ಏಕಾಏಕಿ ಗದಗ ಸಂಗೀತ ಪರೀಕ್ಷಾ ಕೇಂದ್ರ ಹುಬ್ಬಳ್ಳಿಗೆ ಶಿಫ್ಟ್: ಹೋರಾಟಕ್ಕಿಳಿದ ಗವಾಯಿ ಮಠದ ಶ್ರೀಗಳು

ಗದಗಿನ ಸಂಗೀತ ಪರೀಕ್ಷಾ ಕೆಂದ್ರ ಹುಬ್ಬಳ್ಳಿಗೆ ಶಿಫ್ಟ್ ಮಾಡುವ ಮೂಲಕ ಮೈಸೂರು ವಿಶ್ವವಿದ್ಯಾಲಯ ಬಿಗ್ ಶಾಕ್ ನೀಡಿದೆ. ಇಷ್ಟು ವರ್ಷಗಳ ಕಾಲ ಸಂಗೀತ ಪರೀಕ್ಷಾ ಕೇಂದ್ರವನ್ನು ಗದಗ ನಗರದಲ್ಲಿ ನಡೆಸುತ್ತಿದ್ದರು. ಆದರೆ ಈ ಬಾರಿ ಏಕಾಏಕಿ ಸಂಗೀತ ಪರೀಕ್ಷಾ ಕೇಂದ್ರವನ್ನು ಹುಬ್ಬಳ್ಳಿ ಶಿಫ್ಟ್ ಮಾಡಲಾಗಿದೆ. ಇದು ಆಕ್ರೋಶಕ್ಕೆ ಕಾರಣವಾಗಿದ್ದು, ಗವಾಯಿಗಳ ಮಠದ ಶ್ರೀಗಳೇ ಪ್ರತಿಭಟನೆಗೆ ಇಳಿದಿದ್ದಾರೆ.

ಏಕಾಏಕಿ ಗದಗ ಸಂಗೀತ ಪರೀಕ್ಷಾ ಕೇಂದ್ರ ಹುಬ್ಬಳ್ಳಿಗೆ ಶಿಫ್ಟ್: ಹೋರಾಟಕ್ಕಿಳಿದ ಗವಾಯಿ ಮಠದ ಶ್ರೀಗಳು
ಏಕಾಏಕಿ ಗದಗ ಸಂಗೀತ ಪರೀಕ್ಷಾ ಕೇಂದ್ರ ಹುಬ್ಬಳ್ಳಿಗೆ ಶಿಫ್ಟ್: ಹೋರಾಟಕ್ಕಿಳಿದ ಗವಾಯಿ ಮಠದ ಶ್ರೀಗಳು
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Jul 25, 2024 | 9:12 PM

ಗದಗ, ಜುಲೈ 25: ಗದಗನ ಸಂಗೀತ ಪರೀಕ್ಷಾ ಕೆಂದ್ರ ಹುಬ್ಬಳ್ಳಿಗೆ (Hubballi) ಶಿಫ್ಟ್ ಮಾಡುವ ಮೂಲಕ ಸಂಗೀತ ಕಾಶಿ ಗದಗಿಗೆ ಮೈಸೂರು ವಿಶ್ವವಿದ್ಯಾಲಯ (University Of Mysuru) ಬಿಗ್ ಶಾಕ್ ನೀಡಿದೆ. ಸದ್ಯ ವಿಶ್ವವಿದ್ಯಾಲಯ ಕುಲಪತಿಗಳ ಈ ನಿರ್ಧಾರಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಖುದ್ದು ಗವಾಯಿಗಳ ಮಠದ ಶ್ರೀಗಳೇ ಅಂಧ, ಅನಾಥ ಮಕ್ಕಳ ಜೊತೆಗೆ ಹೋರಾಟಕ್ಕೆ ಇಳಿದಿದ್ದಾರೆ. ಒಂದು ವೇಳೆ ಕೇಂದ್ರ ರದ್ದು ಮಾಡಿದ್ದರೆ ಇಡಿ ಮಠದ ಲಕ್ಷಾಂತರ ಭಕ್ತರು ಬೀದಿಗಿಳಿವುದಾಗಿ ಎಚ್ಚರಿಕೆ ನೀಡಿದ್ದಾರೆ.

ನಗರದ ಶ್ರೀ ವೀರೇಶ್ವರ ಪುಣ್ಯಾಶ್ರಮ ಅಂಧ ಅನಾಥ ಮಕ್ಕಳಿಗೆ ದಾರಿ ದೀಪವಾಗಿದೆ. ಅದರಲ್ಲೂ ಗದಗ ಜಿಲ್ಲೆ ಅಂದ್ರೆ ಇದು ಸಂಗೀತ ಕಾಶಿ ಎಂದು ಜನಪ್ರಿಯ. ಇಲ್ಲಿ ಸಂಗೀತ ಕಲಿತು ಹೋದವರು ನಾಡಿನಲ್ಲಿ ಬಹುದೊಡ್ಡ ಹೆಸರು ಮಾಡಿದ್ದಾರೆ. ಲಿಂಗೈಕ್ಯ ಪಂಡಿತ ಪುಟ್ಟರಾಜ ಗವಾಯಿಗಳು ಅಂಧ, ಅನಾಥರ ಬಾಳಲ್ಲಿ ಸಂಗೀತದ ದೀಪ ಹಚ್ಚುವ ಮೂಲಕ ಸಂಗೀತದ ಬದುಕು ನೀಡಿದ್ದಾರೆ. ಇಷ್ಟೊಂದು ಸಂಗೀತದ ಹಿನ್ನೆಲೆ ಇರುವ ನಗರ ಗದಗ ಜಿಲ್ಲೆ. ಆದರೆ ಇಷ್ಟು ವರ್ಷಗಳ ಕಾಲ ಸಂಗೀತ ಪರೀಕ್ಷಾ ಕೇಂದ್ರವನ್ನು ಗದಗ ನಗರದಲ್ಲಿ ನಡೆಸುತ್ತಿದ್ದರು. ಆದರೆ ಈ ಬಾರಿ ಏಕಾಏಕಿ ಗದಗ ನಗರದ ಸಂಗೀತ ಪರೀಕ್ಷಾ ಕೇಂದ್ರವನ್ನು ಹುಬ್ಬಳ್ಳಿ ಶಿಫ್ಟ್ ಮಾಡಲಾಗಿದೆ.

ಇದನ್ನೂ ಓದಿ: ವಿದ್ಯುತ್ ಬಿಲ್ ಬಾಕಿ: ಖ್ಯಾತ ಗಾಯಕ ಭೀಮಸೇನ ಜೋಷಿ ರಂಗಮಂದಿರದಲ್ಲಿ ಕಗ್ಗತ್ತಲು!

ಇದು ಸಂಗೀತ ವಿದ್ಯಾರ್ಥಿಗಳು ಹಾಗೂ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಾದ ಶ್ರೀ ಕಲ್ಲಯ್ಯಜ್ಜನವರ ಆಕ್ರೋಶಕ್ಕೆ ಕಾರಣವಾಗಿದೆ. ಇಂದು ಶ್ರೀಮಠದಿಂದ ಡಿಸಿ ಕಚೇರಿವರೆಗೂ ಅಂಧ, ಅನಾಥ ಮಕ್ಕಳ ಜೊತೆ ಶ್ರೀಗಳು ಬೀದಿಗಿಳಿದು ಹೋರಾಟ ಮಾಡಿದ್ದಾರೆ. ಕುಲಪತಿಗೆ ಸಂಗೀತದ ಗಂಧವೇ ಇಲ್ಲ ಅಂತ ಕಿಡಿಕಾರಿದ್ದಾರೆ. ಶತಮಾನದ ಇತಿಹಾಸಕ್ಕೆ ಧಕ್ಕೆ ಆದರೆ ಪ್ರಾಣ ತ್ಯಾಗಕ್ಕೂ ಸಿದ್ಧ ಎಂದು ಎಚ್ಚರಿಕೆ ನೀಡಿದ ಶ್ರೀಗಳು ಸರ್ಕಾರಕ್ಕೆ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ರದ್ದು ಮಾಡಿದರೆ ಎಲ್ಲ ವಿದ್ಯಾರ್ಥಿಗಳು ಭಹಿಷ್ಕಾರ ಮಾಡ್ತಾರೆ. ಬೇರೆ ಕಡೇ ಸಂಗೀತ ಪರೀಕ್ಷೆ ಬರೆಯಲು ಅಂಧ ಮಕ್ಕಳು ಹೇಗೆ ಹೋಗಬೇಕು ಎಂದು ಆಕ್ರೋಶ ವ್ಯಕ್ತಪಡೆಸಿದ್ದಾರೆ.

ಸಂಗೀತ ಪರೀಕ್ಷೆ ಬರೆಯಲು, ಒಬ್ಬ ಅಂಧ ವಿದ್ಯಾರ್ಥಿ ಜೊತೆಗೆ ಇಬ್ಬರು ಹೋಗ್ಬೇಕಾಗುತ್ತದೆ. ಹಾಗೇ ಸಂಗೀತ ವಾದ್ಯಗಳಾದ ಹಾರ್ಮೋನಿಯಂ, ವಯೋಲಿನ್, ಸಿತಾರ, ತಬಲಾ ಸೇರಿದಂತೆ ಎಲ್ಲಾ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗ್ಬೇಕು. ಅಲ್ಲಿನ ಪರೀಕ್ಷಾ ಕೇಂದ್ರಕ್ಕೆ ಅಂಧ‌ ಮಕ್ಕಳು ಹೇಗೆ ಹೋಗಿ ಪರೀಕ್ಷಾ ಬರೆಯಬೇಕು, ಅದರ ಖರ್ಚು ವೆಚ್ಚ ಯಾರು ಕೋಡ್ತಾರೆ ಎಂದ್ರು ಪ್ರಶ್ನೆ ಮಾಡಿದ್ದಾರೆ. ಈ ಸರ್ಕಾರಕ್ಕೆ ಅಂಧ ಅನಾಥ ಮಕ್ಕಳನ್ನು ಸಾಕಿ ಸಲುಹೊದು ಗೊತ್ತಾ ಎಂದು ಪ್ರಶ್ನೆ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಕೂಡಲೇ ಪರಿಶೀಲನೆ ಮಾಡಬೇಕು. ಗದಗ ಪರೀಕ್ಷಾ ಕೇಂದ್ರವನ್ನು ರದ್ದು ಮಾಡಬಾರದು ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ. ಇನ್ನೂ ಜಿಲ್ಲೆಯಲ್ಲಿ ಶ್ರೀ ವೀರೇಶ್ವರ ಪುಣ್ಯಾಶ್ರಮದ ಸಂಗೀತ ಶಾಲೆ ಹಾಗೂ ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದ, ಜ್ಞಾನ ಸಿಂಧು ಮಕ್ಕಳ ವಸತಿ ಶಾಲೆಯ ಸುಮಾರು 125 ಮಕ್ಕಳು ಈ ಭಾರಿ ಸಂಗೀತ ಪರೀಕ್ಷೆಯನ್ನು ಬರೆಯಲಿದ್ದಾರೆ.

ಇದೇ 27 ರಿಂದ‌ ಆರಂಭವಾಗಲಿವೆ. ಆದರೆ ವಿಶೇಷ ಚೈತನ್ಯ ಮಕ್ಕಳು ಹುಬ್ಬಳ್ಳಿಗೆ ಹೋಗಿ ಪರೀಕ್ಷೆ ಬರೆಯಲು ಬಹಳ ತೊಂದೆಯಾಗುತ್ತಿದೆ. ಅಂದಹಾಗೇ ಇಷ್ಟು ವರ್ಷಗಳ ಕಾಲ ಬೆಂಗಳೂರಿನ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯವರು ಪರೀಕ್ಷೆ ನಡೆಸಿಕೊಂಡು ಬಂದಿದ್ದರು. ಈ ವರ್ಷ ಈ ಪರೀಕ್ಷೆ ನಡೆಸಲು ಸರ್ಕಾರ ಮೈಸೂರಿನ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯಕ್ಕೆ ನೀಡಲಾಗಿದೆ.

ಇದನ್ನೂ ಓದಿ: ಗದಗ: ಗಾವಾಯಿಗಳ ಊರಲ್ಲಿ ನಿಂತ ಸಂಗೀತ ಸುಧೆ, ಕಲಾವಿದರಿಗೆ ಹಣ ಕೊಡದಷ್ಟು ಬಡವಾಯ್ತೆ ಸರ್ಕಾರ?

ಈ ವಿವಿಯವರು ರಾಜ್ಯಾದ್ಯಂತ 18 ಕಡೆ ಸಂಗೀತ ಪರೀಕ್ಷೆ ನಡೆಸಲಿದ್ದಾರೆ. ಇಷ್ಟು ವರ್ಷಗಳ ಕಾಲ ಗದಗನಲ್ಲಿ ಸಂಗೀತ ಪರೀಕ್ಷೆ ನಡೆಸುತ್ತಿದ್ದರು. ಆದರೆ ಈ ಭಾರಿ ಹುಬ್ಬಳ್ಳಿಯ ಪರೀಕ್ಷಾ ಕೇಂದ್ರ ಶಿಫ್ಟ್ ಮಾಡಿದ್ದಾರೆ. ಹೀಗಾಗಿ ಗದಗ ಜಿಲ್ಲೆಯ ಸಂಗೀತಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಹುಬ್ಬಳ್ಳಿಯ ಪರೀಕ್ಷಾ ಕೇಂದ್ರ ರದ್ದು ಮಾಡಿ, ಗದಗ ಜಿಲ್ಲೆಯಲ್ಲಿ ನಡೆಸುವಂತೆ ಒತ್ತಾಯ ಮಾಡಿದ್ದಾರೆ.

ಜಿಲ್ಲೆಯಲ್ಲಿ ಅತೀ ಹೆಚ್ಚು ವಿಶೇಷ ಚೈತನ್ಯ ಮಕ್ಕಳಿದ್ದಾರೆ. ಅದರಲ್ಲಿ ಅನಾಥ ಮಕ್ಕಳು ಬಹಳ ಸಂಖ್ಯೆಯಲ್ಲಿ ಇದ್ದಾರೆ. ಹೀಗಾಗಿ ಪರೀಕ್ಷೆ ಬರೆಯಲು ಸಾಕಷ್ಟು ಅಡಚಣೆ ಆಗ್ತುತ್ತೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವರು ಪರಾಮರ್ಶೆ ಮಾಡಿ, ಕೂಡಲೇ ಹಿಂದಿನ ಹಾಗೇ ಜಿಲ್ಲೆಯಲ್ಲಿ ಪರೀಕ್ಷೆ ನಡೆಸುವ ಮೂಲಕ, ಅಂಧ ಅನಾಥ ಮಕ್ಕಳ ಹಿತವನ್ನು ಕಾಪಾಡಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.