
ಮಂಗಳೂರು: ಇತ್ತೀಚೆಗಷ್ಟೇ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಹಿಂಸಾಚಾರದಲ್ಲಿ ಪೊಲೀಸರ ಗುಂಡಿನ ದಾಳಿಗೆ ಇಬ್ಬರು ಮೃತಪಟ್ಟಿದ್ದರು. ಇಂದು ಮಂಗಳೂರಿಗೆ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ನಿಯೋಗ ಭೇಟಿ ನೀಡಿದೆ.
ಪೊಲೀಸರ ಫೈರಿಂಗ್ನಲ್ಲಿ ಮೃತಪಟ್ಟವರ ಮನೆಗಳಿಗೆ ಪಶ್ಚಿಮ ಬಂಗಾಳದ ಸಚಿವರು, ಶಾಸಕರ ತಂಡ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ 5 ಲಕ್ಷ ರೂಪಾಯಿ ಚೆಕ್ ವಿತರಿಸಿದೆ. ಸಿಎಂ ಮಮತಾ ಬ್ಯಾನರ್ಜಿ ಸೂಚನೆಯಂತೆ ಮಂಗಳೂರಿನ ಕುದ್ರೋಳಿ, ಕಂದಕ್ನಲ್ಲಿರುವ ಮೃತರ ನಿವಾಸಗಳಿಗೆ ನಿಯೋಗ ಭೇಟಿ ಕೊಟ್ಟಿದೆ.
Published On - 10:51 am, Sat, 28 December 19