AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀವಟಿಗೆಯ ಬೆಳಕಿನಲ್ಲಿ ಭೂತಕೋಲ ಆಚರಣೆ, ಕುಣಿದು ಕುಪ್ಪಳಿಸಿ ಭಕ್ತರನ್ನು ಹರಸಿದ ದೈವಗಳು

Bhoota Kola Aradhane | ಕರುನಾಡಿನ ಕರಾವಳಿ ಸಂಪ್ರದಾಯಕ್ಕೆ ಹೆಸರುವಾಸಿ. ಇಲ್ಲಿ ದೈವಗಳನ್ನ ನಂಬುತ್ತಾ, ಅವುಗಳಿಗೆ ಪೂಜೆ ಸಲ್ಲಿಸುತ್ತಾ ಬರಲಾಗುತ್ತಿದೆ. ಹಾಗೇ ದೈವಗಳನ್ನು ಭೂತಕೋಲದ ಮೂಲಕ ಸಂತುಷ್ಟಗೊಳಿಸಲು ಕರಾವಳಿಯ ಸಂಪ್ರದಾಯ. ಹಾಗೇ ಅಲ್ಲಿ ನಡೆದ ಸಾಂಪ್ರದಾಯಿಕ ದೈವ ಕೋಲ ಎಲ್ಲರ ಗಮನ ಸೆಳೆಯಿತು.

ದೀವಟಿಗೆಯ ಬೆಳಕಿನಲ್ಲಿ ಭೂತಕೋಲ ಆಚರಣೆ, ಕುಣಿದು ಕುಪ್ಪಳಿಸಿ ಭಕ್ತರನ್ನು ಹರಸಿದ ದೈವಗಳು
ದೀವಟಿಗೆಯ ಬೆಳಕಿನಲ್ಲಿ ಭೂತಕೋಲ ಆಚರಣೆ
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on: Feb 22, 2021 | 5:41 PM

ಉಡುಪಿ: ಭಕ್ತಿ ಭಾವ ಮೂಡಿಸೋ ವೇಷ.. ಲಯಕ್ಕೆ ತಕ್ಕಂತೆ ವಾದ್ಯ ಘೋಷ.. ಚಂಡೆ ಮದ್ದಳೆಯ ನಾದ… ತಾಳಕ್ಕೆ ತಕ್ಕಂತೆ ಹೆಜ್ಜೆ. ದೈವದ ಸಿರಿ ಸಿಂಗಾರ. ನಂಬಿ ಬಂದ ಭಕ್ತರಿಗೆ ಅಭಯ.. ಅಲಂಕಾರಗೊಂಡ ನೇಮದ ಚಪ್ಪರ. ಭಯಭಕ್ತಿಯಲ್ಲಿ ಕುಳಿತ ಜನ.. ಧಗಧಗನೇ ಉರಿಯುತ್ತಿರುವ ದೊಂದಿ ಬೆಳಕು..

ಕುಟುಂಬದ ದೈವ ಮತ್ತು ಊರ ದೈವಗಳನ್ನು ಜೀವನದ ಒಂದು ಭಾಗವೇ ಆಗಿ ಆರಾಧಿಸೋದು ಕರಾವಳಿಗರ ಪದ್ಧತಿ. ಗ್ರಾಮದ ಏಳಿಗೆಗಾಗಿ ಭೂತಕೋಲ ನಡೆಸುವ ಸಂಪ್ರದಾಯ ಶತಮಾನಗಳಿಂದ ಇಲ್ಲಿ ನಡೆದುಬಂದಿದೆ. ಇಡೀರಾತ್ರಿ ನಡೆಯುವ ಈ ಭೂತಕೋಲ, ಹಲವು ನಿಗೂಢತೆಗಳ ಒಂದು ವಿಶಿಷ್ಟ ಆಚರಣೆ. ಹಾಗೇ ಉಡುಪಿಯ ಕೊಡವೂರು ಕಂಗೊಟ್ಟು ಅಣ್ಣಪ್ಪ ಪಂಜುರ್ಲಿ ದೈವಸ್ಥಾನದಲ್ಲಿ ವಿಶಿಷ್ಟವಾದ ದೈವಾರಾಧನೆ ನಡೆಯಿತು. ಕ್ಷೇತ್ರದಲ್ಲಿ ನಡೆದ ಜೀರ್ಣೋದ್ಧಾರದ ಸಲುವಾಗಿ ನಡೆದ ಈ ಭೂತಕೋಲದಲ್ಲಿ ಯಾವುದೇ ಆಧುನಿಕ ಬೆಳಕು-ಅಲಂಕಾರಗಳ ವ್ಯವಸ್ಥೆ ಇರಲಿಲ್ಲ. ಬದಲಿಗೆ ಪೂರ್ವಿಕರು ನಡೆಸಿದಂತೆ ಕೇವಲ ದೀವಟಿಗೆಯ ಬೆಳಕಿನೊಳಗೆ ದೈವಗಳು ಬಂದು ಕುಣಿದು, ಖುಷಿಪಟ್ಟು ಭಕ್ತರನ್ನು ಹರಸಿದವು.

Bhoota kola

ನಂಬಿ ಬಂದ ಭಕ್ತರಿಗೆ ಅಭಯ ನೀಡಿದ ದೈವ

ದೈವಸ್ಥಾನದ ಆವರಣದ ಸುತ್ತಲೂ ನೂರಕ್ಕೂ ಅಧಿಕ ದೀವಟಿಗೆಯನ್ನು ಇರಿಸಲಾಗಿತ್ತು. ಅಡಿಕೆ, ತೆಂಗು, ಸಿರಿ ಹೀಗೆ ಅಲಂಕಾರಕ್ಕೂ ಪ್ರಾಕೃತಿಕ ವಸ್ತುಗಳನ್ನು ಮಾತ್ರ ಬಳಸಲಾಗಿತ್ತು. ಶತಮಾನದ ಹಿಂದೆ ಪಂಜಿನ ಬೆಳಕಲ್ಲೇ ದೈವಕೋಲ ನಡೆಯುತ್ತಿತ್ತು. ಆದರೆ ಈ ತಲೆಮಾರಿನವರು ಈ ಮಾದರಿಯ ದೈವ ನರ್ತನವನ್ನು ನೋಡಿರಲು ಸಾಧ್ಯವಿಲ್ಲ. ಹಾಗಾಗಿ ಮೂಲ ಸ್ವರೂಪದಲ್ಲೇ ಮತ್ತೆ ದೈವಾರಾಧನೆ ನಡೆದದ್ದು ವಿಶೇಷ. ಒಟ್ನಲ್ಲಿ ಮಂದ ಬೆಳಕಿನ ‘ದೊಂದಿಕೋಲ’ದಿಂದ ಜನರ ಜೊತೆಗೆ ದೈವಗಳೂ ಖುಷಿ ಪಟ್ಟದ್ದು ಮಾತ್ರ ಸುಳ್ಳಲ್ಲ.

Bhoota kola

ನಂಬಿ ಬಂದ ಭಕ್ತರಿಗೆ ಅಭಯ ನೀಡಿದ ದೈವ

Bhoota kola

ದೀವಟಿಗೆಯ ಬೆಳಕಿನಲ್ಲಿ ಭೂತಕೋಲ ಆಚರಣೆ

Bhoota kola

ಭೂತ ಕುಣಿತ

Bhoota kola

ಭೂತ ಕುಣಿತ

ಇದನ್ನೂ ಓದಿ: ತುಳುನಾಡಿನ ಆಚರಣೆಗೆ ಕೊರೊನಾ ಕಂಟಕ, ಸೇವೆ ತಪ್ಪಿಸಿದ್ರೆ ತೊಂದರೆಯಾಗುತ್ತಾ? 

ಭಾರತೀಯ ಸೇನೆಯಿರುವಾಗ ನಮಗ್ಯಾವ ಭಯವೂ ಇಲ್ಲ: ಪ್ರವಾಸಿಗರು
ಭಾರತೀಯ ಸೇನೆಯಿರುವಾಗ ನಮಗ್ಯಾವ ಭಯವೂ ಇಲ್ಲ: ಪ್ರವಾಸಿಗರು
ಮನೆಮಾಳಿಗೆ ಮೇಲೆ ನಿಂತು ಧ್ವಂಸಗೊಂಡಿರುವ ಮಸೀದಿಯನ್ನು ವೀಕ್ಷಿಸಿದ ಜನ
ಮನೆಮಾಳಿಗೆ ಮೇಲೆ ನಿಂತು ಧ್ವಂಸಗೊಂಡಿರುವ ಮಸೀದಿಯನ್ನು ವೀಕ್ಷಿಸಿದ ಜನ
ಎಚ್ಚರಿಕೆಯನ್ನು ಹಗುರವಾಗಿ ತೆಗೆದುಕೊಂಡ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ!
ಎಚ್ಚರಿಕೆಯನ್ನು ಹಗುರವಾಗಿ ತೆಗೆದುಕೊಂಡ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ!
‘ಭಾಷೆ-ಸಂಸ್ಕೃತಿಗೆ ಗೌರವಿಸಬೇಕು’; ಸೋನು ನಿಗಮ್​ಗೆ ರಾಗಿಣಿ ಕಿವಿಮಾತು
‘ಭಾಷೆ-ಸಂಸ್ಕೃತಿಗೆ ಗೌರವಿಸಬೇಕು’; ಸೋನು ನಿಗಮ್​ಗೆ ರಾಗಿಣಿ ಕಿವಿಮಾತು
Live: ಆಪರೇಷನ್ ಸಿಂಧೂರ್ ಬೆನ್ನಲ್ಲೇ ಸೇನಾಧಿಕಾರಿಗಳಿಂದ ಸುದ್ದಿಗೋಷ್ಠಿ
Live: ಆಪರೇಷನ್ ಸಿಂಧೂರ್ ಬೆನ್ನಲ್ಲೇ ಸೇನಾಧಿಕಾರಿಗಳಿಂದ ಸುದ್ದಿಗೋಷ್ಠಿ
ಭಾರತದ ಬಲಿಷ್ಠ ಸೇನೆಯನ್ನು ತಡವಿರುವ ಪಾಕ್ ಪತರುಗುಟ್ಟಿದೆ: ಮಾಜಿ ಸೈನಿಕರು
ಭಾರತದ ಬಲಿಷ್ಠ ಸೇನೆಯನ್ನು ತಡವಿರುವ ಪಾಕ್ ಪತರುಗುಟ್ಟಿದೆ: ಮಾಜಿ ಸೈನಿಕರು
ಆಪರೇಷನ್ ಸಿಂಧೂರ್​ಗೆ ಉಗ್ರರ ನೆಲೆಗಳು ಧ್ವಂಸ, ಫೋಟೊಗಳು ಇಲ್ಲಿವೆ ನೋಡಿ
ಆಪರೇಷನ್ ಸಿಂಧೂರ್​ಗೆ ಉಗ್ರರ ನೆಲೆಗಳು ಧ್ವಂಸ, ಫೋಟೊಗಳು ಇಲ್ಲಿವೆ ನೋಡಿ
VIDEO: ಪವರ್​ಪ್ಲೇನಲ್ಲೇ 3 ಕ್ಯಾಚ್ ಕೈಚೆಲ್ಲಿದ ಗುಜರಾತ್ ಟೈಟಾನ್ಸ್
VIDEO: ಪವರ್​ಪ್ಲೇನಲ್ಲೇ 3 ಕ್ಯಾಚ್ ಕೈಚೆಲ್ಲಿದ ಗುಜರಾತ್ ಟೈಟಾನ್ಸ್
ಭಾರತೀಯ ಸೇನೆ ಕ್ಷಿಪಣಿ ದಾಳಿ, ಎದೆ ಝಲ್​ ಎನ್ನುವ ದೃಶ್ಯ ಇಲ್ಲಿದೆ
ಭಾರತೀಯ ಸೇನೆ ಕ್ಷಿಪಣಿ ದಾಳಿ, ಎದೆ ಝಲ್​ ಎನ್ನುವ ದೃಶ್ಯ ಇಲ್ಲಿದೆ
Daily Devotional: ಮನೆಯಲ್ಲಿ ಒರಳು ಕಲ್ಲು ಇರಲೇಬೇಕು ಯಾಕೆ ಗೊತ್ತಾ?
Daily Devotional: ಮನೆಯಲ್ಲಿ ಒರಳು ಕಲ್ಲು ಇರಲೇಬೇಕು ಯಾಕೆ ಗೊತ್ತಾ?