AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೊಗ್ಗದ ಒಡಲಲ್ಲೇ ಶ್ರೀಗಂಧದ ದಂಧೆ, ಗೋದಾಮಿನಲ್ಲಿ ಅಡಗಿಸಿದ್ದ 910 ಕೆಜಿ ಜಪ್ತಿ

ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಖಾಕಿ ಪಡೆ ಭರ್ಜರಿ ಬೇಟೆಯಾಡಿದೆ. ಶ್ರೀಗಂಧ ದಂಧೆಕೋರನ ಬುಡವನ್ನೇ ನಡುಗಿಸಿ, ಕೋಟಿ ಕೋಟಿ ಮೌಲ್ಯದ ಮಾಲು ವಶಪಡಿಸಿಕೊಂಡಿದ್ದಾರೆ.

ಶಿವಮೊಗ್ಗದ ಒಡಲಲ್ಲೇ ಶ್ರೀಗಂಧದ ದಂಧೆ, ಗೋದಾಮಿನಲ್ಲಿ ಅಡಗಿಸಿದ್ದ 910 ಕೆಜಿ ಜಪ್ತಿ
Shivamogga Sandalwood raid
TV9 Web
| Updated By: Pavitra Bhat Jigalemane|

Updated on:Dec 16, 2021 | 6:18 PM

Share

ಶಿವಮೊಗ್ಗ ಮಲೆನಾಡಿನ ಹೆಬ್ಬಾಗಿಲು. ದಟ್ಟವಾಗಿರುವ ಪಶ್ಚಿಮಘಟ್ಟದಲ್ಲಿ ಅಪರೂಪದ ಸಸ್ಯಕಾಶಿ ಇಲ್ಲಿದೆ. ಇದರ ನಡುವೆ ಚಂದನವನ ಕೂಡಾ ಇಲ್ಲಿದೆ. ಹೀಗೆ ಪಶ್ಚಿಮಘಟ್ಟದ ಈ ಚಂದನವನಕ್ಕೆ ಖದೀಮರು ಕೈಹಾಕಿದ್ದರು. ಕೋಟಿ ಕೋಟಿ ಮೌಲ್ಯದ ಶ್ರೀಗಂಧದ ತುಂಡುಗಳನ್ನ ಅಕ್ರಮವಾಗಿ ಸಂಗ್ರಹಿಸಿದ್ರು. ಇದೀಗ, ಪೊಲೀಸ್ರು ಆ ಕೋಟೆಯನ್ನೇ ಬೇಟೆಯಾಡಿದ್ದಾರೆ.ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಖಾಕಿ ಪಡೆ ಭರ್ಜರಿ ಬೇಟೆಯಾಡಿದೆ. ಶ್ರೀಗಂಧ ದಂಧೆಕೋರನ ಬುಡವನ್ನೇ ನಡುಗಿಸಿ, ಕೋಟಿ ಕೋಟಿ ಮೌಲ್ಯದ ಮಾಲು ವಶಪಡಿಸಿಕೊಂಡಿದ್ದಾರೆ. ಅಕ್ರಮವಾಗಿ ಶ್ರೀಗಂಧ ಅಡಗಿಸಿಟ್ಟಿದ್ದ ರೀತಿ ಕಂಡು ಪೊಲೀಸ್ರೇ ಶಾಕ್ ಆಗಿದ್ದಾರೆ. ಶಿವಮೊಗ್ಗ ನಗರದ ಗೋದಾಮಿನಲ್ಲಿ ಅನಾಮತ್ತು 910 ಕೆಜಿ ಶ್ರೀಗಂಧವನ್ನ ಅಕ್ರಮವಾಗಿ ಸಂಗ್ರಹಿಸಿದ್ರು. ಇಷ್ಟೊಂದು ಗಂಧವನ್ನ ಸಂಗ್ರಹಿಸಿದ್ದ ಆ ಮರಿವೀರಪ್ಪನ್ ಹೆಸ್ರು ಅಪ್ಸರ್.

ಶ್ರೀಗಂಧ ದಂಧೆಕೋರನ ಗೋದಾಮಿನ ಮೇಲೆ ದಾಳಿ ಅರಣ್ಯ ಮತ್ತು ಪೊಲೀಸ್ ಇಲಾಖೆ ಇತಿಹಾಸದಲ್ಲಿ, ಅತೀ ದೊಡ್ಡ ಜಂಟಿ ಕಾರ್ಯಾಚರಣೆ ನಡೆದಿದೆ. ಸುಮಾರು 910 ಕೆಜಿ ಶ್ರೀಗಂಧವನ್ನು ಜಪ್ತಿ ಮಾಡಿ ದಾಖಲೆ ಬರೆದಿದ್ದಾರೆ. ಟಿಪ್ಪು ನಗರದ ಏಳನೇ ಕ್ರಾಸ್ ನಲ್ಲಿ ಗೋದಾಮಿನಲ್ಲಿ ಅಪ್ಸರ್ 910 ಕೇಜಿ ಶ್ರೀಗಂಧವನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ. ಇದೀಗ, ತುಂಗಾ ನಗರ ಪೊಲೀಸ್ರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಿಕ್ಕಿ ಬಿದಿದ್ದಾನೆ.

ಅಪ್ಸರ್ನ ಈ ಅಕ್ರಮ ಕೋಟೆ ನೋಡಿದ್ರೆ, ಯಾರೊಬ್ಬರಿಗೂ ಡೌಟ್ ಬರ್ತಿರಲಿಲ್ಲ. ಗೋದಾಮು ಹೊರಗಿನಿಂದ ಶ್ರೀಗಂಧ ಇದೆಯೋ, ಇಲ್ಲವೋ ಎಂಬಂತಿತ್ತು. ಅಧಿಕಾರಿಗಳು ಒಳಗೆ ನುಗ್ಗುತ್ತಿದ್ದಂತೆ, ಚೀಲ, ಬಾಕ್ಸ್ಗಳಲ್ಲಿ ಸಂಗ್ರಹಿಸಿಟ್ಟ ರಾಶಿ ರಾಶಿ ಗಂಧದ ತುಂಡುಗಳು ಸಿಕ್ಕವು. ವಿಷ್ಯ ಏನಂದ್ರೆ, ಶ್ರೀಗಂಧದ ಮರಗಳನ್ನ ಕದಿಯುತ್ತಿದ್ದ ಕಳ್ಳರಿಂದ ಅಪ್ಸರ್ ಮಾಲನ್ನು ಸಂಗ್ರಹಿಸ್ತಿದ್ನಂತೆ. ಚೋರರೆಲ್ಲ ಈ ಅಪ್ಸರ್ಗೆ ಕದ್ದ ಶ್ರೀಗಂಧವನ್ನ ಕೊಡ್ತಿದ್ರಂತೆ. ಆದ್ರೆ, ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿಗೂ ಈತ ಮಾಮೂಲಿ ಕೊಡ್ತಿದ್ದೇ ಅನ್ನೋ ವಿಷ್ಯವನ್ನ ಬಾಯ್ಬಿಟ್ಟಿರೋದು, ಹತ್ತಾರು ಪ್ರಶ್ನೆ ಹುಟ್ಟುಹಾಕಿದೆ.

ಇನ್ನು, ಮಲೆನಾಡಿನಲ್ಲಿ ಶ್ರೀಗಂಧದ ಸ್ಮಗ್ಲಿಂಗ್ ನಡೀತಿದ್ರು ಅಧಿಕಾರಿಗಳು ಸೈಲೆಂಟ್ ಆಗಿದ್ರು. ಆದ್ರೀಗ, ತುಂಗಾ ನಗರ ಪೊಲೀಸರ ಕಾರ್ಯಾಚರಣೆಗೆ, ಪ್ರಶಂಸೆ ವ್ಯಕ್ತವಾಗಿದೆ. ಏನೇ ಹೇಳಿ, ಮಲೆನಾಡ ಮಹಾಮನೆಯಲ್ಲಿ ಕಳ್ಳರು, ಶ್ರೀಗಂಧ ಮರಗಳ ಬುಡವನ್ನೇ ಕತ್ತರಿಸ್ತಿದ್ದಾರೆ. ಸದ್ಯ ಬಲೆಗೆ ಬಿದ್ದಿರುವ ಈ ಮರಿ ವೀರಪ್ಪನ್ಗೆ, ದೊಡ್ಡ ದೊಡ್ಡ ದಂಧೆಕೋರರ ಲಿಂಕ್ ಇರುವ ಸಾಧ್ಯತೆ ಇದೆ. ಹೀಗಾಗಿ, ಆರೋಪಿ ಇತಿಹಾಸವನ್ನ ಖಾಕಿ ಪಡೆ ಕೆದಕುತ್ತಿದೆ.

ವರದಿ: ಬಸವರಾಜ್ ಯರಗಣವಿ, ಟಿವಿ9 ಶಿವಮೊಗ್ಗ

ಇದನ್ನೂ ಓದಿ: Pearl Millet Benefits: ಸಜ್ಜೆ ರೊಟ್ಟಿ ಮಾಡುವ ವಿಧಾನದ ಜತೆಗೆ ಆರೋಗ್ಯಕರ ಗುಣಗಳ ಕುರಿತು ಇಲ್ಲಿದೆ ಮಾಹಿತಿ

Published On - 7:40 am, Thu, 16 December 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ