್‌ ಸಾವಿನ ಮನೆ ಸೇರುತ್ತಿದ್ದಾರೆ ಎನ್ನುವದಕ್ಕೆ ರಾಯಚೂರು ಜಿಲ್ಲೆಯಲ್ಲಿ ಕಾನ್ಸ್​ಟೇಬಲ್​ ಸಾವು ಒಂದು ಉದಹರಣೆ.

ರಾಯಚೂರು: ರಾತ್ರಿ ಮಲಗಿದ್ದಲ್ಲೇ ಕೊನೆಯುಸಿರೆಳೆದ ಪೊಲೀಸ್ ಕಾನ್ಸ್​ಟೇಬಲ್, ಅಯ್ಯೋ ವಿಧಿಯೇ ಇದೆಂಥಾ ಸಾವು...!
ಮೃತ ಬಸನಗೌಡ
Follow us on

ರಾಯಚೂರು, (ಆಗಸ್ಟ್ 11): ಚಿಕ್ಕ ಮಕ್ಕಳು ಹಾಗೂ ವಯಸ್ಕರರೇ ಏಕೆ ಹೆಚ್ಚಾಗಿ ಹೃದಯಘಾತದಿಂದ(heart attack)  ಸಾವನ್ನಪ್ಪುತ್ತಿದ್ದಾರೆ ಎನ್ನುವ ಪ್ರಶ್ನೆ, ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ಪುನೀತ್ ರಾಜ್​ ಕುಮಾರ್ ಸಾವಿನ ಬಳಿಕ ಇದೀಗ ಸ್ಪಂದನಾ ವಿಜಯ ರಾಘವೇಂದ್ರ ಅವರು ಹೃದಯಾಘಾತದಿಂದ ಮೃತಪಟ್ಟಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿತ ವಿಷಯವಾಗಿದೆ. ಇದರ ಬೆನ್ನಲ್ಲೇ ಇದೀಗ ಆರೋಗ್ಯದಿಂದ್ದ ಪೊಲೀಸ್​ ಕಾನ್ಸ್​ಟೇಬಲ್ (Police constable)​ ಒಬ್ಬರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ರಾಯಚೂರು (Raichur) ಜಿಲ್ಲೆಯ ಮಸ್ಕಿ ಪೊಲೀಸ್ ಠಾಣೆ ಕಾನ್ಸ್​ಟೇಬಲ್​ ಬಸನಗೌಡ(34) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಕೊರೊನಾ ಬಳಿಕ ಹೆಚ್ಚಾಗ್ತಿವೆ ‘ಹೃದಯಾಘಾತ’ ಕೇಸ್,ಚಿಕ್ಕವರನ್ನೇ ಕಾಡುತ್ತಿರುವುದ್ಯಾಕೆ? ಇಲ್ಲಿವೆ ಕಾರಣಗಳು

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆಗೋಲಿ ಗ್ರಾಮದ ನಿವಾಸಿಯಾಗಿದ್ದ ಬಸನಗೌಡ, ಯಾವುದೇ ಬಿಪಿ,ಶುಗರ್ ಹಾಗೂ ಹೃದಯ ಸಂಬಂಧಿ ಖಾಯಿಲೆ ಇಲ್ಲದೇ ಆರೋಗ್ಯವಾಗಿದ್ದರು. ಆದರೆ, ನಿನ್ನೆ (ಆಗಸ್ಟ್ 10) ರಾತ್ರಿ ಮಲಗಿದ್ದಲ್ಲೇ ಬಸನಗೌಡಗೆ ಹೃದಯಾಘಾತವಾಗಿದೆ. ಇನ್ನು ಸಿಬ್ಬಂದಿ ಸಾವಿಗೆ ಸಂತಾಪ ರಾಯಚೂರು ಜಿಲ್ಲಾ ಪೊಲೀಸ್ ಇಲಾಖೆ ಸೂಚಿಸಿದೆ.

ರಾಯಚೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ