AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಒಂದೇ ದಿನದಲ್ಲಿ ನಿವೇಶನ ಪಡೆದ ಶಿರಾದ ಬೀಡಿ ಕಾರ್ಮಿಕೆ ರಬಿಯಾ

ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಒಂದೇ ದಿನದಲ್ಲಿ ನಿವೇಶನ ಪಡೆದ ಶಿರಾದ ಬೀಡಿ ಕಾರ್ಮಿಕೆ ರಬಿಯಾ

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 03, 2024 | 7:05 PM

Share

ಸೋಮವಾರದಂದು ರಬಿಯಾ ತನ್ನ ಇಬ್ಬರು ಮಕ್ಕಳೊಂದಿಗೆ ಮಾಧ್ಯಮಗಳ ಮುಂದೆ ಬಂದು ಮಾತಾಡಿದ್ದರು. ಶಿರಾದ ಕಾಂಗ್ರೆಸ್ ಶಾಸಕ ಟಿಬಿ ಜಯಚಂದ್ರ ಜನತಾ ದರ್ಶನ ಕಾರ್ಯಕ್ರಮದಲ್ಲಿ ರಬಿಯಾಗೆ ನಿವೇಶನ ನೀಡುವ ಭರವಸೆ ನೀಡಿದ್ದರಂತೆ. ಆದರೆ ಅವರಿಂದ ಅದು ಸಾಧ್ಯವಾಗದ ಕಾರಣ ರಬಿಯಾ ನೇರವಾಗಿ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಮನೆ ಬೇಕೆಂದು ಕೇಳಿದ್ದರು.

ತುಮಕೂರು: ನಿನ್ನೆ ಈ ದೃಶ್ಯವನ್ನು ನಾವು ನಿಮಗೆ ತೋರಿಸಿದ್ದೆವು. ಶಿರಾ ಮೂಲದ ಬೀಡಿ ಕಟ್ಟುವ ಮಹಿಳೆಯೊಬ್ಬರು ತನಗೆ ಮನೆ ಬೇಕು ಎಂದು ತುಮಕೂರಿಗೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಅವಲತ್ತುಕೊಂಡಿದ್ದರು. ಅವರ ಗೋಳಾಟ ನೋಡಿ ಸಿದ್ದರಾಮಯ್ಯ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದರು. ರಬಿಯಾಗೆ 20/30 ಅಳತೆಯ ನಿವೇಶನವೊಂದನ್ನು ಜಿಲ್ಲಾಧಿಕಾರಿಯವರು ಒಂದೇ ದಿನದಲ್ಲಿ ಕೊಡಿಸಿದ್ದಾರೆ. ರಾಜೀವ್ ಗಾಂಧಿ ವಸತಿ ನಿಗಮದ ಅಡಿಯಲ್ಲಿ ರಬಿಯಾಗೆ ನಿವೇಶನ ನೀಡುವಂತೆ ಜಿಲ್ಲಾಧಿಕಾರಿ ಆದೇಶ ಮಾಡಿದ್ದು ಅದರಂತೆ ಶಿರಾ ನಗರಸಭೆಯ ಸರ್ವೆ 100ರಲ್ಲಿ ನಿವೇಶನವನ್ನು ಮಂಜೂರು ಮಾಡಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ತುಮಕೂರುನಲ್ಲಿ ಸಿಎಂ ಸಿದ್ದರಾಮಯ್ಯ ಕಾರು ತಡೆದು ವಾಸಕ್ಕೆ ಮನೆ ಕೇಳಿದ ಶಿರಾದ ಬೀಡಿ ಕಾರ್ಮಿಕೆ