AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಎಸ್​ಐಟಿ ವಿಚಾರಣೆ ವೇಳೆ ಕಿಂಗ್​ಪಿನ್ ಶ್ರವಣ್ ಮೌನ

Ramesh Jarkiholi CD Case: ಕ್ಯಾಮರಾ ಎಲ್ಲಿದೆ, ಒರಿಜಿನಲ್ ವಿಡಿಯೋ ಎಲ್ಲಿ ಎಂದು ಪ್ರಶ್ನೆ ಕೇಳಿದಾಗ ಎಸ್​ಐಟಿ ಅಧಿಕಾರಿಗಳ ಪ್ರಶ್ನೆಗೆ ಉತ್ತರ ನೀಡದ ಶ್ರವಣ್ ಮೌನಕ್ಕೆ ಶರಣಾಗಿದ್ದಾರೆ.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಎಸ್​ಐಟಿ ವಿಚಾರಣೆ ವೇಳೆ ಕಿಂಗ್​ಪಿನ್ ಶ್ರವಣ್ ಮೌನ
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ
TV9 Web
| Updated By: ganapathi bhat|

Updated on: Jun 17, 2021 | 9:31 PM

Share

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ಮುಂದುವರಿದಿದೆ. ಇಂದು (ಜೂನ್ 17) ನಡೆದ ಎಸ್​ಐಟಿ ವಿಚಾರಣೆಯ ವೇಳೆ ಕಿಂಗ್​ಪಿನ್ ಶ್ರವಣ್​ ಮೌನವಹಿಸಿದ್ದಾರೆ. ಶ್ರವಣ್ ಮುಂದೆ ಇಂದು ದಾಖಲೆಗಳನ್ನು ಇಟ್ಟ ಎಸ್​ಐಟಿ ಪ್ರಶ್ನೆಗಳನ್ನು ಕೇಳಿದ್ದು, ಅದಕ್ಕೆ ಶ್ರವಣ್ ಮೌನವಾಗಿದ್ದು ಉತ್ತರ ನೀಡದೆ ಉಳಿದಿದ್ದಾರೆ.

ಕ್ಯಾಮರಾ ಖರೀದಿಗೆ ದಾಖಲೆ ಮತ್ತು ಸಿಸಿಟಿವಿ ದೃಶ್ಯದ ಸಾಕ್ಷಿ. ಸಹೋದರ ಚೇತನ್ ಅಕೌಂಟ್​ಗೆ ₹20 ಲಕ್ಷ ವರ್ಗಾವಣೆ ಈ ಬಗ್ಗೆ ಎಸ್​ಐಟಿ ಕೇಳಿದ ಪ್ರಶ್ನೆಗೆ ಅದು ಸಾಲ ಎಂದು ಶ್ರವಣ್ ಹೇಳಿರುವುದಾಗಿ ತಿಳಿದುಬಂದಿದೆ. ಸಾಲ ಪಡೆದಿದ್ದಲ್ಲ ನಗದು ನೀಡಿ ಅಕೌಂಟ್​ಗೆ ಹಣ ಹಾಕಿಸಿದ್ದು ಎಂದು ಹೇಳಿದ್ದಾರೆ. ಹಣ ಹಾಕಿದ ಸಂಬಂಧ ಎಸ್​ಐಟಿಯಿಂದ ನಾಲ್ವರ ಹೇಳಿಕೆ ದಾಖಲು ಮಾಡಲಾಗಿದೆ.

ಇಲ್ಲ ಹಣ ಹಾಕಿದವರೇ ಸುಳ್ಳು ಹೇಳಿದ್ದಾರೆ ಎಂದು ಶ್ರವಣ್ ಇಂದು ಪ್ರತಿಕ್ರಿಯಿಸಿದ್ದಾರೆ. ಸಿಡಿ ಯುವತಿಯ ಅಕೌಂಟ್​ಗೆ ಹಣ ವರ್ಗಾವಣೆ ಬಗ್ಗೆ ಮಾಹಿತಿ ನೀಡಿದ್ದಾರೆ. ಹಣ ವರ್ಗಾವಣೆ ಮಾಡಿದ್ದಕ್ಕೆ SITಯಿಂದ ದಾಖಲೆ ಸಂಗ್ರಹ ಮಾಡಲಾಗಿದೆ. ಯುವತಿ ಜೊತೆ ಸಿಡಿ ರೆಕಾರ್ಡ್ ಮಾಡಿರುವ ವೇಳೆ ಸಂಪರ್ಕದಲ್ಲಿ ಇರುವುದಕ್ಕೆ ಎಸ್​ಐಟಿ ದಾಖಲೆ ನೀಡಿ ಪ್ರಶ್ನಿಸಿದೆ. ಅದಕ್ಕೂ ಎಸ್​ಐಟಿ ಮುಂದೆ ಶ್ರವಣ್ ಮೌನವಾಗಿಯೇ ಇದ್ದರು ಎಂದು ತಿಳಿದುಬಂದಿದೆ.

ಕ್ಯಾಮರಾ ಎಲ್ಲಿದೆ, ಒರಿಜಿನಲ್ ವಿಡಿಯೋ ಎಲ್ಲಿ ಎಂದು ಪ್ರಶ್ನೆ ಕೇಳಿದಾಗ ಎಸ್​ಐಟಿ ಅಧಿಕಾರಿಗಳ ಪ್ರಶ್ನೆಗೆ ಉತ್ತರ ನೀಡದ ಶ್ರವಣ್ ಮೌನಕ್ಕೆ ಶರಣಾಗಿದ್ದಾರೆ.

ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಸಿಡಿ ಬಹಿರಂಗ ಕೇಸ್​ಗೆ ಸಂಬಂಧಿಸಿ, ಎಸ್​ಐಟಿಯಿಂದ ಹೈಕೋರ್ಟ್​ಗೆ ತನಿಖಾ ಪಾಲನಾ ವರದಿ ಸಲ್ಲಿಕೆ ಮಾಡಲಾಗಿದೆ. ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಲಾಗಿದೆ. ಕಳೆದ ಬಾರಿ ಸಹಿ ಹಾಕದೆ ವರದಿ ನೀಡಿದ್ದ ಎಸ್​ಐಟಿ ಅಧಿಕಾರಿಗಳು, ಎಸ್​ಐಟಿ ಮುಖ್ಯಸ್ಥರು ಮೆಡಿಕಲ್​​ ರಜೆಯಲ್ಲಿರುವ ಕಾರಣ ನೀಡಿದ್ದರು. ಆದರೆ, ಈ ಬಾರಿ ಡಿಐಜಿ ಸಂದೀಪ್ ಪಾಟೀಲ್​​ ಸಹಿ ಹಾಕಿಸಿ ವರದಿ ನೀಡಲಾಗಿದೆ.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಕಾಮನ್ ಫ್ರೆಂಡ್ ಮೂಲಕ ಯುವತಿ ಪರಿಚಯ; ವಿಚಾರಣೆ ವೇಳೆ ನರೇಶ್ ಮಾಹಿತಿ

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಸತತ ಐದು ಗಂಟೆಗಳ ಕಾಲ ಆರೋಪಿ ನರೇಶ್ ವಿಚಾರಣೆ ನಡೆಸಿದ ಎಸ್​ಐಟಿ

‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ