AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಗಾರು ಪೂರ್ವ ಮಳೆಗೆ ಕೊಚ್ಚಿ ಹೋಯ್ತು ರೈತನ ಕನಸು: ಸಾವಿರಾರು ಹೆಕ್ಟೇರ್​ ಬೆಳೆ ನಾಶ

ಈ ವರ್ಷ ಮುಂಗಾರು ಪೂರ್ವ ಮಳೆಗೆ ಸಾವಿರಾರು ಹೆಕ್ಟೇರ್‌ ಬೆಳೆ ನಾಶವಾಗಿದ್ದು ರಾಜ್ಯದಲ್ಲಿ ಅನಿಶ್ಚಿತ ಮಳೆಯಾಗಿರುವುದು ರೈತರ ಸಂಕಷ್ಟವನ್ನು ಹೆಚ್ಚಿಸಿದೆ. ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ಮಾರ್ಚ್ ಮತ್ತು ಮೇ ನಡುವಿನ ಮಳೆಯಿಂದಾಗಿ 9,581.62 ಹೆಕ್ಟೇರ್ ಭೂಮಿಯಲ್ಲಿನ ಕೃಷಿ ಬೆಳೆಗಳು ಮತ್ತು 12,060.86 ಹೆಕ್ಟೇರ್‌ಗಳಲ್ಲಿನ ತೋಟಗಾರಿಕಾ ಬೆಳೆಗಳು ನಷ್ಟವಾಗಿವೆ.

ಮುಂಗಾರು ಪೂರ್ವ ಮಳೆಗೆ ಕೊಚ್ಚಿ ಹೋಯ್ತು ರೈತನ ಕನಸು: ಸಾವಿರಾರು ಹೆಕ್ಟೇರ್​ ಬೆಳೆ ನಾಶ
ಬೆಳೆ ನಾಶ
ವಿವೇಕ ಬಿರಾದಾರ
|

Updated on:Jun 02, 2023 | 11:18 AM

Share

ಬೆಂಗಳೂರು: ಈ ವರ್ಷ ಮುಂಗಾರು (Monsoon) ಪೂರ್ವ ಮಳೆಗೆ (Rain) ಸಾವಿರಾರು ಹೆಕ್ಟೇರ್‌ ಬೆಳೆ ನಾಶವಾಗಿದ್ದು ರಾಜ್ಯದಲ್ಲಿ ಅನಿಶ್ಚಿತ ಮಳೆಯಾಗಿರುವುದು ರೈತರ (Farmer) ಸಂಕಷ್ಟವನ್ನು ಹೆಚ್ಚಿಸಿದೆ. ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ಮಾರ್ಚ್ ಮತ್ತು ಮೇ ನಡುವಿನ ಮಳೆಯಿಂದಾಗಿ 9,581.62 ಹೆಕ್ಟೇರ್ ಭೂಮಿಯಲ್ಲಿನ ಕೃಷಿ ಬೆಳೆಗಳು (Crop) ಮತ್ತು 12,060.86 ಹೆಕ್ಟೇರ್‌ಗಳಲ್ಲಿನ ತೋಟಗಾರಿಕಾ ಬೆಳೆಗಳು ನಷ್ಟವಾಗಿವೆ. ಬರಗಾಲದ ಅವಧಿಯನ್ನು ಹೆಚ್ಚಾಗಿ ಕಾಣುವ ಬೀದರ್​ನಲ್ಲಿ (Bidar) ಈ ವರ್ಷ ಅತಿ ಹೆಚ್ಚು ಮಳೆಯಾಗಿದ್ದು, ಇದರಿಂದಾಗಿ ಅತ್ಯಂತ ಸಾಕಷ್ಟು ಬೆಳೆ ಹಾನಿಯಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರದ (KSNDMC) ಮಾಹಿತಿ ಪ್ರಕಾರ ಮಾರ್ಚ್ ಮತ್ತು ಮೇ ನಡುವೆ ಜಿಲ್ಲೆಯಲ್ಲಿ ಒಟ್ಟು 200 ಮಿಮೀ ಮಳೆಯಾಗಿದೆ.

ಇದು ಸಾಮಾನ್ಯಕ್ಕಿಂತ ಶೇ 235 ರಷ್ಟು ಹೆಚ್ಚಾಗಿದೆ. ಇದರಿಂದ ಜಿಲ್ಲೆಯಲ್ಲಿ ಒಟ್ಟು 5,577 ಹೆಕ್ಟೇರ್ ಕೃಷಿ ಬೆಳೆ ಹಾಗೂ 1,292 ಹೆಕ್ಟೇರ್ ತೋಟಗಾರಿಕೆ ಬೆಳೆಗಳು ನಾಶವಾಗಿದೆ ಅದೇ ರೀತಿ ಯಾದಗಿರಿಯಲ್ಲಿ 1,115.73 ಹೆಕ್ಟೇರ್ ಕೃಷಿ ಬೆಳೆ ನಷ್ಟವಾಗಿದ್ದು, ಮುಂಗಾರು ಪೂರ್ವದಲ್ಲಿ 98 ಮಿ.ಮೀ ಮಳೆ ದಾಖಲಾಗಿದ್ದು, ವಾಡಿಕೆ ಮಳೆಗಿಂತ ಶೇ.62ರಷ್ಟು ಹೆಚ್ಚಾಗಿದೆ.

ಈ ಎರಡು ಜಿಲ್ಲೆಗಳ ನಂತರ ದಾವಣಗೆರೆ, ರಾಯಚೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಹೆಚ್ಚಾಗಿ ಹಾನಿಯಾಗಿದೆ. ರಾಜ್ಯದಾದ್ಯಂತ 3,750 ಹೆಕ್ಟೇರ್ ಜೋಳ, 1,782 ಹೆಕ್ಟೇರ್ ಭತ್ತ, 920 ಹೆಕ್ಟೇರ್ ಕುಸುಬೆ, 843.94 ಹೆಕ್ಟೇರ್ ಬಾಜ್ಲಿ ಮತ್ತು 711 ಹೆಕ್ಟೇರ್ ಗೋಧಿ ಬೆಳೆಗಳು ಮುಂಗಾರು ಪೂರ್ವ ಮಳೆಯಿಂದ ನಾಶವಾಗಿವೆ. ಇದು ರಬಿ ಬೆಳೆ ಬಿತ್ತನೆಯ ಅವಧಿಯಾಗಿದ್ದು, ಅನಿರೀಕ್ಷಿತ ಮಳೆಯಿಂದ ರೈತರು ಬಿತ್ತನೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಉತ್ತರ ಕರ್ನಾಟಕ ಭಾಗದಲ್ಲಿ ಸಾಮಾನ್ಯವಾಗಿ ಆಲಿಕಲ್ಲು ಮಳೆಯಾಗುವುದನ್ನು ಬಿಟ್ಟು ಈ ರೀತಿಯ ಮಳೆಯನ್ನು ನಾವು ನೋಡುವುದಿಲ್ಲ. ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿರುವುದರಿಂದ ಈ ಪ್ರಮಾಣದ ಬೆಳೆ ನಷ್ಟವನ್ನು ನಾವು ನೋಡಬೇಕಾಗಿದೆ ಎಂದು ಕೃಷಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಇದನ್ನೂ ಓದಿ: ಬೆಂಗಳೂರು ಸೇರಿ ಕರ್ನಾಟಕದ ಹಲವೆಡೆ ಜೂನ್ 6ರ ವರೆಗೆ ಮಳೆ ಸಾಧ್ಯತೆ

ಕೃಷಿ ಇಲಾಖೆಯ ನಿವೃತ್ತ ಅಧಿಕಾರಿಯೊಬ್ಬರು ಮಾತನಾಡಿ, ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗಳು ರಾಜ್ಯದಲ್ಲಿ ಬೆಳೆಗಳಿಗೆ ಅಡ್ಡಿಯಾಗುತ್ತಿವೆ. ಪ್ರತಿ ವರ್ಷವೂ ಬರ ಅಥವಾ ಪ್ರವಾಹ ಉಂಟಾಗುತ್ತದೆ. ರಾಜ್ಯದ ಉತ್ತರ ಭಾಗಗಳಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳೆರಡೂ ಅತಿವೃಷ್ಟಿ ಅಥವಾ ಮಳೆಯ ಕೊರತೆಯಿಂದ ನಷ್ಟವಾಗುತ್ತವೆ. ಈ ವರ್ಷ ಬದಲಾಗುತ್ತಿರುವ ಹವಾಮಾನ ಮತ್ತು ಆಲಿಕಲ್ಲು ಮಳೆ ಬೆಳೆ ನಷ್ಟಕ್ಕೆ ಪ್ರಮುಖ ಕಾರಣಗಳಾಗಿವೆ. ರೈತರಿಗೆ ತೃತೀಯ ಹಂತದ ಪರಿಹಾರ ನೀಡಲು ಎರಡೂ ಇಲಾಖೆಗಳು ಮತ್ತು ಸ್ಥಳೀಯ ಆಡಳಿತದಿಂದ ಕೆಲಸ ಮಾಡಲಾಗಿದೆ ಎಂದು ಹೇಳಿದರು.

ಸಾಮಾನ್ಯವಾಗಿ ಕೃಷಿ ಬೆಳೆಗಳಿಗಿಂತ ಚಿಕ್ಕದಾದ ಬೆಳೆ ಚಕ್ರಗಳನ್ನು ಹೊಂದಿರುವ ತೋಟಗಾರಿಕಾ ರೈತರು ಆಗಾಗ್ಗೆ ಋತುಮಾನದ ವಿಪತ್ತುಗಳ ಅನುಭವಿಸುತ್ತಾರೆ. ಕಳೆದ ಕೆಲವು ತಿಂಗಳಲ್ಲಿ ಸುಮಾರು 201.6 ಕೋಟಿ ರೂ. ಮೌಲ್ಯದ ತೋಟಗಾರಿಕೆ ಬೆಳೆಗಳು ನಾಶವಾಗಿವೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಋತುಮಾನ ನೆಚ್ಚಿನ ಮಾವು ಮತ್ತು ಅದನ್ನು ಹೆಚ್ಚು ಬೆಳೆಯುವ ಜಿಲ್ಲೆ ಕೋಲಾರವು ಬೆಳೆ ನಷ್ಟದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಕೋಲಾರದಲ್ಲಿ ಸುಮಾರು 7,257 ಹೆಕ್ಟೇರ್ ತೋಟಗಾರಿಕೆ ಬೆಳೆ ನಷ್ಟವಾಗಿದೆ. ಒಟ್ಟು 6,750.5 ಹೆಕ್ಟೇರ್‌ನಲ್ಲಿ ಇತ್ತೀಚೆಗೆ ಮಾವು ನಷ್ಟವಾಗಿದ್ದು ಈಗಾಗಲೇ ಸಂಕಷ್ಟದಲ್ಲಿರುವ ಮಾವು ರೈತರನ್ನು ದಂಗುಬಡಿಸಿದೆ. ಇದರ ನಂತರ ದ್ರಾಕ್ಷಿ (1,639.3 ಹೆಕ್ಟೇರ್), ಟೊಮೆಟೊ (1,125.89 ಹೆಕ್ಟೇರ್), ಬಾಳೆ, ಪಪ್ಪಾಯಿ, ಈರುಳ್ಳಿ, ಅಡಿಕೆ ಮತ್ತು ದಾಳಿಂಬೆ ಬೆಳೆಗಳು ಮಳೆಯಿಂದ ಹಾನಿಯಾಗಿವೆ.

ಈ ಬೆಳೆಗಳ ನಷ್ಟದಿಂದಾಗಿ ಬೆಂಗಳೂರಿನಲ್ಲಿ ಹಣ್ಣು ಮತ್ತು ತರಕಾರಿಗಳ ಬೆಲೆ ಏರಿಕೆಯಾಗಿದೆ. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ನೀಡಿರುವ ನೀಡಿರುವ ಮಾಹಿತಿ ಪ್ರಕಾರ ತೋಟಗಾರಿಕಾ ಇಲಾಖೆ ಪರಿಹಾರ ನೀಡಲು 34.66 ಕೋಟಿ ರೂ. ಅಗತ್ಯವಿದೆ ಎಂದು ಇಲಾಖೆಯು ರೈತರಿಗೆ ಅಂದಾಜಿಸಿದೆ. ಈ ವರ್ಷ ಸುರಿದ ಮಳೆ ಮತ್ತು ಬಿರುಗಾಳಿಯಿಂದಾಗಿ ಕೋಲಾರ ಮತ್ತು ಬೀದರ್‌ನಲ್ಲಿ ಮಾವು ಬೆಳೆ ಹಾನಿಯಾಗಿದೆ. ಜೊತೆಗೆ ಇತರ ಕೆಲವು ಬೆಳೆಗಳಿಗೆ ಹಾನಿಯಾಗಿದೆ.

ಆದಾಗ್ಯೂ, ಎಲ್ಲಾ 12,000 ಹೆಕ್ಟೇರ್‌ಗಳಲ್ಲಿ ಶೇ 100 ಕ್ಕೆ 100 ರಷ್ಟು ಬೆಳೆ ನಷ್ಟವಾಗಿದೆ ಎಂದು ಹೇಳಲಾಗುವುದಿಲ್ಲ. ಆದರೆ ಕೆಲವು ಭಾಗಗಳಲ್ಲಿ ಹಾನಿಯಾಗಿದ್ದಂತು ಸತ್ಯ ಎಂದು ತೋಟಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಗುರುವಾರದವರೆಗೆ ಹೇಳಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:17 am, Fri, 2 June 23

ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ಮಹಾ ಶಿವರಾತ್ರಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ಜಿಬಿಎ ಆದೇಶ
ಮಹಾ ಶಿವರಾತ್ರಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ಜಿಬಿಎ ಆದೇಶ