ಛೋಟಾಸಾಬರಪಾಳ್ಯ ಅತ್ಯಾಚಾರ ಕೇಸ್ ಆರೋಪಿಗಳನ್ನು ಬಂಧಿಸಿ; ಗ್ರಾಮೀಣ ಭಾಗಕ್ಕೂ ಗಮನ ಕೊಡಿ: ಜೆಡಿಎಸ್ ಶಾಸಕ ಆಗ್ರಹ

| Updated By: ganapathi bhat

Updated on: Aug 27, 2021 | 4:22 PM

15 ದಿನಗಳಲ್ಲಿ ಆರೋಪಿಗಳನ್ನು ಬಂದಿಸದೇ ಇದ್ದಲ್ಲಿ, ಕುಮಾರಸ್ವಾಮಿ ಹಾಗೂ ದೇವೇಗೌಡರ ಸಮ್ಮುಖದಲ್ಲಿ ಪ್ರತಿಭಟನೆ ನಡೆಸುತ್ತೇವೆ. 25 ಸಾವಿರ ಜನರನ್ನು ಸೇರಿಸಿ ಆರೋಪಿಗಳನ್ನ ಬಂದಿಸೋವರೆಗೂ ಪ್ರತಿಭಟನೆ ಮಾಡುತ್ತೇವೆ ಎಂದು ಶಾಸಕ ಆಗ್ರಹಿಸಿದ್ದಾರೆ.

ಛೋಟಾಸಾಬರಪಾಳ್ಯ ಅತ್ಯಾಚಾರ ಕೇಸ್ ಆರೋಪಿಗಳನ್ನು ಬಂಧಿಸಿ; ಗ್ರಾಮೀಣ ಭಾಗಕ್ಕೂ ಗಮನ ಕೊಡಿ: ಜೆಡಿಎಸ್ ಶಾಸಕ ಆಗ್ರಹ
ಜೆಡಿಎಸ್ ಶಾಸಕ ಗೌರಿಶಂಕರ್
Follow us on

ತುಮಕೂರು: ಇಲ್ಲಿನ ಛೋಟಾಸಾಬರಪಾಳ್ಯದಲ್ಲಿ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತುಮಕೂರಿನಲ್ಲಿ ಜೆಡಿಎಸ್ ಶಾಸಕ ಗೌರಿಶಂಕರ್ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ತಾಲೂಕಿನಲ್ಲಿ ಪೊಲೀಸರ ಮೇಲೆ ವಿಶ್ವಾಸವೇ ಇಲ್ಲ. ನಮ್ಮ ತಾಲೂಕಿನಲ್ಲಿ ಜೂಜು, ಅಕ್ರಮವಾಗಿ ಮದ್ಯ ಮಾರಾಟ ಆಗುತ್ತಿದೆ. ಇದಕ್ಕೆ ಕ್ಯಾತ್ಸಂದ್ರ ಸಿಪಿಐ, ಪಿಎಸ್‌ಐ ಕುಮ್ಮಕ್ಕು ನೀಡಿದ್ದಾರೆ ಎಂದು ಪೊಲೀಸರ ವಿರುದ್ಧ ಜೆಡಿಎಸ್ ಶಾಸಕ ಗೌರಿಶಂಕರ್ ಆರೋಪ ಮಾಡಿದ್ದಾರೆ. ಮೈಸೂರಿನಲ್ಲಿಯೂ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್ ಆಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಗೃಹ ಸಚಿವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಸೂಚಿಸಿದ್ದರು ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಯಿಂದ ಕರೆ ಮಾಡಿ ಮೈಸೂರು ಪ್ರಕರಣಗಳ ಬಗ್ಗೆ ಕ್ರಮ ಕೈಗೊಳ್ಳಲು ಆರಗ ಜ್ಞಾನೇಂದ್ರಗೆ ಸೂಚಿಸಿದ್ದಾರೆ. ನಗರ ಪ್ರದೇಶಕ್ಕೆ ಕೊಟ್ಟ ಗಮನ ಗ್ರಾಮೀಣ ಭಾಗಕ್ಕೂ ಕೊಡಬೇಕು. ಸಿಎಂ, ಗೃಹ ಸಚಿವರೇ ನೀವೂ ಗ್ರಾಮೀಣ ಭಾಗದಿಂದ ಬಂದವರು. ಗ್ರಾಮೀಣ ಭಾಗದಲ್ಲಿರುವ ಹೆಣ್ಣು ಮಗಳಿಗೆ ಅನ್ಯಾಯವಾಗಿದೆ. ಈ ಬಗ್ಗೆ ಗಮನಹರಿಸಿ ಎಂದು ಶಾಸಕ ಗೌರಿಶಂಕರ್ ಒತ್ತಾಯ ಮಾಡಿದ್ದಾರೆ. ಕೂಡಲೇ ಅತ್ಯಾಚಾರ ಆರೋಪಿಗಳನ್ನು ಬಂಧಿಸಿ ಎಂದು ಆಗ್ರಹಿಸಿದ್ದಾರೆ.

ತುಮಕೂರು ನಡೆದಾಡುವ ದೇವರು ಶಿವಕುಮಾರ ಸ್ವಾಮಿಗಳು ಇರುವ ಸ್ಥಳ. ಇಲ್ಲಿನ ಗ್ರಾಮೀಣ ಭಾಗದಲ್ಲಿ ವ್ಯಾಪ್ತಿಯಲ್ಲಿ ಈ ವರ್ಷ ಎರಡು ಕೊಲೆಗಳಾಗಿವೆ. ಕಳೆದ ಮಂಗಳವಾರ ಮಧ್ಯಾಹ್ನ ಕೊಲೆ ಹಾಗೂ ಸಾಮೂಹಿಕ ಅತ್ಯಾಚಾರ ನಡೆದಿದೆ. ಗ್ರಾಮೀಣ ಕುಟುಂಬಕ್ಕೆ ಅನ್ಯಾಯವಾಗಿದೆ. ಮೈಸೂರು ಪ್ರಕರಣದ ರೀತಿಯಲ್ಲಿ ಇಲ್ಲಿಯೂ ಗಮನಹರಿಸಿ ತನಿಖೆ ತಂಡ ರಚಿಸಿ ಆರೋಪಿಗಳನ್ನು ಬಂದಿಸಬೇಕು. ಆಗಿರುವ ಅನ್ಯಾಯಕ್ಕೆ ಪರಿಹಾರ ನೀಡಬೇಕು. ಮತ್ತೆ ಇಂತಹ ಪ್ರಕರಣಗಳು ಮರುಕಳಿಸಬಾರದು ಎಂದು ಹೇಳಿದ್ದಾರೆ.

15 ದಿನಗಳಲ್ಲಿ ಆರೋಪಿಗಳನ್ನು ಬಂದಿಸದೇ ಇದ್ದಲ್ಲಿ, ಕುಮಾರಸ್ವಾಮಿ ಹಾಗೂ ದೇವೇಗೌಡರ ಸಮ್ಮುಖದಲ್ಲಿ ಪ್ರತಿಭಟನೆ ನಡೆಸುತ್ತೇವೆ. 25 ಸಾವಿರ ಜನರನ್ನು ಸೇರಿಸಿ ಆರೋಪಿಗಳನ್ನ ಬಂದಿಸೋವರೆಗೂ ಪ್ರತಿಭಟನೆ ಮಾಡುತ್ತೇವೆ. ತುಮಕೂರು ಎಸ್​ಪಿ ಕಚೇರಿ ಬಳಿ ಪ್ರತಿಭಟನೆ ನಡೆಸುತ್ತೇವೆ. ಶೀಘ್ರವಾಗಿ ಅತ್ಯಾಚಾರ ಕೊಲೆ ಮಾಡಿರೋ ಆರೋಪಿಗಳನ್ನ ಬಂಧಿಸಬೇಕು ಎಂದು ಶಾಸಕ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ದುಬೈ ಮಾದರಿಯಲ್ಲಿಯೇ ಇಲ್ಲಿಯೂ ಅದು ಕಟ್ ಇದು ಕಟ್ ಆಗ್ಬೇಕು: ಅತ್ಯಾಚಾರ ಪ್ರಕರಣಕ್ಕೆ ಆನಂದ್ ಸಿಂಗ್ ಪ್ರತಿಕ್ರಿಯೆ

ದೇಗುಲದ ಬಳಿ ಅನ್ಯಕೋಮಿನ ಯುವಕ, ಯುವತಿಯರ ಸುತ್ತಾಟ; ಹಿಂದೂಪರ ಸಂಘಟನೆಯ ದಾಳಿ: ಮೂವರ ಬಂಧನ

Published On - 4:21 pm, Fri, 27 August 21