AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಬ್ಬಿ: ಫೋನ್​​ ಪೇ ಮೂಲಕ ಲಂಚ ಪಡೆದಿದ್ದ ಪಿಎಸ್‌ಐ ಜ್ಞಾನಮೂರ್ತಿ ಗಣೇಶನ ಹಬ್ಬದ ದಿನ ಸಸ್ಪೆಂಡ್​!

ತುಮಕೂರು: ಮಾಹಿತಿ ತಂತ್ರಜ್ಞಾನ ಅಗಾಧವಾಗಿ ಬೆಳೆಯುತ್ತಿದೆ. ಅದರೊಂದಿಗೆ ಹಣಕಾಸು ವ್ಯವಹಾರವೂ ಸರಳವಾಗುತ್ತಿವೆ. ಮನಿ ಗೇಟ್​ ವೇ ಗಳ ಮೂಲಕ ಹಣಕಾಸು ವಿನಿಮಯ ಈಗ ಸಲೀಸಾಗಿ ನಡೆಯುತ್ತಿದೆ. ಆದರೆ ಇಲ್ಲೊಬ್ಬ ಆರೋಪಿ ಪೊಲೀಸ್​ ಅಧಿಕಾರಿ ಕಾಲಕ್ಕೆ ತಕ್ಕಂತೆ ಫೋನ್​​ ಪೇ ಮೂಲಕವೂ ಲಂಚ ಪಡೆದಿದ್ದು, ನೋಡಿದಿರಾ! ನಾವು ಹೆಂಗೆ ಎಂದು ವ್ಯಂಗ್ಯವಾಗಿ ಕೇಳುವಂತಿದೆ. ಆದರೆ ಪೊಲೀಸ್​ ಇಲಾಖೆ ಆತನನ್ನು ಗಣೇಶನ ಹಬ್ಬದ ದಿನ ಸಸ್ಪೆಂಡ್​ ಮಾಡಿ ಮನೆಗೆ ಕಳಿಸಿದೆ. ಗುಬ್ಬಿ ಪೊಲೀಸ್​ ಠಾಣೆ ಪಿಎಸ್‌ಐ ಜ್ಞಾನಮೂರ್ತಿ ಅಮಾನತುಗೊಂಡ ಕಿರಿಯ […]

ಗುಬ್ಬಿ: ಫೋನ್​​ ಪೇ ಮೂಲಕ ಲಂಚ ಪಡೆದಿದ್ದ ಪಿಎಸ್‌ಐ ಜ್ಞಾನಮೂರ್ತಿ ಗಣೇಶನ ಹಬ್ಬದ ದಿನ ಸಸ್ಪೆಂಡ್​!
ಗುಬ್ಬಿ: ಫೋನ್​​ ಪೇ ಮೂಲಕ ಲಂಚ ಪಡೆದಿದ್ದ ಪಿಎಸ್‌ಐ ಜ್ಞಾನಮೂರ್ತಿ ಗಣೇಶನ ಹಬ್ಬದ ದಿನ ಸಸ್ಪೆಂಡ್​!
TV9 Web
| Updated By: ಸಾಧು ಶ್ರೀನಾಥ್​|

Updated on:Sep 10, 2021 | 2:44 PM

Share

ತುಮಕೂರು: ಮಾಹಿತಿ ತಂತ್ರಜ್ಞಾನ ಅಗಾಧವಾಗಿ ಬೆಳೆಯುತ್ತಿದೆ. ಅದರೊಂದಿಗೆ ಹಣಕಾಸು ವ್ಯವಹಾರವೂ ಸರಳವಾಗುತ್ತಿವೆ. ಮನಿ ಗೇಟ್​ ವೇ ಗಳ ಮೂಲಕ ಹಣಕಾಸು ವಿನಿಮಯ ಈಗ ಸಲೀಸಾಗಿ ನಡೆಯುತ್ತಿದೆ. ಆದರೆ ಇಲ್ಲೊಬ್ಬ ಆರೋಪಿ ಪೊಲೀಸ್​ ಅಧಿಕಾರಿ ಕಾಲಕ್ಕೆ ತಕ್ಕಂತೆ ಫೋನ್​​ ಪೇ ಮೂಲಕವೂ ಲಂಚ ಪಡೆದಿದ್ದು, ನೋಡಿದಿರಾ! ನಾವು ಹೆಂಗೆ ಎಂದು ವ್ಯಂಗ್ಯವಾಗಿ ಕೇಳುವಂತಿದೆ. ಆದರೆ ಪೊಲೀಸ್​ ಇಲಾಖೆ ಆತನನ್ನು ಗಣೇಶನ ಹಬ್ಬದ ದಿನ ಸಸ್ಪೆಂಡ್​ ಮಾಡಿ ಮನೆಗೆ ಕಳಿಸಿದೆ.

ಗುಬ್ಬಿ ಪೊಲೀಸ್​ ಠಾಣೆ ಪಿಎಸ್‌ಐ ಜ್ಞಾನಮೂರ್ತಿ ಅಮಾನತುಗೊಂಡ ಕಿರಿಯ ಅಧಿಕಾರಿ. ಈತನನ್ನು ಅಮಾನತುಗೊಳಿಸಿ ತುಮಕೂರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ (ಎಸ್​ಪಿ) ರಾಹುಲ್ ಇಂದು ಆದೇಶ ಹೊರಡಿಸಿದ್ದಾರೆ.

ಏನಿದು ಲಂಚ ವೃತ್ತಾಂತ: ಕಳೆದ ವಾರ ವಿನಾಕಾರಣ ಮ್ಯಾಕ್ಸಿಕ್ಯಾಬ್ ವೊಂದನ್ನು ತಡೆದು ಚಾಲಕನಿಗೆ ಕಿರುಕುಳ ನೀಡಿದ ಆರೋಪವನ್ನು ಪಿಎಸ್ಐ ಎದುರಿಸುತ್ತಿದ್ದರು. ಕ್ಯಾಬ್ ಚಾಲಕನಿಂದ 7 ಸಾವಿರ ರೂ. ಲಂಚವನ್ನು ಫೋನ್ ಪೇ ಮೂಲಕ ಪಿಎಸ್‌ಐ ಪಡೆದುಕೊಂಡಿದ್ದರು. ಜೀಪ್ ಚಾಲಕ ಕರಿಯಪ್ಪ ಮೊಬೈಲ್ ನಂಬರಿಗೆ ಪಿಎಸ್ಐ ಲಂಚದ ಹಣವನ್ನು ಫೋನ್ ಪೇ ಮಾಡಿಸಿಕೊಂಡದ್ದರು!

ಗುಬ್ಬಿ ಪೊಲೀಸ್​ ಠಾಣೆಯ PSI ಜ್ಞಾನಮೂರ್ತಿ ಲಂಚ ಸ್ವೀಕರಿಸುತ್ತಿದ್ದಾರೆಂದು ಆರೋಪಿಸಿ, ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಟ್ಯಾಕ್ಸಿ ಚಾಲಕರು ತುಮಕೂರು ಜಿಲ್ಲೆ ಗುಬ್ಬಿ ಠಾಣೆ ಮುಂದೆ ಮಿಂಚಿನ ಪ್ರತಿಭಟನೆ, ಧರಣಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಪಿಎಸ್‌ಐ ಜ್ಞಾನಮೂರ್ತಿಯನ್ನು ಅಮಾನತು ಮಾಡಿ ತುಮಕೂರು ಎಸ್‌ಪಿ ರಾಹುಲ್ ಕುಮಾರ್ ಶಹಾಪುರ್ ಆದೇಶಿಸಿದ್ದಾರೆ.

Also Read: ಮೃತದೇಹ ಸಾಗಿಸೋಲ್ಲ ಎಂದ ಮ್ಯಾಕ್ಸಿ ಕ್ಯಾಬ್ ಚಾಲಕ, ದಂಡ ಹಾಕಿ ಲಂಚ ಪಡೆದ ಪಿಎಸ್ಐ; ಗುಬ್ಬಿ ಚಾಲಕರ ಮಿಂಚಿನ ಪ್ರತಿಭಟನೆ Also Read: ತುಮಕೂರು ಸಂಸದ ಮತ್ತು ಗುಬ್ಬಿ ಶಾಸಕರ ನಡುವೆ ವಾಕ್ಸಮರ; ಎಂಎಸ್ಎಸ್ ಸ್ಟೇಷನ್ ಉದ್ಘಾಟನೆ ಕಾರ್ಯಕ್ರಮಲ್ಲೇ ಪರಸ್ಪರ ಜಗಳ

(bribe through phonepe Gubbi police station sub inspector jnana murthy suspended)

Published On - 1:57 pm, Fri, 10 September 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ