Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡು ವರ್ಷದಿಂದ ಸಂಬಳವಿಲ್ಲ; ಗಣರಾಜ್ಯೋತ್ಸವ ವೇಳೆ ಕಣ್ಣೀರು ಹಾಕಿದ್ದ ಕಂಪ್ಯೂಟರ್ ಆಪರೇಟರ್​ಗೆ ಸಿಕ್ತು 1 ತಿಂಗಳ ಸಂಬಳ

ಮೊನ್ನೆಯಷ್ಟೇ ನಡೆದ ಕೆಡಿಪಿ ಸಭೆಯಲ್ಲಿ ವಿಷಯವನ್ನು ಶಾಸಕರು ಹಾಗೂ ತಹಸೀಲ್ದಾರ್‌ರವರ ಗಮನಕ್ಕೂ ತಂದಿದ್ದೇನೆ. ಶಾಸಕರು 12 ಗಂಟೆಯೊಳಗಾಗಿ ವೇತನ ಸಮಸ್ಯೆ ಬಗೆಹರಿಸುವಂತೆ ತಾಲೂಕು ಪಂಚಾಯತಿ ಈಓ ರವರಿಗೆ ಸೂಚಿಸಿದರೂ, ತಮಗೆ ಈವರೆವಿಗೆ ವೇತನ ನೀಡಲಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಎರಡು ವರ್ಷದಿಂದ ಸಂಬಳವಿಲ್ಲ; ಗಣರಾಜ್ಯೋತ್ಸವ ವೇಳೆ ಕಣ್ಣೀರು ಹಾಕಿದ್ದ ಕಂಪ್ಯೂಟರ್ ಆಪರೇಟರ್​ಗೆ ಸಿಕ್ತು 1 ತಿಂಗಳ ಸಂಬಳ
ಜಯಲಕ್ಷ್ಮೀ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jan 28, 2022 | 11:07 AM

ತುಮಕೂರು: ಗಣರಾಜ್ಯೋತ್ಸವದ (Republic day) ಕಾರ್ಯಕ್ರಮ ಮುಗಿಯುವ ಹೊತ್ತಿನಲ್ಲಿ ವೇದಿಕೆಗೆ ಆಗಮಿಸಿದ ಮಹಿಳೆಯೊಬ್ಬರು, ತಮಗೆ ಎರಡು ವರ್ಷಗಳಿಂದ ಕ್ಷುಲ್ಲಕ ಕಾರಣಕ್ಕೆ ವೇತನ ತಡೆಹಿಡಿಯಲಾಗಿದೆ ಎಂದು ವೇದಿಕೆಯಲ್ಲಿಯೇ ಶಾಸಕರ ಗಮನಕ್ಕೆ ತಂದ ಘಟನೆ ತುಮಕೂರು ಜಿಲ್ಲೆಯ ಶಿರಾದಲ್ಲಿ ನಡೆದಿದೆ. ತಹಸೀಲ್ದಾರ್ ಮತ್ತು ಶಾಸಕರ ಗಮನಕ್ಕೆ ತಂದರೂ ಈ ವರೆಗೆ ವೇತನ ನೀಡಲಾಗಿಲ್ಲ ಎಂದ ಮಹಿಳೆ(Woman) ನ್ಯಾಯ ಕೊಡಿ ಎಂದು ಅವಲತ್ತುಕೊಂಡಿದ್ದರು. ಮಹಿಳೆ ತಾಲೂಕಿನ ಹುಲಿಕುಂಟೆ ಗ್ರಾಮ ಪಂಚಾಯತಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ‌ ಮಾಡುತ್ತಿದ್ದಾರೆ. ಆದರೆ ಕಳೆದ ಎರಡು ವರ್ಷಗಳಿಂದ ಸಂಬಳನೇ(Salary) ನೀಡಿಲ್ಲ ಎಂದು ಮಹಿಳೆ ಆರೋಪಿಸಿದ್ದರು.

ತಾಜಾ ಮಾಹಿತಿಗಳ ಪ್ರಕಾರ ಕಂಪ್ಯೂಟರ್ ಆಪರೇಟರ್‌ ಜಯಲಕ್ಷ್ಮೀಗೆ 1 ತಿಂಗಳ ಸಂಬಳವನ್ನು ಶಿರಾ ತಾಲೂಕು ಪಂಚಯಾತಿ ಇಒ ನೀಡಿದ್ದಾರೆ. ಬಾಕಿಸಂಬಳವನ್ನು ಶೀಘ್ರದಲ್ಲೇ ವಿತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಏನಿದು ಸಂಬಳ ಬಡವಾಡೆ ಆಗದ ಕತೆ? ತನ್ನ ಎರಡು ಮಕ್ಕಳೊಂದಿಗೆ ಆಗಮಿಸಿದ್ದ ಜಯಲಕ್ಷ್ಮೀ ಎನ್ನುವ ಮಹಿಳೆ ತಾನು ಹುಲಿಕುಂಟೆ ಗ್ರಾಮ ಪಂಚಾಯಿತಿಯಲ್ಲಿ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಎರಡು ವರ್ಷಗಳಿಂದ ವೇತನ ನೀಡಲಾಗಿಲ್ಲ. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಓ ರವರಿಗೆ ದೂರು ಸಲ್ಲಿಸಿದ್ದೇನೆ. ಮೊನ್ನೆಯಷ್ಟೇ ನಡೆದ ಕೆಡಿಪಿ ಸಭೆಯಲ್ಲಿ ವಿಷಯವನ್ನು ಶಾಸಕರು ಹಾಗೂ ತಹಸೀಲ್ದಾರ್‌ರವರ ಗಮನಕ್ಕೂ ತಂದಿದ್ದೇನೆ. ಶಾಸಕರು 12 ಗಂಟೆಯೊಳಗಾಗಿ ವೇತನ ಸಮಸ್ಯೆ ಬಗೆಹರಿಸುವಂತೆ ತಾಲೂಕು ಪಂಚಾಯತಿ ಈಓ ರವರಿಗೆ ಸೂಚಿಸಿದರೂ, ತಮಗೆ ಈವರೆವಿಗೆ ವೇತನ ನೀಡಲಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಸ್ಥಳದಲ್ಲಿದ್ದ ಈಓ ಅವರಿಗೆ ಸೂಚನೆ ನೀಡಿದ ಶಾಸಕರು, ಸಮಸ್ಯೆ ಬಗೆಹರಿಸುವಂತೆ ಸೂಚಿಸಿ, ಸಭೆಯಿಂದ ಹೊರನಡೆದರು. ಶಾಸಕರು, ತಹಸೀಲ್ದಾರ್ ಎಲ್ಲರೂ ತೆರಳಿದರೂ ವೇದಿಕೆ ಬಿಟ್ಟು ಇಳಿಯಲು ಒಪ್ಪದ ಮಹಿಳೆ, ತನಗೆ ನ್ಯಾಯ ಕೊಡಿಸಿ ಎಂದು ಕಣ್ಣೀರು ಸುರಿಸಿದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಮಹಿಳೆ, ತನ್ನ ವೇತನ ತಡೆ ಹಿಡಿಯಲು ಪಂಚಾಯಿತಿ ಅಧ್ಯಕ್ಷೇ ಅಕ್ಕಮ್ಮ ಹಾಗೂ ಮಗನು ಪಾಂಡುರಂಗಪ್ಪ  ಕಾರಣ. ತಾನು ಕೆಲಸ ನಿರ್ವಹಿಸುತ್ತಿರುವ ಪಂಚಾಯಿತಿ ವ್ಯಾಪ್ತಿಯಿಂದ ಹೊರತಾದ ಪ್ರದೇಶದಿಂದ ಓಡಾಡುತ್ತಿದ್ದೇನೆ ಎನ್ನುವ ವಿಚಾರದಿಂದ ಹಿಡಿದು, ನನಗೆ ಮುಜುಗುರ ಆಗುವಂತೆ ಮಾತನಾಡುತ್ತಾನೆ. ಗಂಡನನ್ನು ಕಳೆದುಕೊಂಡಿರುವ ನನಗೆ ಇರುವ ಇಬ್ಬರು ಮಕ್ಕಳನ್ನು ಸಾಕಲು ವೇತನದ ಅವಶ್ಯಕತೆ ಇದೆ. ನನಗೆ ಬರಬೇಕಾಗಿರುವ ಸಂಬಳ ಕೊಡಿಸಿ ಇಲ್ಲವೇ ವಿಷವನ್ನಾದರೂ ಕೊಡಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳ ವೈಫಲ್ಯ: ಸ್ಥಳದಲ್ಲಿದ್ದ ನಗರಸಭೆ ಸದಸ್ಯೆ ಉಮಾ ವಿಜಯರಾಜ್ ಮಹಿಳೆಯನ್ನು ಸಾಂತ್ವನಗೊಳಿಸಿ, ಶಾಸಕರ ಜೊತೆಯಲ್ಲಿ ಚರ್ಚಿಸಿ ಶೀಘ್ರದಲ್ಲೇ ವೇತನ ಬಿಡುಗಡೆ ಮಾಡಿಸಿ ಕೊಡುವ ಭರವಸೆ ನೀಡಿದರೂ ಮಹಿಳೆ ಅವರ ಮಾತನ್ನು ನಂಬಲು ಸಿದ್ಧರಿರಲಿಲ್ಲ. ಕಾರಣ ಈ ಹಿಂದೆ ನಾಲ್ಕು ತಿಂಗಳ ಹಿಂದೆ ಸಿಇಓ ರವರಿಗೆ ದೂರು ಸಲ್ಲಿಸಿದ್ದ ಸಮಯದಲ್ಲಿ ಅಧಿಕಾರಿಗಳು ಚೆಕ್ ರೆಡಿ ಮಾಡಿದ್ದು, ಈವರೆವಿಗೆ ಅಧ್ಯಕ್ಷರ ಸಹಿ ಮಾಡಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಮಹಿಳೆ ತಿಳಿಸಿದ್ದಾರೆ.

ಸರ್ಕಾರದ ನಿಯಮಾವಳಿಗಳ ಅಡಿಯಲ್ಲಿ ನೇಮಕಾತಿಗೊಂಡಿರುವ ಮಹಿಳೆಯೊಬ್ಬರಿಗೆ ಸಿಗಬೇಕಾದ ನ್ಯಾಯಯುತ ವೇತನ ಬಿಡುಗಡೆ ಮಾಡಿಕೊಡುವಲ್ಲಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ, ಬೇಜವಾಬ್ದಾರಿತನ, ವೈಫಲ್ಯ ಎದ್ದು ಕಾಣಿಸುತ್ತಿದೆ ಎನ್ನುವುದು ಮಾತ್ರ ಸತ್ಯ.

ಕಂಪ್ಯೂಟರ್ ಆಪರೇಟರ್‌ಗೆ ಕೊನೆಗೂ ಸಿಕ್ತು ಸಂಬಳ

ಕಂಪ್ಯೂಟರ್ ಆಪರೇಟರ್‌ ಜಯಲಕ್ಷ್ಮೀಗೆ 1 ತಿಂಗಳ ಸಂಬಳವನ್ನು ಶಿರಾ ತಾಲೂಕು ಪಂಚಯಾತಿ ಇಒ ನೀಡಿದ್ದಾರೆ. 7.5 ಸಾವಿರ ರೂಪಾಯಿ ಸಂಬಂಳದ ಚೆಕ್ ವಿತರಣೆ. ಅಲ್ಲದೇ ಬಾಕಿ ಸಂಬಳ ಶೀಘ್ರದಲ್ಲೇ ನೀಡುವುದಾಗಿ ಇಒ ಭರವಸೆ ನೀಡಿದ್ದಾರೆ. ಮಹಿಳೆಗೆ 2 ವರ್ಷದಿಂದ ಸಂಬಳ ನೀಡದ ಹಿನ್ನೆಲೆ ಕಣ್ಣೀರಿಟ್ಟದ್ದರು. ಟಿವಿ9ನಲ್ಲಿ ಈ ಬಗ್ಗೆ ವರದಿ ಪ್ರಸಾರವಾದ ಬೆನ್ನಲ್ಲೇ ಜಯಲಕ್ಷ್ಮೀಗೆ ಸಂಬಳ ವಿತರಣೆ ಮಾಡಲಾಗಿದೆ.

ವರದಿ: ಮಹೇಶ್

ಇದನ್ನೂ ಓದಿ: ಮೈಸೂರು: ಬಾಲ್ಯ ವಿವಾಹ ಪ್ರಶ್ನಿಸಿದ್ದಕ್ಕೆ ಚಾಕು ಇರಿತ; ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷನ ಮೇಲೆ ಹಲ್ಲೆ

ಆರಗ ಜ್ಞಾನೇಂದ್ರ ಸ್ವಕ್ಷೇತ್ರದಲ್ಲಿ ಗ್ರಾಮ ಪಂಚಾಯತಿ ಸದಸ್ಯರ ನಡುವೆ ಹೊಡೆದಾಟ! ಗಂಭೀರ ಗಾಯಗೊಂಡ ವ್ಯಕ್ತಿ ಆಸ್ಪತ್ರೆಗೆ ದಾಖಲು

Published On - 8:25 am, Fri, 28 January 22

ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ