ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಜಲಪಾತಗಳ ವೀಕ್ಷಣೆಗೆ ಪ್ರವಾಸಿಗರಿಗೆ ನಿರ್ಬಂಧ ಹೇರಿದ ಜಿಲ್ಲಾಡಳಿತ

ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆಗೆ ಜಲಪಾತಗಳಿಗೆ ಜೀವ ಕಳೆಯೇನೋ ಬಂದಿದೆ. ಆದ್ರೆ, ಈ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರಿಗೆ ಮಾತ್ರ ಸಾಧ್ಯವಿಲ್ಲ. ಹೌದು ಜಿಲ್ಲಾಡಳಿತ ಜಲಪಾತಗಳ ವೀಕ್ಷಣೆಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಜಲಪಾತಗಳ ವೀಕ್ಷಣೆಗೆ ಪ್ರವಾಸಿಗರಿಗೆ ನಿರ್ಬಂಧ ಹೇರಿದ ಜಿಲ್ಲಾಡಳಿತ
ಉತ್ತರ ಕನ್ನಡ ಜಿಲ್ಲೆಯ ಜಲಪಾತಗಳ ವೀಕ್ಷಣೆಗೆ ನಿರ್ಬಂಧ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 29, 2023 | 6:53 AM

ಉತ್ತರ ಕನ್ನಡ, ಜು.29: ನಿಸರ್ಗದ ಸೊಬಗನ್ನೇ ಮಡಿಲಲ್ಲಿ ಹೊತ್ತುಕೊಂಡಿರುವ ಉತ್ತರ ಕನ್ನಡ(Uttara Kannada) ಜಿಲ್ಲೆಯಲ್ಲಿ ಇದೀಗ ಜಲಪಾತಗಳಿಗೆ(Falls) ಜೀವ ಕಳೆ ಬಂದಿದೆ. ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾಗೋಡು ಜಲಪಾತ, ಸಾತೋಡಿ ಜಲಪಾತ ಅಂಕೋಲದ ವಿಭೂತಿ ಜಲಪಾತ, ದೊನ್ನೆ ಜಲಪಾತ, ಕಾರವಾರದ ಅಣಶಿ ಜಲಪಾತ, ಹೊನ್ನಾವರದ ಅಪ್ಸರಕೊಂಡ ಹಾಗೂ ಗಗನ ಕುಸುಮ ಜಲಪಾತಗಳು ಅಬ್ಬರದ ಮಳೆಗೆ ದುಮ್ಮಿಕ್ಕಿ ಹರಿಯುತಿದ್ದು, ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಆದ್ರೆ, ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಬಳಿಯಿರುವ ಅರಶಿನಗುಂಡಿ ಬಳಿ ಭದ್ರಾವತಿಯ ಯುವಕ ಜಲಪಾತ ವೀಕ್ಷಣೆಗೆ ಬಂದು ನೀರಿನಲ್ಲಿ ಕೊಚ್ಚಿಹೋದ ಕಾರಣ ಇದೀಗ ಉತ್ತರ ಕನ್ನಡ ಜಿಲ್ಲೆಯಲ್ಲೂ ಪ್ರವಾಸಿಗರಿಗೆ ಜಿಲ್ಲೆಯ ಜಲಪಾತ ವೀಕ್ಷಣೆಗೆ ಜಿಲ್ಲಾಡಳಿತ ನಿಷೇಧ ಹೇರಿದೆ.

ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋಧ್ಯಮಕ್ಕೆ ವಿಶ್ವ ಮಟ್ಟದಲ್ಲಿ ಹೆಸರು ಮಾಡಿದೆ. ಒಂದೆಡೆ ಕರಾವಳಿ ಭಾಗದ ಕಡಲ ತೀರ ಮತ್ತೊಂದೆಡೆ ಪಶ್ಚಿಮ ಘಟ್ಟ ಪ್ರದೇಶದ ನಿಸರ್ಗದ ಜೊತೆ ಜಲಪಾತಗಳು ಪ್ರವಾಸಿಗರ ಮುಖ್ಯ ಆಕರ್ಷಣೆಯಾಗಿದೆ. ಜೊತೆಗೆ ಇಲ್ಲಿನ ಜನರ ಆದಾಯದ ಮೂಲ ಕೂಡ. ಆದ್ರೆ, ಬರುವ ಪ್ರವಾಸಿಗರು ಕರಾವಳಿ ಭಾಗದಲ್ಲಿ ಮೋಜು ಮಸ್ತಿಗೆ ತೆರಳಿ ಜೀವವನ್ನೇ ಕಳೆದುಕೊಂಡರೇ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರು ಸೆಲ್ಫಿ , ವಿಡಿಯೋ ಕ್ರೇಜ್​ಗೆ ಅಪಾಯ ತಂದೊಡ್ಡಿಕೊಳ್ಳುತಿದ್ದಾರೆ. ಇದರಿಂದಾಗಿ ಜೂನ್ ಮೊದಲ ವಾರದಲ್ಲೇ ಸಮುದ್ರಭಾಗಕ್ಕೆ ಪ್ರವಾಸಿಗರನ್ನು ನಿರ್ಬಂಧಿಸಲಾಗಿತ್ತು.

ಇದನ್ನೂ ಓದಿ:ಇಂದಿನಿಂದ ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತಕ್ಕೆ ಪ್ರವಾಸಿಗರಿಗೆ ನಿರ್ಬಂಧ

ಇದೀಗ ಉಡುಪಿಯಲ್ಲಿ ಆದ ಘಟನೆಯಿಂದಾಗಿ ಜಲಪಾತಗಳ ವೀಕ್ಷಣೆಗೂ ನಿರ್ಬಂಧ ಹೇರಿದೆ. ಹೀಗಾಗಿ ಮಳೆಯ ಸವಿ ಉಂಡು ಜಲಪಾತ ವೀಕ್ಷಿಸಲು ಬರುತ್ತಿರುವ ಪ್ರವಾಸಿಗರಿಗೆ ಜಲಪಾತ ನೋಡಲಾಗದೇ ವಾಪಾಸ್​ ಮರಳುವಂತಾಗಿದೆ. ಇನ್ನು ಪ್ರವಾಸೋಧ್ಯಮ ಮುಖ್ಯವಾಗಿರುವ ಜಿಲ್ಲೆಯಲ್ಲಿ ಹೀಗೆ ನಿಷೇಧ ಹೇರುವುದು ಬೇಸರ ತಂದಿದೆ. ದೂರದ ಊರಿನಿಂದ ಜಲಪಾತಗಳ ವೀಕ್ಷಣೆಗೆಂದು ಸ್ನೇಹಿತರು, ಪ್ಯಾಮಿಲಿ ಜೊತೆಗೆ ಬಂದಿರುತ್ತೇವೆ. ಈ ರೀತಿ ನಿಷೇಧ ಇದೆಯೆಂದು ನಮ್ಮನ್ನ ವಾಪಾಸ್ ಕಳಿಸುತ್ತಾರೆ ಎಂದು ಪ್ರವಾಸಿಗರು ಬೇಸರ ವ್ಯಕ್ತಪಡಿಸಿದ್ದಾರೆ.

ಎತ್ತಿಗೆ ಜ್ವರ ಬಂದರೇ ಬೆಕ್ಕಿಗೆ ಬರೆ ಎಳೆದರು ಎಂಬುವಂತೆ ಉಡುಪಿಯಲ್ಲಿ ಆದ ಘಟನೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ತೆಗೆದುಕೊಳ್ಳುತ್ತಿರುವ ಕ್ರಮಕ್ಕೆ ಪ್ರವಾಸಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಜಿಲ್ಲಾಡಳಿತದ ಕ್ರಮದಿಂದ ದೂರದೂರಿನಿಂದ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ನಿರಾಸೆ ಮೂಡಿಸುತ್ತಿರುವುದು ಮಾತ್ರ ಸತ್ಯ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ