AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವ್ಯಾಕ್ಸಿನ್ ಅಭಾವ; ಕೋವ್ಯಾಕ್ಸಿನ್ ಲಸಿಕೆ ಪಡೆಯಲು 30-35 ಕಿ.ಮೀ ದೂರದಿಂದ ಬರುತ್ತಿರುವ ಜನ

ಕಂಪನಿಯಲ್ಲಿ ವ್ಯಾಕ್ಸಿನ್ ಕಡ್ಡಾಯ ಮಾಡಿದ ಹಿನ್ನೆಲೆಯಲ್ಲಿ ವ್ಯಕ್ತಿ ಬೆಳಗ್ಗೆ 3:30 ಗಂಟೆಗೆ ಆಗಮಿಸಿ ಕ್ಯೂನಲ್ಲಿ ನಿಂತಿದ್ದಾರೆ. ಸದ್ಯ ಯಲಹಂಕ ವ್ಯಾಕ್ಸಿನ್ ಸೆಂಟರ್ ಬಳಿ 50ಕ್ಕೂ ಹೆಚ್ಚು ಜನರ ಕ್ಯೂನಲ್ಲಿ ನಿಂತು ಲಸಿಕೆ ಪಡೆಯಲು ಕಾಯುತ್ತಿದ್ದಾರೆ. ಬೆಳಗ್ಗೆ 8 ಗಂಟೆಯ ನಂತರ ಟೋಕನ್ ಕೊಡ್ತಾರೆ ಎಂದು ಸಿಬ್ಬಂದಿ ತಿಳಿಸಿದ್ದು ಬೆಳಗ್ಗೆ 3 ಗಂಟೆಗೇ ಬಂದು ಕಾಯ್ತಿದ್ದೀನಿ. ನಿನ್ನೆಯೂ ಬಂದು ವಾಪಾಸ್ ಹೋಗಿದ್ದೆ. ಹೀಗಾಗಿ ಇವತ್ತು ನಾನೇ ಮೊದಲು ಕ್ಯೂನಲ್ಲಿ ನಿಂತಿದ್ದೇನೆ. ವ್ಯಾಕ್ಸಿನ್ ಸಿಗುವ ಭರವಸೆ ಇದೆ ಎಂದು ವ್ಯಕ್ತಿ ತಿಳಿಸಿದ್ದಾರೆ.

ವ್ಯಾಕ್ಸಿನ್ ಅಭಾವ; ಕೋವ್ಯಾಕ್ಸಿನ್ ಲಸಿಕೆ ಪಡೆಯಲು 30-35 ಕಿ.ಮೀ ದೂರದಿಂದ ಬರುತ್ತಿರುವ ಜನ
ಲಸಿಕೆ ಪಡೆಯಲು ಸರತಿ ಸಾಲಿನಲ್ಲಿ ನಿಂತಿರುವ ಜನ
TV9 Web
| Updated By: ಆಯೇಷಾ ಬಾನು|

Updated on:Jun 07, 2021 | 10:23 AM

Share

ಬೆಂಗಳೂರು: ಮಹಾಮಾರಿಯಿಂದ ಬಚಾವ್ ಆಗಬೇಕು ಮೂರನೇ ಅಲೆ ಬಂದ್ರೆ ಕಷ್ಟ ಅಂತ ಜನ ವ್ಯಾಕ್ಸಿನ್ ಮೊರೆ ಹೋಗುತ್ತಿದ್ದಾರೆ. ಆದರೆ ರಾಜ್ಯದಲ್ಲಿ ವ್ಯಾಕ್ಸಿನ್ ಅಭಾವ ಹೆಚ್ಚಿದೆ. ಇದಕ್ಕೆ ತಾಜಾ ಉದಾಹರಣೆಯಾಗಿ ಇಲ್ಲೊಬ್ಬ ವ್ಯಕ್ತಿ ಲಸಿಕೆ ಪಡೆಯಲು 30 ಕಿ.ಮೀ ದೂರದಿಂದ ಲಸಿಕಾ ಕೇಂದ್ರಕ್ಕೆ ಬಂದಿರುವ ಘಟನೆ ನಡೆದಿದೆ.

ದೇವಹಳ್ಳಿ ಸಮೀಪದ ಅಮೆಜಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿ ಕಳೆದ ಒಂದು ತಿಂಗಳಿಂದ ಕೋವ್ಯಾಕ್ಸಿನ್ ಲಸಿಕೆಯೇ ಬೇಕು ಅಂತ ಹುಡುಕಾಟ ನಡೆಸುತ್ತಿದ್ದಾನೆ. ಐದಾರು ವ್ಯಾಕ್ಸಿನ್ ಸೆಂಟರ್ಗೆ ಹೋದ್ರೂ ಅಲ್ಲೆಲ್ಲೂ ಲಸಿಕೆ ಸಿಕಿಲ್ಲ. ದೇವನಹಳ್ಳಿ, ಕೆ.ಆರ್‌ ಪುರ ಸೇರಿದಂತೆ ಅನೇಕ ವ್ಯಾಕ್ಸಿನ್ ಸೆಂಟರ್ಗಳಿಗೆ ಅಲೆದಿದ್ದಾನೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಕೇವಲ ಸೆಕೆಂಡ್ ಡೋಸ್ನವರಿಗೆ ಮಾತ್ರ ಲಸಿಕೆ ಎಂದು ಹೇಳಿ ಕಳಿಸಿದ್ದಾರೆ. ಹೀಗಾಗಿ ಮೊದಲ ಡೋಸ್ ಕೋವ್ಯಾಕ್ಸಿನ್ ಪಡೆಯಲು 30 ಕಿ.ಮೀ ದೂರದಿಂದ ಈ ವ್ಯಕ್ತಿ ಆಗಮಿಸಿದ್ದಾರೆ.

ಕಂಪನಿಯಲ್ಲಿ ವ್ಯಾಕ್ಸಿನ್ ಕಡ್ಡಾಯ ಮಾಡಿದ ಹಿನ್ನೆಲೆಯಲ್ಲಿ ವ್ಯಕ್ತಿ ಬೆಳಗ್ಗೆ 3:30 ಗಂಟೆಗೆ ಆಗಮಿಸಿ ಕ್ಯೂನಲ್ಲಿ ನಿಂತಿದ್ದಾರೆ. ಸದ್ಯ ಯಲಹಂಕ ವ್ಯಾಕ್ಸಿನ್ ಸೆಂಟರ್ ಬಳಿ 50ಕ್ಕೂ ಹೆಚ್ಚು ಜನರ ಕ್ಯೂನಲ್ಲಿ ನಿಂತು ಲಸಿಕೆ ಪಡೆಯಲು ಕಾಯುತ್ತಿದ್ದಾರೆ. ಬೆಳಗ್ಗೆ 8 ಗಂಟೆಯ ನಂತರ ಟೋಕನ್ ಕೊಡ್ತಾರೆ ಎಂದು ಸಿಬ್ಬಂದಿ ತಿಳಿಸಿದ್ದು ಬೆಳಗ್ಗೆ 3 ಗಂಟೆಗೇ ಬಂದು ಕಾಯ್ತಿದ್ದೀನಿ. ನಿನ್ನೆಯೂ ಬಂದು ವಾಪಾಸ್ ಹೋಗಿದ್ದೆ. ಹೀಗಾಗಿ ಇವತ್ತು ನಾನೇ ಮೊದಲು ಕ್ಯೂನಲ್ಲಿ ನಿಂತಿದ್ದೇನೆ. ವ್ಯಾಕ್ಸಿನ್ ಸಿಗುವ ಭರವಸೆ ಇದೆ ಎಂದು ವ್ಯಕ್ತಿ ತಿಳಿಸಿದ್ದಾರೆ.

ಇನ್ನು ಇದೇ ರೀತಿ ಯುವತಿಯೊಬ್ಬರು 35 ಕಿ.ಮೀ ದೂರದಿಂದ ಬಂದು ವ್ಯಾಕ್ಸಿನ್ಗಾಗಿ ಕಾಯುತ್ತಿದ್ದಾರೆ. ಕಾರ್ ಬುಕ್ ಮಾಡ್ಕೊಂಡು ವೈಟ್ ಫೀಲ್ಡ್ ನಿಂದ ಬೆಳಗ್ಗೆ 3:50ಕ್ಕೆ ಲಸಿಕಾ ಕೇಂದ್ರಕ್ಕೆ ಬಂದಿದ್ದಾರೆ. ನಮ್ಮ ಏರಿಯಾಗಳಲ್ಲಿ ಎರಡನೇ ಡೋಸ್ ನವರಿಗೆ ಮಾತ್ರ ಲಸಿಕೆ ಕೊಡ್ತಿದ್ದಾರೆ. ಇಲ್ಲಿ ಬೇಗ ಬಂದ್ರೆ ವ್ಯಾಕ್ಸಿನ್ ಸಿಗುತ್ತೆ ಅಂತ ಬಂದಿದ್ದೇನೆ. ವೈಟ್ ಫೀಲ್ಡ್ನ ರಿಲಾಯನ್ಸ್ ಕಂಪನಿಯಲ್ಲಿ ವ್ಯಾಕ್ಸಿನ್ ಕಡ್ಡಾಯ ಮಾಡಿದ್ದಾರೆ. ಹೀಗಾಗಿ 4 ಸಹೋದ್ಯೋಗಿಗಳೊಂದಿಗೆ ಯಲಹಂಕಗೆ ಆಗಮಿಸಿದ್ದೇನೆ ಎಂದು ಯುವತಿ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ನಡೆಯುತ್ತಿದೆ ವ್ಯಾಕ್ಸಿನ್ ಮಾಫಿಯಾ.. ಸರ್ಕಾರಕ್ಕೆ ಅಭಾವ, ಖಾಸಗಿ ಆಸ್ಪತ್ರೆಗಳಿಗೆ ಭಾರಿ ಲಾಭ

Published On - 9:59 am, Mon, 7 June 21

‘ಸ್ಟುಪಿಡ್’, ‘... ಎಲಿಮೆಂಟ್’: ರಜತ್ ವಿರುದ್ಧ ಅಶ್ವಿನಿ ಕೆಂಡಾಮಂಡಲ
‘ಸ್ಟುಪಿಡ್’, ‘... ಎಲಿಮೆಂಟ್’: ರಜತ್ ವಿರುದ್ಧ ಅಶ್ವಿನಿ ಕೆಂಡಾಮಂಡಲ
ತಿರುವನಂತಪುರಂ ಕಾರ್ಪೊರೇಷನ್‌ ಫಲಿತಾಂಶದ ಬಳಿಕ ಬಿಜೆಪಿ ಕಾರ್ಯಕರ್ತರ ಸಂಭ್ರಮ
ತಿರುವನಂತಪುರಂ ಕಾರ್ಪೊರೇಷನ್‌ ಫಲಿತಾಂಶದ ಬಳಿಕ ಬಿಜೆಪಿ ಕಾರ್ಯಕರ್ತರ ಸಂಭ್ರಮ
ಫ್ಯಾನ್ಸ್- ಪೊಲೀಸರ ನಡುವೆ ಚೇರ್ ಎಸೆದಾಟ
ಫ್ಯಾನ್ಸ್- ಪೊಲೀಸರ ನಡುವೆ ಚೇರ್ ಎಸೆದಾಟ
ಮೆಸ್ಸಿ ಜೊತೆ ಮಗನನ್ನು ನಿಲ್ಲಿಸಿ ಫೋಟೋ ಕ್ಲಿಕ್ಕಿಸಿದ ಶಾರುಖ್ ಖಾನ್
ಮೆಸ್ಸಿ ಜೊತೆ ಮಗನನ್ನು ನಿಲ್ಲಿಸಿ ಫೋಟೋ ಕ್ಲಿಕ್ಕಿಸಿದ ಶಾರುಖ್ ಖಾನ್
ಜ 6ರಂದು ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ಶಾಸಕ ಇಕ್ಬಾಲ್ ಹುಸೇನ್
ಜ 6ರಂದು ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ಶಾಸಕ ಇಕ್ಬಾಲ್ ಹುಸೇನ್
ವೋಟ್ ಚೋರಿ ವಿರೋಧಿಸಿ ರಾಹುಲ್​​ ಗಾಂಧಿ ಪ್ರತಿಭಟನೆ: ಜೋಶಿ ಏನಂದ್ರು ನೋಡಿ
ವೋಟ್ ಚೋರಿ ವಿರೋಧಿಸಿ ರಾಹುಲ್​​ ಗಾಂಧಿ ಪ್ರತಿಭಟನೆ: ಜೋಶಿ ಏನಂದ್ರು ನೋಡಿ
ದುಡ್ಡಿಲ್ಲವೆಂದು ಖಾಲಿ ಇರುವ 2 ಲಕ್ಷ ಹುದ್ದೆಗಳನ್ನ ಭರ್ತಿ ಮಾಡ್ತಿಲ್ಲ: ಜೋಶಿ
ದುಡ್ಡಿಲ್ಲವೆಂದು ಖಾಲಿ ಇರುವ 2 ಲಕ್ಷ ಹುದ್ದೆಗಳನ್ನ ಭರ್ತಿ ಮಾಡ್ತಿಲ್ಲ: ಜೋಶಿ
ಜಡ್ಜ್ ಮಹಾಭಿಯೋಗಕ್ಕೆ ಸಹಿ ಹಾಕಿದ ಕಾಂಗ್ರೆಸ್ ಸಂಸದರು: ಜೋಶಿ ಏನಂದ್ರು ನೋಡಿ
ಜಡ್ಜ್ ಮಹಾಭಿಯೋಗಕ್ಕೆ ಸಹಿ ಹಾಕಿದ ಕಾಂಗ್ರೆಸ್ ಸಂಸದರು: ಜೋಶಿ ಏನಂದ್ರು ನೋಡಿ
‘ಗೌರಿ’ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್​; ಆಗಸದಲ್ಲೇ ಮದುವೆ
‘ಗೌರಿ’ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್​; ಆಗಸದಲ್ಲೇ ಮದುವೆ
ಸರಿ ನಿರ್ಧಾರ ಯಾವುದು? ತಪ್ಪು ಯಾವುದು? ಪಂಚಾಯ್ತಿ ವಿಷಯ ಹೇಳಿದ ಸುದೀಪ್
ಸರಿ ನಿರ್ಧಾರ ಯಾವುದು? ತಪ್ಪು ಯಾವುದು? ಪಂಚಾಯ್ತಿ ವಿಷಯ ಹೇಳಿದ ಸುದೀಪ್