AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾರಕಿಹೊಳಿಯೇ ಯುವತಿಗೆ ವಿಡಿಯೋ ಮಾಡುವಂತೆ ಹೇಳಿದ್ದರಂತೆ, ಯುವತಿಗೆ ಸ್ಟಿಂಗ್ ಕ್ಯಾಮರಾ ಕೊಡಿಸಿದ್ದು ನಾವು ಎಂದ ಶ್ರವಣ್

Ramesh jarkiholi: ಸದ್ಯ ವೈರಲ್ ಆಗಿರುವ ವಿಡಿಯೋದಲ್ಲೂ ಜಾರಕಿಹೊಳಿಯೇ ಯುವತಿಗೆ ವಿಡಿಯೋ ಮಾಡುವಂತೆ ಹೇಳ್ತಾರೆ ಕೇಳಿ ಎಂದು ತನಿಖಾಧಿಕಾರಿಗಳಿಗೆ ಶ್ರವಣ್ ಸೂಚಿಸಿದ್ದಾನಂತೆ. ಆದ್ರೆ ಆ ವಿಡಿಯೋ ಜಾರಕಿಹೊಳಿ ಮೊಬೈಲ್ ನಲ್ಲಿ ಇದೆ.‌ ಬೇಕಿದ್ರೆ ಚೆಕ್ ಮಾಡಿ ಎಂದು ಶ್ರವಣ್ ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾನಂತೆ. ಯುವತಿಗೆ ಬಲವಂತ ಮಾಡಿಸಿ ಮತ್ತು ಬೆದರಿಸಿ ರಮೇಶ್ ಜಾರಕಿಹೊಳಿ ಲೈಂಗಿಕ ಸಂಪರ್ಕ ಬೆಳೆಸಿದ್ದಾರೆ ಎಂದೂ ಶ್ರವಣ್ ಹೇಳಿರುವುದಾಗಿ ತಿಳಿದುಬಂದಿದೆ.

ಜಾರಕಿಹೊಳಿಯೇ ಯುವತಿಗೆ ವಿಡಿಯೋ ಮಾಡುವಂತೆ ಹೇಳಿದ್ದರಂತೆ, ಯುವತಿಗೆ ಸ್ಟಿಂಗ್ ಕ್ಯಾಮರಾ ಕೊಡಿಸಿದ್ದು ನಾವು ಎಂದ ಶ್ರವಣ್
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jun 15, 2021 | 10:19 AM

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಸದಾಶಿವನಗರ ಪೊಲೀಸ್​ ಠಾಣೆಯಲ್ಲಿ ದಾಖಲಿಸಿರುವ ಬ್ಲ್ಯಾಕ್​ಮೇಲ್​ ಕೇಸ್ ವಿಚಾರಣೆ ನಡೆಸುತ್ತಿರುವ ಎಸ್ಐಟಿ ತನಿಖಾಧಿಕಾರಿ ಎಸಿಪಿ ಧರ್ಮೇಂದ್ರ ಅವರೆದುರು ಇಬ್ಬರು ಆರೋಪಿಗಳಾದ ಶ್ರವಣ್ ಮತ್ತು ನರೇಶ್ ಗೌಡ ಅನೇಕ ಕುತೂಹಲಕಾರಿ ಅಂಶಗಳನ್ನು ಬಯಲು ಮಾಡಿದ್ದಾರೆ. ಆರಂಭದಲ್ಲಿ ಒಟ್ಟಿಗೇ ಇಬ್ಬರನ್ನೂ ಮುಖಾಮುಖಿಯಾದ ಎಸ್ಐಟಿ ಅಧಿಕಾರಿಗಳು ಬಳಿಕ ಇಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಾ, ಇಬ್ಬರಿಂದಲೂ ಅನೇಕ ಮಹತ್ವದ ಅಂಶಗಳು ಹೊರಬರುವಂತೆ ಮಾಡಿದ್ದಾರೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಬ್ಲ್ಯಾಕ್​ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಆರೋಪದಲ್ಲಿ ಶ್ರವಣ್ ಮತ್ತು ನರೇಶ್​ ಇಂದೂ ಸಹ 11 ಗಂಟೆಗೆ ತನಿಖಾಧಿಕಾರಿ ಮುಂದೆ ಹಾಜರಾಗಲಿದ್ದಾರೆ. ಆಡುಗೋಡಿಯ ಟೆಕ್ನಿಕಲ್ ಸೆಲ್ ನಲ್ಲಿ ಶ್ರವಣ್ ವಿಚಾರಣೆ ನಡೆಯಲಿದೆ. ಇದೇ ಪ್ರಕರಣದಲ್ಲಿ ನಿನ್ನೆ ಶ್ರವಣ್ ಮತ್ತು ನರೇಶ್ ವಿಚಾರಣೆ ಸಹ ನಡೆದಿದೆ. ನಿನ್ನೆ ನಡೆದ ವಿಚಾರಣೆಯಲ್ಲಿ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸ್ಫೋಟಕ ಸತ್ಯಗಳು ಬಯಲಾಗಿವೆ ಎಂದು ತಿಳಿದುಬಂದಿದೆ. ಆರೋಪಿಗಳ ವಿಚಾರಣೆ ವೇಳೆ ಬಾಯಿ ಬಿಟ್ಟ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ.

ವಿಚಾರಣೆ ವೇಳೆ ಯುವತಿ ಮತ್ತು ಜಾರಕಿಹೊಳಿ ಬಗೆಗಿನ ಸ್ಪೋಟಕ ಮಾಹಿತಿ ಬೆಳಕಿಗೆ ಬಂದಿದ್ದು, ಯುವತಿಗೆ ಸ್ಟಿಂಗ್ ಕ್ಯಾಮರಾ ಕೊಡಿಸಿದ್ದು ನಾವು. ವಿಡಿಯೋ ನಂತರ ಯುವತಿ ನನಗೆ ಕಾಲ್ ಮಾಡಿದ್ದು ನಿಜ ಎಂದು ಶ್ರವಣ್ ಒಪ್ಪಿಕೊಂಡಿರುವಾಗಿ ತಿಳಿದುಬಂದಿದೆ. ಇಂಟರೆಸ್ಟಿಂಗ್ ಅಂದ್ರೆ ಸ್ಟಿಂಗ್ ಕ್ಯಾಮರಾದಲ್ಲಿ ವಿಡಿಯೋ ಆಗುವ ಮೊದಲೇ ರಾಸಲೀಲೆ ವಿಡಿಯೋ ಆಗಿತ್ತಂತೆ.

ಯುವತಿಯ ಜೊತೆಗಿರೋ ವಿಡಿಯೋ ಬಿಟ್ಟು, ರಮೇಶ್ ಜಾರಕಿಹೊಳಿ ಮೊಬೈಲ್​ನಲ್ಲಿ ಇನ್ನೂ ಸಾಕಷ್ಟು ಯುವತಿಯರ ವಿಡಿಯೋ ಇದೆಯಂತೆ.. ಸದ್ಯ ವೈರಲ್ ಆಗಿರುವ ವಿಡಿಯೋದಲ್ಲೂ ಜಾರಕಿಹೊಳಿಯೇ ಯುವತಿಗೆ ವಿಡಿಯೋ ಮಾಡುವಂತೆ ಹೇಳ್ತಾರೆ ಕೇಳಿ ಎಂದು ತನಿಖಾಧಿಕಾರಿಗಳಿಗೆ ಶ್ರವಣ್ ಸೂಚಿಸಿದ್ದಾನಂತೆ. ಆದ್ರೆ ಆ ವಿಡಿಯೋ ಜಾರಕಿಹೊಳಿ ಮೊಬೈಲ್ ನಲ್ಲಿ ಇದೆ.‌ ಬೇಕಿದ್ರೆ ಚೆಕ್ ಮಾಡಿ ಎಂದು ಶ್ರವಣ್ ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾನಂತೆ. ಯುವತಿಗೆ ಬಲವಂತ ಮಾಡಿಸಿ ಮತ್ತು ಬೆದರಿಸಿ ರಮೇಶ್ ಜಾರಕಿಹೊಳಿ ಲೈಂಗಿಕ ಸಂಪರ್ಕ ಬೆಳೆಸಿದ್ದಾರೆ ಎಂದೂ ಶ್ರವಣ್ ಹೇಳಿರುವುದಾಗಿ ತಿಳಿದುಬಂದಿದೆ.

ಈಗಾಗಲೇ ವೈರಲ್ ಆಗಿರುವ ವಿಡಿಯೋ ಬಿಟ್ಟು, ಇನ್ನೂ ಸಾಕಷ್ಟು ಯುವತಿಯರ‌ ಜೊತೆಗಿರೋ ವಿಡಿಯೋ ರಮೇಶ್ ಜಾರಕಿಹೊಳಿ ಮೊಬೈಲ್ ನಲ್ಲಿ ಇದೆಯಂತೆ. ಈ ವಿಚಾರವನ್ನು ಯುವತಿಯೇ ನಮಗೆ ಹೇಳಿದ್ದಳು. ಹಾಗಾಗಿಯೇ ನಾವು ಸ್ಟಿಂಗ್ ವಿಡಿಯೋ ಮಾಡಲು ಹೇಳಿದ್ವಿ ಎಂದು ಶ್ರವಣ್ ಎಸ್​ಐಟಿ ಅಧಿಕಾರಿಗಳ ಎದುರು ಹೇಳಿಕೆ ಕೊಟ್ಟಿದ್ದಾನೆ.

ಆದ್ರೆ ವಿಡಿಯೋ ಆದ್ಮೇಲೆ ನಾವು ವಿಡಿಯೋ ನೋಡಿಲ್ಲ. ಇದರ ರಾ ಫುಟೇಜ್ ಎಲ್ಲವೂ ಯುವತಿ ಮನೆಯಲ್ಲೇ ಇತ್ತು. ಯುವತಿ ಮನೆಗೂ ರಮೇಶ್ ಜಾರಕಿಹೊಳಿ ಕಡೆಯವರು ಬಂದು ಹೋಗಿದ್ದಾರೆ. ವಿಡಿಯೋ ನಂತರ ಯುವತಿಗೆ ಅವರ ಮನೆಯವರಿಗೆ ತಿಳಿಸುವುದಾಗಿ ಹೇಳಿದ್ವಿ. ಪೊಲೀಸ್ ಸಂಪರ್ಕ ಮಾಡಿ ದೂರು ನೀಡಿ ಎಂದೂ ತಿಳಿಸಿದ್ದಿವಿ. ಆದ್ರೆ ಯುವತಿ ಹೆದರಿ, ದೂರು ನೀಡಲು ಹಿಂದೇಟು ಹಾಕಿದ್ರು. ಸಿ.ಡಿ. ವೈರಲ್ ಆದ ದಿನ‌ಕೂಡ ಯುವತಿಗೆ ಜಾರಕಿಹೊಳಿ ಕಡೆಯವರು ಕರೆ ಮಾಡಿ ಧಮ್ಕಿ ಹಾಕಿದ್ದರು. ನಿನ್ನ ಹಾಗೂ ನಿನಗೆ ಸಫೋರ್ಟ್ ಮಾಡಿದವರನ್ನು ಕೊಲೆ ಮಾಡುವ ಬೆದರಿಕೆ ಹಾಕಿದ್ದರು. ಜೀವ ಭಯದಿಂದ ನಾವೂ ಊರು ಬಿಟ್ಟಿದ್ವಿ.. ಹೆಚ್ಚಾಗಿ ರೈಲು ಬಸ್ಸಿನ ಪ್ರಯಾಣ ಮಾಡಿದ್ದಿವಿ. ಜಾರಕಿಹೊಳಿ ಆಪ್ತ ನಾಗರಾಜ್ ಅವ್ರ ಬಿಎಸ್ಎನ್ಎಲ್ ನಂಬರ್ ನಿಂದ ಯುವತಿಗೆ ಕರೆ ಬಂದಿದೆ. ಇದೇ ನಾಗರಾಜ್ ಮೊದಲು ಜಾರಕಿಹೊಳಿ ಅಪಾರ್ಟ್ಮೆಂಟ್ ಗೆ ಕರೆದುಕೊಂಡು ಹೋಗಿದ್ರಂತೆ ಎಂದು ಶ್ರವಣ್ ಎಸ್​ಐಟಿ ಎದುರು ಹೇಳಿಕೆ ನೀಡಿದ್ದಾನೆ.

ನರೇಶ್, ಶ್ರವಣ್ ಪರ ಸಂತ್ರಸ್ತ ಯುವತಿ ಬ್ಯಾಟಿಂಗ್: ದೂರು ಕಾನೂನುಬಾಹಿರ ಎಂದು ವಾದ, ರಮೇಶ್ ಜಾರಕಿಹೊಳಿಗೆ ನೋಟಿಸ್

(Ramesh jarkiholi cd video details emerge during naresh and shravan interrogation at sit cell in adugodi by sit)

Published On - 10:17 am, Tue, 15 June 21

‘ಕಾಂತಾರ: ಚಾಪ್ಟರ್ 1’ ಶೂಟಿಂಗ್ ಅವಘಡ, ನಿಜಕ್ಕೂ ನಡೆದಿದ್ದೇನು?
‘ಕಾಂತಾರ: ಚಾಪ್ಟರ್ 1’ ಶೂಟಿಂಗ್ ಅವಘಡ, ನಿಜಕ್ಕೂ ನಡೆದಿದ್ದೇನು?
ಗ್ಯಾರಂಟಿ ಯೋಜನೆಗಳಿಂದ ಮಠಕ್ಕೆ ಪೆಟ್ಟು, ಖರ್ಚಿಗೆ ಹೊರೆ: ದಿಂಗಾಲೇಶ್ವರ ಶ್ರೀ
ಗ್ಯಾರಂಟಿ ಯೋಜನೆಗಳಿಂದ ಮಠಕ್ಕೆ ಪೆಟ್ಟು, ಖರ್ಚಿಗೆ ಹೊರೆ: ದಿಂಗಾಲೇಶ್ವರ ಶ್ರೀ
ಏಕಕಾಲದಲ್ಲಿ ಕುಸಿದು ಬಿದ್ದ 6 ಮನೆಗಳು, ಹಲವರು ಸಿಲುಕಿರುವ ಶಂಕೆ
ಏಕಕಾಲದಲ್ಲಿ ಕುಸಿದು ಬಿದ್ದ 6 ಮನೆಗಳು, ಹಲವರು ಸಿಲುಕಿರುವ ಶಂಕೆ
ನದಿಯಲ್ಲಿ ಕೊಚ್ಚಿ ಹೋದ ಸೇತುವೆ:ಬೆಳಗಾವಿ-ಗೋವಾ ರಸ್ತೆ ಸಂಚಾರ ಬಂದ್
ನದಿಯಲ್ಲಿ ಕೊಚ್ಚಿ ಹೋದ ಸೇತುವೆ:ಬೆಳಗಾವಿ-ಗೋವಾ ರಸ್ತೆ ಸಂಚಾರ ಬಂದ್
ಹಾಸನ ಜಿಲ್ಲಾಸ್ಪತ್ರೆ ಸೆಕ್ಯುರಿಟಿಗಾರ್ಡ್ ಕ್ರೌರ್ಯ:ಯುವಕನ ಮನಸೋ ಇಚ್ಚೇ ಥಳಿತ
ಹಾಸನ ಜಿಲ್ಲಾಸ್ಪತ್ರೆ ಸೆಕ್ಯುರಿಟಿಗಾರ್ಡ್ ಕ್ರೌರ್ಯ:ಯುವಕನ ಮನಸೋ ಇಚ್ಚೇ ಥಳಿತ
ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಒದ್ದು ಹಿಂಸೆ ಕೊಟ್ಟ ಪತ್ನಿ
ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಒದ್ದು ಹಿಂಸೆ ಕೊಟ್ಟ ಪತ್ನಿ
ಫೀನಿಕ್ಸ್ ಸಿನಿಮಾ ಶೂಟಿಂಗ್ ವೇಳೆ ಅವಘಡ; ಪ್ರಾಣಾಪಾಯದಿಂದ ಪಾರಾದ ನಟ ಭಾಸ್ಕರ್
ಫೀನಿಕ್ಸ್ ಸಿನಿಮಾ ಶೂಟಿಂಗ್ ವೇಳೆ ಅವಘಡ; ಪ್ರಾಣಾಪಾಯದಿಂದ ಪಾರಾದ ನಟ ಭಾಸ್ಕರ್
ವಯನಾಡು: ಪ್ರಿಯಾಂಕಾ ಗಾಂಧಿಯಿಂದ ಉದ್ಘಾಟಗೊಳ್ಳುವ ಹೊತ್ತಲ್ಲೇ ಬಿದ್ದ ನಾಮಫಲಕ
ವಯನಾಡು: ಪ್ರಿಯಾಂಕಾ ಗಾಂಧಿಯಿಂದ ಉದ್ಘಾಟಗೊಳ್ಳುವ ಹೊತ್ತಲ್ಲೇ ಬಿದ್ದ ನಾಮಫಲಕ
ಮಳೆಯಲ್ಲೂ ಹುಲಿರಾಯ ಕೆರೆಯಲ್ಲಿ ಸ್ವಿಮ್ಮಿಂಗ್: ಅಪರೂಪದ ವಿಡಿಯೋ ನೋಡಿ
ಮಳೆಯಲ್ಲೂ ಹುಲಿರಾಯ ಕೆರೆಯಲ್ಲಿ ಸ್ವಿಮ್ಮಿಂಗ್: ಅಪರೂಪದ ವಿಡಿಯೋ ನೋಡಿ
ಕಾಶಿ ವಿಶ್ವನಾಥ ದೇವಾಲಯದ ನಿರ್ಬಂಧಿತ ಪ್ರದೇಶದಲ್ಲಿ ತೇಜ್​ಪ್ರತಾಪ್ ಯಾದವ್
ಕಾಶಿ ವಿಶ್ವನಾಥ ದೇವಾಲಯದ ನಿರ್ಬಂಧಿತ ಪ್ರದೇಶದಲ್ಲಿ ತೇಜ್​ಪ್ರತಾಪ್ ಯಾದವ್