AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಜವಾಯ್ತಾ ವಿಜಯಪುರದ ಬಬಲಾದಿ ಶ್ರೀ ಸದಾಶಿವ ಮುತ್ಯಾರ ರಾಜಕೀಯ ಭವಿಷ್ಯ? ಏನದು ನುಡಿ, ಇಲ್ಲಿದೆ

ಪ್ರಸಕ್ತ ರಾಜಕೀಯ ವಿಚಾರ ಸೇರಿದಂತೆ ಇತರೆ ವಿಚಾರಗಳ ಕುರಿತು ಪ್ರತಿ ವರ್ಷದಂತೆ, ಈ ವರ್ಷವು ನುಡಿದ ಬಬಲಾದಿ ಶ್ರೀ ಸದಾಶಿವ ಮುತ್ಯಾರ ಕಾಲಜ್ಞಾನ ಭವಿಷ್ಯ ಮತ್ತೆ ನಿಜವಾಗಿದೆ.

ನಿಜವಾಯ್ತಾ ವಿಜಯಪುರದ ಬಬಲಾದಿ ಶ್ರೀ ಸದಾಶಿವ ಮುತ್ಯಾರ ರಾಜಕೀಯ ಭವಿಷ್ಯ? ಏನದು ನುಡಿ, ಇಲ್ಲಿದೆ
ಬಬಲಾದಿ ಶ್ರೀ ಸದಾಶಿವ ಮುತ್ಯಾ
ವಿವೇಕ ಬಿರಾದಾರ
|

Updated on:May 15, 2023 | 3:19 PM

Share

ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka Assembly Election) ಅಬ್ಬರಕ್ಕೆ ತೆರೆ ಬಿದ್ದಿದೆ. ಮತದಾರರರು ಕಾಂಗ್ರೆಸ್​​​ಗೆ (Congress) ಜೈ ಎಂದರೆ ಬಿಜೆಪಿಗೆ (BJP) ವಿರೋಧ ಪಕ್ಷದ ಸ್ಥಾನ ನೀಡಿದ್ದಾರೆ. ಪ್ರಾದೇಶಿಕ ಪಕ್ಷ ಜೆಡಿಎಸ್ (JDS) ಹಾಗೂ ಇತರೆ ಪಕ್ಷಗಳು ನಾಮಕಾವಸ್ಥೆಯಾಗಿವೆ. ಇದೀಗ ಸೋಲು ಗೆಲುವಿನ ಲೆಕ್ಕಾಚಾರ, ಅಧಿಕಾರದ ಗದ್ದುಗೆ ಏರಲು ಬಿರುಸಿನ ಚಟುವಟಿಕೆಗಳು ಗರಿಗೆದರಿವೆ. ಈ ಮಧ್ಯೆ ಪ್ರಸಕ್ತ ರಾಜಕೀಯ ವಿಚಾರ ಸೇರಿದಂತೆ ಇತರೆ ವಿಚಾರಗಳ ಕುರಿತು ಪ್ರತಿ ವರ್ಷದಂತೆ, ಈ ವರ್ಷವು ನುಡಿದ ಬಬಲಾದಿ ಶ್ರೀ ಸದಾಶಿವ ಮುತ್ಯಾರ (Babaladi Sadashiv Mutya) ಕಾಲಜ್ಞಾನ ಭವಿಷ್ಯ ಮತ್ತೆ ನಿಜವಾಗಿದೆ.

ಹೌದು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸುಕ್ಷೇತ್ರ ಬಬಲಾದಿ ಗ್ರಾಮದಲ್ಲಿ ಚಂದ್ರಗಿರಿ ಮೂಲ ಮಹಾಸಂಸ್ಥಾನದ ಶ್ರೀ ಸದಾಶಿವ ಮುತ್ಯಾರ ಮಠವಿದೆ. ನೂರಾರು ವರ್ಷಗಳ ಐತಿಹ್ಯವನ್ನು ಹೊಂದಿರುವ ಶಕ್ತಿಕೇಂದ್ರವೆಂದೇ ಪ್ರಸಿದ್ದಿಯನ್ನು ಪಡೆದಿದೆ. ಪ್ರತಿ ವರ್ಷ ಶಿವರಾತ್ರಿ ವೇಳೆ ನಡೆಯುವ ಜಾತ್ರೆಯಲ್ಲಿ ದೇವರಿಗೆ ಮದ್ಯವನ್ನು ನೇವೈದ್ಯ ಮಾಡುವ ಸಂಪ್ರದಾಯವಿದೆ. ಇಲ್ಲಿ ವರ್ಷಕ್ಕೊಮ್ಮೆ ಜಾತ್ರೆ ವೇಳೆ ನುಡಿಯುವ ಕಾಲಜ್ಞಾನ ಭವಿಷ್ಯ ಸುಳ್ಳಾಗಿರುವ ಉದಾಹರಣೆಯೇ ಇಲ್ಲ. ಸದಾಶಿವ ಮುತ್ಯಾ ಅವರು ನುಡಿದ ಭವಿಷ್ಯವನ್ನು ಚಿಕ್ಕಪ್ಪಯ್ಯ ತಾಳೆಗೆರೆಯಲ್ಲಿ ಬರೆದಿಟ್ಟಿದ್ದಾರೆ. ಆಯಾ ವರ್ಷ ಭವಿಷ್ಯನನ್ನು ಮಾತ್ರ ನೋಡಿ ಹೇಳಬೇಕೆಂಬ ನಿಯಮವಿದೆ.

ಅದರೆಂತೆ ಈ ಬಾರಿ 2023 ರ ಫೆಬ್ರುವರಿಯಲ್ಲಿ ನಡೆದ ಜಾತ್ರಾ ಮಹೋತ್ಸವದ ವೇಳೆ ಬಬಲಾದಿ ಸದಾಶಿವ ಮಠದ ಪೀಠಾಧಿಪತಿಗಳು ನುಡಿದ ರಾಜಕಾರಣ ಭವಿಷ್ಯ ಕೂಡಾ ನಿಜವಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಬಬಲಾದಿ ಮಠದ ರಾಜಕೀಯ ಭವಿಷ್ಯದ ಕುರಿತು ಚರ್ಚೆಯಾಗುತ್ತಿದೆ. 2023 ರ ಫೆಬ್ರುವರಿಯ ಜಾತ್ರೆಯಲ್ಲಿ ಮಠದ ಪೀಠಾಧಿಪತಿ ಶ್ರೀ ಸಿದ್ರಾಮಯ್ಯ ಹೋಳಿಮಠ ಅವರು “ರಾಜ್ಯ ರಾಜಕಾರಣದಲ್ಲಿ ಹೊಸ ತಿರುವು ಉಂಟಾಗುತ್ತದೆ. ಪ್ರಜೆಗಳಲ್ಲಿ ಏರುಪೇರು. ಆಳುವ ಪ್ರಭುಗಳಿಗೆ ಸುಭೀಕ್ಷೆಯಿದೆ. ತನ್ನಿಂದ ತಾನೇ ಹಸನಾಗುತ್ತದೆ. ಜಾತಿ ಬೇಧ ಭಾವಕ್ಕೆ ಹೆಚ್ಚಿನ ಒಲವು ಸಿಗುತ್ತದೆ”ಎಂದು ನುಡಿದಿದ್ದರು.

ಇದನ್ನೂ ಓದಿ: Basanagouda Patil Yatnal Profile: ವಿಜಯಪುರದಲ್ಲಿ ಗೆಲುವು ಸಾಧಿಸಿದ ಬಸನಗೌಡ ಪಾಟೀಲ್ ಯತ್ನಾಳ್ ವ್ಯಕ್ತಿಚಿತ್ರ

ಸ್ವಾಮೀಜಿಯವರು ನುಡಿದದಂತೆ ರಾಜ್ಯ ರಾಜಕಾರಣದಲ್ಲಿ ತಿರುವು ಉಂಟಾಗಿ ಕಾಂಗ್ರೆಸ್​ ಭರ್ಜರಿ ಬಹುಮತ ಪಡೆದುಕೊಂಡಿದೆ. ಮತದಾರರು ಇಡೀ ಚುನಾವಣಾ ಫಲಿತಾಂಶವನ್ನೇ ಬುಡಮೇಲು ಮಾಡಿದರು. ಬಿಜೆಪಿಯವರ ನಿರೀಕ್ಷೆಯನ್ನು ಹುಸಿಗೊಳಿಸಿ ಕಾಂಗ್ರೆಸ್ ಪರ ವಾಲಿದರು. ಆಳುವ ಪ್ರಭುಗಳಿಗೆ ಸುಭೀಕ್ಷೆಯಿದೆ ಎಂದು ಮಠದ ಪೀಠಾಧಿಪತಿಗಳು ಕಾಲಜ್ಞಾನದಲ್ಲಿ ಹೇಳಿದ್ದು ಯಾರೇ ಆಧಿಕಾರದ ಚುಕ್ಕಾಣಿ ಹಿಡಿದರೂ ತೊಂದರೆ ಇಲ್ಲದೆ ಆಡಳಿತ ನಡೆಸಬಹುದು ಎಂದು ಹೇಳಿದ್ದಾರೆ.

ತನ್ನಿಂದ ತಾನೇ ಹಸನಾಗುತ್ತದೆ ಜಾತಿ ಬೇಧ ಭಾವಕ್ಕೆ ಹೆಚ್ಚಿನ ಒಲವು ಸಿಗುತ್ತದೆ ಎಂಬುದರ ಅರ್ಥ ಒಂದು ಪಕ್ಷ ಆಧಿಕಾರ ತನ್ನಿಂದ ತಾನೇ ಕಳೆದುಕೊಳ್ಳುತ್ತದೆ ಹಾಗೂ ಜಾತಿ ಬೇಧದ ಆಧಾರದ ಮೇಲೆ ಆಧಿಕಾರ ಸಿಗುತ್ತದೆ ಎಂಬ ಚರ್ಚೆ ಆಗುತ್ತಿದೆ.

ಬಬಲಾದಿಯ ಕಾಲಜ್ಞಾನ ಭವಿಷ್ಯ ಪುರಾತನವಾಗಿದೆ. 500 ಕ್ಕೂ ಆಧಿಕ ವರ್ಷಗಳ ಹಿಂದೆ ಸದಾಶಿವ ಮುತ್ಯಾರು ಹೇಳಿದ್ದನ್ನು ಚಿಕ್ಕಪ್ಪಯ್ಯ ಮುತ್ಯಾರು ಕಾಲಜ್ಞಾನ ಭವಿಷ್ಯವನ್ನು ತಾಳೆಗೆರೆಯಲ್ಲಿ ಬರೆದಿಟ್ಟಿದ್ದಾರೆ. ಮಠದ ನಿಯಮಗಳಂತೆ ಆಯಾ ವರ್ಷದ ಭವಿಷ್ಯವನ್ನು ಮಾತ್ರ ಆಯಾ ವರ್ಷ ನೋಡಬೇಕು. ಪ್ರಸಕ್ತ ವರ್ಷದ ಭವಿಷ್ಯವನ್ನು ಮಾತ್ರ ನುಡಿಯಬೇಕೆಂಬ ನಿಯಮವಿದೆ. ಇಲ್ಲಿ ನುಡಿಯುವ ಭವಿಷ್ಯ ಎಂದೂ ಸುಳ್ಳಾಗಲ್ಲ.

ಈ ಬಾರಿಯ ಬಬಲಾದಿ ಸದಾಶಿವ ಮಠದ ಕಾಲಜ್ಞಾನ ಭವಿಷ್ಯ ರಾಜಕಾರಣದ ವಿಚಾರದಲ್ಲಿ ನಿಜವಾಗಿದೆ ಎಂದು ರಾಜಕೀಯ ವಿಶ್ಲೇಷಕರ ಮಾತಾಗಿದೆ. ಆಧಿಕಾರ ಸಿಕ್ಕ ಬಳಿಕ ಆಂತರಿಕ ಕಲಹ ಆಗುತ್ತದೆ. ಅದಕ್ಕಾಗಿ ಸಮರ್ಥವಾದ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುವವರಿಗೆ ಆಧಿಕಾರ ನೀಡಬೇಕೆಂಬ ತತ್ವವೂ ಕಾಲಜ್ಞಾನ ಭವಿಷ್ಯದಲ್ಲಿದೆ ಎಂದು ಪರಿಣಿತರ ಲೆಕ್ಕಾಚಾರವಾಗಿದೆ.

ಸದಾಶಿವ ಮಠದ ಕಾಲಜ್ಞಾನ ಭವಿಷ್ಯ ರಾಜಕೀಯ ವಿಚಾರದಲ್ಲಿ ನಿಜವಾಗಿದ್ದು ಇದೀಗ ಈ ಕುರಿತ ಮಾತುಗಳು ಜಿಲ್ಲೆಯಲ್ಲಿ ರಾಜಕೀಯ ಮೊಗಸಾಲೆಯಲ್ಲಿ ಕೇಳಿ ಬರುತ್ತಿವೆ. ಕೆಲವರು ತಮ್ಮದೇ ರೀತಿಯ ವ್ಯಾಖ್ಯಾನ ಮಾಡುತ್ತಾರೆ. ಕೇವಲ ರಾಜಕೀಯ ಭವಿಷ್ಯವಷ್ಟೇಯಲ್ಲಾ ಮಳೆ ಬೆಳೆಯ ಬಗ್ಗೆ ರೋಗ ರುಜಿನಗಳ ಬಗ್ಗೆಯೂ ಭವಿಷ್ಯ ನುಡಿಯಲಾಗಿದ್ದು ಅವೆಲ್ಲವು ನಿಜವಾಗುತ್ತಾ ಬಂದಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:18 pm, Mon, 15 May 23

ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್