AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೂಬಿಕ್ ಕ್ಯೂಬ್ಸ್ ಮೂಲಕ ಅಪ್ಪು ಚಿತ್ರ ಬಿಡಿಸಿದ ನಾಲ್ಕನೇ ತರಗತಿ ಬಾಲಕ ಶ್ರೇಷ್ಠ ಪ್ರಭು

ರೂಬಿಕ್ ಕ್ಯೂಬ್ಸ್ ಮೂಲಕ ಅಪ್ಪು ಅವರ ಭಾವಚಿತ್ರವನ್ನು ನಿರ್ಮಿಸಿ ತನ್ನ ನೆಚ್ಚಿನ ನಟನಿಗೆ ನಾಲ್ಕನೇ ತರಗತಿ ಬಾಲಕನೊಬ್ಬ ವಿಶೇಷವಾಗಿ ನಮನ ಸಲ್ಲಿಸಿದ್ದಾನೆ.

ರೂಬಿಕ್ ಕ್ಯೂಬ್ಸ್ ಮೂಲಕ ಅಪ್ಪು ಚಿತ್ರ ಬಿಡಿಸಿದ ನಾಲ್ಕನೇ ತರಗತಿ ಬಾಲಕ ಶ್ರೇಷ್ಠ ಪ್ರಭು
ರೂಬಿಕ್ ಕ್ಯೂಬ್ಸ್ ಮೂಲಕ ಪುನೀತ್ ರಾಜ್​ಕುಮಾರ್ ಚಿತ್ರ ರಚಿಸಿದ ನಾಲ್ಕನೇ ತರಗತಿ ಬಾಲಕ ಶ್ರೇಷ್ಟ್ ಪ್ರಭು
Follow us
TV9 Web
| Updated By: Rakesh Nayak Manchi

Updated on:Oct 28, 2022 | 3:05 PM

ಬೆಂಗಳೂರು: ಕಾಂತರಾ ಸಿನಿಮಾ ಬಿಡುಗಡೆಯಾಗಿ ಇಡೀ ದೇಶದ ಗಮನ ಸೆಳೆದಿತ್ತು. ಇದೀಗ ದಿವಂಗತ ನಟ ಪುನೀತ್ ರಾಜ್​ಕುಮಾರ್ ಅಭಿನಯದ ಗಂಧದ ಗುಡಿ ರಿಲೀಸ್ ಆಗಿದ್ದು, ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳು ಮುಗಿಬಿದ್ದು ನೋಡುತ್ತಿದ್ದಾರೆ. ಎಲ್ಲ ಜಿಲ್ಲೆಯಲ್ಲೂ ಅಪ್ಪು ಗುಣಗಾನ ಮಾಡಲಾಗುತ್ತಿದೆ. ಈ ನಡುವೆ ಪುನೀತ್ ರಾಜ್​ಕುಮಾರ್ ಅವರ ಚಿತ್ರವೊಂದನ್ನು ಬಿಡಿಸಿದ ಬಾಲಕನೊಬ್ಬ ಎಲ್ಲರ ಗಮನ ಸೆಳೆಯುತ್ತಿದ್ದಾನೆ. ವೈಟ್​ಫೀಲ್ಡ್​ನಲ್ಲಿರುವ ಏಕ್ಯಾ ಶಾಲೆ ಐಟಿಪಿಎಲ್​ನ ನಾಲ್ಕನೇ ತರಗತಿಯ ಶ್ರೇಷ್ಟ್ ಪ್ರಭು ಎಂಬ ಬಾಲಕ ರೂಬಿಕ್ ಕ್ಯೂಬ್ಸ್ ಮೂಲಕ ಪುನೀತ್ ಭಾವಚಿತ್ರವನ್ನು ರಚಿಸಿ ತನ್ನ ನೆಚ್ಚಿನ ನಟನಿಗೆ ವಿಶೇಷ ನಮನ ಸಲ್ಲಿಸಿದ್ದಾನೆ. ಸೂಪರ್ ಹಿಟ್ ಚಿತ್ರ ಕಾಂತಾರಾ ಭಾರತದಾದ್ಯಂತ ಅಭಿಮಾನಿಗಳಿಂದ ಮೆಚ್ಚುಗೆಯನ್ನು ಗಳಿಸಿದೆ. ಈ ಸಿನಿಮಾ ನೋಡಿ ಸ್ಫೂರ್ತಿಗೊಂಡ ಶ್ರೇಷ್ಟ್ ಪ್ರಭು ರೂಬಿಕ್​ ಕ್ಯೂಬ್​ ಮೂಲಕ ಕಲೆಯನ್ನು ಬಿಡಿಸಿದ್ದನು. ಇದಕ್ಕೆ ಸ್ನೇಹಿತರು ಮತ್ತು ಪ್ರೀತಿಪಾತ್ರರು ಮಾತ್ರವಲ್ಲದೆ, ಕಾಂತಾರ ಸಿನಿಮಾದ ನಿರ್ದೇಶಕ ಹಾಗೂ ನಟ ರಿಷಭ್ ಶೆಟ್ಟಿ ಅವರು ಕೂಡ ಟ್ವಿಟರ್​ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಈ ಹಿಂದೆ ರೂಬಿಕ್ ಕ್ಯೂಬ್ಸ್ ಮೂಲಕ ನರೇಂದ್ರ ಮೋದಿ, ವಿರಾಟ್ ಕೊಹ್ಲಿ, ರತನ್ ಟಾಟಾ ಮತ್ತು ಡಾ.ರಾಜ್ ಕುಮಾರ್ ಅವರಂತಹ ಇತರ ಖ್ಯಾತ ವ್ಯಕ್ತಿಗಳ ಭಾವಚಿತ್ರಗಳನ್ನು ರಚಿಸಿ ಗಮನ ಸೆಳೆದ್ದಿದ್ದನು. ಇದೀಗ ಪುನೀತ್ ರಾಜ್​ಕುಮಾರ್ ಅವರ ಚಿತ್ರವನ್ನು ರುಬಿಕ್ ಕ್ಯೂಬ್ಸ್ ಮೂಲಕ ಬಿಡಿಸಿ ಅಚ್ಚರಿ ಮೂಡಿಸಿದ್ದಾನೆ. 6ನೇ ವಯಸ್ಸಿನಲ್ಲಿ ಇರುವಾಗ ರೂಬಿಕ್ಸ್ ಕ್ಯೂಬ್ ಕಲೆಯು ಶ್ರೇಷ್ಟ್ ಪ್ರಭುವನ್ನು ಆಕರ್ಷಿಸಿತು. ಸಾಂಕ್ರಾಮಿಕ ರೋಗ ಕೊರೋನಾ ಲಾಕ್ಡೌನ್​ಗಳು ಕಾಲಾನಂತರದಲ್ಲಿ ರುಬಿಕ್​ ಕ್ಯೂಬ್​ ಮೂಲಕ ಚಿತ್ರ ಬಿಡಿಸಲು ಮತ್ತು ಅದರಲ್ಲಿ ತಮ್ಮ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಲು ಸಹಾಯ ಮಾಡಿದವು.

“ರೂಬಿಕ್ ಕ್ಯೂಬ್​ಗಳಿಂದ ಕಲೆಯನ್ನು ತಯಾರಿಸುವ ನನ್ನ ಉತ್ಸಾಹವು ಕೋವಿಡ್ -19 ಲಾಕ್ಡೌನ್ ಅವಧಿಯಲ್ಲಿ ಹುಟ್ಟಿಕೊಂಡಿತು. ರೂಬಿಕ್​ನ ಘನಾಕೃತಿಯಿಂದ ಹೇಗೆ ಚಿತ್ರಗಳನ್ನು ರಚಿಸಲಾಗುತ್ತದೆ ಎಂದು ನಾನು ಆನ್​ಲೈನ್​ನಲ್ಲಿ ಹಲವಾರು ವೀಡಿಯೊಗಳನ್ನು ನೋಡುತ್ತಿದ್ದೆ. ನಾನು ಇದನ್ನು ಸವಾಲಾಗಿ ಸ್ವೀಕರಿಸಿ ಈ ಚಿತ್ರಗಳನ್ನು ಬಿಡಿಸಿದ್ದೇನೆ. ಇಂದು ನಾನು ಮಾಡುತ್ತಿರುವ ಚಿತ್ರಗಳ ಹಾಗೂ ನನ್ನ ಬೆಳೆವಣಿಗೆ ಬಗ್ಗೆ ಹೆಮ್ಮೆ ಇದೆ” ಎಂದು ಶ್ರೇಷ್ಟ್ ಹೇಳುತ್ತಾನೆ.

ರುಬಿಕ್ ಕ್ಯೂಬ್​ಗಳನ್ನು ಬಳಸಿಕೊಂಡು ಸೆಲೆಬ್ರಿಟಿಗಳ ಲೈವ್ ಭಾವಚಿತ್ರಗಳನ್ನು ಮಾಡಲು ಶ್ರೇಷ್ಟ್ ಯೋಜಿಸಿದ್ದು, ಮುಂದೊಂದು ದಿನ ಸ್ಪೀಡ್ ಕ್ಯೂಬಿಂಗ್ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಲು ಚಿಂತನೆ ನಡೆಸುತ್ತಿದ್ದಾನೆ. ಶ್ರೇಷ್ಟ್ 17 ಸೆಕೆಂಡುಗಳಲ್ಲಿ 3×3 ಘನವನ್ನು ಪರಿಹರಿಸಬಹುದಾದರೂ, ನಿಯಮಿತವಾಗಿ 2×2, 4×4 ಮೆಗಾಮಿಕ್ಸ್ ಮತ್ತು ಪಿರಮಿಡ್ ಆಕಾರದ ಘನಾಕೃತಿಗಳನ್ನು ರಚಿಸುತ್ತಾನೆ. ತನ್ನ ಉತ್ಸಾಹವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ರೂಬಿಕ್​ ಕ್ಯೂಬ್​ನಲ್ಲಿ ಸಕ್ರಿಯವಾಗಿ ಆಸಕ್ತಿ ತೋರುತ್ತಿದ್ದಾನೆ. ರೂಬಿಕ್​ ಕ್ಯೂಬ್​ ಒಂದು ಕಲಾ ಪ್ರಕಾರವಾಗಿದ್ದು, ಇವುಗಳ ಮೂಲಕ ಭಾವಚಿತ್ರಗಳನ್ನು ರೂಪಿಸಲು ನಿಖರವಾದ ರೀತಿಯಲ್ಲಿ ಜೋಡಿಸಲಾಗುತ್ತದೆ. ಪ್ರತಿ ಭಾವಚಿತ್ರವು ಸುಮಾರು 400 ರೂಬಿಕ್ ಘನಾಕೃತಿಗಳನ್ನು ಮತ್ತು 3-4 ದಿನಗಳ ಸಮರ್ಪಿತ ಪ್ರಯತ್ನವನ್ನು ತೆಗೆದುಕೊಳ್ಳುತ್ತದೆ.

ವಿದ್ಯಾರ್ಥಿ ಶ್ರೇಷ್ಟ್ ಉತ್ಸಾಹದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಏಕ್ಯಾ ಸ್ಕೂಲ್ ಐಟಿಪಿಎಲ್​ನ ಜ್ಯೋತಿ ಮೆನನ್, “ಕಠಿಣ ಪರಿಶ್ರಮ, ಛಲ ಮತ್ತು ಪರಿಪೂರ್ಣತೆಗಾಗಿ ಶ್ರಮಿಸಿದ ಪರಿಣಾಮವಾಗಿ ಯಶಸ್ಸು ಸಿಗುತ್ತದೆ. ಶ್ರೇಷ್ಟ್, ಒಂದು ಸಣ್ಣ ತಾರೆಯಾಗುವ ಹಾದಿಯಲ್ಲಿದ್ದಾರೆ ಎಂದು ನಾನು ನೋಡಬಲ್ಲೆ. ನಿಮ್ಮ ಮುಂದಿನ ಹಂತದ ಸಾಧನೆಗೆ ನಾನು ನಿಮಗೆ ಶುಭ ಹಾರೈಸುತ್ತೇನೆ. ಏಕ್ಯಾ ಐಟಿಪಿಎಲ್ ನಿಮ್ಮ ಬಗ್ಗೆ ತುಂಬಾ ಹೆಮ್ಮೆಪಡುತ್ತದೆ” ಎಂದರು.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:05 pm, Fri, 28 October 22

ಪಾಕ್​ಗೆ ಬಿಎಸ್‌ಎಫ್ ನೀಡಿದ ಹೊಡೆತದಿಂದ ಹೊರಬರಲು ವರ್ಷವೇ ಬೇಕು; ಅಮಿತ್ ಶಾ
ಪಾಕ್​ಗೆ ಬಿಎಸ್‌ಎಫ್ ನೀಡಿದ ಹೊಡೆತದಿಂದ ಹೊರಬರಲು ವರ್ಷವೇ ಬೇಕು; ಅಮಿತ್ ಶಾ
ಕಮಲ್ ಹಾಸನ್ ಮೇಲೆ ಕನ್ನಡಿಗರ ಋಣ ಇದೆ, ಕ್ಷಮೆ ಕೇಳಬೇಕು: ಸಾಧುಕೋಕಿಲ
ಕಮಲ್ ಹಾಸನ್ ಮೇಲೆ ಕನ್ನಡಿಗರ ಋಣ ಇದೆ, ಕ್ಷಮೆ ಕೇಳಬೇಕು: ಸಾಧುಕೋಕಿಲ
ಮಂಗಳೂರು: ಭಾರಿ ಮಳೆಗೆ ದ್ವೀಪದಂತಾದ ಜಪ್ಪಿನಮೊಗರು
ಮಂಗಳೂರು: ಭಾರಿ ಮಳೆಗೆ ದ್ವೀಪದಂತಾದ ಜಪ್ಪಿನಮೊಗರು
ಕೋಮು ಗಲಭೆಗಳ ವಿಷಯದಲ್ಲಿ ಜಾಗರೂಕರಾಗಿರಲು ಅಧಿಕಾರಿಗಳಿಗೆ ಸಿಎಂ ಸೂಚನೆ
ಕೋಮು ಗಲಭೆಗಳ ವಿಷಯದಲ್ಲಿ ಜಾಗರೂಕರಾಗಿರಲು ಅಧಿಕಾರಿಗಳಿಗೆ ಸಿಎಂ ಸೂಚನೆ
Video: ಪ್ರಾಣ ಹೋದರೂ ಕೊಟ್ಟ ಮಾತು ತಪ್ಪೆನು: ಮೋದಿ
Video: ಪ್ರಾಣ ಹೋದರೂ ಕೊಟ್ಟ ಮಾತು ತಪ್ಪೆನು: ಮೋದಿ
ಶಾಂತಿ ಕದಡುವ ಯಾವುದೇ ಪ್ರಯತ್ನವನ್ನು ಸರ್ಕಾರ ಇನ್ನು ಸಹಿಸಲ್ಲ: ಪರಮೇಶ್ವರ್
ಶಾಂತಿ ಕದಡುವ ಯಾವುದೇ ಪ್ರಯತ್ನವನ್ನು ಸರ್ಕಾರ ಇನ್ನು ಸಹಿಸಲ್ಲ: ಪರಮೇಶ್ವರ್
ಸಲೂನ್​ಗೆ ನುಗ್ಗಿ ದಾಂದಲೆ: ಹಲ್ಲೆಗೊಳಗಾದ ವ್ಯಕ್ತಿ ಹೇಳಿದ್ದಿಷ್ಟು
ಸಲೂನ್​ಗೆ ನುಗ್ಗಿ ದಾಂದಲೆ: ಹಲ್ಲೆಗೊಳಗಾದ ವ್ಯಕ್ತಿ ಹೇಳಿದ್ದಿಷ್ಟು
‘ನೀವು ಅರ್ಜುನ್ ಜನ್ಯ ಡ್ರೀಮ್ ಲೇಡಿ’; ಅನುಶ್ರೀ ಬಗ್ಗೆ ವಿಜಯ್ ಪ್ರಕಾಶ್ ಮಾತು
‘ನೀವು ಅರ್ಜುನ್ ಜನ್ಯ ಡ್ರೀಮ್ ಲೇಡಿ’; ಅನುಶ್ರೀ ಬಗ್ಗೆ ವಿಜಯ್ ಪ್ರಕಾಶ್ ಮಾತು
ಸಿಕ್ಕಿಂ: ತೀಸ್ತಾ ನದಿಗೆ ಉರುಳಿದ ಬಸ್, ಇಬ್ಬರ ರಕ್ಷಣೆ, 9 ಮಂದಿ ನಾಪತ್ತೆ
ಸಿಕ್ಕಿಂ: ತೀಸ್ತಾ ನದಿಗೆ ಉರುಳಿದ ಬಸ್, ಇಬ್ಬರ ರಕ್ಷಣೆ, 9 ಮಂದಿ ನಾಪತ್ತೆ
ಅಹ್ಮದಾಬಾದ್​​ನಲ್ಲಿ ಕನಡಿಗರ ಬಹುದಿನಗಳ ಆಸೆ ಈಡೇರಿಸುತ್ತಾ ಆರ್​ಸಿಬಿ? 
ಅಹ್ಮದಾಬಾದ್​​ನಲ್ಲಿ ಕನಡಿಗರ ಬಹುದಿನಗಳ ಆಸೆ ಈಡೇರಿಸುತ್ತಾ ಆರ್​ಸಿಬಿ?