AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರದಕ್ಷಿಣೆ ಕಿರುಕುಳ ತಾಳದೇ ಕಂದನ ಜೊತೆ ತಾಯಿ ಆತ್ಮಹತ್ಯೆ, ಪ್ರೀತಿಸಿ ವಿವಾಹವಾಗಿದ್ದ ಪತಿ ಅರೆಸ್ಟ್

ಮೃತ ನಯನಾ 5 ವರ್ಷಗಳ ಹಿಂದೆ ಶರತ್ ಎಂಬಾತನನ್ನು ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ದುರಂತದ ಬಳಿಕ ನಯನಾ ಪತಿ ಶರತ್​​ನನ್ನ ಪೊಲೀಸರು ಅರೆಸ್ಟ್ ಮಾಡಿದ್ದು, ಪತಿ ಶರತ್, ಅತ್ತೆ ಸೀತಮ್ಮ, ಮಾವ ಹಾಲೇಶ್ ವಿರುದ್ಧ ಕೇಸ್ ದಾಖಲು ಮಾಡಿಕೊಂಡಿದ್ದಾರೆ.

ವರದಕ್ಷಿಣೆ ಕಿರುಕುಳ ತಾಳದೇ ಕಂದನ ಜೊತೆ ತಾಯಿ ಆತ್ಮಹತ್ಯೆ, ಪ್ರೀತಿಸಿ ವಿವಾಹವಾಗಿದ್ದ ಪತಿ ಅರೆಸ್ಟ್
ವರದಕ್ಷಿಣೆ ಕಿರುಕುಳ ತಾಳದೇ ಕಂದನ ಜೊತೆ ತಾಯಿ ಆತ್ಮಹತ್ಯೆ, ಪ್ರೀತಿಸಿ ವಿವಾಹವಾಗಿದ್ದ ಪತಿ ಅರೆಸ್ಟ್
TV9 Web
| Updated By: ಸಾಧು ಶ್ರೀನಾಥ್​|

Updated on: Jul 17, 2022 | 2:19 PM

Share

ಶಿವಮೊಗ್ಗ: ವರದಕ್ಷಿಣೆ ಕಿರುಕುಳ ತಾಳದೇ (Dowry case) ಮಗನ ಜೊತೆ ನೇಣು ಬಿಗಿದುಕೊಂಡು ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಪ್ರೀತಿಸಿ ವಿವಾಹವಾಗಿದ್ದ ಪತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆಯ (Shivamogga) ಸೊರಬ ತಾಲೂಕಿನ (Soraba) ಕಪ್ಪಗಳಲೆ ಗ್ರಾಮದ ನಯನಾ(27) ಮತ್ತು ಗುರು(4) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ತಾಯಿ, ಮಗ. ಮನೆಯಲ್ಲಿ ನೇಣು ಬಿಗಿದುಕೊಂಡು ಅಮ್ಮ, ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ನಯನಾ 5 ವರ್ಷಗಳ ಹಿಂದೆ ಶರತ್ ಎಂಬಾತನನ್ನು ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ದುರಂತದ ಬಳಿಕ ನಯನಾ ಪತಿ ಶರತ್​​ನನ್ನ ಪೊಲೀಸರು ಅರೆಸ್ಟ್ ಮಾಡಿದ್ದು, ಪತಿ ಶರತ್, ಅತ್ತೆ ಸೀತಮ್ಮ, ಮಾವ ಹಾಲೇಶ್ ವಿರುದ್ಧ ಸೊರಬ ಠಾಣೆಯಲ್ಲಿ ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಸೊರಬ ಪೊಲೀಸರು ಪತಿ ಶರತ್ ನನ್ನು ಬಂಧಿಸಿದ್ದಾರೆ.