AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಮಕೂರು: ಜಾತಿ ಗಣತಿಗೆ ಮ್ಯಾಪ್ ನೋಡಿಕೊಂಡು ಹೋಗಿ ಮೂಳೆ ಮುರಿದುಕೊಂಡ ಶಿಕ್ಷಕ

ಜಾತಿಗಣತಿ ಆರಂಭದಿಂದಲೂ ಒಂದಿಲ್ಲೊಂದು ಸಮಸ್ಯೆಗಳು ಕಂಡುಬರುತ್ತಿವೆ. ಜಾತಿಗಣತಿ ಮಾಡಲು ಹೋದ ಶಿಕ್ಷಕರು ಸಮಸ್ಯೆಗಳು ತಪ್ಪಿಲ್ಲ. ಇತ್ತೀಚೆಗೆ ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿ ಮೇಲೆ 10ಕ್ಕೂ ಹೆಚ್ಚು ನಾಯಿಗಳು ದಾಳಿ ಮಾಡಿದ್ದವು. ಇದೀಗ ತುಮಕೂರಿನಲ್ಲಿ ಗಣತಿಗೆ ತೆರಳಿದ್ದ ಶಿಕ್ಷಕನ ಮೇಲೆ ನಾಯಿ ದಾಳಿಗೆ ಮುಂದಾಗಿದ್ದು, ಅದರಿಂದ ತಪ್ಪಿಸಿಕೊಳ್ಳಲು ಹೋಗಿ ಬೈಕ್​​ ಸ್ಕಿಡ್​ ಆಗಿ ಬಿದ್ದು ಕೈಮುದಿರುವಂತಹ ಘಟನೆ ನಡೆದಿದೆ.

ತುಮಕೂರು: ಜಾತಿ ಗಣತಿಗೆ ಮ್ಯಾಪ್ ನೋಡಿಕೊಂಡು ಹೋಗಿ ಮೂಳೆ ಮುರಿದುಕೊಂಡ ಶಿಕ್ಷಕ
ಮೂಳೆ ಮುರಿದುಕೊಂಡ ಶಿಕ್ಷಕ
Jagadisha B
| Edited By: |

Updated on: Oct 10, 2025 | 4:41 PM

Share

ತುಮಕೂರು, ಅಕ್ಟೋಬರ್​ 10: ಆರಂಭದಿಂದಲೂ ಗೊಂದಲದ ಗೂಡಾದ ಜಾತಿಗಣತಿಗೆ (survey) ಹಲವು ಅಡತಡೆಗಳು ಸೃಷ್ಟಿಯಾಗಿದ್ದವು. ಆ್ಯಪ್ ಸಮಸ್ಯೆಯಿಂದ ಹಿಡಿದು ಸಿಬ್ಬಂದಿಗಳಿಗೆ ಎದುರಾದ ಸಮಸ್ಯೆಗಳು ಜಾತಿಗಣತಿ ಬಗ್ಗೆ ದೊಡ್ಡ ಚರ್ಚೆಯನ್ನೇ ಸೃಷ್ಟಿಸಿತ್ತು. ಇದರ ನಡುವೆ ಈಗ ತುಮಕೂರಿನಲ್ಲಿ (Tumakuru) ಗಣತಿಗೆ ತೆರಳಿದ್ದ ಶಿಕ್ಷಕ ಬೈಕ್​​ನಿಂದ ಬಿದ್ದು ಕೈ ಮೂಳೆ ಮುರಿದಿದ್ದು, ಪತಿಯ ನರಳಾಟ ಕಂಡು ಪತ್ನಿ ಕೆಲಸದ ಒತ್ತಡದ ಬಗ್ಗೆ ಬೇಸರ ಹೊರಹಾಕಿದ್ದಾರೆ.

ಜಾತಿಗಣತಿ ಆರಂಭವಾದಾಗಿನಿಂದಲೂ ಸಮಸ್ಯೆ ಮೇಲೆ ಸಮಸ್ಯೆಗಳು ಕಂಡುಬರುತ್ತಿವೆ. ಮಾಹಿತಿ ನೀಡಲು ಜನರು ಅಪಸ್ವರ ತೆಗೆಯುತ್ತಿದ್ದಾರೆ. ಜೊತೆಗೆ ಲೊಕೇಶನ್ ಸಮಸ್ಯೆ. ಹೀಗೆ ಹತ್ತಾರು ಸಮಸ್ಯೆಗಳ ನಡುವೆ ಆರಂಭವಾದ ಜಾತಿಗಣತಿ ನಿಗದಿತ ದಿನಾಂಕದಂದು ಪೂರ್ಣಗೊಂಡಿರಲಿಲ. ಹೀಗಾಗಿ ದಿನಾಂಕ ವಿಸ್ತರಿಸಿದ ಸರ್ಕಾರದ ನಿರ್ಧಾರದ ನಡುವೆ ಜಾತಿಗಣತಿ ಮುಂದುವರೆದಿತ್ತು. ಆದರೆ ಇದರ ನಡುವೆ ನಿನ್ನೆ ತುಮಕೂರಿನಲ್ಲಿ ಜಾತಿಗಣತಿಯಲ್ಲಿ ತೊಡಗಿದ್ದ ಸಂಗಪ್ಪ ನೇಗಲಿ ಎಂಬ ಶಿಕ್ಷಕ ಲೊಕೇಶನ್ ಆಧರಿಸಿ ಮನೆಯೊಂದರ ಬಳಿ ತೆರಳಲು ಮಣ್ಣಿನ ಕಾಲು ದಾರಿ ಬಳಸಿ ಹೊಗುವಾಗ ಬೈಕ್​​ನಿಂದ ಬಿದಿದ್ದು, ಕೈ ಮೂಳೆ ಮುರಿದಿದೆ. ನಿನ್ನೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ತುಮಕೂರು ತಾಲೂಕಿನ ಕಳ್ಳಿಪಾಳ್ಯದಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: ಜಾತಿ ಗಣತಿಗೆ ಹೋಗಿದ್ದ ಶಿಕ್ಷಕಿ ಮೇಲೆ ನಾಯಿ ದಾಳಿ

ಸಂಗಪ್ಪ ನಿನ್ನೆ ಎಂದಿನಂತೆ ಬೆಳಿಗ್ಗೆ 8 ರಿಂದಲೇ ಜಾತಿಗಣತಿ ಆರಂಭಿಸಿದ್ದು, ಆರು ಮನೆ ಮುಗಿಸಿದ್ದರು. ನಂತರ ತೋಟದ ಸಾಲಿನಲ್ಲಿದ್ದ ಮನೆಯ ಬಳಿ ತೆರಳುತಿದ್ದರಂತೆ. ಈ ವೇಳೆ ಮಣ್ಣಿನ ಕಾಲು ದಾರಿ ಬಳಿಸಿ ಬೈಕ್​​ನಲ್ಲಿ ತೆರಳುವಾಗ ಹಿಂದೆಯಿಂದ ನಾಯಿ ಕಚ್ಚಲು ಬಂದಿತ್ತಂತೆ. ನಾಯಿಯಿಂದ ತಪ್ಪಿಸಿಕೊಳ್ಳಲು ವೇಗವಾಗಿ ಬೈಕ್ ಚಲಾಯಿಸಿದ ಪರಿಣಾಮ ಬೈಕ್ ಸ್ಕಿಡ್ ಆಗಿ ಬಿದಿದ್ದಾರೆ. ಈ ವೇಳೆ ಸಂಗಪ್ಪ ಅವರ ಎಡಗೈ ಮೇಲೆ ಬೈಕ್ ಬಿದ್ದು, ಮೂಳೆ ಮುರಿದಿದೆ.

ಮತ್ತೊಂದೆಡೆ ಪತಿಯ ಈ ಸ್ಥಿತಿ ಕಂಡು ಪತ್ನಿ ಆತಂಕಗೊಂಡಿದ್ದಾರೆ. ದಸರಾ ರಜೆ ಇದ್ದರೂ ಸಹ ಕೆಲಸ ಮಾಡುತಿದ್ದಾರೆ. ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಹೊದರೇ ಮತ್ತೆ ಸಂಜೆ 6 ಗಂಟೆಗೆ ವಾಪಾಸ್ ಆಗುತ್ತಾರೆ. ಮನೆಗೆ ಬಂದಾಗ ಸುಸ್ತಾಗಿರುತ್ತಾರೆ. ನನಗೆ ಹಾಗೂ ಮಗುವಿಗೆ ಸಮಯ ನೀಡಲು ಆಗುತ್ತಿಲ್ಲ. ಕೊಟ್ಟಿರುವ ಮನೆಗಳ ಟಾರ್ಗೆಟ್ ಹೆಚ್ಚಾಗಿದೆ. ಅದರ ನಡುವೆಯೂ ಅವರು ಒತ್ತಡದಲ್ಲಿ ಕೆಲಸ ಮಾಡುತಿದ್ದಾರೆ. ಆದರೆ ನಡುವೆ ಮ್ಯಾಪ್ ದಾರಿ ಹಿಡಿದು ಹೊದಾಗ ಈ ಘಟನೆ ಆಗಿದೆ. ಮನೆಯಲ್ಲಿ ನನ್ನ ಗಂಡ ಒಬ್ಬರೇ ದುಡಿಯುತ್ತಾರೆ. ಅವರಿಗೆ ಹೀಗಾಗಿರುವುದು ಆಂತಕ ಮೂಡಿಸಿದೆ ಎಂದು ಶಿಕ್ಷಕನ ಪತ್ನಿ ಭೂಮಿಕಾ ಹೇಳಿದ್ದಾರೆ.

ಇದನ್ನೂ ಓದಿ: ಹಾಸನ: ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿ ಮೇಲೆರಗಿದ 10ಕ್ಕೂ ಹೆಚ್ಚು ನಾಯಿಗಳು, ರಕ್ಷಣೆಗೆ ಬಂದವರ ಮೇಲೂ ದಾಳಿ

ಇನ್ನು ಶಿಕ್ಷಕ ಸಂಗಪ್ಪನಿಗೆ 254 ಮನೆಗಳ ಟಾರ್ಗೆಟ್ ನೀಡಲಾಗಿದೆಯಂತೆ. ಸದ್ಯ 160 ಮನೆಗಳನ್ನು ಒತ್ತಡದಲ್ಲೇ ಮುಗಿಸಿದ್ದಾರಂತೆ. ಪತಿ ಇಷ್ಟು ಕಷ್ಟ ಪಟ್ಟು ಕರ್ತವ್ಯ ನಿರ್ವಹಿಸಿದ್ದು, ಅವರಿಗೆ ಪ್ರತಿಫಲ ಸಿಗಲೇಬೇಕೆಂದು ಭೂಮಿಕಾ ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್